ಎರಡು ಸಾರ್ಥಕ ಸಂಗೀತ ಶಿಬಿರಗಳು


Team Udayavani, Jun 1, 2018, 6:00 AM IST

z-13.jpg

ಶಿಬಿರದ ಕೊನೆಯಲ್ಲಿ ಸುಶಾಂತ್‌ ಕೆ. ಸೋಮಸುಂದರನ್‌ ಅವರಿಂದ ಹಿಂದೂಸ್ಥಾನಿ ಕಛೇರಿ ಏರ್ಪಟ್ಟಿತು

ಕಾಸರಗೋಡಿನ ಬಳ್ಳಪದವಿನಲ್ಲಿರುವ ‘ನಾರಾಯಣೀಯಮ…’ ಪ್ರತಿಷ್ಠಾನದ ವೀಣಾವಾದಿನಿ ಸಂಗೀತ ಶಾಲೆಯು ಈ ಬೇಸಿಗೆಯಲ್ಲಿ ಎರಡು ವೈಶಿಷ್ಟ್ಯಪೂರ್ಣವಾದ ಶಿಬಿರಗಳನ್ನು ಆಯೋಜಿಸ್ಟಿತು. ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಕೆಗಾಗಿ ‘ಗಾನಮಾಧುರ್ಯಮ…’ ಎಂಬ ಹೆಸರಿನಲ್ಲಿ ಆಯೋಜನೆಗೊಂಡರೆ, ಎರಡನೇ ಶಿಬಿರವು ಶಾಸ್ತ್ರೀಯ ಸಂಗೀತದ ಹನ್ನೆರಡು ಸ್ವರ ಪ್ರಭೇದಗಳನ್ನು ಶುದ್ಧವಾಗಿ ಆಯಾ ಸ್ವರಸ್ಥಾನಗಳಲ್ಲೇ ನಿಧಿಧ್ಯಾಸನ ಮಾಡುವ ಉದ್ದೇಶದಿಂದ “ಸ್ವರಸಾಧನಾ’ ಎಂಬ ಹೆಸರಿನಲ್ಲಿ ಆಯೋಜನೆಗೊಂಡಿತು. ಮೊದಲ ಶಿಬಿರವು ವಿದ್ವಾನ್‌ ಗೋವಿಂದನ್‌ ನಂಬೂದಿರಿ ತಾಮರಕ್ಕಾಡ್‌ ಅವರ ನಿರ್ದೇಶನದಲ್ಲಿ ಜರುಗಿತು. ಸಂಗೀತದಲ್ಲಿ ರಾಗಗಳ ಜೊತೆಗೆ ಸಾಹಿತ್ಯವನ್ನೂ ಶುದ್ಧವಾಗಿ ಉಚ್ಚರಿಸುವ ಮೂಲಕ ಸಾಹಿತ್ಯಕ್ಕೂ ಸಮಾನ ಸ್ಥಾನ ನೀಡುವುದರ ಅಗತ್ಯವನ್ನು ಗೋವಿಂದನ್‌ ನಂಬೂದಿರಿ ಮನಗಾಣಿಸಿಕೊಟ್ಟರು. ಹಂಸಧ್ವನಿ ರಾಗದಲ್ಲಿರುವ ಪಟ್ಣಂ ಸುಬ್ರಹ್ಮಣ್ಯ ಅಯ್ಯರ್‌ ಅವರ ಆದಿತಾಳದ ವರ್ಣ; ಜಿಂಗಳ ರಾಗದಲ್ಲಿರುವ ತ್ಯಾಗರಾಜರ “ಅನಾಥುಡನುಗಾನು’ ಎಂಬ ರಚನೆ; ರೇವಗುಪ್ತಿ ರಾಗದಲ್ಲಿರುವ ಸ್ವಾತಿ ತಿರುನಾಳ್‌ ಅವರ “ರಾಮ ರಾಮ ಪಾಹಿರಾಮ’ ಎಂಬ ಕೃತಿ; ಸಿಂಧುಭೈರವಿ ರಾಗದಲ್ಲಿರುವ ಸದಾಶಿವ ಬ್ರಹೆ¾àಂದ್ರ ಅವರ “ಕೇಳದಿ ಬ್ರಹ್ಮಾಂಡೇ ಭಗವನ್‌’ ಎಂಬ ರಚನೆ ಮತ್ತು ರೀತಿಗೌಳ ರಾಗದಲ್ಲಿರುವ ತ್ಯಾಗರಾಜರ “ಬಾಲೇ ಬಾಲೇಂದು ಭೂಷಣೀ’ ಎಂಬ ರಚನೆಗಳನ್ನು ಶಿಬಿರದಲ್ಲಿ ಆಳವಾಗಿ ಅಭ್ಯಾಸ ಮಾಡಲಾಯಿತು. 

ಸಂಗೀತ ನಿರ್ದೇಶಕರಾದ ಜಯಪ್ರಕಾಶ್‌ ಚೆಂಗನಶೆರಿ ಮಾರ್ಗದರ್ಶನದಲ್ಲಿ ನಡೆದ “ಸ್ವರಸಾಧನಾ’ದಲ್ಲಿ ಸಂಗೀತದ ಹನ್ನೆರಡು ಸ್ವರ ಪ್ರಭೇದಗಳನ್ನು ಮನನ ಮಾಡುವುದರ ಕಡೆಗೆ ಹೆಚ್ಚಿನ ಗಮನ ನೀಡಲಾಯಿತು. ಹಾರ್ಮೋನಿಯಮ್‌ ಸ್ವರದ ನೆರವಿನೊಂದಿಗೆ ಗಮಕವಿಲ್ಲದೆ ನೇರವಾಗಿ ಸ್ವರಗಳನ್ನು ಹಾಗೂ ಸ್ವರಗುಂಪುಗಳನ್ನು ಅಭ್ಯಾಸ ಮಾಡುವ ಕ್ರಮವನ್ನು ಕಲಿಸಲಾಯಿತು. ಹಿಂದೂಸ್ಥಾನೀ ಸಂಗೀತಕ್ಕೆ ಉಪಯೋಗಿಸಲ್ಪಡುವ ಹಾರ್ಮೋನಿಯಮ್‌ ಉಪಕರಣವನ್ನು ಕರ್ಣಾಟಕ ಶಾಸ್ತ್ರೀಯ ಸಂಗೀತದ ಅಗತ್ಯಕ್ಕೆ ತಕ್ಕುದಾಗಿ ಹೇಗೆ ಒಗ್ಗಿಸಿಕೊಳ್ಳಬಹುದೆಂಬ ತಿಳಿವಳಿಕೆಯನ್ನು ಜಯಪ್ರಕಾಶ್‌ ಅವರು ಶಿಬಿರಾರ್ಥಿಗಳಿಗೆ ತಿಳಿಸಿಕೊಟ್ಟರು. 

ಕೆ. ಶೈಲಾಕುಮಾರಿ 

ಟಾಪ್ ನ್ಯೂಸ್

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Shotgun

Shotgun ಶೂಟಿಂಗ್‌ ಅರ್ಹತಾ ಸುತ್ತಿನಲ್ಲಿ ಕರಣ್‌: ವಿವಾದ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.