ವಿಶಿಷ್ಟ ಪರಿಕಲ್ಪನೆ ಮಕ್ಕಳತ್ತ ಯಕ್ಷಗಾನ


Team Udayavani, Jun 7, 2019, 5:50 AM IST

f-3

ಮಕ್ಕಳ ಯಕ್ಷಗಾನವನ್ನು ಆರಂಭಿಸಿದ ಮೊದಲ ಸಂಸ್ಥೆಯಾದ ಕರ್ನಾಟಕ ಕಲಾದರ್ಶಿನಿ ತಂಡ ಸಾಸ್ತಾನದಲ್ಲಿ ಮಕ್ಕಳತ್ತ ಯಕ್ಷಗಾನ ಎನ್ನುವ ವಿಶಿಷ್ಟ ಪರಿಕಲ್ಪನೆಯ ಯಕ್ಷಗಾನ ಶಿಬಿರವನ್ನು ಏರ್ಪಡಿಸುವ ಮೂಲಕ ಮಕ್ಕಳಲ್ಲಿ ಯಕ್ಷಗಾನದ ಅಭಿರುಚಿ ಬೆಳೆಸಲು ವಿನೂತನ ಕ್ರಮ ಅನುಸರಿಸಿದೆ.
ಮಕ್ಕಳಿಗಾಗಿ ಯಕ್ಷಗಾನ ಬೇಸಿಗೆ ಶಿಬಿರ ಏರ್ಪಡಿಸಿ ಆಸಕ್ತ ಮಕ್ಕಳಿಗೆ ಯಕ್ಷಗಾನದ ಆಸಕ್ತಿ ಮೂಡಿಸಲು ಮುಂದಾಗಿರುವುದು ಪ್ರಸಂಶಾರ್ಹ ಕಾರ್ಯ. ಹೊಸ್ತೋಟ ಮಂಜುನಾಥ ಭಾಗವತರು ಮಕ್ಕಳಿಗಾಗಿ ರಚಿಸಿದ ಸೇತುಬಂಧ ಯಕ್ಷಗಾನ ಪ್ರಸಂಗದ ಮೂಲಕ ಬೇಸಿಗೆ ಶಿಬಿರದ ಯಶಸ್ಸಿಗೆ ಸಂಸ್ಥೆ ಕಾರಣವಾಗಿದೆ. ಕಲಾದರ್ಶಿನಿಯ ನಿರ್ದೇಶಕ ಶ್ರೀನಿವಾಸ ಸಾಸ್ತಾನ ಅವರು ಹುಟ್ಟೂರಿನಲ್ಲಿ ಮಕ್ಕಳಲ್ಲಿ ಯಕ್ಷಗಾನ ಕಲೆಯನ್ನು ಬೆಳೆಸುವ ಕೈಂಕರ್ಯಕ್ಕೆ ಮುಂದಾಗಿರುವುದು ಪ್ರಸಂಸಾರ್ಹ.

ಶಿಬಿರದ ಕೊನೆಯ ದಿನ ನಡೆಸಲಾದ ಯಕ್ಷಗಾನ ಪ್ರದರ್ಶನದಲ್ಲಿ ರಾಮನಾಗಿ ಧನ್ಯಶ್ರೀ , ಲಕ್ಷ್ಮಣನಾಗಿ ಸಂಜನಾ ಉತ್ತಮ ಅಭಿನಯ ನೀಡಿದರೆ, ಸುಗ್ರೀವನಾಗಿ ದಿಶಾ ಗಾಂಭೀರ್ಯ ಹಾಗೂ ಪೂರಕ ನೃತ್ಯದೊಂದಿಗೆ ಸೇತುಬಂಧ ಕಾರ್ಯವನ್ನು ಮುನ್ನೆಡೆಸಿದ್ದಳು. ಸುಗ್ರೀವನ ಕಪಿ ಸೇನೆಯಲ್ಲಿದ್ದ ಮಾಣಿಕ್ಯ, ಸಮರ್ಥ, ಸಾತ್ಮಿಕ್‌, ಲಕ್ಷೀ, ಆದಿತ್ಯ, ಮನ್ವಿತ, ದರ್ಶನ್‌, ಮದನ್‌ ವೈವಿಧ್ಯಮಯ ಮುಖವರ್ಣಿಕೆ, ಚುರುಕಾದ ನರ್ತನ ಹಾಗೂ ಅಭಿನಯದಿಂದ ರಂಜಿಸಿದರು.

ಗೋವಿಂದ ಬ್ರಹ್ಮನಾಗಿ ಪಾರಂಪರಿಕ ವೇಷಭೂಷಣ ಹಾಗೂ ಉತ್ತಮ ಮಾತುಗಾರಿಕೆಯಿಂದ ಅಭಿನಯಿಸಿ ಜನಮನವನ್ನು ಮುಟ್ಟುವಲ್ಲಿ ಯಶಸ್ವಿಯಾದ. ಮೈನಾದೇವಿಯಾಗಿ ರಚಿತಾ , ಹನುಮಂತನಾಗಿ ದ್ರಶ್ಯಾ , ಈಶ್ವರನಾಗಿ ಅವನಿ , ಪಾರ್ವತಿಯಾಗಿ ರಚಿತಾ, ವಿಭೀಷಣನ ಪಾತ್ರದಲ್ಲಿ ಪ್ರತೀಕ್ಷಾ ಉತ್ತಮ ಪ್ರದರ್ಶನ ನೀಡಿದರು. ವರುಣನ ಪಾತ್ರದಲ್ಲಿ ಹರ್ಷಿತ, ಸೇತುಬಂಧಕ್ಕೆ ಶ್ರಮಿಸಿದ ನೀಲನಾಗಿ ಪ್ರೇಕ್ಷಾ, ಜಾಂಬವನ ಪಾತ್ರದಲ್ಲಿ ಧೀರಜ್‌ ಮನೋಜ್ಞವಾಗಿ ಅಭಿನಯಿಸಿ ರಂಜಿಸಿದರು. ಕಿರಿಯ ಕಲಾವಿದೆ ಈಶ್ವಾನಿ ಅಂಗದನ ಪಾತ್ರದಲ್ಲಿ ಮನಸೆಳೆದರು . ಯಕ್ಷಗಾನ ಕೇವಲ 15 ದಿನಗಳಲ್ಲಿ ಅಭ್ಯಸಿಸಲು ಅಸಾಧ್ಯವಾದರೂ ಶಿಬಿರದಲ್ಲಿ ಭಾಗವಹಿಸಿದ್ದ ಎಲ್ಲ ಮಕ್ಕಳು ಪ್ರತಿದಿನವೂ ಉತ್ಸುಕತೆಯಿಂದ ಭಾಗವಹಿಸಿದ್ದರು. ಇದು ಈ ಪರಿಸರದಲ್ಲಿ ಮಕ್ಕಳಿಂದ ಯಕ್ಷಗಾನದ ಬೆಳವಣಿಗೆಗೆ ಒಂದು ಶುಭ ಸೂಚನೆಯಾಗಿರಬಹುದು.ಯಕ್ಷಗಾನ ಕಲೆಯನ್ನು ಎಳವಿನಲ್ಲಿ ಯೇ ಮುಂದುವರಿಸುವ ಭರವಸೆಯನ್ನು ಹೊಂದಿರುವ ಕಲಾದರ್ಶಿನಿ 10 ತಿಂಗಳ ಕೋರ್ಸ್‌ನ್ನು ಜೂನ್‌ ತಿಂಗಳಲ್ಲಿ ಆರಂಭಿಸುವ ಯೋಜನೆಯಲ್ಲಿದೆ.

ಉದಯ ಆಚಾರ್‌ ಸಾಸ್ತಾನ

ಟಾಪ್ ನ್ಯೂಸ್

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.