ವಿಶಿಷ್ಟ, ವಿಭಿನ್ನ ತಾಳಮದ್ದಳೆ


Team Udayavani, Oct 25, 2019, 3:01 AM IST

q-41

ಕಾಟಿಪಳ್ಳ ಗಣೇಶಪುರದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಎರಡು ಯಕ್ಷಗಾನ ತಂಡಗಳ ಸಹಯೋಗದೊಂದಿಗೆ ಪುರುಷರೊಡನೆ ಮಹಿಳೆಯರೂ ಸೇರಿ ನಡೆಸಿದ ತಾಳಮದ್ದಲೆ ಕೂಟವು ವಿಶಿಷ್ಟವೂ, ವಿಭಿನ್ನವೂ ಆಗಿ ಜನಮನ ಗೆದ್ದಿತು. ಸ್ಥಳೀಯ ತಂಡಗಳಾದ ತಡಂಬೈಲಿನ ಎಸ್‌. ವಾಸುದೇವ ರಾವ್‌ ನೇತೃತ್ವದ ಶ್ರೀ ವಿನಾಯಕ ಯಕ್ಷಗಾನ ಮಂಡಳಿ ಹಾಗೂ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯ ಸದಸ್ಯರು ಜತೆ ಸೇರಿ “ದ್ರುಪದ ಗರ್ವ ಭಂಗ’ ಎಂಬ ಆಖ್ಯಾನವನ್ನು ಪ್ರದರ್ಶಿಸಿದರು.ಇದು ಒಂದು ಉತ್ತಮ ಹೊಂದಾಣಿಕೆಯ ಶ್ರೇಷ್ಟಮಟ್ಟದ ಕೂಟವಾಗಿ ಮೆರೆಯಿತು.

ಅಗ್ರಪಂಕ್ತಿಯ ಹವ್ಯಾಸ ಕಲಾವಿದರಾದ ಸರ್ಪಂಗಳ ಈಶ್ವರ ಭಟ್‌ ದ್ರುಪದನಾಗಿ ದ್ರೋಣರ ಬಗೆಗಿನ ದ್ವೇಷವನ್ನು ವ್ಯಂಗ್ಯ ಮಿಶ್ರಿತ ಮಾತಿನ ಚಮತ್ಕೃತಿಯ ವೈಭವೀಕರಣದ ಮೂಲಕ ಪ್ರಕಟ ಪಡಿಸಿದರೆ ಅರ್ಜುನನ ಬಳಿ ಸಾಗುವಾಗ ತನ್ನಂತೆ ಕ್ಷತ್ರಿಯ ಕುಲದ ಎಳೆಯರಾದ ನಿಮಗೆ ಇದು ಅನಗತ್ಯವಲ್ಲವೇ ಎಂಬುದಾಗಿ ಸೋದಾಹರಣದಪೂರ್ವಕ ಮನೋಜ್ಞವಾಗಿ ಚಿತ್ರಿಸಿದರು. ಆಕರ್ಷಕ ಶೈಲಿಯ ವಿಡಂಬನಾತ್ಮಕ ಪ್ರಸ್ತುತಿಯ ಮೂಲಕ ತನ್ನ ವಿಚಾರಧಾರೆಯನ್ನು ಹರಿಸಿ ಪ್ರೇಕ್ಷಕರ ಮನದಾಳವನ್ನು ಮುಟ್ಟಿದರು.

ಏಕಲವ್ಯನಾಗಿ ಡಾ| ದಿನಕರ ಪಚ್ಚನಾಡಿ ಸಾಹಿತ್ಯಪೂರ್ಣ ಶೈಲಿಯಲ್ಲಿ ವಿದ್ಯಾದಾನ ಎಂಬುದರಲ್ಲಿ ತಾರತಮ್ಯ ಸರಿಯೇ ಎಂಬುದಾಗಿ ಪ್ರಶ್ನಿಸುತ್ತಾ ಹಲವು ನಿದರ್ಶನಗಳನ್ನಿತ್ತರೆ ಕೊನೆಗೆ ಗುರುದಕ್ಷಿಣೆಯನ್ನು ಕೊಡುವಲ್ಲಿ ಹೆಬ್ಬೆರಳೇಕೆ ಬೇಕಿದ್ದರೆ ದೇಹವನ್ನೇ ಸಂತೋಷವಾಗಿ, ಸಮರ್ಪಿಸುತ್ತೇನೆ ಎಂದು ತನ್ನ ಶ್ರದ್ಧೆ, ವಿನಯ ಪೂರ್ವಕವಾದ ಅಸಾಧರಣ ಗುರುಭಕ್ತಿಯನ್ನು ಪ್ರಕಟಿಸುವಲ್ಲಿ ಪ್ರತಿಭೆಯನ್ನು ಮೆರೆದರು.

ಗುರುದ್ರೋಣನಾಗಿ ಎಸ್‌. ವಾಸುದೇವರಾವ್‌ ಏಕಲವ್ಯನಲ್ಲಿ ಆತನಿಗೆ ವಿದ್ಯಾದಾನ ಏಕೆ ಸಲ್ಲ ಎಂಬುದಕ್ಕೆ ಶಾಸ್ತ್ರ ಸಮ್ಮತವಾದ ಕಾರಣಗಳೊಂದಿಗೆ ತನ್ನ ಕಟ್ಟುಪಾಡು, ಅನಿವಾರ್ಯತೆ, ತನಗಿರುವ ನಿರ್ಬಂಧನಗಳನ್ನೂ ಪ್ರೌಢ ಶೈಲಿಯ, ಸ್ವರ ಗಾಂಭೀರ್ಯದಿಂದ ಕೂಡಿದ ಭಾವಪೂರ್ಣ ಮಾತುಗಳೊಂದಿಗೆ ಪ್ರಕಟಪಡಿಸಿ, ಸಂಭಾಷಣೆಯಲ್ಲೂ ತೊಡಗಿಸಿಕೊಳ್ಳುತ್ತಾ ಪ್ರತಿಪಾದಿಸಿದರು.

ಅರ್ಜುನನಾಗಿ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯ ಸುಲೋಚನಾ ವಿರಾಟ್‌ ಗುರುಗಳೊಂದಿಗೆ ವಿಧೇಯ ಶಿಷ್ಯನಾಗಿ ಭಾವಪೂರ್ಣ ಮಾತುಗಳಿಂದಲೂ, ಕೊನೆಗೆ ದ್ರುಪದನೊಂದಿಗೆ ಯುದ್ಧ ಭಾಗದಲ್ಲಿ ತಾನು ಎಳೆಯ ಬಾಲಕನಾದರೂ ಗುರುವಿನ ಮನಗೆದ್ದ ಸಮರ್ಥ ಶಿಷ್ಯ ಎಂಬುದನ್ನು ವೀರಾವೇಷದಿಂದ, ಗಾಂಭೀರ್ಯ ಮುಕುಟವಾಗಿ ನಿರರ್ಗಳವಾದ ಮಾತುಗಾರಿಕೆಯೊಂದಿಗೆ ಪ್ರಕಟಪಡಿಸುವಲ್ಲಿ ಯಸ್ವಿಯಾದರು. ಉಳಿದಂತೆ ಲಲಿತಾ ಭಟ್‌ ಚಿತ್ರಕನಾಗಿ ಜಯಂತಿ ಹೊಳ್ಳ ಕೌರವನಾಗಿ ಹಾಗೂ ಕಲಾವತಿ ಭೀಮನಾಗಿ ಏರು ದನಿಯಲ್ಲಿ ಗತ್ತು ಗಾಂಭೀರ್ಯಯುತವಾಗಿ ಮಾತುಗಾರಿಕೆಯೊಂದಿಗೆ ಯುದ್ಧ ಭಾಗದಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟರು. ಹಿಮ್ಮೇಳದಲ್ಲಿ ಭಾಗವತರಾಗಿ ಸದಾನಂದ ಕುಲಾಲ್‌, ಚಂಡೆ ಮದ್ದಲೆ ವಾದಕರಾಗಿ ಗಣೇಶ ಭಟ್‌ ಬೆಳಾಲು ಹಾಗೂ ಎಸ್‌. ಎನ್‌. ಭಟ್‌ ಸಹಕರಿಸಿದರು.

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.