ವೆಲ್ಲಿನೇಜಿ ಗಾಯನ: ಜಾರು ದಾರಿಯಲ್ಲಿ ಮೇರುಗಿರಿಯತ್ತ ಒಂದು ಯಾನ


Team Udayavani, Mar 16, 2018, 6:00 AM IST

a-2.jpg

ಆಲಂಪಾಡಿ ವೆಂಕಟೇಶ ಶಾನುಭೋಗ ಸ್ಮಾರಕ 33ನೇ ಸಂಗೀತೋತ್ಸವದಲ್ಲಿ ಪ್ರಧಾನ ಕಛೇರಿ ನೀಡಿದ ವೆಲ್ಲಿನೇಜಿ ಸುಬ್ರಹ್ಮಣ್ಯನ್‌ ಅವರಿಗೆ ಶಾರೀರ ಕೈಕೊಟ್ಟಿತು. ಆದರೂ ಪ್ರಯತ್ನದಿಂದ ಕಛೇರಿಯನ್ನು ಎತ್ತರಕ್ಕೇರಿಸಲು ಸಾಧ್ಯವಾದುದು ಅವರ ಪುತ್ರ ಹದಿನೈದರ ಬಾಲಕ ಭಾರದ್ವಾಜರ ಪಾಂಡಿತ್ಯ. ತನ್ನ ಕಲಾ ಪರಂಪರೆಯನ್ನು ಅವರು ಯಶಸ್ವಿಯಾಗಿ ಮುಂದಿನ ಪೀಳಿಗೆಗೆ ದಾಟಿಸಿದ್ದಾರೆ ಎಂಬುದಕ್ಕೆ ಈ ಕಛೇರಿ ಸಾಕ್ಷಿಯಾಯಿತು. ಈ ಬಾಲ ಪ್ರತಿಭೆ ಸಹ ಗಾಯಕನಾಗಿ ಹಾಡಿ ಕಿಕ್ಕಿರಿದು ನೆರೆದಿದ್ದ ಸಭಿಕರನ್ನು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದುದು ಕಛೇರಿಯ ಸರ್ವಾಂಗೀಣ ಯಶಸ್ಸಿಗೆ ಕಾರಣವಾಯಿತು. ಅಟತಾಳ ವರ್ಣ ವಿರಿಬೋಣಿಯಿಂದ ಕಛೇರಿ ಆರಂಭಿಸಿದ ಸುಬ್ರಹ್ಮಣ್ಯನ್‌ ಬಳಿಕ ಸುಮುಖಸ್ಯ ಏಕದಂತಸ್ಯ… ಶ್ಲೋಕದೊಡನೆ ಮಯೂರಂ ಅವರ ಜಯ ಜಯ ಗಣಪತಿ…ಯಲ್ಲಿ ಹಂಸಧ್ವನಿಯನ್ನು ವಿಸ್ತಾರವಾಗಿ ಪೋಷಿಸಿದರು. ದೀಕ್ಷಿತರ ಸಂರಕ್ಷಿತೋಹಂ… ಬಳಿಕ ಅವರದ್ದೇ ಕೃತಿ ಅಖೀಲಾಂಡೇಶ್ವರಿ… (ದ್ವಿಜಾವಂತಿ, ಆದಿ) ವಿಸ್ತಾರವಾದ ರಾಗಾಲಾಪನೆ ಕಲ್ಪನಾ ಸ್ವರಗಳೊಂದಿಗೆ ಹೃದ್ಯವಾಗಿ ಮೂಡಿಬಂತು. ಕರ್ಣರಂಜಿನಿ, ಶೋಭಿಲ್ಲು ಸಪ್ತಸ್ವರಗಳ (ಜಗನ್ಮೋಹಿನಿ, ರೂಪಕ) ಪ್ರಸ್ತುತಿಯ ಬಳಿಕ ಪ್ರಧಾನ ಕೃತಿಯಾಗಿ ತೋಡಿಯ ಕರಣಚೂಡ ಮೂಡಿಬಂತು. ಆಲಾಪನೆ, ಕಲ್ಪನಾ ಸ್ವರಗಳ ಪರಿಪೂರ್ಣ ಆರೈಕೆ ಪಡೆದ ಈ ಕೃತಿಯಲ್ಲಿ ಪರಾಶಕ್ತಿ ನಾಯುಗ ಚಿತ್ತ… ಎಂಬಲ್ಲಿ ನೆರವಲ್‌ ಹಾಡಿದರು. ಇಲ್ಲಿ ಸಹ ಗಾಯಕ ಭಾರದ್ವಾಜರ ಸ್ಪರ್ಧಾತ್ಮಕ ಹಾಡುಗಾರಿಕೆ ಜನಮೆಚ್ಚುಗೆ ಪಡೆಯಿತು. ಮುಂದೆ ಭಜನ್‌, ರಾಗಮಾಲಿಕೆಯಲ್ಲಿ ವಂದೇ ಮಾತರಂನ್ನು ಸುರುಟ, ಕಲ್ಯಾಣಿ, ಮನೋರಂಜಿನಿ, ಮಾಧ್ಯಮಾವತಿಗಳಲ್ಲಿ ಹಾಡಿ ಸುಬ್ರಹ್ಮಣ್ಯನ್‌ ಎರಡೂ ಮುಕ್ಕಾಲು ತಾಸುಗಳ ಕಛೇರಿಗೆ ಮಂಗಳ ಹಾಡಿದರು. ವಯಲಿನ್‌ನಲ್ಲಿ ಸಹಕರಿಸಿದ ಮಾಂಜೂರ್‌ ರಂಜಿತ್‌ ಬೆರಳುಗಾರಿಕೆಯಲ್ಲಿ ಅನುಸರಣಿಯಲ್ಲಿ ಪಕ್ವತೆಯನ್ನು ಮೆರೆದರು. ಮೃದಂಗದಲ್ಲಿ ಡಾ| ಶಂಕರ್‌ ರಾಜ್‌, ಘಟದಲ್ಲಿ ಎಲಾಂಕುಲಮ್‌ ದೀಪು ಒಂದು ಉತ್ತಮ ತನಿ ಆವರ್ತನವಿತ್ತು ಮಿದುಳಿಗೆ ಕಸರತ್ತು ಒದಗಿಸಿದರು.

ಕೆ.ಜಿ. ಶಾನುಭೋಗ್‌ ಉದ್ಘಾಟಿ ಸಿದರು. ಮಣಿಕೃಷ್ಣ ಸ್ವಾಮಿ ಎಕಾಡೆ ಮಿಯ ಪಿ. ನಿತ್ಯಾನಂದ ರಾವ್‌ ಅತಿಥಿಗಳಾಗಿದ್ದರು. ತಿರುಪತಿ ಸಂಸತ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ ಪಡೆದ ಡಾ| ಬಳ್ಳಪದವು ಮಾಧವ ಉಪಾಧ್ಯಾಯರನ್ನು “ಎ.ವಿ.ಎಸ್‌. ಪ್ರಶಸ್ತಿ 2018′ ನೀಡಿ ಗೌರವಿಸಲಾಯಿತು.ಇದರ ಅಂಗವಾಗಿ ನಡೆದ ಸಂಗೀತಾರಾಧನಾ ಕಾರ್ಯ ಕ್ರಮದಲ್ಲಿ ರಾಧಾ ಮುರಳೀಧರ್‌, ಗೋವಿಂದನ್‌ ನಂಬ್ಯಾರ್‌, ಡಾ| ಶೋಭಿತಾ ಸತೀಶ್‌, ವೇಣುಗೋಪಾಲ ಶಾನುಭೋಗ್‌, ನಯನಾರಾಜ್‌, ಪ್ರಭಾಕರ ಕುಂಜಾರು, ಪುರುಷೋತ್ತಮ ಪುಣಚಿತ್ತಾಯ, ಬರ್ಡಕ್ಕೆರೆ ಶ್ರೀಧರ ಭಟ್‌ ಮೊದಲಾದವರು ಭಾಗವಹಿಸಿದ್ದರು.                                      

ಸುಕುಮಾರ ಆಲಂಪಾಡಿ

ಟಾಪ್ ನ್ಯೂಸ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.