ಸುನಾದದಲ್ಲಿ ವೇಣು ನಿನಾದ


Team Udayavani, Jul 14, 2017, 10:16 AM IST

14-KALA-7.jpg

ಕಲಾರತ್ನಗಾನಂ ಎಂಬ ಉಕ್ತಿಯಂತೆ ಲಲಿತಕಲೆಗಳಲ್ಲಿಯೇ ರತ್ನಪ್ರಾಯವಾದುದು ಸಂಗೀತ. ಭಗವಂತನ ಸಾಕ್ಷಾತ್ಕಾರಕ್ಕಾಗಿ ಮಾನವನು ಅನೇಕ ಮಾರ್ಗಗಳನ್ನು ಅನುಸರಿಸಿದ್ದರೂ ಸಂಗೀತ ಕಲೆಯು ಮಹೋನ್ನತವಾದುದು. ನಾದಾನುಸಂಧಾನದಿಂದ ಬಾಹ್ಯವನ್ನು ಮರೆಸಿ, ಭಾವನಾ ಪ್ರಪಂಚಕ್ಕೆ ಒಯ್ದು, ಆತ್ಮ ವಿಕಾಸಕ್ಕೂ,ಪರಿಪೂರ್ಣತೆಗೂ ಎಡೆ ಮಾಡಿಕೊಡುವ ಶಕ್ತಿ ಸಂಗೀತದ್ದು. ರಾಗ, ಭಾವ, ಲಯ, ರಸ, ಸಾಹಿತ್ಯದ ಸಮ್ಮಿಲನದಿಂದಾಗುವ ರಸಪಾಕವೇ ಸಂಗೀತ. ಹಳ್ಳಿ ಹಳ್ಳಿಯಲ್ಲೂ ಸಂಗೀತವನ್ನು ಬೆಳೆಸುವುದರ ಉದ್ದೇಶದಿಂದ ಹುಟ್ಟಿಕೊಂಡ ಸಂಸ್ಥೆ ಸುನಾದ.

ಇತ್ತೀಚೆಗೆ ಸುನಾದ ಯುವದನಿಯ 155ನೆಯ ಸಂಚಿಕೆ ಜುಲೈ 2ರಂದು ಸುನಾದ ಸಭಾಂಗಣದಲ್ಲಿ ಸಂಪನ್ನಗೊಂಡಿತು .ಮೊದಲಿಗೆ ಕು| ಶ್ರದ್ಧಾ ಸ್ಫೂರ್ತಿದಾಯಕವಾಗಿ ಕಛೇರಿಯನ್ನು ನಡೆಸಿಕೊಟ್ಟರು. ಇವರಿಗೆ ವಯಲಿನ್‌ನಲ್ಲಿ ಡಾ| ರಾಮಕೃಷ್ಣ ಭಟ್‌ ಹಾಗೂ ಮೃದಂಗದಲ್ಲಿ ವೆಂಕಟಯಶಸ್ವಿ ಸಹಕರಿಸಿದರು.

ಅನಂತರ ಶಿವಮೊಗ್ಗದ ವಿ| ಆನಂದ ರಾಮ ಭಟ್‌ ಇವರಿಂದ ಕೊಳಲು ವಾದನ ಕಛೇರಿ ನಡೆಯಿತು. ವಯಲಿನ್‌ನಲ್ಲಿ ಡಾ| ರಾಮಕೃಷ್ಣ ಭಟ್‌ ಹಾಗೂ ಮೃದಂಗದಲ್ಲಿ ಅಕ್ಷಯನಾರಾಯಣ ಕಾಂಚನ, ಮೋರ್ಚಿಂಗ್‌ನಲ್ಲಿ ವಿ| ಶ್ಯಾಮ ಭಟ್‌ ಸುಳ್ಯ ಇವರು ಸಹಕರಿಸಿದರು. ಅಭೋಗಿ ರಾಗದ ಎವ್ವರಿ ಬೋಧ ವರ್ಣದೊಂದಿಗೆ ಕಾರ್ಯಕ್ರಮ ಆರಂಭಿಸಿದ ಇವರು ಚಕ್ರವಾಕ ರಾಗದ ಗಜಾನನಯುತಂ ಕೃತಿಯನ್ನು ಚುರುಕಾದ ಸ್ವರ ಪ್ರಸ್ತಾರದೊಂದಿಗೆ ಪ್ರಸ್ತುತಪಡಿಸಿದರು. ಅನಂತರ ಸಾರಂಗದ ಎಂತಭಾಗ್ಯಮು ಕೃತಿಯು ಹೃದ್ಯವಾಗಿ ನಿರೂಪಿತಗೊಂಡಿತು. ಮಾಯಾಮಾಳವಗೌಳ ರಾಗದ ಭಾವಪೂರ್ಣವಾದ ಆಲಾಪನೆ ಹಾಗೂ ಉತ್ತಮ ಕಲ್ಪನಾ ಸ್ವರಗಳೊಂದಿಗೆ ದೇವದೇವ ಕಲಯಾಮಿತೆ ಮನೋಜ್ಞವಾಗಿ ಪ್ರಸ್ತುತಗೊಂಡಿತು. ಕಾಪಿನಾರಾಯಣಿ ರಾಗದ ಸರಸಸಾಮದಾನ ದ್ರುತಗತಿಯಲ್ಲಿ ಮೂಡಿಬಂದಿತು. ಷಣ್ಮುಖಪ್ರಿಯದ ಆಲಾಪನೆಯು ಜೀವಸ್ವರ ನೆಲೆ ಯಲ್ಲಿ ಸಂಚರಿಸಿದ ಪರಿಯು ಮನೋಜ್ಞವಾಗಿತ್ತು.ಮರಿವೇರೆದಿಕ್ಕೆವರಯ್ಯ ರಾಮ ಕೃತಿಯು ನೆರವಲ್‌ ಹಾಗೂ ಸುಂದರವಾದ ಸ್ವರ ಜೋಡಣೆಯಿಂದ ಸಿಂಗರಿಸಲ್ಪಟ್ಟಿತು. 

ವಯಲಿನ್‌ನಲ್ಲಿ ಡಾ| ರಾಮಕೃಷ್ಣ ಭಟ್‌ ಸಮರ್ಥವಾಗಿ ಸಾಥ್‌ ನೀಡಿದರೆ, ಉತ್ತಮ ಲಯ ವಿನ್ಯಾಸದೊಂದಿಗೆ, ನಾದಮಯ ನುಡಿಸಾಣಿಕೆಯಿಂದ  ಅಕ್ಷಯನಾರಾಯಣ ಕಾಂಚನ ಹಾಗೂ ವಿ| ಶ್ಯಾಮ ಭಟ್‌ ಸುಳ್ಯ ಕಛೇರಿಯನ್ನು ಕಳೆಗಟ್ಟಿಸಿದರು. ಅನಂತರ ಅನ್ನಮಾಚಾರ್ಯ ಅವರ ನಾನಾಟಿ ಬದುಕು ನಾಟಕಮು, ಇಷ್ಟು ದಿನ ಈ ವೈಕುಂಠ ದೇವರನಾಮ ಉತ್ತಮವಾಗಿ ಮೂಡಿಬಂದಿತು. ಲಾಲ್‌ಗ‌ುಡಿ ಜಯರಾಮನ್‌ ಅವರ ಖಮಾಚ್‌ ರಾಗದ ತಿಲ್ಲಾನದೊಂದಿಗೆ ಕಛೇರಿಯು ಮುಕ್ತಾಯಗೊಂಡಿತು. ವಿ| ಮಾಲತಿ ಹಾಗೂ ದತ್ತಾತ್ರೇಯ ರಾವ್‌ ಕಾರ್ಯಕ್ರಮ ನಿರೂಪಿಸಿದರು.

    ವಿ| ಕಾಂಚನ ಎ. ಈಶ್ವರ ಭಟ್‌ ಅವರ ನೇತೃತ್ವದಲ್ಲಿ ಸುನಾದ ಸಂಸ್ಥೆಯ ವತಿಯಿಂದ ಪ್ರತೀ ತಿಂಗಳು (ಸುನಾದ ಯುವದನಿ), ಪ್ರತೀ ವಾರ (ಸುನಾದ ಗೃಹ ಸಂಗಮ) ಕಾರ್ಯಕ್ರಮಗಳು ಹಲವಾರು ವರ್ಷಗಳಿಂದ ಯಾವುದೇ ಸಾರ್ವಜನಿಕ ಸಂಘ ಸಂಸ್ಥೆಗಳ ಸಹಾಯಹಸ್ತವಿಲ್ಲದೇ ನಡೆಯುತ್ತಿರುವುದು ಅವರ ಕತೃìತ್ವ ಶಕ್ತಿಗೆ ಹಿಡಿದ ಕೈಗನ್ನಡಿ. ಪುತ್ತೂರಿನ ಆಸುಪಾಸಿನಲ್ಲಿ ಶಾಸ್ತ್ರೀಯ ಸಂಗೀತವನ್ನು ಬೆಳೆಸುವ ಹಾಗೂ ಅದರ ಅಭಿರುಚಿಯನ್ನು ಪಸರಿಸುವ ನಿಟ್ಟಿನಲ್ಲಿ ಹಲವಾರು ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸುವ ಕಾರ್ಯದಲ್ಲಿ ಶ್ರಮಿಸುತ್ತಿರುವ ವಿ| ಕಾಂಚನ ಎ. ಈಶ್ವರ ಭಟ್‌ ಅವರು ಅಭಿನಂದನಾರ್ಹರು.

ವಿ| ಶಿಲ್ಪಾ ಸಿ. ಎಚ್‌.

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.