ಮೆರೆದ ವೀರ ಬರ್ಭರೀಕ


Team Udayavani, Aug 23, 2019, 5:00 AM IST

10

ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿ ಇವರ ಸಹಯೋಗದೊಂದಿಗೆ ಗುಂಡ್ಮಿಯ ಸದಾನಂದ ರಂಗಮಂಟಪದಲ್ಲಿ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ವೀರ ಬರ್ಭರೀಕ ಎನ್ನುವ ಯಕ್ಷಗಾನ ಪ್ರಸಂಗ ಪ್ರದರ್ಶಿಸಲ್ಪಟ್ಟಿತು. ಏಕಚಕ್ರ ನಗರದ ಅರಸ ಘಟೋತ್ಕಚನು ರಾಜಸೂಯ ಯಾಗಕ್ಕೆ ಹೋದ ಸಂದರ್ಭದಲ್ಲಿ, ಆತನ ಪತ್ನಿ ಕಾಮಕಟಂಕಟಿಯು ಬರ್ಭರೀಕನೆನ್ನುವ ಮಗುವಿಗೆ ಜನ್ಮ ನೀಡುತ್ತಾಳೆ.

ತಕ್ಷಣವೇ ಬೆಳೆದು ದೊಡ್ಡವನಾದ ಬರ್ಭರೀಕ ವನ ವಿಹಾರಕ್ಕೆಂದು ತೆರಳಿದಾಗ, ವನದಲ್ಲಿ ಸರ್ಪರಾಜನ ಮಗಳಾದ ವತ್ಸಲೆ ಈತನ ರೂಪಕ್ಕೆ ಮರುಳಾಗಿ ತನ್ನನ್ನು ವಿವಾಹವಾಗುವಂತೆ ಪರಿಪರಿಯಲ್ಲಿ ಬೇಡಿಕೊಂಡರೂ ಆತ ತಿರಸ್ಕರಿಸುತ್ತಾನೆ. ಕುಪಿತಳಾದ ವತ್ಸಲೆ ಶಾಪವನ್ನು ನೀಡುತ್ತಾಳೆ. ಯಾಗ ಮುಗಿಸಿ ಹಿಂದಿರುಗಿದ ಘಟೋತ್ಕಚನಿಗೆ ಪುತ್ರ ಜನಿಸಿರುವುದು ತಿಳಿದಾಗ ಸಂತೋಷಗೊಂಡು ಆತನ ಹುಡುಗಾಟದಲ್ಲಿ ತೊಡಗುತ್ತಾನೆ. ಇತ್ತ ತಂದೆಯಾದ ಭೀಮನು ರಕ್ಕಸನಾದ ಜಟಾಸುರನನ್ನು ಕೊಂದು, ಬಾಯಾರಿಕೆ ನೀಗಿಸಲು ಕೊಳದ ಬಳಿ ಬಂದಾಗ, ಕೊಳ ಕಾಯುತ್ತಿದ್ದ ಬರ್ಭರೀಕನಿಂದ ಮೂರ್ಚಿತನಾಗುತ್ತಾನೆ. ಆ ಸಮಯದಲ್ಲಿ ಅಲ್ಲಿಗೆ ಆಗಮಿಸಿದ ಘಟೋತ್ಕಚನಿಗೆ ಈತನೇ ಮಗನೆಂದು ತಿಳಿಯುವುದರ ಜೊತೆಗೆ, ಮೂಛಿìತನಾಗಿರುವುದು ಅಜ್ಜ ಭೀಮಸೇನನೆಂದು ಮಗನಿಗೆ ಮನವರಿಕೆ ಮಾಡಿಸಿ ಬರ್ಭರೀಕ ಅವರಲ್ಲಿ ಕ್ಷಮೆ ಕೋರಿ ಮೂವರು ಒಂದಾಗುತ್ತಾರೆ. ಮುಂದೆ ಕುರುಕ್ಷೇತ್ರ ಯುದ್ಧ ಸಂದರ್ಭದಲ್ಲಿ ವೀರ ಬರ್ಭರೀಕ ದುರ್ಬಲರಾದ ಪಾಂಡವರ ಪರವಾಗಿ ನಿಂತು ಒಂದೇ ಬಾಣದಿಂದ ಹಾಗೂ ಚಂಡಿಕಾ ದೇವಿಯ ಶಕ್ತಿಯಿಂದ ಎಲ್ಲರನ್ನೂ ನಾಶ ಮಾಡುತ್ತೇನೆಂದಾಗ, ಶ್ರೀ ಕೃಷ್ಣನು ಈತನ ಅಹಂಕಾರದ ಮಾತು ಕೇಳಿ ತನ್ನ ಚಕ್ರದಿಂದ ಆತನ ಶಿರಛೆಧನ ಗೈಯುತ್ತಾನೆ. ಚಂಡಿಕಾದೇವಿ ಪ್ರತ್ಯಕ್ಷಳಾಗಿ, ಈತ ಹಿಂದೆ ಯಕ್ಷರಾಜನಾಗಿದ್ದು ಶಾಪದಿಂದಾಗಿ ಬರ್ಭರೀಕನಾಗಿ ಜನಿಸಿರುವ ವಿಚಾರವನ್ನು ತಿಳಿಸುತ್ತಾಳೆ. ಆತನ ಕೊನೆಯ ಇಚ್ಛೆಯನ್ನು ಪೂರೈಸಿದ ಕೃಷ್ಣನು ಮೋಕ್ಷವನ್ನೂ ಕರುಣಿಸುತ್ತಾನೆ ಎನ್ನುವಲ್ಲಿಗೆ ಪ್ರಸಂಗ ಮುಕ್ತಾಯಗೊಳ್ಳುತ್ತದೆ. ಪ್ರಸಂಗದ ಕೇಂದ್ರ ಬಿಂದುವಾದ ಬರ್ಭರೀಕನಾಗಿ ವಿಶ್ವನಾಥ ಪೂಜಾರಿ ಹೆನ್ನಾಬೈಲು ಅವರು ವತ್ಸಲೆಯನ್ನು ವಿವಾಹವಾಗಲು ತಿರಸ್ಕರಿಸುವ ಮತ್ತು ಕೃಷ್ಣನೊಡನೆ ತನ್ನ ಶೌರ್ಯವನ್ನು ಮಾತು ಹಾಗೂ ದಿಟ್ಟ ಅಭಿನಯದೊಂದಿಗೆ ಅನಾವರಣಗೊಳಿಸಿರುವುದು ಅವರ ಪ್ರತಿಭೆಗೆ ಸಾಕ್ಷಿಯಾಯಿತು.

ವತ್ಸಲೆಯಾಗಿ ವಂಡಾರು ಗೋವಿಂದ ಮೊಗವೀರ ಅವರು ಬರ್ಭರೀಕನ ರೂಪಕ್ಕೆ ಮರುಳಾಗುವುದು ಮತ್ತು ಆತನಿಂದ ತಿರಸ್ಕಾರಗೊಳ್ಳುವ ಸನ್ನಿವೇಶವನ್ನು ಮನಮುಟ್ಟುವಂತೆ ಅಭಿನಯಿಸಿದರು. ಕೃಷ್ಣನಾಗಿ ಗುಂಡಿಬೈಲು ಗಣಪತಿ ಭಟ್‌ ಅವರ ಲವಲವಿಕೆಯ ಹೆಜ್ಜೆ, ಘಟೋತ್ಕಚನಾಗಿ ರಘು ಮಡಿವಾಳ ಮಂದಾರ್ತಿ, ಭೀಮನಾಗಿ ನರಸಿಂಹ ಗಾಂವ್ಕರ್‌ ಅವರು ಗಮನ ಸೆಳೆದರೆ, ಕಾಮಕಟಂಕಟಿಯಾಗಿ ಆನಂದ ರಾವ್‌ ಉಪ್ಪಿನಕೋಟೆ, ವಿಜಯ ಮುನಿಯಾಗಿ ನರಸಿಂಹ ಗಾಂವ್ಕರ್‌, ಕಪಟ ಮುನಿಯಾಗಿ ಪ್ರಭಾಕರ ಆಚಾರ್ಯ ಮಟಪಾಡಿ, ದೇವಿಯಾಗಿ ಸತೀಶ್‌ ಬೀಜಾಡಿ, ಧರ್ಮರಾಯನಾಗಿ ರಾಜು ದೇವಾಡಿಗ, ಅರ್ಜುನನಾಗಿ ಸುಧಾಕರ ನಾಯ್ಕ ಕೂಡ್ಲಿ, ನಕುಲ ಮತ್ತು ಸಹದೇವರಾಗಿ ವಿಭವನ ಹಾಗೂ ಸಚಿನ್‌ ಆಚಾರ್ಯ ಇವರುಗಳು ತಮ್ಮ ಪಾತ್ರಗಳಿಗೆ ಉತ್ತಮ ನಟನೆಯ ಮೂಲಕ ನ್ಯಾಯ ಒದಗಿಸಿದರು. ಭಾಗವತರಾಗಿ ಉದಯ ಕುಮಾರ್‌ ಹೊಸಾಳರ ಸೊಗಸಾದ ಕಂಠಸಿರಿಗೆ ಮದ್ದಲೆಯಲ್ಲಿ ಶ್ರೀಧರ ಭಂಡಾರಿ ಮತ್ತು ಚೆಂಡೆಯಲ್ಲಿ ಶಿವಾನಂದ ಕೋಟ ಸಹಕರಿಸಿದ್ದರು. ವೇಷ ಭೂಷಣ ಗಣೇಶ್‌ ಜನ್ನಾಡಿಯವರದ್ದಾಗಿತ್ತು.

ಕೆ. ದಿನಮಣಿ ಶಾಸ್ತ್ರಿ

ಟಾಪ್ ನ್ಯೂಸ್

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.