ಯಕ್ಷ ಧ್ರುವ ಪಟ್ಲ ಸಂಭ್ರಮ: ಹಿರಿಯ- ಯುವ- ಎಳೆಯ ಕಲಾವಿದರ ಸಂಗಮ


Team Udayavani, Jun 7, 2019, 6:00 AM IST

f-1

ಯಕ್ಷಗಾನದ ವೈಭವವೆಂದರೆ ಹಾಗೆ; ಅದು ಪರಿಪೂರ್ಣವಾದ ಕಲಾರಸದೌತಣ ಎಂದೇ ವರ್ಣಿತ. ಈ ಮಾತಿಗೆ ಪರಿಪೂರ್ಣವಾದ ನಿದರ್ಶನವಾಯಿತು ಪ್ರಖ್ಯಾತ ಭಾಗವತರಾದ ಪಟ್ಲ ಸತೀಶ್‌ ಶೆಟ್ಟಿ ಅವರು ಸ್ಥಾಪಕಾಧ್ಯಕ್ಷರಾಗಿರುವ ಮಂಗಳೂರಿನ ಯಕ್ಷಧ್ರುವ ಫೌಂಡೇಶನ್‌ ಟ್ರಸ್ಟ್‌ನಿಂದ ಜೂ.6ರಂದು ಮಂಗಳೂರಿನ ಅಡ್ಯಾರ್‌ ಗಾರ್ಡನ್‌ನಲ್ಲಿ ಜರಗಿದ “ಯಕ್ಷಧ್ರುವ ಪಟ್ಲ ಸಂಭ್ರಮ- 2019′. ಬೆಳಗ್ಗೆ 8ಕ್ಕೆ ಆರಂಭವಾಗಿ ಮರುದಿನ ಮುಂಜಾನೆಯ ಸಮೀಪದವರೆಗೂ ವೈವಿಧ್ಯಮಯವಾಗಿ ಸಾಗಿತು ಯಕ್ಷ ಸಂಭ್ರಮ. ಇದರ ಜತೆಯಲ್ಲಿ ಪ್ರತಿಷ್ಠಾನದ ವತಿಯಿಂದ ಅಶಕ್ತ ಕಲಾವಿದರಿಗೆ ನೆರವು ಮುಂತಾದ ಕಾರ್ಯಗಳು.

ತೆಂಕು- ಬಡಗು ತಿಟ್ಟುಗಳು ಸಂಗಮವಾಗಿ, ಪ್ರಖ್ಯಾತ ಹಿರಿಯರು- ಸಾಧಕ ಯುವಕರು- ಎಳೆಯ ಕಲಾವಿದರು ಜತೆಯಾಗಿ, ಪರಂಪರೆಗೆ ಅನುಗುಣವಾಗಿ ಈ ಸಂಭ್ರಮ ಏರ್ಪಟ್ಟಿತು ಎಂಬುದು ಉಲ್ಲೇಖನೀಯ. ದೇಶ ವಿದೇಶಗಳ ಕಲಾಭಿಮಾನಿಗಳು ಇಲ್ಲಿ ತುಂಬಿ ತುಳುಕಿದರು.

ಪರಂಪರೆಯಂತೆ ಮುಂಜಾನೆ ಚೌಕಿಪೂಜೆಯೊಂದಿಗೆ ಈ ಸಂಭ್ರಮ ಆರಂಭವಾಯಿತು. ವೇದಿಕೆಗೆ ಅಗರಿ ಶ್ರೀನಿವಾಸ ಭಾಗವತರ ಹೆಸರನ್ನು ಇರಿಸಲಾಗಿತ್ತು. ಬಳಿಕ ಸಂಪ್ರದಾಯಕವಾದ ಅಬ್ಬರ ತಾಳ. ಇದು ಇಲ್ಲಿನ ಆರಂಭಿಕ ವೈಶಿಷ್ಟ್ಯ ಕೂಡಾ. ಹಿಂದಿನ ಕಾಲದಲ್ಲಿ ಬೇರೆ ಬೇರೆ ಊರುಗಳಲ್ಲಿ ಟೆಂಟ್‌ ಮೇಳಗಳ ಯಕ್ಷಗಾನ ಬಯಲಾಟ ರಾತ್ರಿಪೂರ್ತಿ ನಡೆಯುತ್ತಿತ್ತು. ಆಗ, ಪ್ರದರ್ಶನಕ್ಕೆ ಪೂರ್ವಭಾವಿಯಾಗಿ, ಪಕ್ಕದ ಎತ್ತರದ ಪ್ರದೇಶದಲ್ಲಿ ಸ್ವಲ್ಪಕಾಲ ಚೆಂಡೆವಾದನ ನಡೆಸಲಾಗುತ್ತಿತ್ತು. ಊರವರಿಗೆಲ್ಲಾ ಇಲ್ಲಿ “ಆಟ’ ನಡೆಯುತ್ತಿದೆ ಎಂದು ತಿಳಿಸುವ ಮತ್ತು ನೆನಪಿಸುವ ಮಾಧ್ಯಮ ಕೂಡಾ ಇದಾಗಿತ್ತು. ಇದೇ ಅಬ್ಬರ ತಾಳ! ಅಬ್ಬರ ಎಂದರೆ ಮಾಹಿತಿ ಸೂಚಕ ಎಂಬರ್ಥವಿದೆ. ಹಳ್ಳಿಗಳಲ್ಲಿ ಈ ಕ್ರಮವನ್ನು “ಕೇಳಿ ಬೊಟ್ಟುನು’ ಎಂದು ತುಳುವಿನಲ್ಲಿ ಹೇಳುತ್ತಿದ್ದರು. ಕನ್ನಡದಲ್ಲಿ “ಕೇಳಿ’ ಎಂದೂ ತಿಳಿದುಕೊಳ್ಳಬಹುದಾಗಿತ್ತು. ಯಕ್ಷಗಾನ ಆರಂಭದ ಸುಮಾರು ಎರಡು ತಾಸುಗಳ ಮೊದಲು- ಸಾಧಾರಣ ಸಂಜೆ ಆರರ ವೇಳೆಗೆ ಅಬ್ಬರ ತಾಳ ಕೇಳಿ ಬರುತ್ತಿತ್ತು.

ಆ ಕಾಲದಲ್ಲಿ ವಿದ್ಯುತ್‌, ವಾಹನ ಮುಂತಾದ ಸವಲತ್ತುಗಳು ಇರಲಿಲ್ಲ. ಸಂಪರ್ಕ ಸಾಧನಗಳಿರಲಿಲ್ಲ. ಕತ್ತಲೆಯ ಮೌನವನ್ನು ಸೀಳಿ ಬರುತ್ತಿದ್ದ ಈ ಅಬ್ಬರ ತಾಳ ಯಕ್ಷಗಾನಕ್ಕೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ಪೂರಕವಾಗಿತ್ತು.

ಈ ಬಾರಿ ಅಡ್ಯಾರ್‌ನಲ್ಲಿ ಮುಂಜಾನೆ ಮೊಳಗಿದ ಅಬ್ಬರ ತಾಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೊಳಗಿತು. ಗುರುಪ್ರಸಾದ್‌- ಪ್ರಶಾಂತ್‌ ಶೆಟ್ಟಿ- ತೆಂಕು- ಬಡಗಿನ ಚೆಂಡೆವಾದಕರು ಇದನ್ನು ನಡೆಸಿಕೊಟ್ಟರು.

ಆ ಬಳಿಕದ ಕಾರ್ಯಕ್ರಮ ಚೆಂಡೆ ಜುಗಲ್‌ ಬಂದಿ- ಸ್ಪರ್ಧಾತ್ಮಕ ಪೀಠಿಕೆ ಸ್ತ್ರೀವೇಷ. ವಿಶೇಷವೆಂದರೆ, ಯಕ್ಷಗಾನ ಪರಂಪರೆಯಲ್ಲಿ ಸ್ತ್ರೀವೇಷಗಳ ಆರಂಭಿಕ ಪ್ರವೇಶವಿರುತ್ತದೆ. ಈ ಪರಂಪರೆಯನ್ನು ನೆನಪಿಸುವ ಸ್ವರೂಪದಲ್ಲಿ ಸ್ಪರ್ಧಾತ್ಮಕ ಪೀಠಿಕೆ ಸ್ತ್ರೀವೇಷ ಪರಿಕಲ್ಪಿಸಲಾಗಿತ್ತು. ಬಲಿಪ ಶಿವಶಂಕರ ಭಟ್‌, ಬಲಿಪ ಗೋಪಾಲಕೃಷ್ಣ ಭಟ್‌ ಭಾಗವತಿಕೆಯಲ್ಲಿ ದೇಲಂತಮಜಲು, ಉಪಾಧ್ಯ, ಅಡೂರು, ವಗೆನಾಡು ಮುಂತಾದ ಕಲಾವಿದರು ಹಿಮ್ಮೇಳದಲ್ಲಿ ಹಾಗೂ ಮುಮ್ಮೇಳದಲ್ಲಿ ಮುಚ್ಚಾರು, ಅಜಿತ್‌ ಪುತ್ತಿಗೆ, ದತ್ತೇಶ್‌, ಮಂದಾರ್‌ ಭಾಗವಹಿಸಿದರು. ಯಕ್ಷಗಾನದ ಪೂರ್ವರಂಗದ ಬಗ್ಗೆ ಮಾಹಿತಿಯನ್ನು ಈ ಕಾರ್ಯಕ್ರಮ ತೆರೆದಿಟ್ಟಿತು.

ಯಕ್ಷಾ ಸಪ್ತಸ್ವರಪದ ಬಳಿಕ ಮಹಿಳಾ ಯಕ್ಷಗಾನ ಕಾರ್ಯಕ್ರಮ ವಿವಿಧ ಕಾರಣಗಳಿಗಾಗಿ ಗಮನ ಸೆಳೆಯಿತು. ಯಕ್ಷಧ್ರುವ, ಪಟ್ಲ ಫೌಂಡೇಶನ್‌ ಟ್ರಸ್ಟ್‌ನ ಕೇಂದ್ರ ಮಹಿಳಾ ಘಟಕದವರು ಪೂರ್ಣಿಮಾ ಯತೀಶ್‌ ಶೆಟ್ಟಿ ನಿರ್ದೇಶನದಲ್ಲಿ ಸುಮಂಗಲಾ ರತ್ನಾಕರ್‌ ನಿರೂಪಣೆಯಲ್ಲಿ ಪ್ರಸ್ತುತಪಡಿಸಿದರು. ಭವ್ಯಶ್ರಿ ಅಜೇರು, ಅಮೃತಾ ಅಡಿಗ ಭಾಗವತರು.

ಯಕ್ಷಗಾನ ಪ್ರಸಂಗಗಳ ಪರಂಪರೆಯ ಕೆಲವು “ಒಡ್ಡೋಲಗ’ಗಳನ್ನು ಈ ಯಕ್ಷನಾಟ್ಯ ದೃಶ್ಯ ಲಹರಿಯಲ್ಲಿ ಕಲಾವಿದೆಯರು ಪ್ರಸ್ತುತಪಡಿಸಿದರು. ಯಕ್ಷಗಾನ ಪರಂಪರೆಯಲ್ಲಿ ಒಡ್ಡೋಲಗಕ್ಕೆ ಪ್ರಾಧಾನ್ಯವಿದೆ. ಈ ಪರಂಪರೆಯನ್ನು ಕಾಲಮಿತಿಯೊಳಗೆ ಅವರು ನಿರ್ವಹಿಸಿ, ನೆನಪಿಸಿಕೊಟ್ಟರು. ಪಾಂಡವರ ಒಡ್ಡೋಲಗ, ಶ್ರೀಕೃಷ್ಣನ ಒಡ್ಡೋಲಗ, ಹನುಮಂತನ ಒಡ್ಡೋಲಗಗಳನ್ನು ಅವರು ಆಯ್ಕೆ ಮಾಡಿಕೊಂಡಿದ್ದರು. ಆ ಬಳಿಕ ಬಣ್ಣದ ಶಿವಪೂಜೆ ಹಾಗೂ ಮಹಿಷಾಸುರ ವಧೆಯ ಕಥಾನಕ. ಮುಂದೆ ತಾಳಮದ್ದಲೆಯ ಬಳಿಕ ಯಕ್ಷಗಾನ ನೃತ್ಯ. ಸಾನ್ವಿ, ರಾಶಿ, ಹೃದಾನ್‌ ಪಟ್ಲ ನಡೆಸಿಕೊಟ್ಟರು.

ಮನೋಹರ ಪ್ರಸಾದ್‌

ಟಾಪ್ ನ್ಯೂಸ್

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.