ಕುಂಭಮೇಳದಲ್ಲಿ ಸರಯೂ ಯಕ್ಷವೈಭವ 


Team Udayavani, Feb 8, 2019, 12:30 AM IST

5.jpg

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಸರಯೂ ಮಕ್ಕಳ ಮೇಳದ “ಗುರುದಕ್ಷಿಣೆ’ ಎಂಬ ಯಕ್ಷಗಾನವು ದೇಶ ವಿದೇಶಗಳ ಭಕ್ತರ ಮನಸೂರೆಗೊಂಡಿತು. ಕರ್ನಾಟಕದ ನಾನಾ ಕಲಾಪ್ರಕಾರಗಳೂ ಕುಂಭಮೇಳದ ಬೇರೆ ಬೇರೆ ವೇದಿಕೆಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದವು. ಈ ದೇಶದ ಬಹುರೂಪದ ಕಲೆಗಳು ಕುಂಭಮೇಳದಲ್ಲಿ ಮೇಳೈಸಿಕೊಂಡು ದೇಶದ ಸಾಂಸ್ಕೃತಿಕ ವೈಭವವನ್ನು ಸಂಪನ್ನಗೊಳಿಸಿದವು. ಇನ್ನೂ ಬಹು ದಿನಗಳ ಕಾಲ ನಡೆಯುವ ಅತ್ಯಂತ ವೈಭವದ ಕುಂಭಮೇಳದಲ್ಲಿ ಯಕ್ಷಗಾನ ಪ್ರದರ್ಶಿಸಲು ಅವಕಾಶ ಸಿಕ್ಕಿದ್ದು ಮಕ್ಕಳ ಮೇಳದ ಭಾಗ್ಯ. ಗಂಗಾನದೀ ತೀರದಲ್ಲಿ, ತ್ರಿವೇಣಿ ಸಂಗಮದಲ್ಲಿ ನಮ್ಮ ಕಲೆಯ ಪ್ರದರ್ಶನದ ಭಾಗ್ಯ ಪಡೆದ ಚಿಣ್ಣರು ಉಲಿದರು, ನಲಿದರು, ಕುಣಿದರು. 

ಸಂಸ್ಕಾರ ಭಾರತಿಯ ಚಂದ್ರಶೇಖರ ಶೆಟ್ಟಿಯವರ ನೇತೃತ್ವದಲ್ಲಿ ಸರಯೂ ತಂಡವು “ಗುರುದಕ್ಷಿಣೆ’ ಎಂಬ ಕಥಾ ಭಾಗವನ್ನು ಪ್ರದರ್ಶಿಸಿತು. ಕೃಷ್ಣ ಬಲರಾಮರು ಗುರು ಸಾಂದೀಪನಿ ಮಹರ್ಷಿಗಳಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದು, 64 ದಿನಗಳಲ್ಲಿ ಶಿಕ್ಷಣ ಪಡೆದು ಊರಿಗೆ ತೆರಳಲು ಸಿದ್ಧರಾದಾಗ, ಗುರುದಕ್ಷಿಣೆಯ ಬಗ್ಗೆ ಪ್ರಸ್ತಾಪಿಸುತ್ತಾರೆ. 

ಗುರು ಪತ್ನಿಯ ಮೂಲಕ ತಿಳಿದು ಬಂದ ವಿಚಾರದಂತೆ ಕಳೆದ ಗುರು ಪುತ್ರನನ್ನು ಮರಳಿ ಪಡೆಯುವುದಕ್ಕಾಗಿ ಗುರುವಿನ ಆಶೀರ್ವಾದ ಪಡೆದು ತೆರಳುತ್ತಾರೆ. ಪ್ರಭಾಸ ಕ್ಷೇತ್ರದಲ್ಲಿ ವಾರಣಾಸಿಯ ಸಂಗಮ ಕ್ಷೇತ್ರಕ್ಕೆ ಬಂದು, ವರುಣದೇವನಲ್ಲಿ ವಿಚಾರಿಸುತ್ತಾರೆ. ಅವನು ಸಮುದ್ರಗಳ್ಳ ಪಂಚಜನನ ಬಗ್ಗೆ ತಿಳಿಸುತ್ತಾನೆ. ಕೃಷ್ಣನು ಪಂಚಜನನನ್ನು ಕೊಂದು, ಅವನ ಕೊನೆಯಾಸೆಯಂತೆ ಆತನ ಬೆನ್ನುಮೂಳೆಯಿಂದ ಶಂಖವೊಂದನ್ನು ರಚಿಸಿ, ಅದಕ್ಕೆ “ಪಾಂಚಜನ್ಯ’ ಎಂದು ಹೆಸರಿಟ್ಟು ತನ್ನ ಕೈಯಾಯುಧ ಭೂಷಣವಾಗಿ ಸ್ವೀಕರಿಸುತ್ತಾನೆ. ನಂತರ ಯಮಲೋಕಕ್ಕೆ ಬಂದು, ಗುರುಪುತ್ರನ ಬಗ್ಗೆ ಕೇಳಿದ. 

ಯಮ ನಿರಾಕರಿಸಿದಾಗ ಅವನಿಗೆ ವಿಶ್ವರೂಪವನ್ನು ತೋರುತ್ತಾನೆ. ಆಗ ಯಮಧರ್ಮನು ನಿಜ ಸಂಗತಿಯನ್ನರಿತು ಆತ್ಮಸ್ವರೂಪದಲ್ಲಿ ಗುರು ಪುತ್ರನನ್ನು ನೀಡಿ ಕಳುಹಿಸುತ್ತಾನೆ. ಕೃಷ್ಣ ಬಲರಾಮರು ಬಂದು ಗುರು ದಕ್ಷಿಣೆಯಾಗಿ ನೀಡುವುದೇ ಈ ಕಥೆಯ ಸಾರಾಂಶ. ವಾರಣಾಸಿಯಲ್ಲೇ ಈ ಕಥೆ ಜರುಗಿದ್ದುದ್ದರಿಂದ ಜನರಲ್ಲಿ ವಾಸ್ತವಿಕತೆಯನ್ನು ತಂದಿತು. 

ರವಿ ಅಲೆವೂರಾಯರ ನಿರ್ದೇಶನದ ಈ ತಂಡದಲ್ಲಿ ಹಿಮ್ಮೇಳದಲ್ಲಿ ಭಾಗವತರಾಗಿ ಸಂಜೀವ ಕಜೆಪದವು, ಚೆಂಡೆಯಲ್ಲಿ ಪ್ರಜ್ಞೆàಶ ಭಟ್‌ ಮದ್ದಳೆಯಲ್ಲಿ ಕೃಷ್ಣಯ್ಯ ಆಚಾರ್ಯ ಸಹಕರಿಸಿದರು. ಮುಮ್ಮೇಳದಲ್ಲಿ ರವಿ ಅಲೆವೂರಾಯ ವರ್ಕಾಡಿ, ಹರ್ಷಿತ್‌ ಶೆಟ್ಟಿ, ಅಶ್ವಿ‌ತ್‌ ಶೆಟ್ಟಿ, ಅಕ್ಷಯ್‌ ಸಿ.ಪೂಜಾರಿ, ನಿಖೀಲ್‌ ಕೋಟ್ಯಾನ್‌, ವಿಜಯಲಕ್ಷ್ಮೀ ಎಲ….ನಿಡ್ವಣ್ಣಾಯ, ಮಲ್ಲಿಕಾ ಜೀವನ್‌ ಸಹಕರಿಸಿದರು. 

ಟಾಪ್ ನ್ಯೂಸ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.