ಇನ್ನಿಲ್ಲವಾದ ಭಾಗವತ ನಗರ ಸುಬ್ರಹ್ಮಣ್ಯ ಆಚಾರ್‌


Team Udayavani, Feb 7, 2020, 4:00 AM IST

big-18

ಸುಂದರವಾದ ಆಳಂಗ ಶರೀರ-ಶಾರೀರ, ಸ್ಪಷ್ಟ ಉಚ್ಚಾರ, ಅಪೂರ್ವವಾದ ರಂಗತಂತ್ರ, ಪ್ರಸಂಗ ನಡೆಯಿಂದ ಅಸಂಖ್ಯಾತ ಯಕ್ಷಗಾನ ಪ್ರಿಯರ ಮನಗೆದ್ದ ಮಂದಾರ್ತಿ ಮೇಳದ ಪ್ರಧಾನ ಭಾಗವತ ನಗರ ಸುಬ್ರಹ್ಮಣ್ಯ ಆಚಾರ್‌ ದುರಂತವಾಗಿ ಅಭಿಮಾನಿಗಳನ್ನು ಅಗಲಿದ್ದಾರೆ.ಅವರಿಗೆ 43 ವರ್ಷವಷ್ಟೇ ವಯಸ್ಸಾಗಿತ್ತು.

ಕಣಕಿಬೆಳ್ಳೂರಿನಲ್ಲಿ ಜನಿಸಿದ ಅವರು ಬಾಲ್ಯದಲ್ಲಿಯೇ ಯಕ್ಷಗಾನದ ಸೆಳೆತಕ್ಕೊಳಗಾಗಿ ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಬಡಗುತಿಟ್ಟಿನ ಕುಂಜಾಲು ಶೈಲಿಯ ಪ್ರಾತಿನಿಧಿಕ ಭಾಗವತರಾಗಿ ಮೂಡಿಬಂದರು. ನೃತ್ಯ ಅಭ್ಯಾಸ ಮಾಡಿ, ಮದ್ದಳೆ ವಾದನವನ್ನೂ ಕಲಿತರು.

ಪ್ರಥಮವಾಗಿ ಗೋಳಿಗರಡಿ ಮೇಳದಲ್ಲಿ ಸಂಗೀತಗಾರನಾಗಿ ಸೇರಿಕೊಂಡ ಅವರು ಬಳಿಕ ಎರಡು ವರ್ಷ ಕಮಲಶಿಲೆ ಮೇಳದಲ್ಲಿ ಸಹ ಭಾಗವತರಾಗಿ ಸೇವೆಸಲ್ಲಿಸಿದ್ದರು.ಅವರ ಭಾಗವತಿಕೆಯ ವಿವಿಧ ಮಜಲುಗಳು ಪ್ರೇಕ್ಷಕರಿಗೆ ತಲುಪಿದ್ದು ಮಂದಾರ್ತಿ ಮೇಳದ ತಿರುಗಾಟದಲ್ಲಿ. ಭಾಗವತಿಕೆಗೆ ಪರಂಪರೆಯನ್ನು ಸೇರಿಸಿ ನಿತ್ಯ ನೂತನತೆಯನ್ನು ಪ್ರೇಕ್ಷಕರಿಗೆ ಅವರು ಬಡಿಸುತ್ತಿದ್ದ ರೀತಿ ಅಸಾಧಾರಣ. ರಾಮಾಯಣ ಭಾರತ ಪ್ರಸಂಗಗಳ ಪದ್ಯಗಳಲ್ಲಿ ಅಪಾರವಾದ ಹಿಡಿತದೊಂದಿಗೆ ಅವರು ನಿರ್ದೇಶಿಸುತ್ತಿದ್ದ ರಂಗನಡೆ ಅಪೂರ್ವವಾಗಿತ್ತು. ದೈವೀದತ್ತವಾಗಿ ದಕ್ಕಿರುವ ಏರು ಶ್ರುತಿಯ ಕಂಠ, ಕಲಾವಿದರನ್ನು ದುಡಿಸಿಕೊಳ್ಳುತ್ತಿದ್ದ ರೀತಿಯಿಂದ ಮಂದಾರ್ತಿ ಐದೂ ಮೇಳದ ಕಲಾವಿದರ ಪ್ರೀತಿಗೆ ಪಾತ್ರರಾಗಿದ್ದರು.

ಬಯಲಾಟ ವಲಯದಲ್ಲಿ ಅತ್ಯುನ್ನತ ಸ್ಥಾನ ಪಡೆದ ಅವರು ಯಕ್ಷಗಾನದ ಗುರುಗಳಾಗಿ ನಾಲ್ಕು ವರ್ಷ ಉಡುಪಿ ಕೇಂದ್ರದಲ್ಲಿ ಸೇವೆ ಸಲ್ಲಿಸಿ ಅನೇಕ ಭಾಗವತರನ್ನು ತರಬೇತಿಗೊಳಿ ಸಿದ್ದಾರೆ.ಜನ್ಸಾಲೆ ರಾಘವೇಂದ್ರ ಆಚಾರ್ಯ, ಚಂದ್ರಕಾಂತ ರಾವ್‌, ಮೊಗೆಬೆಟ್ಟು ಪ್ರಸಾದ ಕುಮಾರ್‌, ಸುದೀಪ ಕುಮಾರ್‌ ಶೆಟ್ಟಿ, ಗಣೇಶ ಅಚಾರ್‌ ಮುಂತಾದವರು ಅವರ ಗರಡಿಯಲ್ಲೇ ಪಳಗಿದವರು.

ಮಳೆಗಾಲದಲ್ಲಿ ಅವರೇ ಯೋಜಿಸಿ ನಿರ್ಧರಿಸಿದ ನೂತನ ಯಕ್ಷ ಪ್ರಯೋಗವೇ ನಡುಮನೆಯಲ್ಲಿ ಯಕ್ಷ ಗಾಯನ, ಮೊದಲು ಕೇವಲ ಪೌರಾಣಿಕ ಪ್ರಸಂಗಗಳ ಪದ್ಯವನ್ನು ಮದ್ದಳೆ ಜೊತೆಗೆ ಮನೆಮನೆಯಲ್ಲಿ ಹಾಡಿ ಭಾಗವತಿಕೆಗೆ ಅಭಿಮಾನಿಗಳನ್ನೇ ಸೃಷ್ಟಿಸಿ ಮೊದಲ ವರ್ಷದಲ್ಲೇ 500 ಪ್ರಯೋಗಗಳನ್ನು ಮಾಡಿ ದಾಖಲೆ ನಿರ್ಮಿಸಿದ್ದರು.ಅನಂತರ ರೇಣುಕಾ ಮಹಾತ್ಮೆ, ಸಾಲ್ವ ಶೃಂಗಾರ, ಚಿತ್ರಾಕ್ಷಿ ಕಲ್ಯಾಣ, ದಕ್ಷ ಯಜ್ಞ ಮುಂತಾದ ಪೌರಾಣಿಕ ಪ್ರಸಂಗಳನ್ನು ಎರಡು ತಾಸಿಗೆ ಸೀಮಿತಗೊಳಿಸಿ ಯಶಸ್ವಿ ಪ್ರದರ್ಶನ ನೀಡಿದ್ದರು. ತಾಳವೇ ಹಾಕದೆ ಲಯದಲ್ಲಿ ಪದ್ಯ ಹೇಳುವ ಕ್ರಮ, ಅವರದ್ದೇ ಆದ ರಾಗದ ಸಂಚಾರ ಕ್ರಮ, ಎಷ್ಟೇ ಸಾರಿ ಕೇಳಿದರೂ ಹೊಸತೆನಿಸುವ ರಾಗ ಮಾಧುರ್ಯ, ಹಾಡುಗಾರಿಕೆಯಲ್ಲಿ ತನ್ನತನ ಮತ್ತು ಸರ್ವರನ್ನೂ ಆಕರ್ಷಿಸುವ ಗಂಧರ್ವ ಗುಣವನ್ನು ಅವರ ಪದ್ಯಗಳಲ್ಲಿ ಕಾಣಬಹುದು.ಏರು ಶ್ರುತಿಯ ಕಂಠದಿಂದ ಮೂಡಿಬರುವ ಭಾಮಿನಿ ಪದ್ಯಗಳು ಕರ್ಣಾನಂದ ನೀಡುತ್ತಿದ್ದವು.

ಅಬೇರಿ, ವೃಂದಾವನ ಸಾರಂಗ, ಬಹುದಾರಿ,ದೇಶಿ, ಚಕ್ರವಾಕ, ವಾಸಂತಿ, ಚಾಂದ್‌, ಮಧ್ಯಮಾವತಿ ರಾಗಗಳಲ್ಲಿ ಅಪಾರ ಹಿಡಿತವಿದ್ದು ರತ್ನಾವತಿ ಕಲ್ಯಾಣದ “ಸರಿಯಾರೀ ತರುಣಿ ಮಣಿಗೆ’ ಮತ್ತು ಪಟ್ಟಾಭಿಷೇಕದ ಬಹುದಾರಿ ರಾಗದಲ್ಲಿ “ಜನಕಾ ಕಿರುಜನನಿಯಹ ವನಜಮುಖೀ ಕೈಕೇಯಿ’ ಇವೆರಡು ಪದ್ಯ ಸಾಕು ಅವರ ಭಾಗವತಿಕೆಯ ಆಳ ವಿಸ್ತಾರ ಅರಿಯಲು.

-ಪ್ರೊ| ಎಸ್‌.ವಿ.ಉದಯ ಕುಮಾರ ಶೆಟ್ಟಿ

ಟಾಪ್ ನ್ಯೂಸ್

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

8

Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

7-snake

Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

B. Y. Raghavendra: “ಕಾಂಗ್ರೆಸ್‌ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’

B. Y. Raghavendra: “ಕಾಂಗ್ರೆಸ್‌ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.