ತುಳು ಯಕ್ಷಗಾನ ಸ್ಪರ್ಧೆ ಅಭಿನಯ ಕೌಶಲ ಅನಾವರಣ


Team Udayavani, Oct 26, 2018, 12:37 PM IST

tulu-yakshagana-1.jpg

ಬೆಳುವಾಯಿ ಯಕ್ಷದೇವ ಮಿತ್ರಕಲಾ ಮಂಡಳಿ ಅಸ್ತಿತ್ವಗೊಂಡು ಇಪ್ಪತ್ತೂಂದು ವರ್ಷ ಕಳೆಯಿತು. ಮೂಡಬಿದಿರೆ ಪ್ರದೇಶವನ್ನು ಪ್ರಧಾನ ಕೇಂದ್ರವಾಗಿರಿಸಿ ಪ್ರತೀ ಮಳೆಗಾಲದಲ್ಲಿ ವೈವಿಧ್ಯ ಸೌಂದರ್ಯದ ಕಲಾಪ್ರದರ್ಶನ. ಆಧುನಿಕ ಪರಿಕಲ್ಪನೆಯ ಜನಪ್ರೀತ ರಂಗಪ್ರಯೋಗ. ಕಾರ್ಯಧ್ಯಕ್ಷ ದೇವಾನಂದ ಭಟ್ಟರ ಬಳಗದ ಅಚ್ಚುಕಟ್ಟಾದ ಸಂಯೋಜನೆ.

ಹಾಸ್ಯ-ಲಾಸ್ಯ, ಗಾನ ಮೇಳ, ಲಯ ವಿನ್ಯಾಸ, ನಾಟ್ಯ ಸಂಭ್ರಮ, ಯುಗಳ ಸಂವಾದ, ತಾಳಮದ್ದಳೆ ಕೂಟ, ತೆಂಕು- ಬಡಗುತಿಟ್ಟು ಕಲಾವಿದರ ಕೂಡಾಟ … ಎಲ್ಲೂ ಯಡವಟ್ಟು ಗೊಂದಲಗಳಿಲ್ಲದ ಸುವ್ಯವಸ್ಥೆ. ಸಾಂಪ್ರದಾಯಿಕ ಸ್ವರೂಪ ಹೊಂದಿದ ಚೌಕಿ ಮತ್ತು ರಂಗ ವೇದಿಕೆಯ ಸಿದ್ಧತೆ. ಮಳೆಗಾಲ ಆರಂಭವಾಗುತ್ತಿರುವಂತೆ ಕುತೂಹಲಭರಿತ ಕೆಲ ಖಾಯಂ ಪ್ರೇಕ್ಷಕರಿಗೆ ಯಕ್ಷದೇವರ ಆಟದ ಮುನ್ನೋಟದ ನಿರೀಕ್ಷೆ.

ಈ ಬಾರಿ 3 ದಿವಸಗಳಲ್ಲಿ 8 ತಂಡಗಳ ತುಳು ಯಕ್ಷಗಾನ ಸ್ಪರ್ಧೆ ನಿರೂಪಿತವಾಯಿತು. ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ವೇಷಧಾರಿ ಎಮ್‌.ಕೆ ರಮೇಶ ಆಚಾರ್ಯ ಮತ್ತು ಭಾಸ್ಕರ ರೈ ಕುಕ್ಕುವಳ್ಳಿ ತೀರ್ಪುಗಾರರಾಗಿ ನಿಯೋಜಿತರು. 

ಬಹುತೇಕ ಪ್ರಸಿದ್ಧ ಕಲಾವಿದರ ಜೊತೆ ಕೆಲ ಹವ್ಯಾಸಿಗಳು ಪಾಲ್ಗೊಂಡ ಶಿಸ್ತುಬದ್ಧ ತಂಡ. ಪರಿಶುದ್ಧ ರಾಗ-ತಾಳ-ಲಯ ಹೊಂದಿದ ಹಿಮ್ಮೇಳ. ಎಳೆಯರ ಪ್ರಯತ್ನಶೀಲತೆ. ಹಳೆಯ ವೇಷಧಾರಿಗಳ ಉಲ್ಲಾಸ. ಉತ್ತಮವಾಗಿ ಸಾಗಿದ ರಂಗ ಚಲನೆ.

ಸೊಗಸಾದ ವೇಷಭೂಷಣ. ಪ್ರಗಲ್ಬ ತುಳು ಭಾಷೆಯ ನುಡಿ ತೋರಣ. ಅಭಿನಯ ಕೌಶಲದಿಂದ ರಂಗಮಂಟಪ ಅನಾವರಣ. ಕೆಲ ಪ್ರಸಂಗಗಳಲ್ಲಿ ಬಳಸಿಕೊಂಡ “ತೆಂಗಿನ ಸೋಗೆ, ಮಡಕೆ, ಗೆರಸೆ, ಎಲೆ ಅಡಿಕೆ, ಭತ್ತ , ಬೆತ್ತ , ಕತ್ತಿ…’ ರಂಗ ಪರಿಕರಗಳು ದೃಶ್ಯ ಸಂಯೋಜನೆಗೆ ಉತ್ತಮ ಪರಿಣಾಮಕಾರಿಯಾಯಿತು. ಒಟ್ಟಿನಲ್ಲಿ ಗುಣಮಟ್ಟವನ್ನು ಕಾಯ್ದುಕೊಂಡ ಪ್ರದರ್ಶನಗಳಲ್ಲಿ ಒಂದಕ್ಕಿಂದ ಮತ್ತೂಂದು ಶ್ರೇಷ್ಠವಾಗಿ ಕಾಣಿಸಿತು. “ಯಕ್ಷ ಉಚ್ಚಯ ತುಳು ಆಟದ ಪಂತೊ’ ತುಳು ಭಾಷಾಭಿಮಾನಿಗಳ ಮನಮುಟ್ಟಿತು. ಕೆಲ ಪುರಾಣ ಪ್ರಸಂಗಗಳನ್ನು ಕನ್ನಡದಷ್ಟೇ ಗಟ್ಟಿಯಾಗಿ ತುಳು
ಬಾಷೆಯಲ್ಲೂ ಪ್ರದರ್ಶಿಸಲು ಸಾಧ್ಯವೆನಿಸಿತು. ತುಳು ಸಾಹಿತ್ಯವನ್ನು ರಂಗದಲ್ಲಿ ಸಮೃದ್ಧವಾಗಿ ಬಳಸಬಲ್ಲ ಕಲಾವಿದರ ಸಂಖ್ಯೆಯು ವಿಪುಲವಾಗಿದೆ ಎಂಬುದು ವೇದ್ಯವಾಯಿತು.

ಸಿದ್ಧಕಟ್ಟೆ ಯಕ್ಷಾಂತರಂಗ ತಂಡದವರ “ಕೋಡಬ್ಬು ಬಾರಗ’ ಪ್ರಥಮ. ಕಾವೂರು ಸತ್ಯದೇವತಾ ಕಲಾಮಂಡಳಿ “ಬಾಲೆಮಾನಿ ಮಾಯಂದಾಲೆ’ ದ್ವಿತೀಯ ಮತ್ತು ಕೈರಂಗಳ ಗೋಪಾಲಕೃಷ್ಣ ಮೇಳಕ್ಕೆ “ಕುಡಿಯನ ಕಣ್‌’ ತೃತೀಯ ಸ್ಥಾನದ ವಿಜಯಮಾಲೆ ಪ್ರಾಪ್ತಿಯಾಯಿತು. ಈ ಮಧ್ಯೆ ಪ್ರಖ್ಯಾತ ತುಳು ಪ್ರಸಂಗ ಕತೃ ಅನಂತರಾಮ ಬಂಗಾಡಿ ಮತ್ತು ಅರುವ ಕೊರಗಪ್ಪ ರೈ ಅವರಿಗೆ “ಯಕ್ಷದೇವ ಪುರಸ್ಕಾರ’ ಸಲ್ಲಿಸಲಾಯಿತು. ತುಳು ಭಾಷಾ ಪ್ರೌಢಿಮೆ ಹೊಂದಿದ ಈ ಸಾಧಕರಿಬ್ಬರ ಆಯ್ಕೆ ಪ್ರಸ್ತುತವೆನಿಸಿತು.

ಟಾಪ್ ನ್ಯೂಸ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Glanders infection: ಗ್ಲ್ಯಾಂಡರ್ಸ್‌ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ

Glanders infection: ಗ್ಲ್ಯಾಂಡರ್ಸ್‌ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ

Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ

Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.