ವೀಣೆಯ ಮಹಿಮೆಗೆ ಸಾಕ್ಷಿಯಾದ ಎರಡು ಕಛೇರಿ 


Team Udayavani, Jul 20, 2018, 6:00 AM IST

x-11.jpg

ಮಣಿಪಾಲದ ಕಲಾಸ್ಪಂದನದ ಇಪ್ಪತ್ತಮೂರನೇ ವಾರ್ಷಿಕೋತ್ಸವ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ವಿಶಿಷ್ಟ ರೀತಿಯಲ್ಲಿ ಸಂಪನ್ನಗೊಂಡಿತು. ಇಲ್ಲಿ ನಡೆದ ಎರಡು ಉತ್ತಮ ಮಟ್ಟದ ವೀಣಾವಾದನ ಕಛೇರಿಗಳು ಗಮನಾರ್ಹವಾಗಿವೆ. 

ಪೂರ್ವಾಹ್ನದ ಮುಖ್ಯ ವೀಣಾವಾದನ ಕಛೇರಿಯನ್ನು ಬೆಂಗಳೂರಿನ ವಿದುಷಿ ಯೋಗವಂದನಾ ಅವರು ನಡೆಸಿದರು. ಸಾವೇರಿ ರಾಗದ “ಸರಸೂಡಾ’ ವರ್ಣವನ್ನು ನುಡಿಸಿ ಕಛೇರಿಗೆ ತಳಹದಿಯನ್ನು ಹಾಕಿದರು. ಅಣ್ಣಮಾಚಾರ್ಯರ ಹಂಸಧ್ವನಿ ರಾಗದ ಖಂಡಛಾಪು ಕೃತಿ “ವಂದೇಹಂ ಜಗದ್ವಲ್ಲಭಂ’ನ್ನು ಚುಟುಕಾದ ಸ್ವರಪ್ರಸ್ತಾರಗಳಿಂದ ಅಲಂಕರಿಸಿ, ಪುರಂದರ ದಾಸರ ಮಲಯ ಮಾರುತ ರಾಗದ “ಸ್ಮರಣೆ ಒಂದೇ ಸಾಲದೇ’ಯನ್ನು ನುಡಿಸಿದರು. ಮುಂದೆ ಕಲ್ಯಾಣಿರಾಗದ ಆಲಾಪನೆಯನ್ನು ನಡೆಸಿ “ಪಂಕಜಲೋಚನಾ’ವನ್ನು ಮಿಶ್ರ ಛಾಪುತಾಳದಲ್ಲಿ ಪ್ರಸ್ತುತ ಪಡಿಸಿದರು. ತ್ಯಾಗರಾಜರ ಅಸಾವೇರಿ ರಾಗದ “ರಾ ರಾ ಮಾಯಿಂಟಿ’ಯನ್ನು ನುಡಿಸಿದರು. “ಮೋಹನ ಮುರಳೀಧರ ಗೋಪಾಲ ಮುರಹರನಗಧರ’ ಎನ್ನುವ ಪಲ್ಲವಿಯನ್ನು ಮೋಹನ, ಗಾನಮೂರ್ತಿ, ಬೇಹಾಗ್‌ನಲ್ಲಿ ರಾಗಮಾಲಿಕವಾಗಿ ಬೆಸೆದು ಕೃಷ್ಣನಿಗೆ ಸಮರ್ಪಿಸಿದರು. ಅನಿರುದ್ಧ ಎಸ್‌. ಭಟ್‌ ಮತ್ತು ರಘುನಂದನ್‌ ಬಿ.ಎಸ್‌ ಅವರ ಮೃದಂಗ ಘಟಗಳನ್ನೊಳಗೊಂಡ ತನಿ ಆವರ್ತನವು ಕಛೇರಿಗೆ ಕಳೆ ಕೊಟ್ಟಿತು. ಸಿಂಧು ಭೈರವಿ ರಾಗದ “ವೆಂಕಟಾಚಲನಿಲಯಂ’, ಕಾಪಿ ರಾಗದ “ಜಗದೋದ್ಧಾರನಾ’ಗಳನ್ನು ಭಕ್ತ ಜನರ ಅಪೇಕ್ಷೆಯ ಮೇರೆಗೆ ನುಡಿಸಿದರು. ಮಧ್ಯಮಾವತಿ ಮತ್ತು ಪಂತುವರಾಳಿ ರಾಗಗಳ ನೇಯ್ಗೆಯಿಂದ “ಭಾಗ್ಯದ ಲಕ್ಷ್ಮೀ ಬಾರಮ್ಮಾ’ ನುಡಿಸಿ ಸೌರಾಷ್ಟ್ರ ರಾಗದ ಪವಮಾನದಿಂದ ವೀಣಾವಾದನವನ್ನು ಮಂಗಳಗೊಳಿಸಿದರು. ಯೋಗವಂದನಾ ಅವರ ನಯವಾದ ಮೀಟುಗಳಿಂದ ಸುಶ್ರಾವ್ಯವಾದ, ಪ್ರಶಾಂತವಾದ ವೀಣಾವಾದನದ ಸೌಖ್ಯವು ಕಲಾರಸಿಕರನ್ನು ರಂಜಿಸಿತು. 

ಸಂಧ್ಯಾಕಾಲದ ವೀಣಾವಾದನವನ್ನು ಮಣಿಪಾಲದ ಅಂಧ ಕಲಾವಿದೆ ವಿದುಷಿ ಅರುಣಾಕುಮಾರಿ ನಡೆಸಿಕೊಟ್ಟರು. ತ್ರಿಶೂರು ಅನಂತಪದ್ಮನಾಭನ್‌ ವಿರಚಿತ “ಕುಮರ ಸಹೋದರ’ ಚಾರುಕೇಶಿ ರಾಗದ ಆದಿತಾಳ ವರ್ಣದಿಂದ ಕಛೇರಿಯನ್ನು ಪ್ರಾರಂಭಿಸಿದ ಕಲಾವಿದೆ, ಸರಸ್ವತಿ ರಾಗದ “ಸರಸ್ವತಿ ನಮೋಸ್ತುತೇ’ಯನ್ನು ಆಯ್ದುಕೊಂಡು “ಕರಧೃತ ವೀಣಾ ಪುಸ್ತಕ’ ಅನ್ನುವಲ್ಲಿ ನೆರವಲ್‌ನಿಂದ ಅಲಂಕರಿಸಿದರು. ಮುಂದೆ ಗಂಭೀರವಾಣಿ ರಾಗದ ಆಲಾಪನೆಯನ್ನು ಮಾಡಿ ತ್ಯಾಗರಾಜರ “ಸುಧಾಮದಿಂ’ನ್ನು ಪ್ರಸ್ತುತ ಪಡಿಸಿದರು. ಸ್ವಾತಿ ತಿರುನಾಳರ ಸರಸಾಂಗಿ ರಾಗದ ಕೃತಿ “ಜಯ ಜಯ ಪದ್ಮನಾಭ ಮುರಾರೇ’ಯನ್ನು ಸವಿವರ ಸ್ವರ ಸಂಚಾರಗಳಿಂದ ನುಡಿಸಿದರು. ಹರಿಕಾಂಬೋಜಿ ರಾಗದ ಅವರ ವಿಶಿಷ್ಟ ಸ್ವಂತ ರಚನೆಯನ್ನು ನುಡಿಸಿ, ಪ್ರಸಿದ್ಧ ಭಜನೆಗಳು ಮತ್ತು ರಚನೆಗಳನ್ನು ಮೆಡ್ಲೆà ರೂಪದಲ್ಲಿ ಪ್ರಸ್ತುತ ಪಡಿಸಿದರು. ವೇದಘೋಷದೊಂದಿಗೆ ಅವರ ಪ್ರಸ್ತುತಿಯನ್ನು ಸಮಾಪ್ತಿಗೊಳಿಸಿದರು. ಗುರು ತ್ರಿಶೂರು ಅನಂತಪದ್ಮನಾಭನ್‌ ಶೈಲಿಯನ್ನು ಅರುಣಾಕುಮಾರಿಯವರು ಈ ಭಾಗದಲ್ಲಿ ಪ್ರಚುರಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೃದಂಗದಲ್ಲಿ ಡಾ| ಬಾಲಚಂದ್ರ ಆಚಾರ್‌ ಮತ್ತು ತಾಳದಲ್ಲಿ ಡಾ| ರಾಮಕೃಷ್ಣನ್‌ ಸಹಕರಿಸಿದರು. 

ಕಲಾಸ್ಪಂದನದ ವಿದ್ಯಾರ್ಥಿಗಳಿಂದ ವೀಣಾ-ವೇಣು-ವಯೋಲಿನ್‌ ಪ್ರಯೋಗವೂ, ವಿಪಂಚಿ ಬಳಗದಿಂದ ಪಂಚ ವೀಣಾವಾದನವೂ ಮತ್ತು ವೈಭವ್‌ ಪೈ ನಿರ್ದೇಶಿತ “ಶ್ರೀ ರಾಘವೇಂದ್ರ ಮಹಿಮೆ’ ಎನ್ನುವ ವೀಣಾ ನಾಟಕವನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. ಶಿಲ್ಪಾಜೋಶಿ ಮತ್ತು ಡಾ| ಚೈತ್ರರಾವ್‌ ಅವರ ಉತ್ತಮ ನಿರ್ವಹಣೆಯು ಕಾರ್ಯಕ್ರಮದ ಅಂದವನ್ನು ಹೆಚ್ಚಿಸಿತು. 

ಪ್ರಾಚೀನ ಸಾರ್ವಭೌಮ ವಾದ್ಯವಾದ ವೀಣೆಯ ಮಹಿಮೆಯನ್ನು ಹಾಗೂ ಅದರ ವಿವಿಧ ಆಯಾಮಗಳನ್ನು ಸಮಾಜಕ್ಕೆ “ಕಲಾಸ್ಪಂದನ’ದ ಮೂಲಕ ಡಾ| ಪಳ್ಳತ್ತಡ್ಕ ಕೇಶವ ಭಟ್‌ ಮೆಮೋರಿಯಲ್‌ ಟ್ರಸ್ಟ್‌ ಪರಿಚಯಿಸಿರುವುದು ಸ್ತುತ್ಯರ್ಹ. 

ಪವನ ಬಿ. ಆಚಾರ್‌

ಟಾಪ್ ನ್ಯೂಸ್

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.