ದಸರಾ ಉತ್ಸವದಲ್ಲಿ ವಾಲಿ ಮೋಕ್ಷ


Team Udayavani, Oct 18, 2019, 4:23 AM IST

f-44

ಸಮಾಜ ಮಂದಿರ ಸಭಾ ಮೂಡಬಿದಿರೆ ಇದರ 74ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವದ ಅಂಗವಾಗಿ ಜರುಗಿದ ಪಾರ್ತಿಸುಬ್ಬ ವಿರಚಿತ ವಾಲಿ ಮೋಕ್ಷ ಆಖ್ಯಾನವು ಉತ್ತಮ ಕಲಾವಿದರ ಸಂಯೋಜನೆ , ಉತ್ತಮ ನಿರ್ವಹಣೆ ಹಾಗೂ ಪ್ರಬುದ್ಧ ಪ್ರೇಕ್ಷಕರ ಉಪಸ್ಥಿತಿಯಿಂದ ಒಟ್ಟಂದದ ಯಶಸ್ಸಿಗೆ ಕಾರಣವಾಯಿತು .

ಸೀತಾನ್ವೇಷಣೆಗೆ ಹೊರಟ ಶ್ರೀರಾಮ , ಲಕ್ಷ್ಮಣರು ಕಬಂಧ , ಶಬರಿಯರ ಸೂಚನೆಯಂತೆ ಋಷ್ಯಮೂಕ ಪರ್ವತದಲ್ಲಿ ಸುಗ್ರೀವನನ್ನು ಭೇಟಿಯಾಗಿ , ತುಲ್ಯಾರಿ ಮಿತ್ರತ್ವ ಬೆಳೆಸುತ್ತಾರೆ . ಸುಗ್ರೀವನ ಶತ್ರುವಾದ ವಾಲಿಯನ್ನು ಕೊಂದು , ಸುಗ್ರೀವನಿಗೆ ಕಿಷ್ಕಿಂಧೆಯ ಪಟ್ಟ ಕೊಡಿಸಿ , ಆ ಮೂಲಕ ಕಪಿಸೇನೆಯ ಸಹಾಯದೊಂದಿಗೆ ಸೀತಾಮಾತೆಯನ್ನು ಶ್ರೀರಾಮನಿಗೆ ಒಪ್ಪಿಸಲು ಸುಗ್ರೀವ ನೆರವಾಗುವುದು ವಾಲಿ ಮೋಕ್ಷ ಪ್ರಸಂಗದ ಕಥಾವಸ್ತು . ಶ್ರೀರಾಮನಾಗಿ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿಯವರು ಪ್ರಸಂಗದ ನಡೆಯಲ್ಲೇ ನಿರ್ವಹಿಸಿ ಮಿಂಚಿದರು .ರಾಮನ ಧೀಮಂತ ವ್ಯಕ್ತಿತ್ವ , ಪರಾಕ್ರಮ ಎಲ್ಲವನ್ನೂ ಚೆನ್ನಾಗಿ ಚಿತ್ರಿಸಿದರು . ಸುಗ್ರೀವನಾಗಿ ಉಜ್ರೆ ಅಶೋಕ ಭಟ್ಟರು ಉತ್ತಮವಾಗಿ ನಿರ್ವಹಿಸಿ ಮೆಚ್ಚುಗೆ ಗಳಿಸಿದರು .

ಶ್ರೀರಾಮ – ಸುಗ್ರೀವ ಸಂಭಾಷಣೆಯು ಆಕರ್ಷಕವಾಗಿತ್ತು . ಸುಗ್ರೀವನಾಗಿ ಅಶೋಕ ಭಟ್ಟರು , ಮಾಯಾವಿಯೊಂದಿಗೆ ಯುದ್ಧ ಮಾಡಲು ವಾಲಿಯ ಗುಹೆಗೆ ಹೋದಾಗ , ಗುಹೆಯಿಂದ ರಕ್ತ ಹೊರ ಬಂದುದು ನೋಡಿದ ಕಾರಣ ವಾಲಿ ಸತ್ತಿರಬಹುದೆಂದೆಣಿಸಿ ಆ ಗುಹೆಯ ದ್ವಾರದಲ್ಲಿ ದೊಡ್ಡ ಬಂಡೆಕಲ್ಲನ್ನು ಇಟ್ಟೆ ಎಂದಾಗ ಶ್ರೀರಾಮನಾಗಿ ಕುಕ್ಕುವಳ್ಳಿಯವರು , ವಾಲಿಯನ್ನು ಕೊಂದ ಮಾಯಾವಿಗೆ ನೀನು ಇಟ್ಟ ಕಲ್ಲು ಸರಿಸಲು ಅಸಾಧ್ಯವೇ ಎಂದಾಗ ಭಟ್ಟರು ,ಕಪಿಗಳು ಇಟ್ಟ ಕಲ್ಲನ್ನು ಸರಿಸಲು ಇನ್ನೊಂದು ಕಪಿಗೆ ಮಾತ್ರ ಸಾಧ್ಯ .ಮಾಯಾವಿಗೆ ಅದು ಸಾಧ್ಯವಾಗದು . ಒಂದು ವೇಳೆ ಸತ್ತದ್ದು ಮಾಯಾವಿಯಾದರೆ , ವಾಲಿಗೆ ಆ ಕಲ್ಲನ್ನು ಸರಿಸಲು ಸಾಧ್ಯ ಎಂಬ ಯೋಚನೆಯಿಂದ ಬಂಡೆ ಕಲ್ಲನ್ನು ಇಟ್ಟಿದ್ದೆ ಎಂದು ಹೊಸ ಸಾಧ್ಯತೆಯನ್ನು ವಾದದ ಮೂಲಕ ಹೇಳಿದರು . ಸಪ್ತಜನಾಶ್ರಮದ ದಾರಿಯಾಗಿ ಧರ್ಮಿಷ್ಠರು ಮಾತ್ರ ಹೋಗಲು ಸಾಧ್ಯ . ಆದ ಕಾರಣ ನನಗೆ ಬರಲು ಅಳುಕುಂಟಾಗುತ್ತದೆ ಎಂದು ಭಟ್ಟರು ಹೇಳಿದಾಗ , ಕುಕ್ಕುವಳ್ಳಿಯವರು ,ನೀನು ಧರ್ಮಕ್ಕೆ ವಿರುದ್ಧವಾಗಿ ವರ್ತಿಸಿದ್ದಿಯಾ ಎಂದಾಗ ಉಜ್ರೆಯವರು ಹಾಗಲ್ಲ , ನನ್ನ ಅಣ್ಣ ವಾಲಿಯು ಜೀವಂತನಾಗಿರುವಾಗಲೇ ಆತನಿಗೆ ಪಿಂಡ ಅರ್ಪಿಸಿದ ಅಳುಕು ಎಂದದ್ದು ಮೆಚ್ಚುಗೆ ಮೂಡಿಸಿತು .ಆದರೂ ಸುಗ್ರೀವನು ಶ್ರೀರಾಮಚಂದ್ರನಲ್ಲಿ ಸಂಭಾಷಣೆ ಮಾಡುವಾಗ ಇನ್ನಷ್ಟು ವಿನಯತೆ ತೋರಿದ್ದರೆ ಚೆನ್ನಾಗಿತ್ತು ಎನಿಸಿತು . ವಾಲಿಯಾಗಿ ಹಿರಿಯ ಅರ್ಥಧಾರಿಗಳಾದ ಡಾ| ಪ್ರಭಾಕರ ಜೋಷಿಯವರ ನಿರ್ವಹಣೆ ಉತ್ತಮ ಮಟ್ಟದಲ್ಲಿತ್ತು . ವಾಲಿ – ಸುಗ್ರೀವರ ಯುದ್ಧದ ಸಂಭಾಷಣೆಯು ಹಲವಾರು ಹೊಸ ವಿಚಾರಗಳಿಗೆ ದಾರಿ ಮಾಡಿ ಕೊಟ್ಟಿತು .ಶ್ರೀರಾಮನ ನಡೆಯನ್ನು ಖಂಡಿಸಿ ಹೇಳುವ ಭಾಗವು ಚೆನ್ನಾಗಿ ಮೂಡಿಬಂತಲ್ಲದೆ ಡಾ| ಜೋಷಿಯವರ ವಾಲಿ ಪಾತ್ರದ ಅನುಭವವು ಎದ್ದು ಕಂಡಿತು . ತಾರೆಯಾಗಿ ಉದಯೋನ್ಮುಖ ಕಲಾವಿದರಾದ ಹರೀಶ ಬಳಂತಿಮೊಗರು ಅವರ ಅರ್ಥದಲ್ಲಿ ಭಾವನೆ ಇತ್ತು . ಪತಿವ್ರತೆ ಹೆಣ್ಣೊಬ್ಬಳ ಮಾನಸಿಕ ತುಮುಲವನ್ನು ಚೆನ್ನಾಗಿ ಬಿಂಬಿಸಿದರು . ಭಾಗವತಿಕೆಯಲ್ಲಿ ರವಿಚಂದ್ರ ಕನ್ನಡಿಕಟ್ಟೆಯವರು ಸುಶ್ರಾವ್ಯವಾಗಿ ಹಾಡಿ ಮನ ಗೆದ್ದರು . ಕೆಲವೊಂದು ಹಾಡುಗಳನ್ನು ಅಗರಿ ಶೈಲಿಯಲ್ಲಿ ಹಾಡಿ ರಂಜಿಸಿದರು . ಚಿತ್ರತರಾಂಗಿ ಕೇಳ್‌ ಬಾಲೆ… , ಜಾಣನಹುದಹದೋ… ಮುಂತಾದ ಪದ್ಯಗಳು ಉತðಷ್ಟವಾಗಿತ್ತು . ಚೆಂಡೆಯಲ್ಲಿ ದಯಾನಂದ ಮಿಜಾರು ಹಾಗೂ ಮದ್ದಲೆಯಲ್ಲಿ ಚೈತನ್ಯಕೃಷ್ಣ ಪದ್ಯಾಣರ ಕೈ ಚಳಕವು ಚೇತೋಹಾರಿಯಾಗಿದ್ದು ಪದ್ಯಗಳಿಗೆ ಪೂರಕವಾಗಿತ್ತು . ಚಕ್ರತಾಳದಲ್ಲಿ ಪುರುಷೋತ್ತಮ ಆಚಾರಿ ಸಹಕರಿಸಿದರು .

ಎಂ .ಶಾಂತರಾಮ ಕುಡ್ವ

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.