ಶಿವ ಭಕ್ತಿ ವೀರಮಣಿಯಲ್ಲಿ ಮೊಳಗಿದ ಶಿವ-ರಾಮ ಕಾರುಣ್ಯ

ಗುರುಮಠ ಕಾಳಿಕಾಂಬಾ ದೇವಸ್ಥಾನದ ಪ್ರಸ್ತುತಿ

Team Udayavani, Sep 13, 2019, 5:00 AM IST

q-4

ಮೂಡಬಿದ್ರಿಯ ಗುರುಮಠ ಕಾಳಿಕಾಂಬಾ ದೇವಸ್ಥಾನದ ಸಭಾ ಭವನದಲ್ಲಿ 22ನೇ ವರ್ಷದ ಶ್ರಾವಣ ಮಾಸದ ವಿಶೇಷ ಪುಷ್ಪ ಪೂಜೆಯ ಪ್ರಯುಕ್ತ ಆ.18ರಂದು ಶಿವಭಕ್ತ ವೀರಮಣಿ ತಾಳಮದ್ದಳೆ ಜರುಗಿತು.

ಶಿವನ ಪರಮಭಕ್ತ ವೀರಮಣಿಯು ಅಪ್ರತಿಮ ಭಕ್ತಿಯಿಂದ ಶಿವನನ್ನು ತನ್ನವನನ್ನಾಗಿಸಿ ಮಗಳಾದ ಇಕ್ಷುಮತಿಯನ್ನು ಶಿವನಿಗೆ ಕೊಟ್ಟು ಮದುವೆ ಮಾಡಿ ಅಳಿಯನನ್ನಾಗಿ ಮಾಡಿಕೊಂಡು ತನ್ನ ಆಳ್ವಿಕೆಗೊಳಪಟ್ಟ ಜ್ಯೋತಿರ್ಮೇಧಪುರದಲ್ಲಿ ನೆಲೆ ನಿಲ್ಲುವಂತೆ ಮಾಡಿದ ಮಹಾನ್‌ ಶಿವಭಕ್ತನ ಕಥೆಯಿದು. ರಾವಣನನ್ನು ಕೊಂದ ಬ್ರಹ್ಮ ಹತ್ಯಾ ದೋಷ ಶಂಕೆಯ ನಿವಾರಣೆಗಾಗಿ ಶ್ರೀರಾಮಚಂದ್ರನು ಅಶ್ವಮೇಧ ಯಾಗ ಕೈಗೊಂಡಾಗ ಸಹೋದರ ಶತ್ರುಘ್ನನನ್ನು ಯಾಗಾಶ್ವದ ರಕ್ಷಣೆಗಾಗಿ ರಾಮಸೇನೆಯ ಸೇನಾಪತಿಯನ್ನಾಗಿ ಮಾಡುತ್ತಾನೆ. ಅಶ್ವಮೇಧದ ಕುದುರೆ ಊರೂರು ಸುತ್ತಿ ಜ್ಯೋತಿರ್ಮೇಧಕ್ಕೆ ಬರುತ್ತದೆ.ವೀರಮಣಿಯ ಮಕ್ಕಳಾದ ಶುಭಾಂಗ-ರುಕ್ಮಾಗರು ಅಶ್ವವನ್ನು ಕಟ್ಟಿ ಹಾಕುತ್ತಾರೆ. ಶತ್ರುಘ್ನನು ಪ್ರಶ್ನಿಸಲು ಬಂದಾಗ ಶುಭಾಂಗ-ರುಕ್ಮಾಗರು ಪ್ರತಿರೋಧವನ್ನು ತೋರಿದರೂ ಕೊನೆಗೆ ಶತ್ರುಘ್ನನ ಕೈಯಲ್ಲಿ ಹತರಾಗುತ್ತಾರೆ.ವೀರಮಣಿಯ ಕ್ಷೇತ್ರದಲ್ಲಿ ಶಿವನ ಸಾನ್ನಿಧ್ಯವನ್ನರಿತ ಶತ್ರುಘ್ನನು ರಾಮದಾಸ ಹನೂಮಂತನನ್ನು ವೀರಮಣಿ ಯಲ್ಲಿಗೆ ಸಂಧಾನಕ್ಕಾಗಿ ಕಳುಹಿಸುತ್ತಾನೆ.ಇಲ್ಲಿ ರಾಮಭಕ್ತಿ-ಶಿವಭಕ್ತಿಯ ಕುರಿತಾಗಿ ವಾಗ್ಯುದ್ಧ ತಾರಕ್ಕೇರುತ್ತದೆ.

ಸಂಧಾನ ವಿಫ‌ಲವಾದ ಪರಿಣಾಮ ಸ್ವತಃ ಶತ್ರುಘ್ನನೇ ಬಂದು ವೀರಮಣಿಗೆ ಬುದ್ಧಿವಾದ ಹೇಳುತ್ತಾನೆ. ಪ್ರಯೋಜನವಾಗದಿದ್ದಾಗ ವೀರಮಣಿಯನ್ನು ಶತ್ರುಘ್ನ ಯುದ್ಧದಲ್ಲಿ ಸಾಯಿಸುತ್ತಾನೆ.ತನ್ನ ಮಾವನ ಸಾವಿನಿಂದ ಕೆಂಡಾಮಂಡಲನಾದ ಶಿವನು ಧಾವಿಸಿ ಹನೂಮಂತನೊಂದಿಗೆ ಸಾವಿರ ವರುಷಗಳ ಕಾಲ ಯುದ್ಧ ನಡೆಸಿದರೂ ಸೋಲು ಗೆಲುವಿನ ನಿರ್ಣಯವಾಗದೆ,ಕೊನೆಗೆ ಹನೂಮಂತನ ರಾಮ ಭಕ್ತಿಗೆ ಹರನು ಮೆಚ್ಚಿ ವರವ ಕೊಡಲು ಇಚ್ಛಿಸುತ್ತಾನೆ. ರಾಮನ ಅನುಗ್ರಹಕ್ಕೆ ಒಳಗಾಗಿರುವ ತನಗೆ ಶಿವನ ವರದ ಅಗತ್ಯವಿಲ್ಲವೆಂದು ಖಡಾಖಂಡಿತವಾಗಿ ಹೇಳುತ್ತಾನೆ.ಕೊನೆಗೆ ಕಾಳಗದಲ್ಲಿ ಸತ್ತ ವೀರಮಣಿಯನ್ನು ಬದುಕಿಸಬೇಕೆಂಬ ಇಚ್ಚೆಯನ್ನು ಶಿವನು ಹನೂಮಂತನಲ್ಲಿ ವ್ಯಕ್ತಪಡಿಸಿದಾಗ ಕೊನೆಗೆ ಶ್ರೀ ರಾಮನಲ್ಲಿ ಹನೂಮಂತನು ಮೊರೆ ಹೋದಾಗ ರಾಮನು ಪ್ರತ್ಯಕ್ಷನಾಗಿ ಎರಡೂ ಕಡೆಯ ಸತ್ತವರನ್ನು ಬದುಕಿಸಲು ಹನೂಮನಿಗೆ ಸೂಚಿಸುತ್ತಾನೆ. ಹನೂಮನು ಸಂಜೀವಿನಿ ಯನ್ನು ತಂದು ಸತ್ತವರೆಲ್ಲರನ್ನೂ ಬದುಕಿಸುತ್ತಾನೆ.

ಶಿವ ಭಕ್ತನೇ ಆಗಲಿ ರಾಮ ಭಕ್ತನೇ ಆಗಲಿ,ಭಗವಂತನಿಗೆ ಭಕ್ತರಲ್ಲಿ ಭೇದವಿಲ್ಲ.ಪರಬ್ರಹ್ಮ ಸ್ವರೂಪಿಯಾದ ಬ್ರಹ್ಮ,ವಿಷ್ಣು,ಮಹೇಶ್ವರರೆಂಬ ತ್ರಿಮೂರ್ತಿಗಳ ಆರಾಧನೆ,ಅವರವರ ಭಾವಕ್ಕೆ ಅವರವರ ಭಕುತಿಗೆ ಹರನ ಭಕ್ತರಿಗೆ ಹರ,ಹರಿಯ ಭಕ್ತನಿಗೆ ಹರಿಯಾಗಿ ಆರ್ತರಿಗೆ ಕಾಣಿಸುತ್ತಾನೆ,ಕಾಯುತ್ತಾನೆ.ಇನ್ನಾದರೂ ಲೋಕದಲ್ಲಿ ಶೈವ-ವೈಷ್ಣವರೆಂದು ಹೊಡೆದಾಡದಿರಿ ಎಂಬುದೇ ಈ ಕಥಾ ಪ್ರಸಂಗದ ಸುಂದರ ತಾತ್ಪರ್ಯ.ಹನೂಮಂತನಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್‌ ಮತ್ತು ವೀರಮಣಿಯಾಗಿ ಜಬ್ಟಾರ್‌ ಸಮೋ ಮಧ್ಯೆ ರಾಮ ಕಾರುಣ್ಯಾನುಗ್ರಹ ಮತ್ತು ಶಿವಕಾರುಣ್ಯಾನುಗ್ರಹ ಕುರಿತಾಗಿ ನಡೆದ ಚರ್ಚೆ ಸ್ವಾರಸ್ವಪೂರ್ಣವೂ, ಅರ್ಥಪೂರ್ಣವೂ ಆಗಿತ್ತು. ಡಾ| ವಿನಾಯಕ ಭಟ್‌ ಗಾಳಿಮನೆ,ಸುಣ್ಣಂಬಳ ವಿಶ್ವೇಶ್ವರ ಭಟ್‌, ಜಬ್ಟಾರ್‌ ಸಮೋ, ಗಣೇಶ್‌ ಕನ್ನಡಿಕಟ್ಟೆ ಅವರಂಥ ಅರ್ಥದಾರಿಗಳಿಂದಾಗಿ ಪಾತ್ರಗಳು ಪ್ರಬುದ್ಧವಾಗಿ ಮೆರೆದುವು.

ಹಿಮ್ಮೇಳದಲ್ಲಿ ರಾಘವೇಂದ್ರ ಜನ್ಸಾಲೆ, ಮದ್ದಳೆಯಲ್ಲಿ ಕಡತೋಕ ಸುನಿಲ್‌ ಭಂಡಾರಿ,ಚೆಂಡೆಯಲ್ಲಿ ಸುಜನ್‌ ಹಾಲಾಡಿ ಸಹಕರಿಸಿದರು.

ಎಂ.ರಾಘವೇಂದ್ರ ಭಂಡಾರ್‌ಕರ್‌

ಟಾಪ್ ನ್ಯೂಸ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.