ಮಲೇಷ್ಯಾದಲ್ಲಿ ಉಜಿರೆ ತಂಡದ ನೃತ್ಯ-ಸಂಗೀತ ಸಂಭ್ರಮ
Team Udayavani, Jul 13, 2018, 6:00 AM IST
ಉಜಿರೆಯ ಶ್ರೀ ವಾಣಿ ನೃತ್ಯ ಕಲಾಕೇಂದ್ರದ ನೃತ್ಯ ಶಿಕ್ಷಕಿ ಶಾಂತಾ ಪಡ್ವೆಟ್ನಾಯರು ತಮ್ಮ ಶಿಷ್ಯ ವೃಂದದವರೊಂದಿಗೆ ಮಲೇಷ್ಯಾದ ಮಿಡ್ಲ್ಯಾಂಡ್ನ ಶ್ರೀ ಮಹಾಮಾರಿಯಮ್ಮನ್ ದೇವಸ್ಥಾನದ ತಿರುವಿಲ್ಲಾ ಸಮಾರಂಭದ ಜಾತ್ರೋತ್ಸವದಲ್ಲಿ ನೃತ್ಯ-ಸಂಗೀತ ಕಾರ್ಯಕ್ರಮಗಳ ಮೂಲಕ ಭಾರತೀಯ ಸಾಂಸ್ಕೃತಿಕ ಕಲಾವೈಭವವನ್ನು ಅಲ್ಲಿಯ ಶ್ರೋತೃಗಳಿಗೆ ಉಣಬಡಿಸಿದರು.
ಉಜಿರೆಯ ಯುವ ಪ್ರತಿಭೆ ದೂರದರ್ಶನ ಖ್ಯಾತಿಯ ರಜತ ಮಯ್ಯ ಸುಮಧುರ ಕಂಠದಲ್ಲಿ ಭಕ್ತಿ-ಭಾವ-ಜಾನಪದ ಗೀತೆಗಳನ್ನು ಪ್ರಸ್ತುತಪಡಿಸಿ ಮನಸೂರೆಗೊಂಡರು. ಶ್ರೀ ವಾಣಿ ನೃತ್ಯ ಕಲಾ ಕೇಂದ್ರದ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿದರು. ಈ ತಂಡದಲ್ಲಿ ವಿಂದ್ಯಾ ಲಕ್ಷ್ಮೀಶ್, ಸೌಜನ್ಯಾ ಪಡ್ವೆಟ್ನಾಯ, ಬೇಬಿ ತನ್ವಿ, ಶಿಷ್ಯೆಯರಾದ ಪ್ರತೀಕಾ ಗುರುರಾಜ್, ಸಮೃದ್ಧಿ ಜೈನ್, ಸುಮನಾ ಭಟ್, ದಿಶಾ ರಾಘ…, ದೀನಾ ಮಂಜು, ವಿಸ್ಮಿತಾ ಮತ್ತಿತರ ಬಾಲ ಕಲಾವಿದರು ಭಾಗವಹಿಸಿದ್ದರು. ದೇಗುಲದ ವ್ಯವಸ್ಥಾಪಕ ತಾರಾನಾಥ್ ಅವರ ವಿಶೇಷ ಆಮಂತ್ರಣದ ಮೇರೆಗೆ ಶಾಂತಾ ಪಡ್ವೆಟ್ನಾಯರು ತಮ್ಮ ತಂಡ, ಅಭಿಮಾನಿ ಬಳಗದೊಂದಿಗೆ ಮಲೇಷ್ಯಾದಲ್ಲಿ ನೃತ್ಯ ಕಾರ್ಯಕ್ರಮ ನೀಡಿ ಮರಳಿದ್ದಾರೆ.
ಸಾಂತೂರು ಶ್ರೀನಿವಾಸ ತಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ