ಕಳಚಿದ ಕಪ್ಪು ಮುಂಡಾಸಿನ ಕೊಂಡಿ ಆಲೂರು ತೇಜ


Team Udayavani, Jun 7, 2019, 5:50 AM IST

f-4

ಬಡಗುತಿಟ್ಟಿನಲ್ಲಿ ಕಪ್ಪು ಮುಂಡಾಸಿನ ಕಲಾವಿದರೆಂದೇ ಗುರುತಿಸಲ್ಪಟ್ಟ ಆಲೂರು ತೇಜನವರು (76) ಇತ್ತೀಚೆಗೆ ವಿಧಿವಶರಾದರು.ಅವರ ಅಗಲುವಿಕೆಯಿಂದ ನಡುಪ್ರಾಂತ್ಯದ ವೈವಿಧ್ಯಮಯವಾದ ಹಾರಾಡಿ ಶೈಲಿಯ ಕಪ್ಪುಮುಂಡಾಸು ಪರಂಪರೆಯ ಕೊಂಡಿಯೊಂದು ಕಳಚಿದಂತಾಗಿದೆ.

ಮಾರಣಕಟ್ಟೆ ಸಮೀಪ ಆಲೂರುನಲ್ಲಿ ಜನಿಸಿದ ತೇಜ ಗುರು ವೀರಭದ್ರ ನಾಯ್ಕರಲ್ಲಿ ಹೆಜ್ಜೆಗಾರಿಕೆ ಕಲಿತು ಮಾರಣಕಟ್ಟೆ ಮೇಳದಲ್ಲಿ ಗೆಜ್ಜೆ ಕಟ್ಟಿದರು.ಘಟಾನುಘಟಿ ಕಲಾದರೊಂದಿಗೆ ಪಳಗಿ ಪರಿಪೂರ್ಣ ಮುಂಡಾಸು ವೇಷಧಾರಿಯಾಗಿ ಪ್ರಸಿದ್ಧರಾದರು. ವ್ರಷಕೇತು,ಪ್ರದ್ಯುಮ್ನ,ವಿದ್ಯುನ್ಮಾಲಿ, ಶೂರಸೇನ, ಲೋಹಿತನೇತ್ರ ಮುಂತಾದ ಅವರ ಮುಂಡಾಸು ವೇಷಗಳು ಪ್ರಸಿದ್ಧಿ ಪಡೆದವು. ಅವರಿಗೆ ವಿಶೇಷವಾದ ಕೀರ್ತಿ ತಂದ ಪಾತ್ರ ಅಭಿಮನ್ಯು ಕಾಳಗದ ಕಪ್ಪು ಮುಂಡಾಸಿನ ಕೋಟೆ ಕರ್ಣ.ಹಾರಾಡಿ ಶೈಲಿಯಲ್ಲಿ ಎಡಬಲ ಭುಜಗಳು ಒಂದೇ ರೇಖೆಯಲ್ಲಿ ಇರುವ ಹಾಗೆ ಕಟ್ಟು ಮೀಶೆಯಿಂದ ಕಂಗೊಳಿಸುವ ಸಾಂಪ್ರದಾಯಿಕವಾಗಿ ಬರೆದ ಗಲ್ಲಗಳಿಂದ ಕೂಡಿದ ಅವರ ಕೋಟೆ ಕರ್ಣನ ವೇಷವನ್ನು ನೋಡುವುದೇ ಕಣ್ಣಿಗೆ ಹಬ್ಬ. ಈಗಿನಂತೆ ಪುನಾರಾವರ್ತನೆಯೊಂದಿಗೆ ನಿಧಾನವಾಗಿ ಆದಿತಾಳ-ಏಕ-ಕೋರೆ ತಾಳ ಬಳಸದೆ ಅಭಿಮನ್ಯುವನ್ನು ತತ್ತತೈಯೊಂದಿಗೆ ಎಲವೋ ಬಾಲಕನೆ ಕೇಳು… ಎಂದು ವೀರರಸದಲ್ಲೇ ಮಾತನಾಡಿಸುವ ಪರಿ ಮೈನವಿರೇಳಿಸುತ್ತಿತ್ತು.

ತೇಜನವರ ಸುದೀರ್ಘ‌ 23 ವರ್ಷದ ಸೇವೆ ಮಂದಾರ್ತಿ ಮೇಳದಲ್ಲಿ.ಅದೂ ಮಂದಾರ್ತಿ ಮೇಳಕ್ಕೆ ಹರಕೆ ಆಟಗಳ ಕೊರತೆ ಇದ್ದ ಕಾಲದಲ್ಲಿ.ಹೆಗ್ಗುಂಜೆ ಭೋಜರಾಜ ಹೆಗಡೆಯವರ ಯಜಮಾನಿಕೆಯಲ್ಲಿ ಮೇಳಕ್ಕೆ ಹರಕೆ ಆಟದ ಕೊರತೆ ಇದು,ª ಕಾಡಿಬೇಡಿ ಆಟ ಮಾಡಬೇಕಿದ್ದ ಕಾಲದಲ್ಲಿ ಭೋಜರಾಜ ಹೆಗ್ಡೆಯವರ ಹೆಗಲಿಗೆ ಹೆಗಲುಕೊಟ್ಟು ಅವರ ಮ್ಯಾನೇಜರ್‌ ಆಗಿ ಆಟ ಬುಕ್ಕಿಂಗ್‌ ಮಾಡುವ ಕಾಯಕವನ್ನು ಹಗಲಿಗೆ ಮಾಡಿ ರಾತ್ರಿ ವೇಷಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದರು.ಆಟದ ಕೊರತೆಯನ್ನು ತುಂಬಿಸಲು ಯಕ್ಷಲೋಕ ಜಯ,ರೂಪಶ್ರೀ,ರತ್ನಶ್ರೀ,ಹರ್ಷವರ್ದನ ಚರಿತ್ರೆ,ಪುಷ್ಪವೇಣಿ ಪರಿಣಯ ಮುಂತಾದ ಆಧುನಿಕ ಪ್ರಸಂಗಗಳು ಇವರ ಕಾಲದಲ್ಲಿ ಮಂದಾರ್ತಿ ಮೇಳದಲ್ಲಿ ಪ್ರದರ್ಶಿಸಲ್ಪಟ್ಟವು. ಮದು-ಕೈಟಭ, ವೀರಮಣಿ, ಶಲ್ಯ , ತಾಮ್ರಧ್ವಜ, ಕೌಂಡ್ಲಿàಕ ಮುಂತಾದಅವರ ಮುಂಡಾಸು ವೇಷಗಳು ರಂಜಿಸುತಿದ್ದವು. ಹಂಸದ್ವಜ,ಪರಶುರಾಮ,ಭೀಷ್ಮ, ಕರ್ಣ,ಋತುಪರ್ಣ ಮೊದಲಾದ ಎರಡನೇ ವೇಷ ,ಪುರುಷ ವೇಷಗಳಲ್ಲೂ ಸೈ ಎನಿಸಿದ್ದರು.ಡಾ| ಶಿವರಾಮ ಕಾರಂತರ ಬ್ಯಾಲೆಯಲ್ಲೂ ದೇಶ ಸಂಚಾರ ಮಾಡಿದ ಅವರು ಅಲ್ಲಿ ಕೋರೆ ಮುಂಡಾಸಿನ ಕಿರಾತ ಮತ್ತು ಮುಂಡಾಸು ವೇಷಗಳಿಗೆ ಜೀವ ತೊಂಬಿದ್ದರು.

ಪ್ರೊ|ಎಸ್‌ವಿ.ಉದಯ ಕುಮಾರ ಶೆಟ್ಟಿ

ಟಾಪ್ ನ್ಯೂಸ್

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.