ಚಂದ್ರನಂಗಳಕ್ಕೆ ಲಗ್ಗೆಯಿಟ್ಟ ತ್ರಿಪುರಾಸುರರು

ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ ಪ್ರಸ್ತುತಿ

Team Udayavani, Sep 13, 2019, 5:00 AM IST

q-5

ಅಂತರಿಕ್ಷ ವಿಜ್ಞಾನಿಗಳ ಪರಿಶ್ರಮದಿಂದ ಇಸ್ರೋದ ಚಂದ್ರಯಾನ ಜಗತ್ತಿನ ಗಮನ ಸೆಳೆಯುತ್ತಿರುವ ಹೊತ್ತಿನಲ್ಲಿ, ಸಾವಿರಾರು ವರ್ಷಗಳ ಹಿಂದೆ ತಾರಕಾಕ್ಷ ಸಹೋದರರು ಯಾರಿಂದಲೂ ಪ್ರವೇಶ ಸಾಧ್ಯವಾಗದ ಚಂದ್ರಲೋಕಕ್ಕೆ ಲಗ್ಗೆ ಇಟ್ಟು ಚಂದ್ರನನ್ನು ಅಟ್ಟಿಸಿಕೊಂಡು ಹೋದ ಪ್ರಸಂಗ
ವೀಕ್ಷಿಸಲು ಮುದ ನೀಡಿತು.

ಬೈಂದೂರಿನ ಶ್ರೀ ಸೇನೇಶ್ವರ ದೇವಸ್ಥಾನದ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ ಇವರು “ತ್ರಿಪುರ ಮಥನ’ ಯಕ್ಷಗಾನ ಪ್ರಸ್ತುತಪಡಿಸಿದರು. ಜಾತಸ್ಯ ಮರಣಂ ಧ್ರುವಂ ಅರ್ಥಾತ್‌ ಹುಟ್ಟಿದ ಪ್ರತಿಯೊಬ್ಬನೂ ಸಾಯಲೇ ಬೇಕು ಎನ್ನುವುದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲದ ತಾರಕಾಸುರನ ಮಕ್ಕಳಾದ ತಾರಕಾಕ್ಷ, ತಾಮ್ರಾಕ್ಷ ಮತ್ತು ವಿದ್ಯುನ್ಮಾಲಿ ತಮ್ಮ ತಪಸ್ಸಿಗೆ ಒಲಿದು ಬಂದ ಬ್ರಹ್ಮನಿಂದ ಅಜೇಯರಾಗಿಯೂ, ಅಮರರಾಗಿಯೂ ಇರಲು ಒಂದು ವಿಶೇಷ ವರದಾನವನ್ನು ಬಯಸುತ್ತಾರೆ. ಕೇವಲ ಒಂದೇ ಒಂದು ಬಾಣದಿಂದ ಮಾತ್ರ ನಿರ್ನಾಮವಾಗಬಹುದಾದ, ಅಷ್ಟೇ ಅಲ್ಲದೆ ಕೇವಲ ಸಾವಿರ ವರ್ಷಕ್ಕೊಮ್ಮೆ ಒಂದು ಸರಳ ರೇಖೆಯಲ್ಲಿ ಬರಬಹುದಾದ ಸದಾ ಚಲಿಸುವ, ತೇಲಾಡುವ ಮೂರು ನಗರಗಳ ವರದಾನವನ್ನು ಪಡೆದು ತಾವಿನ್ನು ಅಮರರು ಎಂದು ಬೀಗುತ್ತಾರೆ. ಬ್ರಹ್ಮನ ವರದಾನದ ಬಲದಿಂದ ಸಕಲ ಭೋಗ-ಭಾಗ್ಯಗಳನ್ನು ಪಡೆದು, ಲೋಕಕಂಟಕರಾಗಿ ಮೆರೆಯುತ್ತಿದ್ದ ಅಹಂಕಾರಿಗಳಾದ ತಾರಕಾಕ್ಷ ಸಹೋದರರ ಉಪಟಳ ಎಲ್ಲೆ ಮೀರಿದಾಗ ದೇವಾಧಿದೇವತೆಗಳ ಕೋರಿಕೆಯನ್ನು ಮನ್ನಿಸಿ ಪರಶಿವನು ತ್ರಿಪುರಾಸುರರನ್ನು ಸಂಹರಿಸುವ “ತ್ರಿಪುರ ಮಥನ’ ರಂಜಿಸಿತು.

ಅಂತರಿಕ್ಷ ವಿಜ್ಞಾನಿಗಳ ಪರಿಶ್ರಮದಿಂದ ಇಸ್ರೋದ ಚಂದ್ರಯಾನ ಜಗತ್ತಿನ ಗಮನ ಸೆಳೆಯುತ್ತಿರುವ ಹೊತ್ತಿನಲ್ಲಿ, ಸಾವಿರಾರು ವರ್ಷಗಳ ಹಿಂದೆ ತಾರಕಾಕ್ಷ ಸಹೋದರರು ಯಾರಿಂದಲೂ ಪ್ರವೇಶ ಸಾಧ್ಯವಾಗದ ಚಂದ್ರಲೋಕಕ್ಕೆ ಲಗ್ಗೆ ಇಟ್ಟು ಚಂದ್ರನನ್ನು ಅಟ್ಟಿಸಿಕೊಂಡು ಹೋದ ಪ್ರಸಂಗ ವೀಕ್ಷಿಸಲು ಮುದ ನೀಡಿತು. ವಿಹಾರಾರ್ಥವಾಗಿ ಸ್ತ್ರೀ ವೇಷತಳೆದು ಸಂಚರಿಸುತ್ತಿದ್ದ ಸರಸ್ವತಿ ನದಿಯ ಸೌಂದರ್ಯಕ್ಕೆ ಮಾರು ಹೋದ ತಾಮ್ರಾಕ್ಷ (ಅಮ್ಮುಂಜೆ ಮೋಹನ್‌) ಆಕೆಯನ್ನು ಮದುವೆಯಾಗುವಂತೆ ಕಾಡುವ-ಪೀಡಿಸುವ, ಮೋಹಕ ಭಾವ-ಭಂಗಿ, ಮಾತುಗಾರಿಕೆ ಮನಗೆದ್ದಿತು. ವಾಸ್ತವದಲ್ಲಿ ಆಕೆ ಸ್ತ್ರೀಯಲ್ಲ ನದಿ ಎಂದು ತಿಳಿದು ತಮ್ಮ ಪುರಕ್ಕೆ ಬಾ ಎಂದು ನದಿ ತಿರುವು ಯೋಜನೆಯ ಪ್ರಸ್ತಾವ ಇಡುವ ರೋಚಕ ಸನ್ನಿವೇಶ ನಕ್ಕುನಗಿಸಿತು.

ಯುದ್ಧದಲ್ಲಿ ಗೆದ್ದ ತಾರಕಾಕ್ಷನ (ನಿಡ್ಲೆ ಗೋವಿಂದ ಭಟ್‌) ಪರಾಜಿತ ಇಂದ್ರನ ಪಟ್ಟದರಸಿ ಶಚಿಯನ್ನು ಹೊಂದುವ ಬಯಕೆ, ಅದಕ್ಕೆ ಆತನ ಪತ್ನಿಯಿಂದ ಎದುರಾದ ಪ್ರತಿರೋಧ, ಶಚಿಯ ಧರ್ಮ ಪಾರಾಯಣತೆ ಮತ್ತು ಹಿತೋಪದೇಶಗಳು, ಇಂದ್ರನ ಅಸಹಾಯಕತೆ ಚೆನ್ನಾಗಿ ಮೂಡಿಬಂತು. ಸರ್ವಾಲಂಕಾರ ಭೂಷಿತೆ, ಸೌಂದರ್ಯವತಿ ಶಚಿಯ ಘನಗಾಂಭೀರ್ಯದ ನಡೆನುಡಿ ಗಮನಸೆಳೆಯುವಂತಿತ್ತು. ತಾರಕಾಸುರನ ಪತ್ನಿಯ (ಕೆದಿಲೆ ಜಯರಾಮ ಭಟ್‌) ಒನಪು-ಒಯ್ನಾರಗಳು, ಮಾತಿನ ಓಘ ಮನಸೆಳೆಯಿತು. ನಶ್ವರ ಬದುಕಿನ ವಾಸ್ತವನ್ನರಿಯದ ಮನುಷ್ಯ ಅಹಂಕಾರಿಯೂ, ಮತಿಹೀನನೂ ಆಗಿ ತಾಮಸ ಪೃವೃತ್ತಿ ರೂಢಿಸಿಕೊಂಡು ಬದುಕನ್ನು ವ್ಯರ್ಥಮಾಡಿಕೊಳ್ಳುವ ಕುರಿತು ಎಚ್ಚರಿಸುವ ಪ್ರಸಂಗ ಪಾವನ ಪರ್ವವಾದ ಗಣೇಶ ಚತುರ್ಥಿಯ ಸಂದರ್ಭಕ್ಕೆ ಪ್ರಾಸಂಗಿಕವಾಗಿತ್ತು. ಭಾಗವತರ ಲಯಬದ್ಧ ಹಾಡುಗಾರಿಕೆ ಮತ್ತವರ ತಂಡದ ಪರಿಶ್ರಮ ಪ್ರಸಂಗದ ಯಶಸ್ಸಿಗೆ ಪೂರಕವಾದವು.

ಬೈಂದೂರು ಚಂದ್ರಶೇಖರ ನಾವಡ

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.