ಹಿರಿಯರ ಮೋಡಿ ಮಾಡಿದ ಎಳೆಯರ ಯಕ್ಷಗಾನ


Team Udayavani, Jul 13, 2018, 6:00 AM IST

b-2.jpg

ಅಪ್ಪನ ಮಾತು ರಾಜಾದೇಶವನ್ನು ಮೀರುವಂತಿಲ್ಲ. ಇತ್ತ ಪ್ರೀತಿಯ ಮಡದಿಯ ಮಾತನ್ನು ತಳ್ಳಿ ಹಾಕುವಂತಿಲ್ಲ. ಯಾವುದನ್ನು ಧಿಕ್ಕರಿಸಿದರೂ ಇಕ್ಕಟ್ಟಿನಲ್ಲಿ ಸಿಲುಕುವ ಆತಂಕ. ಮಡದಿಯ ಜತೆಗಿನ ಈ ಆತಂಕದ ಕ್ಷಣಗಳನ್ನು ಕಣ್ಣಿಗೆ ಕಟ್ಟುವಂತೆ ಹಿರಿಯರೂ ತಲೆದೂಗುವಂತೆ ಕಟ್ಟಿಕೊಟ್ಟದ್ದು ಸುಧನ್ವ ಪ್ರಭಾವತಿಯರು. ಹಾಗೋ ಹೀಗೋ ಮಡದಿಯ ಬೇಡಿಕೆಗೆ ಸ್ಪಂದಿಸಿ ವೇಳೆ ಮೀರಿತು ಎಂದು ತಂದೆ ಹಂಸಧ್ವಜನಿಂದ ಶಿಕ್ಷೆಗೆ ಗುರಿಯಾಗಿ ಶ್ರೀಹರಿಯ ದಯೆಯಿಂದ ಯುದ್ಧರಂಗದಲ್ಲಿ ವೀರಾವೇಶದಿಂದ ಹೋರಾಡಿ ಶ್ರೀಕೃಷ್ಣನ ದರ್ಶನ ಮಾಡಿದ ಸುಧನ್ವ (ಪಾತ್ರಧಾರಿ ಅಲ್ಲ) ಇವನೇಯಾ ಎಂಬ ಅನುಮಾನ ಕಾಡುವಂತಹ ಪಾತ್ರ ಪೋಷಣೆ. ಅಸಲಿಗೆ ಸುಧನ್ವ ಪಾತ್ರವನ್ನು ಇಬ್ಬರು ಮಾಡಿದ್ದರು. ಆದರೆ ಎಲ್ಲಿಯೂ ಭಾವಸುರಣೆಗೆ ಧಕ್ಕೆಯಾಗದಂತೆ ಒಟ್ಟು ಪ್ರಸಂಗದ ಚೌಕಟ್ಟಿಗೆ ಎಳೆತನದಿಂದ ಅಡ್ಡಿಯಾಗದಂತೆ ಅಭಿನಯಿಸಿದ್ದರು.

ಉಡುಪಿ ರಾಜಾಂಗಣದಲ್ಲಿ ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನ ಸಹಯೋಗದಲ್ಲಿ ಸೋದೆ ಹಾಗೂ ಪಲಿಮಾರು ಮಠದ ಆಶ್ರಯದಲ್ಲಿ ತೆಂಕುತಿಟ್ಟು ಯಕ್ಷಗಾನ ತರಬೇತಿ ತರಗತಿಯ ವಾರ್ಷಿಕೋತ್ಸವ ಪ್ರಯುಕ್ತ ಮಕ್ಕಳಿಂದ ನಡೆದ ಸುಧನ್ವಾರ್ಜುನ ಹಾಗೂ ತರಣಿಸೇನ ಕಾಳಗ ಹಿರಿಯರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.

ಕಟೀಲು ಮೇಳದ ಕಲಾವಿದ ರಾಕೇಶ್‌ ರೈ ಅಡ್ಕ ಅವರಿಂದ ಸೂಕ್ತ ತರಬೇತಿ ಪಡೆದು ಸಿರಿಬಾಗಿಲು ರಾಮಕೃಷ್ಣ ಮಯ್ಯರ ಸಮರ್ಥ ರಂಗ ನಿರ್ದೇಶನದಲ್ಲಿ ಎರಡೂ ಪ್ರಸಂಗಗಳು ಪ್ರದರ್ಶನಗೊಂಡವು. ತರಣಿಸೇನ ಕಾಳಗ ಆದ ಬಳಿಕ ಚಿಕ್ಕದಾಗಿ ಸಭಾ ಕಾರ್ಯಕ್ರಮ ನಡೆಯಿತು. ಇದರಲ್ಲಿ ಸೋದೆ ಮಠಾಧೀಶರು ಹಾಗೂ ಪರ್ಯಾಯ ಪಲಿಮಾರು ಮಠಾಧೀಶರು ಮಕ್ಕಳ ಪ್ರದರ್ಶನಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ಸೋದೆ ಮಠದಲ್ಲಿಯೇ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಲಾಗಿತ್ತು. ಮಕ್ಕಳ ಜತೆ ಕೆಲವು ಪಾತ್ರಗಳನ್ನು ವಯಸ್ಕರೂ ಮಾಡಿ ಮಕ್ಕಳಿಗೆ ಪ್ರೋತ್ಸಾಹ ಕೊಟ್ಟರು.

ತರಣಿಸೇನ ಕಾಳಗದಲ್ಲಿ ರಾಮ-ನಾಗರಾಜ ಭಟ್‌, ಲಕ್ಷ್ಮಣ -ಧನರಾಜ್‌, ವಿಭೀಷಣ-ನಿರುಪಮ, ಜಾಂಬವಂತ-ಶರತ್‌, ನಳ-ಸುಧನ್ವ ಮುಂಡ್ಕೂರ್‌, ನೀಲ-ಸುಮನ್ಯು ಮಂಡ್ಕೂರ್‌, ಸುಗ್ರೀವ-ವಿಷ್ಣುಪಾದ, ರಾವಣ-ಡಾ| ಸುನಿಲ್‌ ಮುಂಡ್ಕೂರ್‌, ರಾವಣದೂತ-ವಾದಿರಾಜ್‌, ತರಣಿ ಸೇನ1-ಶ್ರೀಶ ಕೆದಿಲಾಯ, 2-ಸಂದೀಪ್‌, ಸರಮೆ-ರವಿನಂದನ್‌, ಹನೂಮಂತ-ಗಿರಿರಾಜ್‌ ಹಾಗೂ 8 ಮಂದಿ ಕಪಿಗಳ ಪಾತ್ರ ಮಾಡಿದ್ದರು. 

ಸುಧನ್ವಾರ್ಜುನದಲ್ಲಿ ಅರ್ಜುನನಾಗಿ ಅಶ್ವಿ‌ತ್‌ ಸರಳಾಯ ಅಡೂರು, ವೃಷಕೇತುವಾಗಿ ವಿಶ್ವಮೇಧ, ಪ್ರದ್ಯುಮ್ನನಾಗಿ ಅರ್ಪಿತಾ, ನೀಲಧ್ವಜನಾಗಿ ಪ್ರಣಮ್ಯ ರಾವ್‌, ಯವನಾಶ್ವನಾಗಿ ಅನ್ವಿತಾ, ಸುಧನ್ನನಾಗಿ ವಿಂಧ್ಯ ಹಾಗೂ ಪ್ರಣಮ್ಯ ತಂತ್ರಿ, ಸುಗಭೆìಯಾಗಿ ಸೌಮ್ಯ, ಪ್ರಭಾವತಿಯಾಗಿ ಕಾವ್ಯ, ಅನುಸಾಲ್ವನಾಗಿ ಕೃಷ್ಣ ಪ್ರಕಾಶ್‌, ಹಂಸಧ್ವಜನಾಗಿ ನಾಗರಾಜ್‌ ಭಟ್‌, ಶಂಖನಾಗಿ ಮೋಹನ್‌, ಲಿಖೀತನಾಗಿ ಪ್ರಸನ್ನ ಆಚಾರ್‌, ಶ್ರೀಕೃಷ್ಣನಾಗಿ ಗಿರಿರಾಜ್‌ ಚೆನ್ನಾಗಿ ಪಾತ್ರ ನಿರ್ವಹಿಸಿದ್ದರು. 

ಹಿಮ್ಮೇಳದಲ್ಲಿ ಭಾಗವತರಾಗಿ ಹಿರಿಯ ಅನುಭವಿ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ ಹಾಗೂ ಶ್ರೀನಿವಾಸ ಬಳ್ಳಮಂಜ, ಮದ್ದಳೆಯಲ್ಲಿ ನೆಕ್ಕರೆಮೂಲೆ ಗಣೇಶ್‌ ಭಟ್‌, ಚೆಂಡೆಯಲ್ಲಿ ಮುರಾರು ಕಡಂಬಳಿತ್ತಾಯ, ಹಿಮ್ಮೇಳವನ್ನು ಕಳೆಗಟ್ಟಿಸಿದ್ದರು. ಪ್ರಸಂಗ ಎಲ್ಲಿಯೂ ಮಕ್ಕಳಾಟಿಕೆ ಎನಿಸಿಲ್ಲ. ಹಿರಿಯರ ಯಕ್ಷಗಾನದಂತೆಯೇ ಅಭಿನಯ ಸಾಮರ್ಥ್ಯ ಪ್ರದರ್ಶಿಸಿದರು. ಕೇವಲ ಸ್ವರಭಾರ ಹಾಗೂ ವೇಷದ ಗಾತ್ರ ಕಂಡು ಮಕ್ಕಳೆಂದು ಅರಿಯಬೇಕು ಅಷ್ಟೆ. 

ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

19-kushtagi

Kushtagi:ವಿದ್ಯುತ್‌ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.