ಯಕ್ಷ ನಂದನದ ಆಂಗ್ಲಭಾಷಾ ಪಂಚವಟಿ

ಇಂಗ್ಲಿಷ್‌ ಭಾಷಾ ಬಳಗ ಪ್ರಸ್ತುತಿ

Team Udayavani, Jul 5, 2019, 5:00 AM IST

13

ಗಮಕದಾರ್ಭಟೆಯೊಂದಿಗೆ ಪ್ರವೇಶಿಸಿದಳು ಶೂರ್ಪನಖೆ. ಹೆಣ್ಣು ಬಣ್ಣದ ತೆರೆಪೊರಪ್ಪಾಟಿನೊಂದಿಗೆ ಶರಶ್ಚಂದ್ರರು ಈ ಪಾತ್ರ ವನ್ನು ಮೆರೆಸಿದರು. ದೊಡ್ಡ ಹುತ್ತರಿಯೊಂದಿಗೆ ಘನವಾದ ದೇಹವನ್ನು ಕುಣಿಸಿ, ಮರೆಮಾಡಿಮಾಯಾ ಶೂರ್ಪನಖೆಯಾದರು. ಖ್ಯಾತ ಸ್ತ್ರೀ ಪಾತ್ರಧಾರಿ ವರ್ಕಾಡಿ ರವಿ ಅಲೆವೂರಾಯರು ನಿಜಾರ್ಥದಲ್ಲಿ ಮಾಯೆಯಾಗಿ ಜನರನ್ನು ತಮ್ಮ ಸೌಂದರ್ಯದ ಸೆರಗಿನಲ್ಲಿ ಕಟ್ಟಿ ಒಯ್ದರು.

ಮಾಜಿ ಶಾಸಕ, ಆಂಗ್ಲಭಾಷಾ ಯಕ್ಷಗಾನದ ಉತ್ತುಂಗಕ್ಕಾಗಿ ಶ್ರಮಿಸಿದ
ದಿ|ಪಿ.ವಿ.ಐತಾಳರ 22ನೇ ಸಂಸ್ಮರಣೆ, ಇಂಗ್ಲಿಷ್‌ ಭಾಷಾ ಬಳಗದ 38ನೇ ವಾರ್ಷಿಕೋತ್ಸವ, ಪಂಚವಟಿ ಆಂಗ್ಲ ಯಕ್ಷಗಾನ ಬಯಲಾಟ ಮಂಗಳೂರಿನ ಪುರಭವನದಲ್ಲಿ ನಡೆಯಿತು.

ನ್ಯಾಯವಾದಿ ಭಾಗವತ ಹರಿ ಪ್ರಸಾದ್‌ ಕಾರಂತರ ಭಾಗವತಿಕೆ ಈ ಬಯಲಾಟಕ್ಕೆ ಮುದ ನೀಡಿತು. ಸ್ಪಷ್ಟವಾದ, ವಿರಳವಾದ ಸಾಹಿತ್ಯ, ರಾಗಸಂಚಾರ ಎಲ್ಲವೂ ಒಟ್ಟಂದದ ಕಾರ್ಯಕ್ರಮಕ್ಕೆ ಕೊಡುಗೆಯಾಗಿ ಬಂತು. ಸುಬ್ರಹ್ಮಣ್ಯ ಚಿತ್ರಾಪುರರವರು ಮದ್ದಲೆಯಲ್ಲಿ ಪಾರ್ತಿಸುಬ್ಬನ ಹಾಡುಗಳಿಗೆ ಕಾರಂತರು ಜೀವ ತುಂಬುವಾಗ ನುಡಿತ ಝೇಂಕಾರಗಳಿಂದ ವಾದನದಲ್ಲಿ ಬೆಳಗಿದರು. ಅನುಭವಿ ಮದ್ದಲೆಗಾರರಾದ ಶಂಕರ ಭಟ್‌ ದಿವಾಣ, ಕೃಷ್ಣಯ್ಯ ಆಚಾರ್ಯ, ಸೂರ್ಯನಾರಾಯಣ ಮತ್ತು ವಿಕ್ರಂ ಮೈರ್ಪಾಡಿಯವರು ಹಿಮ್ಮೇಳದಲ್ಲಿ ಸಹಕಾರವನ್ನಿತ್ತರು.

ರಾಮ ಲಕ್ಷ್ಮಣ ಸೀತೆಯರ ಪೀಠಿಕೆ,ಹಿತಮಿತವಾದ ನಾಟ್ಯ ಮಾತುಗಳಿಂದ ಈ ದೃಶ್ಯದಲ್ಲಿ ಪಾತ್ರಗಳಿಗೆ ಜೀವ ತುಂಬಿದರು. ಅನುಭವಿ ಕಲಾವಿದ ಈಶ್ವರ ಭಟ್‌ ಸರ್ಪಂಗಳರವರು ರಾಮನ ಪಾತ್ರವನ್ನು ಬೆಳಗಿಸಿದರು. ತೂಕದ ಇಂಗ್ಲಿಷ್‌ ಮಾತುಗಳಿಂದ ಮರ್ಯಾದಾ ಪುರುಷೋತ್ತಮನನ್ನು ಚಿತ್ರಿಸಿದರು. ಕು| ವೃಂದಾ ಕೊನ್ನಾರ್‌ರವರು ಸೀತೆಯ ಭಯ, ಆತಂಕ, ಲಕ್ಷ್ಮಣನ ಬಗೆಗಿನ ಮೈದುನ ವಾತ್ಸಲ್ಯ ಎಲ್ಲವನ್ನೂ ಭಾವಪೂರ್ಣವಾಗಿ ಅಭಿನಯಿಸಿ ಸೀತೆಯ ಗೌರವವನ್ನು ಕಾಪಾಡಿಕೊಂಡರು. ಲಯವರಿತ ಹೆಜ್ಜೆಗಾರಿಕೆ ಆ ಪಾತ್ರವನ್ನು ಗಾಂಭೀರ್ಯದಲ್ಲಿಯೇ ನಿಲ್ಲುವಂತೆ ಮಾಡಿತು. ಲವಲವಿಕೆಯಿಂದ ಲಕ್ಷ್ಮಣನ ಪಾತ್ರವನ್ನು ನಾಟ್ಯ, ಧೀಂಗಿಣ, ಮಾತುಗಳಿಂದ ತುಂಬಿಸಿದವರು ಭರವಸೆಯ ಕಲಾವಿದ ಕಾನೂನು ವಿದ್ಯಾರ್ಥಿ ಪ್ರಶಾಂತ್‌ ಐತಾಳ್‌ ಕೃಷ್ಣಾಪುರ.

ಇನ್ನು ಈ ಬಾರಿ ಸಂಚಾಲಕರು-ಸಂಘಟಕರುಗಳೆಲ್ಲ ರಾಮನಲ್ಲಿ ಪಂಚವಟಿ ಪ್ರದೇಶದ ಕಷ್ಟವನ್ನು ಹೇಳಿಕೊಳ್ಳುತ್ತಾ ವಾಸ್ತವವನ್ನು ಬಿಚ್ಚಿಟ್ಟು, ತಮ್ಮನ್ನು ನೀವೇ ಕಾಪಾಡಬೇಕೆಂದು ಬೇಡಿಕೊಂಡರು. ಡಾ| ಸತ್ಯಮೂರ್ತಿ ಐತಾಳ್‌, ಅಡ್ವೊಕೆಟ್‌ ಸಂತೋಷ್‌ ಐತಾಳ್‌, ಡಾ|ಜೆ.ಎನ್‌.ಭಟ್‌ ಹಾಗೂ ಅಡ್ವೊಕೆಟ್‌ ಸದಾಶಿವ ಐತಾಳ್‌ರವರು ಮುನಿಗಳಾದರೆ, ಕು| ಸಂಜನಾ ಜೆ.ರಾವ್‌ ಮತ್ತು ಕು| ಅಭಿನವಿ ಹೊಳ್ಳರು ಋಷಿ ವಧುಗಳಾದರು. ಇವರೆಲ್ಲರ ಪಾತ್ರ ತನ್ಮಯತೆ ಪ್ರಾಯಶಃ ಕವಿ ಆಶಯವನ್ನು ಪೂರೈಸಿದಂತೆಯೇ ಕಾಣುತ್ತಿದೆ. ಧರ್ಮಾತ್ಮರನ್ನು ರಕ್ಷಣೆ ಮಾಡಲು ಕಟಿಬದ್ದ ಎಂದು ರಾಮ ಧೈರ್ಯ ತುಂಬಿ ಅವರನ್ನು ಕಳುಹಿಸುತ್ತಾನೆ.

ಗಮಕದಾರ್ಭಟೆಯೊಂದಿಗೆ ಪ್ರವೇಶಿಸಿದಳು ಶೂರ್ಪನಖೆ. ಹೆಣ್ಣು ಬಣ್ಣದ ತೆರೆಪೊರಪ್ಪಾಟಿನೊಂದಿಗೆ ಶರಶ್ಚಂದ್ರರು ಈ ಪಾತ್ರ ವನ್ನು ಮೆರೆಸಿದರು. ದೊಡ್ಡ ಹುತ್ತರಿಯೊಂದಿಗೆ ಘನವಾದ ದೇಹವನ್ನು ಕುಣಿಸಿ, ಮರೆಮಾಡಿ ಮಾಯಾಶೂರ್ಪನಖೆಯಾದರು. ಖ್ಯಾತ ಸ್ತ್ರೀ ಪಾತ್ರಧಾರಿ ವರ್ಕಾಡಿ ರವಿ ಅಲೆವೂರಾಯರು ನಿಜಾರ್ಥದಲ್ಲಿ ಮಾಯೆಯಾಗಿ ಜನರನ್ನು ತಮ್ಮ ಸೌಂದರ್ಯದ ಸೆರಗಿನಲ್ಲಿ ಕಟ್ಟಿ ಒಯ್ದರು. ಪರಂಪರೆಯ ನಾಟ್ಯ ಸಂಭಾಷಣೆಯ ಮೂಲಕ ಆ ಪಾತ್ರ ಬೆಳಗುವಲ್ಲಿ ಅಲೆವೂರಾಯರ ಪಾತ್ರದಲ್ಲಿ ಪರಂಪರೆಯ ಸೊಗಡನ್ನು ಕಾಣಬಹುದಾಗಿತ್ತು. ಝಂಪೆ,ಆದಿ,ರೂಪಕ,ಅಷ್ಟ,ಏಕ ಹೀಗೆಲ್ಲಾ ತಾಳಗಳ ಹಾಡುಗಳಿಗೂ ಭಿನ್ನ ನಾಟ್ಯಗಳ ಮೂಲಕ ಮಾಯಾ ಶೂರ್ಪನಖೆ ಬೆಳಗಿದಳು. ರಾಮ-ಶೂರ್ಪನಖೆಯರ ಸಂಭಾಷಣೆ ಹಾಸ್ಯ ಮಿಶ್ರಿತ ವಾಕ್ಚಾತುರ್ಯವೇ ಆಗಿತ್ತು. ಅಂತೂ ರವಿ ಅಲೆವೂರಾಯರು ಕಥಾ ಸೌಂದರ್ಯಕ್ಕೆ ಸೌಂದರ್ಯ ರಾಣಿಯೇ ಆದರು. ಖರ,ದೂಷಣ, ತ್ರಿಶಿರರು ವಿವಿಧ ರೂಪಗಳಲ್ಲಿ ಕಂಡುಬಂದರು. ಖರಾಸುರನಾಗಿ ಶಿವತೇಜ ಐತಾಳರು ಶೂರ್ಪನಖೆಯ ಕಷ್ಟವನ್ನು ಆಲಿಸಿ ಪರಿಹಾರ ನೀಡುವ ಭರವಸೆ ನೀಡಿದರು. ಸಹೋದರರಾದ ದೂಷಣ-ಸ್ಕಂದ ಕೊನ್ನಾರ್‌, ತ್ರಿಶಿರನಾಗಿ ಶ್ರೀಜಿತ್‌ ಆರಿಗರನ್ನು ಕರೆಸಿ ಯುದ್ಧಕ್ಕೆ ಹೊರಟರು. ತ್ರಿಶಿರನು (ಮೂರು ತಲೆ) ಇಸ್ಪೀಟ್‌ ಆಟದಲ್ಲಿರುವ ಕಳಾವಾರ್‌ ಆಕಾರದ ಕಿರೀಟದಿಂದ ತಾನು ತ್ರಿಶಿರನೆಂದು ಸಾರಿದರು. ರಾಮನು ಏರಿಸಿದ ಬಿಲ್ಲನ್ನು ಇಳಿಸುವುದರೊಂದಿಗೆ ಹದಿನಾಲ್ಕು ಸಾವಿರ ರಾಕ್ಷಸರನ್ನು ಕೊಂದು ಲೋಕಕ್ಕೆ ಮಂಗಲವನ್ನುಂಟು ಮಾಡುತ್ತಾನೆ. ಇಂಗ್ಲಿಷ್‌ ಭಾಷೆ ಎನ್ನುವುದನ್ನು ಬಿಟ್ಟರೆ ಉಳಿದಂತೆ ಮಾತಿನ ಧಾಟಿ, ವೇಷಭೂಷಣ ಎಲ್ಲವೂ ಸಾಧಾರಣ ಬಯಲಾಟಗಳನ್ನು ನೋಡಿದಂತೆಯೇ ಅನ್ನಿಸಿತು.

ಸುರೇಖಾ ಶೆಟ್ಟಿ, ಮಂಗಳೂರು

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.