ಅಪೂರ್ವ ಉತ್ತರ – ದಕ್ಷಿಣ ಯುಗಳ ಸಂಗೀತ

ಪಂ| ವಿಶ್ವಮೋಹನ್‌ ಭಟ್‌-ವಿ| ಮೈಸೂರು ಮಂಜುನಾಥ್‌ ಪ್ರಸ್ತುತಿ

Team Udayavani, Feb 28, 2020, 6:41 PM IST

ego-73

ಮನೋಧರ್ಮ ಸಂಗೀತದಲ್ಲಿ ಶಾಸ್ತ್ರ ಪ್ರಮೇಯವನ್ನು ಮೀರದೆ ಎಲ್ಲೆಯನ್ನು ಅನುನಯಿಸಿ, ಸ್ವರ ಲಯ ವರ್ಣಾಲಂಕಾರಗಳನ್ನು ವಿಸ್ತರಿಸುವ ಪ್ರೀತಿಯ ಪ್ರತಿಭಾ ಸೆಲೆಯು ಕಲಾವಿದನಲ್ಲಿರುವುದು ಕಾಣಬಹುದು. ಯಾವುದೇ ಪೂರ್ವಸಿದ್ಧತೆ ಇಲ್ಲದೆಯೂ ಮನೋಧರ್ಮವೊಂದು ಕಲಾವಿದರಲ್ಲಿ ಮೇಳೈಸಿದರೆ ಕಛೇರಿ ಕಳೆಗಟ್ಟುವುದರಲ್ಲಿ ಸಂಶಯವಿಲ್ಲ.

ಭಾರತೀಯ ಸಂಗೀತದ ಬೆಲೆ ಕಟ್ಟಲಾಗದ ಆಸ್ತಿಯೆಂದರೆ ಮನೋಧರ್ಮ ಕಲ್ಪನೆ ಎಂಬುದು. ಕಲಾವಿದನ ಪ್ರತಿಭೆ-ವ್ಯುತ್ಪತ್ತಿ ಪ್ರಕಾಶವಾಗಲು ಮನೋಧರ್ಮಸಂಗೀತವು ಪೂರಕವಾಗಿ ಕೆಲಸಮಾಡುತ್ತದೆ. ಮನೋಧರ್ಮ ಸಂಗೀತದಲ್ಲಿ ಶಾಸ್ತ್ರ ಪ್ರಮೇಯವನ್ನು ಮೀರದೆ ಎಲ್ಲೆಯನ್ನು ಅನುನಯಿಸಿ, ಸ್ವರ ಲಯ ವರ್ಣಾಲಂಕಾರಗಳನ್ನು ವಿಸ್ತರಿಸುವ ಪ್ರೀತಿಯ ಪ್ರತಿಭಾ ಸೆಲೆಯು ಕಲಾವಿದನಲ್ಲಿರುವುದು ಕಾಣಬಹುದು. ಯಾವುದೇ ಪೂರ್ವಸಿದ್ಧತೆ ಇಲ್ಲದೆಯೂ ಮನೋಧರ್ಮವೊಂದು ಕಲಾವಿದರಲ್ಲಿ ಮೇಳೈಸಿದರೆ ಕಛೇರಿ ಕಳೆಗಟ್ಟುವುದರಲ್ಲಿ ಸಂಶಯವಿಲ್ಲ. ಆದುದರಿಂದಲೇ ಮಹಾಮಹೋಪಾಧ್ಯಾಯ ಡಾ| ರಾ.ಸತ್ಯನಾರಾಯಣ ಅವರು ತಮ್ಮ ಸಂಗೀತರತ್ನಾಕರ ಗ್ರಂಥಕ್ಕೆ ಬರೆದ ನಿಶ್ಶಂಕಹೃದಯ ಎಂಬ ಭಾಷ್ಯದಲ್ಲಿ ಹೇಳಿದುದು :

ಗೀತವಾದ್ಯಗಳೆನ್ನುವ ಕಲೆ ಕ್ಷಣಿಕ ಸೌಂದರ್ಯಾನುಭವವನ್ನು ಹೆಣೆದು ಮಾಡಿದ ಮಾಲೆ ಎಂಬುದಾಗಿ. ಅಂದರೆ ಆ ಕ್ಷಣಕ್ಕೆ ಕಲಾವಿದರಿಗೆ ದಕ್ಕಿದ ಮನೋಧರ್ಮದ ಸ್ಫೂರ್ತಿಯನ್ನು ಹಿಡಿದು ಅಭಿವ್ಯಕ್ತಿಸುವ ವಿಧಾನ. ಇದು ಕೊಡುವ ಕಲಾನುಭವ ಮಾತ್ರ ಶಾಶ್ವತವಾಗಿ ಸಹೃದಯನಲ್ಲಿ ಇರುವಂತಹಾದ್ದು. ಇದು ಹಿಂದುಸ್ಥಾನಿ-ಕರ್ನಾಟಕ ಸಂಗೀತ ಸಂಗಮವಾದ ಕಛೇರಿಗೂ ಅನ್ವಯಿಸುವ ಸತ್ಯವೇ ಹೌದು. ಇದು ಸಾಧಿಸಲ್ಪಟ್ಟದ್ದು ಫೆ.18ರಂದು ಕರ್ಣಾಟಕ ಬ್ಯಾಂಕ್‌ ಸ್ಥಾಪಕರ ದಿನಾಚರಣೆಯ ಅಂಗವಾಗಿ ನಡೆದ ಪಂ| ವಿಶ್ವಮೋಹನ್‌ ಭಟ್‌ (ಮೋಹನವೀಣೆ) ಮತ್ತು ವಿ| ಮೈಸೂರು ಮಂಜುನಾಥ್‌ (ಪಿಟೀಲು) ಅವರ ಜುಗಲ್‌ಬಂದಿ ಕಛೇರಿಯಲ್ಲಿ. ಯಾವುದೇ ಪೂರ್ವತಯಾರಿ ಅಥವಾ ಪೂರ್ವ ಮಾತುಕತೆಯನ್ನೂ ಆಡದೆ ವೇದಿಕೆಗೆ ಏರುವಾಗಲೇ ನಿರ್ಧಾರವಾದ ನಟಭೈರವಿ – ಸರಸಾಂಗಿ ರಾಗಗಳ ಪ್ರಸ್ತುತಿಯು ಆ ರಾಗಗಳ ನಾದದ ಅಲೆಗಳು ಮಂಗಳೂರಿನ ಕರ್ಣಾಟಕ ಬ್ಯಾಂಕ್‌ ಪ್ರಧಾನ ಕಛೇರಿಯ ಸಭಾಂಗಣದಲ್ಲಿ ಪ್ರೇಕ್ಷಕರನ್ನು ತೋಯಿಸಿದ್ದು ಸತ್ಯ. ಬ್ಯಾಂಕಿನ ಅಧ್ಯಕ್ಷ ಜಯರಾಮ ಭಟ್‌ ಮತ್ತು ವ್ಯವಸ್ಥಾಪಕ ನಿರ್ದೇಶಕ ಹಾಗು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಎಮ್ಎಸ್‌. ಇವರ ಸಂಗೀತಾಸಕ್ತಿಯಿಂದಾಗಿ ನೆರವೇರಿತು.

ಸ್ವರಕಲ್ಪನೆ- ಪ್ರಸ್ತುತಿಯು ಮನೋಧರ್ಮ ಸಂಗೀತದ ಬಹುಮುಖ್ಯ ಅಂಶ. ಇದಕ್ಕೆ ಪೂರಕವಾಗಿ ಸಹಕಲಾವಿದರೂ ಸಹೃದಯರಾಗಿ ಪರಸ್ಪರರಿಗೆ ಸ್ಫೂರ್ತಿಯನ್ನು ಒದಗಿಸಬೇಕು. ನಟಭೈರವ್‌ನ ಒಂದೊಂದೇ ಸ್ವರಗಳನ್ನು ಅನುಸಂಧಾನ ಮಾಡಿ ಗಂಭೀರವಾದ ನಾದಾವರಣ ಎಂಬ ಸರೋವರದಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟ ಮೋಹನವೀಣೆಯ ನಾದ -ಸಲಿಲಗುಂಫ‌ನಕ್ಕೆ ಸಂವಾದಿಯಾಗಿ ಸರಸಾಂಗಿ ರಾಗವನ್ನು ಎತ್ತಿಕೊಂಡ ವಿ| ಮೈಸೂರು ಮಂಜುನಾಥ್‌ರವರ ಪ್ರಸ್ತುತಿ ಈಗಾಗಲೇ ಕಟ್ಟಿದ ಆ ರಾಗದ ಗಂಭೀರ ಸರಸ್ಸಿನಲ್ಲಿ ಚುರುಕಾಗಿ ಸಂಚರಿಸುವಂತೆ ಭಾಸವಾಗುತ್ತಿದ್ದ ಎಳೆಯ ಮತ್ಸ್ಯಗಳ ಚಲನೆಗಳಂತೆ ಪ್ರೇಕ್ಷಕರ ಮನದ ಭಾವಕ್ಕೆ ಕಚಗುಳಿ ಇಡುತ್ತಿದ್ದ ರೀತಿಯಂತಿತ್ತು. ರಾಗದ ಸ್ವರಾಲಂಕಾರಗಳ ಗುಂಪುಗಳನ್ನು ಏರುವ, ಇಳಿಯುವ, ಆ ಸ್ವರದಲ್ಲೇ ನಿಂತು ಅನುನಯಿಸುವ ಪ್ರಕ್ರಿಯೆಗಳು ನಟಭೈರವ್‌-ಸರಸಾಂಗಿಯ ಪ್ರಸ್ತುತಿಯಲ್ಲಿ ಪ್ರತಿಭಾಪೂರ್ಣವಾಗಿ ಮೂಡಿಬಂದಿತು. ಸೌಂದರ್ಯ ಮೀಮಾಂಸಕಾರ ಭಟ್ಟತೌತನು ಪ್ರತಿಭೆಯ ಕುರಿತು ಹೇಳಿದ ಮಾತು ನೆನಪಾಗುತ್ತದೆ:ಪ್ರಜ್ಞಾ ನವನವೋಲ್ಲೇಖಶಾಲಿನೀ ಪ್ರತಿಭಾ ಮತಾ ಅಂದರೆ ಹೊಸ ಹೊಸ ಭಾವವನ್ನು ಸಂತತವಾಗಿ ಕಾಣುವ, ಕಟ್ಟುವ ಪ್ರಜ್ಞೆ ಪ್ರತಿಭೆ (ಪ್ರೊ| ತೀ.ನಂ.ಶ್ರೀ ಅನುವಾದ) ಪ್ರತಿಭೆ ಮತ್ತು ವ್ಯುತ್ಪತ್ತಿ (ನಿಪುಣತೆ) ಈ ಎರಡೂ ಗುಣಗಳು ಸಮಾಹಿತಗೊಂಡ ಮಿಂಚಿನ ಸಂಚಾರವನ್ನು ಪ್ರೇಕ್ಷಕರಿಗೆ ಕೊಟ್ಟ ಅಪೂರ್ವ ಕಛೇರಿ ಇದು. ಮುಂದೆ ತನಿಯಾಗಿ ನುಡಿಸಲು ಅಂದಿನ ತಬಲ ವಾದಕರಾದ ಪಂ| ಘಾಟೆ ಮತ್ತು ವಿ| ಪತ್ರಿ ಸತೀಶ್‌ ಕುಮಾರ್‌ ಅವರಿಗೆ ವೇದಿಕೆ ತೆರೆದಿಟ್ಟರು ಪ್ರಧಾನ ಕಲಾವಿದರು. ಮೃದಂಗ ಮತ್ತು ತಬಲಾ ವಾದನ ನಟಭೈರವ್‌-ಸರಸಾಂಗಿಯ ಮನೋಧರ್ಮೀಯ ಓಘವನ್ನು ಮುಂದುವರಿಸಿದ ಭಾಗದಂತಿತ್ತು.

ಮುಂದೆ ಮೈಸೂರು ಮಂಜುನಾಥ್‌ ಅವರು ದಾಸರ ಹಾಡಾದ ಆಡಿಸಿದಳೆಶೋದಾ ಜಗದೋದ್ಧಾರನಾ… ಪ್ರಸ್ತುತಿ ಮಾಡಿದರು. ಪಂ| ವಿಶ್ವಮೋಹನ ಭಟ್‌ ತಮಗೆ ಗ್ರ್ಯಾಮಿ ಪ್ರಶಸ್ತಿ ದೊರಕಿಸಿ ಕೊಟ್ಟ ತಮ್ಮದೇ ರಚನೆಯನ್ನು ಪ್ರಸ್ತುತಿಗೊಳಿಸಿ ಕೊನೆಯದಾಗಿ ವಂದೇ ಮಾತರಮ್‌… ಮೂಲಕ ಕಛೇರಿಗೆ ಮಂಗಲಗೀತೆಯನ್ನು ಹಾಡಿದರು.

ಕೃಷ್ಣಪ್ರಕಾಶ ಉಳಿತ್ತಾಯ

ಟಾಪ್ ನ್ಯೂಸ್

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.