ಸಪ್ತವರ್ಣ, ಸಪ್ತಸ್ವರದಿಂದ ರಂಜಿಸಿದ ಯಕ್ಷಸಪ್ತಾಹ


Team Udayavani, May 18, 2018, 6:00 AM IST

k-1.jpg

ಹೊರಗೆಲ್ಲ ಕತ್ತಲು, ರಂಗದಲ್ಲಿ ಮಾತ್ರ ಬೆಳಕು. ಆ ಮೂಲಕ ಅಂತರಂಗದಲ್ಲೂ ಬೆಳಕು ಮೂಡಿಸುವ ಅದ್ಭುತ ಶಕ್ತಿ ಇರುವುದು ಪ್ರದರ್ಶನ ಕಲೆಗಳಿಗೆ ಮಾತ್ರ. ಅದರಲ್ಲೂ ಕರಾವಳಿಯ ಗಂಡುಮೆಟ್ಟಿನ ಕಲೆಯಾದ ಯಕ್ಷಗಾನವಂತೂ ತನ್ನ ಪಾರಂಪರಿಕ ಸೊಗಡು, ಭಾಷಾ ಶುದ್ಧಿ, ಹಾಡು – ಕುಣಿತ ಹಾಗೂ ಮಾತಿನ ಮೂಲಕ ರಮ್ಯಾದ್ಭುತ ಫ್ಯಾಂಟಸಿಯನ್ನೇ ಸೃಷ್ಟಿಸುತ್ತದೆ. ರಂಗದಲ್ಲಿ ವಿಜೃಂಭಿಸುವ ಪಾತ್ರಗಳು ನಮ್ಮನ್ನು ಕ್ಷಣಮಾತ್ರದಲ್ಲಿ ಸೆಳೆದು ಕಥೆಯೊಳಗೆ ಒಯ್ದು ಬಿಡುತ್ತವೆ.

ಕಾಲಮಿತಿ ಯಕ್ಷಗಾನದಲ್ಲಿ ರಾತ್ರಿ 7ರಿಂದ 12ರ ವರೆಗೆ ಮಾತ್ರ ಪ್ರದರ್ಶನ. ಪೂರ್ವರಂಗವಂತೂ ಮಾಯವೇ ಆಯಿತು. ನೇರವಾಗಿ ಪ್ರಸಂಗ ಪ್ರವೇಶ, ಕೆಲವು ಪಾತ್ರ, ಪದ್ಯಗಳನ್ನು ಕೈಬಿಟ್ಟು, ಕಥೆಯ ಪ್ರಧಾನ ಭಾಗ ಮಾತ್ರ ಉಳಿಸಿಕೊಂಡು ಪ್ರಸಂಗಗಳನ್ನೂ ಕಿರಿದುಗೊಳಿಸಲಾಯಿತು. ಕಲಾವಿದರಿಗೂ ಅನುಕೂಲವೆನಿಸಿ ಇವು ಜನಪ್ರಿಯವಾದ ಮೇಲೆ ಧರ್ಮಸ್ಥಳ, ಹನುಮಗಿರಿ ಸಹಿತ ಹಲವು ಮೇಳಗಳು ಇದನ್ನೇ ಅಳವಡಿಸಿಕೊಂಡವು.

ರಾಜಾಂಗಣದಲ್ಲಿ ಕಲಾತಿಥ್ಯ
ಕಲಾ ಪ್ರದರ್ಶನಗಳಿಗೆ ಹೆಸರಾದ ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಸ್ವಾಮೀಜಿ ಅವರ ಆಶ್ರಯದಲ್ಲಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ – ಮೇ 3ರಿಂದ 9ರ ವರೆಗೆ ಯಕ್ಷಗಾನ ಸಪ್ತಾಹ ಹಮ್ಮಿಕೊಂಡಿತ್ತು. ಏಳು ದಿನಗಳಲ್ಲಿ ಹನ್ನೊಂದು ಪ್ರಸಂಗಗಳನ್ನು ಪ್ರದರ್ಶಿಸಿ ಸೈ ಎನ್ನಿಸಿಕೊಂಡಿತು. ಮೇ 3ರಂದು ದಕ್ಷಾಧ್ವರ, ಗಿರಿಜಾ ಕಲ್ಯಾಣ, ಮೇ 4ರಂದು ಕಾಯಕಲ್ಪ, 5ರಂದು ಸೌದಾಸ ಚರಿತ್ರೆ, 6ರಂದು ದಮಯಂತಿ ಪುನಃ ಸ್ವಯಂವರ, ಅತಿಕಾಯ ಕಾಳಗ, 7ರಂದು ವಿದ್ಯುನ್ಮತಿ ಕಲ್ಯಾಣ, 8ರಂದು ಪಾರಿಜಾತ, ನರಕಾಸುರ ಹಾಗೂ ಮೈಂದ-ದ್ವಿವಿದ ಹಾಗೂ ಕೊನೆಯ ದಿನ ಪಾದಪ್ರತೀಕ್ಷಾ – ಎಲ್ಲ ಪ್ರದರ್ಶನಗಳಿಗೂ ರಾಜಾಂಗಣ ಕಿಕ್ಕಿರಿದಿತ್ತು. ಎರಡು, ಮೂರು ದಿನ ಮಳೆಯೂ ಸಂಗಾತಿಯಾಯಿತು.

ಹಿರಿಯರ – ಕಿರಿಯರ ಸಂಗಮ
ವಿಶೇಷವೆಂದರೆ, ಇವೆಲ್ಲವೂ ಪೌರಾಣಿಕ ಪ್ರಸಂಗಗಳು. ಕೆಲವಂತೂ ಅಪೂರ್ವ ಪ್ರದರ್ಶನಗಳು. ಪದ್ಯಾಣ ಗಣಪತಿ ಭಟ್ಟರು ಹಾಗೂ ರವಿಚಂದ್ರ ಕನ್ನಡಿಕಟ್ಟೆ ಅವರ ಸುಮಧುರ ಭಾಗವತಿಕೆಯಲ್ಲಿ ನೋಡಿರಿ ದ್ವಿಜರು ಪೋಪುದನು, ಕಾಮಿನಿ ನೀ ಯಾರೆ ಕೋಮಲೆ ಇತ್ಯಾದಿ ಹಾಡುಗಳು ಹೊಸ ಹೊಳಹನ್ನೇ ಸೂಸಿದವು. ಪದ್ಮನಾಭ ಉಪಾಧ್ಯಾಯ, ಪದ್ಯಾಣ ಶಂಕರನಾರಾಯಣ, ಚೈತನ್ಯಕೃಷ್ಣ ಹಾಗೂ ವಿನಯ ಕಡಬ ಅವರನ್ನೊಳಗೊಂಡ ನುರಿತ ಹಿಮ್ಮೇಳ ಪ್ರಧಾನ ಆಕರ್ಷಣೆಯಾಗಿತ್ತು.

ನೃತ್ಯ, ಆಭಿನಯದ ರಸದೌತಣ
ಹಿರಿಯರಾದ ಶಿವರಾಮ ಜೋಗಿ (ಭೃಗು ಮಹರ್ಷಿ, ಬಲರಾಮ ಇತ್ಯಾದಿ ಪಾತ್ರಗಳು) ಅವರಿಂದ ತೊಡಗಿ ಮುಮ್ಮೇಳ ಕಲಾವಿದರಂತೂ ಪೈಪೋಟಿಗೆ ಬಿದ್ದವರಂತೆ ಅಭಿನಯ ಚತುರತೆ ತೋರಿದರು. ಸುಬ್ರಾಯ ಹೊಳ್ಳ ಕಾಸರಗೋಡು- ಪೆರ್ಮುದೆ ಜಯಪ್ರಕಾಶ ಶೆಟ್ಟಿ ಅವರ ಜೋಡಿಯ ಅತಿ ವಿಶಿಷ್ಟ ಮೈಂದ – ದ್ವಿವಿದ, ರಕ್ಷಿತ್‌ ಶೆಟ್ಟಿ ಪಡ್ರೆ ಹಾಗೂ ಸಂಪಾಜೆ ದಿವಾಕರ ರೈ ಅವರ ರತಿ-ಮನ್ಮಥರ ಜೋಡಿಗೆ ಚಪ್ಪಾಳೆಗಳ ಸುರಿಮಳೆಯೇ ಆಯಿತು. ವೀರಭದ್ರ, ನರಕಾಸುರ, ದುಂದುಭಿ ಇತ್ಯಾದಿ ಬಣ್ಣದ ವೇಷಗಳಲ್ಲಿ ವಿಜೃಂಭಿಸಿದ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್‌, ಈಶ್ವರ, ಕೃಷ್ಣ, ರಾಮನಾಗಿ ಮಾತಿನಲ್ಲೇ ಮೋಡಿ ಮಾಡಿದ ವಾಸುದೇವ ರಂಗಾಭಟ್‌, ಹಾಸ್ಯದ ಹೊನಲು ಹರಿಸಿದ ಬಂಟ್ವಾಳ ಜಯರಾಮ ಆಚಾರ್ಯ ಹಾಗೂ ಕಟೀಲು ಸೀತಾರಾಮ ಕುಮಾರ್‌, ಹೊಳ್ಳರ ದಕ್ಷ, ಮದಿರಾಕ್ಷನಾಗಿ ಕುಣಿದ ದಿವಾಕರ ರೈ, ಜಯಾನಂದ ಸಂಪಾಜೆ ಅವರ ದೇವೇಂದ್ರ, ಸಂತೋಷ ಹಿಲಿಯಾಣರ ಗಿರಿಜೆ, ಏಳಿ ಸಖೀಯರೆ ನೀರಕೇಳಿಗೈಯುವ ಎಂದು ಸಖೀಯರನ್ನು ಜಲಕ್ರೀಡೆಗೆ ಕರೆಯುವ ಸುಕನ್ಯೆ, ದಮಯಂತಿ, ದಾûಾಯಿಣಿ ಇತ್ಯಾದಿ ಪಾತ್ರಗಳಲ್ಲಿ ಪ್ರೇಕ್ಷಕರನ್ನೂ ಕುಣಿಸಿದ ರಕ್ಷಿತ್‌ ಶೆಟ್ಟಿ ಪಡ್ರೆ – ಒಂದೇ ಎರಡೇ! ಎಳೆಯ ಹುಡುಗ ಅಜಿತ್‌ ಪುತ್ತಿಗೆ ಆವರ ಕುಣಿತವಂತೂ ಅದ್ಭುತವಾಗಿತ್ತು. ಅರಳಿದ ಕುಸುಮದ ಮಧುವನು ಹೀರುತ – ಹಾಡಿಗೆ ಸೌದಾಸ (ಸುಬ್ರಾಯ ಹೊಳ್ಳ) ಹಾಗೂ ಮದಯಂತಿ (ಹಿಲಿಯಾಣ) ನೃತ್ಯದ ಭಾವ – ಭಂಗಿಗಳು ಶೃಂಗಾರ ಭಾವಕ್ಕೆ ಹೊಸ ಭಾಷ್ಯ ಬರೆದವು. ಅತಿಕಾಯನ ಪಾತ್ರಕ್ಕೂ ಹೊಳ್ಳರು ಹೊಸ ವಿಶ್ಲೇಷಣೆಗಳ ಮೂಲಕ ಜೀವ ತುಂಬಿದರು. ಲಕ್ಷ್ಮಣನಾಗಿ ದಿವಾಕರ ರೈ ಅಭಿನಯವೂ ಅಚ್ಚುಕಟ್ಟಾಗಿತ್ತು. ಕೊನೆಯ ಪ್ರಸಂಗ ಪಾದಪ್ರತೀಕ್ಷಾದಲ್ಲಿ ಧನುಗಂಧರ್ವ ಪಾತ್ರಕ್ಕೆ ಪೆರ್ಮುದೆ ಜಯಪ್ರಕಾಶ ಶೆಟ್ಟಿಯವರು ಜೀವ ತುಂಬಿದ ಪರಿಯಂತೂ ವರ್ಣಿಸಲಸದಳ.

ನಳದಮಯಂತಿ ಪ್ರಸಂಗದ ಪ್ರದರ್ಶನ ಸಾಧಾರಣವೆನಿಸಿದರೂ ಜಗದಾಭಿರಾಮ ಪಡುಬಿದ್ರೆ ಆವರ ಋತುಪರ್ಣ, ಬಂಟ್ವಾಳರ ಬಾಹುಕ, ದಮಯಂತಿಯಾಗಿ ರಕ್ಷಿತ್‌ ಪಡ್ರೆ ಅಭಿನಯದ ಬಗ್ಗೆ ಎರಡು ಮಾತಿಲ್ಲ. ಪಾರಿಜಾತ ಪ್ರಸಂಗದಲ್ಲಿ ಮಾಡಿತು. ಕೃಷ್ಣ – ಸತ್ಯಭಾಮೆ ಪಾತ್ರಗಳಲ್ಲಿ ದಿವಾಕರ ರೈ – ಹಿಲಿಯಾಣ, ಜಗನ್ನಾಥ ಪೆರ್ಲ – ರಕ್ಷಿತ್‌ ಪಡ್ರೆ ಆಭಿನಯ ನೋಡಿ “ಹರುಷವಾಯಿತು’.

ಚುಟುಕಾದ ಪ್ರಸಂಗಗಳು, ಚುರುಕಾದ ನಿರೂಪಣೆ, ಹದ ಮೀರದ ಅಭಿನಯ, ಚೌಕಟ್ಟು ಮೀರದ ಹಾಸ್ಯ – ಇವುಗಳ ಮೂಲಕ ಹನುಮಗಿರಿ ಮೇಳದ ಕಲಾವಿದರು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾದರು. 

ಅನಂತ ಹುದೆಂಗಜೆ 

ಟಾಪ್ ನ್ಯೂಸ್

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.