ಮಹಿಳಾ ದಿನದಂದು ನಡೆಯಿತು ವೀರಮಣಿ ಕಾಳಗ


Team Udayavani, Mar 15, 2019, 12:30 AM IST

x-48.jpg

ಶತ್ರುಘ್ನನ ಒಡ್ಡೋಲಗದೊಂದಿಗೆ ಪ್ರಾರಂಭಗೊಂಡ ಯಕ್ಷಗಾನವು, ಮದನಾಕ್ಷಿ – ತಾರಾವಳಿಯರ ಆಖ್ಯಾನವನ್ನು ಒಳಗೊಂಡಂತೆ ಸಮಗ್ರವಾಗಿ ಮೂಡಿಬಂತು. ಯಜ್ಞಾಶ್ವದ ಅಪಹರಣ, ನಾರದರಿಂದ ಯಜ್ಞಾಶ್ವದ ಇರುವಿಕೆಯ ಬಗೆಗಿನ ಮಾಹಿತಿ, ಮಾಯಾಪುರಿಯ ದೂತಿಯರ ವಿಚಾರಣೆ, 
ಯುದ್ಧದ ಸನ್ನಿವೇಶ ಪೂರ್ವಾರ್ಧದ ಆಖ್ಯಾನದಲ್ಲಿತ್ತು.

ಇತ್ತೀಚೆಗೆ ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವರ್ಣೋತ್ಸವದ (ರಾಜ್ಯಮಟ್ಟದ ತಾಂತ್ರಿಕ-ಸಾಂಸ್ಕೃತಿಕ ಉತ್ಸವ) ಪ್ರಯುಕ್ತ ವಿದ್ಯಾಲಯದ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳಿಂದ ನಡೆದ ತೆಂಕು ಬಡಗಿನ ಕೂಡಾಟ “ವೀರಮಣಿ ಕಾಳಗ’ ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯಿತು. ವಿಶ್ವ ಮಹಿಳಾದಿನಾಚರಣೆಯಂದು ನಡೆದ ಈ ಪ್ರದರ್ಶನದಲ್ಲಿ ಮುಮ್ಮೇಳದ ಕಲಾವಿದರಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿದ್ದುದು ವಿಶೇಷವಾಗಿತ್ತು.

ತೆಂಕುತಿಟ್ಟಿನ ಶತ್ರುಘ್ನನ ಒಡ್ಡೋಲಗದೊಂದಿಗೆ ಪ್ರಾರಂಭಗೊಂಡ ಯಕ್ಷಗಾನವು, ಮದನಾಕ್ಷಿ-ತಾರಾವಳಿಯರ ಆಖ್ಯಾನವನ್ನು ಒಳಗೊಂಡಂತೆ ಸಮಗ್ರವಾಗಿ ಮೂಡಿಬಂತು. ಯಮುನಾ ನದೀತೀರದಲ್ಲಿ ಯಜ್ಞಾಶ್ವದ ಅಪಹರಣ, ನಾರದರಿಂದ ಯಜ್ಞಾಶ್ವದ ಇರುವಿಕೆಯ ಬಗೆಗಿನ ಮಾಹಿತಿ, ಮಾಯಾಪುರಿಯ ದೂತಿಯರ ವಿಚಾರಣೆ, ಯುದ್ಧದ ಸನ್ನಿವೇಶ ಪೂರ್ವಾರ್ಧದ ಆಖ್ಯಾನದಲ್ಲಿದ್ದರೆ, ಜ್ಯೋತಿರ್ಮೆಧಪುರದಲ್ಲಿ ರುಕ್ಮಾಗ-ಶುಭಾಂಗರಿಂದ ಯಜ್ಞಾಶ್ವದ ಬಂಧನ, ತಂದೆ ವೀರಮಣಿಯಲ್ಲಿ ವಿಷಯ ಪ್ರಸ್ತಾಪ, ತಂದೆಯ ಮೆಚ್ಚುಗೆ, ಹನುಮಂತನ ಒಡ್ಡೋಲಗ, ವೀರಮಣಿಯೊಂದಿಗೆ ಸಂಧಾನ, ವಾಕ್ಸಮರ, ಸಂಧಾನ ಮುರಿದು ನಡೆದ ಸಂಗ್ರಾಮದಲ್ಲಿ ವೀರಮಣಿಯ ಸಾವು, ಈಶ್ವರನ ಪ್ರವೇಶ, ಶತ್ರುಘ್ನನ ಮರಣ, ಹನುಮಂತನ ಪರಾಕ್ರಮವನ್ನು ಮೆಚ್ಚಿದ ಈಶ್ವರನಿಂದ ವರಪ್ರದಾನ, ಸಂಜೀವಿನಿ ಮೂಲಿಕೆಯ ಮುಖಾಂತರ ಎರಡೂ ಪಕ್ಷಗಳಲ್ಲಿ ಮರಣ ಹೊಂದಿದವರನ್ನು ಬದುಕಿಸುವುದು, ಶ್ರೀರಾಮದರ್ಶನ ಮೊದಲಾದ ಪ್ರಮುಖ ಸನ್ನಿವೇಶಗಳ ಜೋಡಣೆ ಉತ್ತರಾರ್ಧದಲ್ಲಿತ್ತು. 

ವಿದ್ಯಾಲಯದ ಗಣಕಯಂತ್ರ ವಿಭಾಗದ ಮುಖ್ಯಸ್ಥರಾದ ಡಾ| ವಾಸುದೇವರ ಪರಂಪರೆಯ ಹನೂಮಂತ (ಪಾರಂಪರಿಕ ಒಡ್ಡೋಲಗದೊಂದಿಗೆ), ಮದನಾಕ್ಷಿ – ತಾರಾವಳಿಯರ ಪಾತ್ರನಿರ್ವಹಿಸಿದ ಭೂಮಿಕಾ ಐತಾಳ್‌ ಮತ್ತು ಪವಿತ್ರ, ರುಕಾ¾ಂಗ ಶುಭಾಂಗರಾಗಿ ಮೊದಲ ಭಾಗದಲ್ಲಿ ನಿರ್ವಹಿಸಿದ ಸಹನಾ ಮತ್ತು ಮಹಿಮಾರಾವ್‌ರವರ ನಾಟ್ಯ ಮತ್ತು ಮಾತುಗಾರಿಕೆ ಮನಸೂರೆಗೊಂಡು ಅಮೋಘ ಕರತಾಡನಕ್ಕೆ ಒಳಗಾಯಿತು. ದೂತಿಯರಾಗಿ ಪಾತ್ರನಿರ್ವಹಿಸಿದ ಉಪನ್ಯಾಸಕರಾದ ಕಿಶೋರ್‌ ಕುಮಾರ್‌ ಆರೂರ್‌ ಹಾಗೂ ರಂಜನ್‌ ಭಟ್‌ ಜೋಡಿಯ ಹಾಸ್ಯ, ವರ್ತಮಾನದ ವಿದ್ಯಮಾನಗಳಿಗೆ ಥಳುಕು ಹಾಕಿಕೊಂಡು ಮನರಂಜಿಸಿತು. ಪೂರ್ವಾರ್ಧದ ಶತ್ರುಘ್ನನಾಗಿ ಕಾಣಿಸಿಕೊಂಡ ಉಪನ್ಯಾಸಕ ವೇಣುಗೋಪಾಲ ರಾವ್‌ ಪ್ರಸಂಗಕ್ಕೆ ಗಂಭೀರ ಆರಂಭ ಒದಗಿಸಿದರೆ ಉತ್ತರಾರ್ಧದಲ್ಲಿ ಪ್ರದೀಪ ಆಚಾರ್ಯ ಅದನ್ನು ಸಮರ್ಥವಾಗಿ ಮುಂದುವರಿಸಿದರು. ಈಶ್ವರನಾಗಿ ಅಮಿತ್‌, ವೀರಮಣಿಯಾಗಿ ನಿರಂಜನ್‌, ಯುದ್ಧ ಸಂದರ್ಭದ ಹನೂಮಂತನಾಗಿ ಸನತ್‌ ಶೆಟ್ಟಿ, ಮತ್ತು ಎರಡನೆ ಭಾಗದ ರುಕಾ¾ಂಗ-ಶುಭಾಂಗರಾಗಿ ನಿಶಾ ಮತ್ತು ಶಿಲ್ಪಾ ಭಟ್‌ರವರ ನಿರ್ವಹಣೆ ಅದ್ಭುತವಾಗಿತ್ತು. ಶತ್ರುಘ್ನನ ಬಲಗಳಾಗಿ ಪೃಥ್ವಿ (ದಮನ), ಶಮಿತಾ (ಪುಷ್ಕಳ), ತೃಷ್ಣಾ (ಲಕ್ಷ್ಮೀನಿಧಿ) ಮತ್ತು ವಿನುತಾ ಭಾರ್ಗವಿ (ಸುಬಾಹು) ಪೂರ್ವಾರ್ಧದಲ್ಲಿ ಮೆರೆದರೆ, ಉತ್ತರಾರ್ಧದಲ್ಲಿ ಸುಹಾನಿ, ಶಿಶಿರ್‌, ಸ್ವಾತಿ ಮತ್ತು ಪ್ರಜ್ಯೋತ್‌ ನಿರ್ವಹಿಸಿದರು. ಉಳಿದಂತೆ ನಾಗರಾಜ ಕಳತ್ತೂರು (ನಾರದ), ಶರಧಿ (ಪದ್ಮಾಕ್ಷಿ), ರಶ್ಮಿತಾ (ಪದ್ಮಗಂಧಿ), ನಿಹಾರಿಕಾ (ವೀರಮಣಿಯ ಸೇನಾಪತಿ), ಶ್ರೀಕರ (ವೀರಭದ್ರ), ನಿತಿನ್‌ (ಘಂಟಾಕರ್ಣ), ತೃಪ್ತಿ ಶೆಟ್ಟಿ (ನಂದಿ), ತೇಜಸ್‌ (ಭೃಂಗಿ), ಶಿವಾನಿ (ಭೃಕುಟಿ), ವಸುಂಧರಾ (ಶ್ರೀರಾಮ) ಹೀಗೆ ಪ್ರತಿಯೋರ್ವರೂ ತಮಗೊದಗಿದ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಿ, ದೊರೆತ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರು. ಪಾತ್ರ ಸಂಯೋಜನೆಯಲ್ಲಿ ತೋರಿದ ಜಾಣ್ಮೆಯಿಂದ ಯುದ್ಧದ ಸನ್ನಿವೇಶಗಳು, ತೆಂಕು ಬಡಗಿನ ಸ್ಪರ್ಧಾತ್ಮಕ ಪ್ರದರ್ಶನದ ಮೂಲಕ ರಂಗೇರಿದವು. 

ಹಿಮ್ಮೇಳದಲ್ಲಿ ತೆಂಕುತಿಟ್ಟಿನ ಭಾಗವತರಾಗಿ ಯುವಭಾಗವತ ಗುರುರಾಜ್‌ ಭಟ್‌ ಮುಲ್ಕಿ, ಚೆಂಡೆಯಲ್ಲಿ ಗಣೇಶ್‌ ಭಟ್‌ ಹಾಗೂ ಸಂಸ್ಥೆಯ ಹಳೆವಿದ್ಯಾರ್ಥಿ ವಿಕಾಸ್‌ ರಾವ್‌, ಮದ್ದಳೆಯಲ್ಲಿ ಅವಿನಾಶ್‌ ಚಣಿಲ, ಬಡಗುತಿಟ್ಟಿನ ಭಾಗವತರಾಗಿ ಕಿರಿವಯಸ್ಸಿನ ಅದ್ಭುತ ಪ್ರತಿಭೆ ಗಣೇಶ್‌ ಆಚಾರ್‌ ಮಂದರ್ತಿ, ಚೆಂಡೆ ಮದ್ದಲೆಯಲ್ಲಿ ಗಣೇಶ್‌ ಶೆಣೈ ಮತ್ತು ಆನಂದ್‌ ಭಟ್‌, ಚಕ್ರತಾಳದಲ್ಲಿ ಅನೀಶ್‌ರವರ ಸಹಕಾರ ಇಡೀ ಪ್ರದರ್ಶನದ ಯಶಕ್ಕೆ ಕಾರಣವಾಯಿತು.

ಶೈಲೇಶ್‌ ಭಟ್‌, ಮುಲ್ಕಿ

ಟಾಪ್ ನ್ಯೂಸ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.