ಅಸ್ತಂಗತರಾದ ಅಸಾಮಾನ್ಯ ಕಲಾವಿದ ಕೊಪ್ಪಾಟೆ ಮುತ್ತ ಗೌಡ


Team Udayavani, Jan 17, 2020, 1:05 AM IST

an-48

ದಶಕಗಳ ಕಾಲ ಬಡಗುತಿಟ್ಟು ರಂಗಸ್ಥಳವನ್ನು ಆಳಿದರೂ ಬಳಿಕ ಗೋಡೆಯೂ ಇಲ್ಲದ ಮುರುಕುಲು ಗುಡಿಸಿಲಿನಲ್ಲಿ ವಾಸವಾಗಿ, ಮಲಗಿದಲ್ಲಿಯೇ ಕಳೆಯುವ ಸ್ಥಿತಿಯಲ್ಲಿದ್ದ ಮೇರು ಕಲಾವಿದ ಕೊಪ್ಪಾಟೆ ಮುತ್ತ ಗೌಡರು ಇಹಲೋಕ ತ್ಯಜಿಸಿದ್ದಾರೆ. 49 ವರ್ಷ ತಿರುಗಾಟ ಮಾಡಿದ ಮುತ್ತ ಗೌಡರು 36 ವರ್ಷ ಎರಡನೇ ವೇಷದಾರಿಯಾಗಿ ಮೆರೆದವರು. 21 ವರ್ಷ ಮಾರಣಕಟ್ಟೆ ಮೇಳವೊಂದರಲ್ಲೇ ದುಡಿದ ಇವರು ಸುಮಾರು 9 ವರ್ಷ ಅಲ್ಲಿಯೇ ಎರಡನೇ ವೇಷಧಾರಿಯಾಗಿದ್ದ‌ರು.ಅನಂತರ ಸಾಲಿಗ್ರಾಮ,ಪೆರ್ಡೂರು ಇಡಗುಂಜಿ, ಕಳವಾಡಿ, ಮಂದಾರ್ತಿ ಮೇಳಗಳಲ್ಲಿ ಸೇವೆ ಸಲ್ಲಿಸಿದ ಅವರು ಕೊನೆಯ ಒಂದುವರ್ಷ ಸೌಕೂರು ಮೇಳದಲ್ಲಿ ನಿರ್ವಹಿಸಿದ ರುಕ್ಮಾಗದ ಚರಿತ್ರೆಯ ವ್ರತದ ರುಕ್ಮಾಗದನ ಪಾತ್ರ ವಾಕ್ಪಟುತ್ವದಿಂದ ಜನಪ್ರಿಯವಾಗಿತ್ತು.

ಆಲೂರು ಗ್ರಾಮದ ಕೊಪ್ಪಾಟೆ ಎಂಬಲ್ಲಿ ಬೆಳೆದದ್ದರಿಂದ ಇವರಿಗೆ ಕೊಪ್ಪಾಟೆ ಎಂಬುದೇ ಜನಜನಿತ ಹೆಸರಾಯಿತು. ಬಾಲ್ಯದಿಂದಲೇ ಯಕ್ಷಗಾನದ ಆಸಕ್ತಿ ಬೆಳೆಸಿಕೊಂಡ ಇವರು ಕಲಿತದ್ದು ಕೇವಲ 3ನೇ ತರಗತಿ. ಮಂದಾರ್ತಿ ಮತ್ತು ಮಾರಣಕಟ್ಟೆ ಮೇಳದ ಜೋಡಾಟವನ್ನು ರಾತ್ರಿಯಿಡೀ ನೋಡಿದ ಗೌಡರು ಗುರು ವೀರಭದ್ರ ನಾಯಕ್‌ ಮತ್ತು ಶಿರಿಯಾರ ಮಂಜು ನಾಯ್ಕರ ಮಟಪಾಡಿ ಶೈಲಿಯ ಕಿರುಹೆಜ್ಜೆಗೆ ಮಾರುಹೋಗಿ ಮರುದಿನವೇ ವೀರಭದ್ರ ನಾಯ್ಕರ ಮನೆಗೆ ಹೋಗಿ ಅವ ರಿಂದ ಶಿಷ್ಯ ನಾಗಿ ಸ್ವೀಕೃತ ರಾದರು.

ನಾಯ್ಕರು ತಮ್ಮ ಶಿಷ್ಯನಿಗೆ ಕೇವಲ ಕುಣಿತ ಮಾತ್ರವಲ್ಲ ಮಹಾ ಭಾರತ ಮತ್ತು ರಾಮಾ ಯಣದ ಪ್ರತೀ ಪಾತ್ರದ ಚಿತ್ರಣವನ್ನು ನೀಡಿದರು.ರಾವಣ-ರಾಮ, ಭೀಷ್ಮ, ಪರಶುರಾಮ,ಅಂಗದ, ಪ್ರಹಸ್ತ,ವಾಲಿ, ಸುಗ್ರೀವ , ಕೌರವ, ಭೀಮ ಹೀಗೆ ನಾಯಕ ಪ್ರತಿನಾಯಕ ಪಾತ್ರದಲ್ಲಿ ಮಿಂಚಿದರು.ಕಾಳಿಂಗ ನಾವಡರ ಭಾಗವತಿಕೆಯಲ್ಲಿ ಕೃಷ್ಣಾರ್ಜುನದ ಅರ್ಜುನ ನಡುತಿಟ್ಟು ಪರಂಪರೆಯ ಅತ್ಯುನ್ನತ ಪಾತ್ರವಾಗಿ ಮೂಡಿಬಂತು.ಸಾಲಿಗ್ರಾಮ ಮೇಳದಲ್ಲಿ ಅವರಿಗೆ ಖ್ಯಾತಿ ತಂದ ಪಾತ್ರ ಪೌರಾಣಿಕ ಪ್ರಸಂಗ ಜ್ವಾಲಾ ದ ಅಗ್ನಿ.ಬೆಂಕಿಚೆಂಡಿನಂತೆ ಅವರು ರಂಗವನ್ನು ಪುಡಿ ಮಾಡುತ್ತಿದ ದೃಶ್ಯ ಅಸಾಧಾರಣವಾಗಿತ್ತು. ಅರಾಟೆಯವರ ಜ್ವಾಲೆ,ಜಲವಳ್ಳಿಯವರ ನೀಲದ್ವಜ ರಾಮ ನಾಯರಿಯವರ ಮಜನ ಮಂಜರಿ,ಯಾಜಿಯವರ ಪ್ರವೀರ,ಶಿರಿಯಾರ ಮಂಜುನಾಯ್ಕರ ಅರ್ಜುನನ ಪಾತ್ರಗಳಿಗೆ ಕೊಪ್ಪಾಟೆಯವರ ಅಗ್ನಿ ಪಾತ್ರದಿಂದ ಪೌರಾಣಿಕ ಪ್ರಸಂಗವೊಂದು ದಾಖಲೆಯ ಪ್ರದರ್ಶನ ಕಂಡಿತ್ತು.

– ಪ್ರೊ| ಎಸ್‌.ವಿ.ಉದಯ ಕುಮಾರ ಶೆಟ್ಟಿ

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.