ವಾರೆಕೋರೆ :ನಗೆಗೆರೆಗಳ ಕ್ಯಾರಿಕೇಚರ್‌ ಶೋ


Team Udayavani, Jan 11, 2019, 12:30 AM IST

q-1.jpg

ದೊಡ್ಡ ಬೋರ್ಡೊಂದರ ಹಾಳೆ ಮೇಲೆ ಬಕ್ಕತಲೆ ಜತೆಗೆ ಮೂಗು ಬರೆದು ಸಭಿಕರಲ್ಲೊಬ್ಬರದ್ದೆಂದು ಊಹಿಸಲು ಹೇಳಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಬಕ್ಕತಲೆಯವರೇ ಇದ್ದ ಪ್ರೇಕ್ಷಕರಲ್ಲಿ ಒಬ್ಬರನ್ನೊಬ್ಬರು ನೋಡುತ್ತಾ ನಗೆಯ ಅಲೆ ಏಳಲಾರಂಭಿಸಿ ಸರಿಯಾದ ವ್ಯಕ್ತಿಯನ್ನು ಗುರುತಿಸುತ್ತಾರೆ. ಅವರನ್ನು ಎದುರುಗಡೆ ನಿಲ್ಲಿಸಿ, ಹಿಗ್ಗಾಮುಗ್ಗಾ ಎಳೆದು ಚಿತ್ರಿಸಿದವರು ಖ್ಯಾತ ವ್ಯಂಗ್ಯಚಿತ್ರಕಾರ ಪ್ರಕಾಶ್‌ ಶೆಟ್ಟಿ. ಉಡುಪಿಯ ಸುಹಾಸಂ ಸಂಸ್ಥೆ ಇತ್ತೀಚೆಗೆ ಆಯೋಜಿಸಿದ ನಗೆಗೆರೆಗಳ ಕ್ಯಾರಿಕೇಚರ್‌ ಕಾರ್ಯಕರ್ಮ- ವಾರೆಕೋರೆ ಎಂಬ ಶೀರ್ಷಿಕೆಯ ಕಾರ್ಯಕ್ರಮದ ಸಣ್ಣ ತುಣುಕು ಇದು. 

ಒಬ್ಬ ವ್ಯಕ್ತಿಯನ್ನು ಅತಿರೇಕಗೊಳಿಸಿ ನೋಡುಗರನ್ನು ನಗಿಸುವುದಷ್ಟೇ ಕ್ಯಾರಿಕೇಚರ್‌ ಅಥವಾ ವ್ಯಂಗ್ಯ ಭಾವಚಿತ್ರ ಕಲೆಯ ಉದ್ದೇಶ. ಆ ವ್ಯಕ್ತಿಯ ಹಾವ-ಭಾವ, ಗುಣ-ಲಕ್ಷಣ, ವೃತ್ತಿ-ಪ್ರವೃತ್ತಿಗಳ ಒಟ್ಟಾರೆ ಫೀಚರ್ ಕೂಡ ಕಾಣಬಹುದು. ಪ್ರಕಾಶ್‌ ಶೆಟ್ಟಿಯವರು ಈ ವರೆಗೆ ಒಂದೂವರೆ ಲಕ್ಷಕ್ಕೂ ಮಿಕ್ಕಿ ಸ್ಥಳದಲ್ಲೇ ವ್ಯಂಗ್ಯ ಭಾವಚಿತ್ರ ರಚಿಸಿದ ಅನುಭವಿ ಕ್ಯಾರಿಕೇಚರಿಸ್ಟ್‌. ಅವರು ಇದೀಗ ಕ್ಯಾರಿಕೇಚರ್‌ ಕಲೆಯನ್ನು ವಿವಿಧ ಸಾಧ್ಯತೆಗಳ ಮೂಲಕ ಜನರಿಗೆ ತಲುಪಿಸುವ ಪ್ರಯೋಗಕ್ಕೆ ಇಳಿದಿದ್ದಾರೆ. 

ಅದರಲ್ಲೂ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ವಿಶ್ವದಲ್ಲೇ ಅಪರೂಪವೆನಿಸಿದ ಮೆಮರಿ ಸ್ಪಾಟ್‌ ಕ್ಯಾರಿಕೇಚರ್‌ ಪ್ರೇಕ್ಷಕರನ್ನು ನಗಿಸುತ್ತಾ ಅಚ್ಚರಿಗೊಳಿಸಿತು. ಸಭಿಕರಲ್ಲೊಬ್ಬರನ್ನು ಆಯ್ಕೆ ಮಾಡಿ ಸ್ವಲ್ಪ ಸಮಯವಷ್ಟೇ ನೋಡಿ ಮನದಲ್ಲೇ ಸ್ಕ್ಯಾನ್‌ ಮಾಡಿ, ನಂತರ ಸ್ಮರಣ ಶಕ್ತಿಯಿಂದಲೇ ಕ್ಯಾರಿಕೇಚರ್‌ ರಚಿಸುವ ಹೊಸ ಅವಿಷ್ಕಾರವಿದು. 

ಮತ್ತೂಂದು ಐಟಂ ಉಲ್ಟಾ ಕ್ಯಾರಿಕೇಚರ್‌ ರಚನೆ ಕೂಡ ಸಭಿಕರ ಆಲೋಚನೆಗಳನ್ನು ತಲೆಕೆಳಗೆ ಮಾಡಿತು. ಚಿತ್ರ ಮುಗಿಯುವವರೆಗೆ ಗುರುತಿಸಲಾಗದ ಪರದಾಟದ ತಮಾಷೆಯ ವಾತಾವರಣ ಸೃಷ್ಟಿಸಿತು. ಮೋದಿ ಕ್ಯಾರಿಕೇಚರ್‌ ಮೋಜು ನೀಡಿತು. 

ಹಾಸ್ಯ ಅಂದ ಕೂಡಲೇ ನೆನಪಾಗುವುದು ಮೌನದಲ್ಲೇ ನಗಿಸಿದ ಚಾರ್ಲಿ ಚಾಪ್ಲಿನ್‌. ಗಾಂಧೀಜಿ ಮತ್ತು ಚಾಪ್ಲಿನ್‌ ಪರಸ್ಪರ ದೊಡ್ಡ ಅಭಿಮಾನಿಗಳಾಗಿದ್ದರು. ಈ ಹಿನ್ನೆಲೆಯಲ್ಲಿ ಕೊನೆಯದಾಗಿ ಚಾಪ್ಲಿನ್‌ಗಾಗಿ ರೂಪಾಂತರ ಎಂಬ ನಗೆಗೆರೆಗಳ ಅರ್ಪಣೆ ಅರ್ಥಪೂರ್ಣವಾಗಿತ್ತು. ಮಹಾತ್ಮ ಗಾಂಧೀಜಿಯ ಕ್ಯಾರಿಕೇಚರ್‌ ಇದ್ದಕ್ಕಿದ್ದಂತೆ ಪರಿವರ್ತನೆಗೊಳ್ಳುತ್ತಾ ಚಾರ್ಲಿ ಚಾಪ್ಲಿನ್‌ ಆಗಿ ಸ್ಟಿಕ್‌ ತಿರುಗಿಸುತ್ತಾ ತನ್ನ ವಿಶಿಷ್ಟ ಶೈಲಿಯ ನಡೆಯಿಂದ ಗಮನ ಸೆಳೆಯುತ್ತದೆ. ಕ್ಯಾರಿಕೇಚರ್‌ಗಳು ಮೂಡುತ್ತಿದ್ದಂತೆ ಹಿನ್ನೆಲೆಯಲ್ಲಿ ಸೂಕ್ತ ಸಂಗೀತದೊಂದಿಗೆ ಪ್ರಕಾಶ್‌ ಸಹೋದರ ಜೀವನ್‌ ಶೆಟ್ಟಿಯವರ ನಿರೂಪಣೆ ಮನರಂಜನೆಗೆ ಕಳೆ ನೀಡಿತು.

ಜೀವನ್‌ ಶೆಟ್ಟಿ 

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.