ಚಾತುರ್ಮಾಸದಲ್ಲಿ ಶೂರ್ಪನಖಾ ಪ್ರಕರಣ


Team Udayavani, Nov 3, 2019, 12:34 AM IST

Udayavani Kannada Newspaper

ಶ್ರೀ ವೆಂಕಟರಮಣ ಯಕ್ಷಗಾನ ಕಲಾಸಮಿತಿ ಕಾರ್ಕಳ ಚಾತುರ್ಮಾಸದ ಅಂಗವಾಗಿ ಶೂರ್ಪನಖಾ ಪ್ರಕರಣ ತಾಳಮದ್ದಳೆ ಕೂಟ ನಡೆಯಿತು.

ರಾಮ, ಸೀತೆ, ಲಕ್ಷ್ಮಣರು ದಂಡಕಾರಣ್ಯವನ್ನು ಪ್ರವೇಶಿಸಿ ಅಲ್ಲಿ ಪಂಚವಟಿಯಲ್ಲಿ ಪರ್ಣಕುಟೀರವನ್ನು ಕಟ್ಟಿಕೊಂಡು ನೆಲೆ ನಿಲ್ಲುತ್ತಾರೆ.ಒಮ್ಮೆ ದಂಡಕಾರಣ್ಯದಲ್ಲಿದ್ದ ಋಷಿ ಮುನಿಗಳು ರಾಮನನ್ನು ಕಂಡು ಇಲ್ಲಿರುವ ರಕ್ಕಸರಿಂದ ತಮಗಾಗುತ್ತಿರುವ ಹಿಂಸೆ ಅನ್ಯಾಯಗಳನ್ನು ನಿವೇದಿಸಿ ರಕ್ಷಣೆಗಾಗಿ ಮೊರೆಯಿಡುತ್ತಾರೆ. ಆವಾಗ ಒಂದು ಹೆಣ್ಣು ರಕ್ಕಸಿಯ ಬೊಬ್ಬೆ,ಆರ್ಭಟ ಕೇಳಿ ಬರುತ್ತದೆ.ಇಲ್ಲಿಂದ ಶೂರ್ಪನಖಾ ಪ್ರಕರಣ ತೆರೆದುಕೊಳ್ಳುತ್ತದೆ.

ರಾಮನಾಗಿ ಡಾ| ಎಂ.ಪ್ರಭಾಕರ ಜೋಶಿಯವರು ಹಾಗೂ ಶೂರ್ಪನಖೀಯಾಗಿ ಉಜಿರೆ ಅಶೋಕ ಭಟ್ಟರ ನಡುವಿನ ಸಂವಾದವು ಒಗಟುಗಳ ಸುರಿಮಳೆ,ಪ್ರಾಸಬದ್ಧ ಮಾತಿನ ವಿನಿಮಯ ,ಸಿನೆಮಾ ಹಾಡಿನ ತುಣುಕುಗಳು,ನೆರೆದ ಪ್ರೇಕ್ಷಕರನ್ನು ರಂಜನೆಯೊಂದಿಗೆ ನಗೆಗೆಡಲಿನಲ್ಲಿ ತೇಲಿಸಿದಂತೂ ಸತ್ಯ.ಲಕ್ಷ್ಮಣನಾಗಿ ಅಪ್ಪು ನಾಯಕ್‌ ಅತ್ರಾಡಿಯವರು ಶೂರ್ಪನಖೀಯೊಂದಿಗೆ ವ್ಯವಹರಿಸುವಾಗ ಆಡಿದ ನಿಷ್ಠುರದ ಗಾಂಭೀರ್ಯದ ನುಡಿಗಳು ಶಹಬ್ಟಾಸ್‌ ಎನಿಸಿತು.ಹಿರಿಯ ಅರ್ಥದಾರಿ ಕೆ.ವಸಂತರವರು ಸೀತೆಯಾಗಿ ತನ್ನ ಧ್ವನಿ ಹೆಣ್ಣಿನ ಧ್ವನಿಗೆ ಸರಿಹೊಂದದಿದ್ದರೂ ರಾಮನ ಮಾಡದಿಯಾಗಿ,ಶೂರ್ಪನಖೀಯ ಬೊಬ್ಬೆಗೆ ಭಯಭೀತಿಯಿಂದ ಆತಂಕಕ್ಕೊಳಗಾದ ಸನ್ನಿವೇಶ ರಾಮನೊಂದಿಗಿನ ಸಂವಾದದಲ್ಲಿ ಉತ್ತಮವಾಗಿ ಅರ್ಥ ಹೇಳಿದರು. ಮುನಿಯಾಗಿ ದೈನ್ಯತೆಯಿಂದ ಮತ್ತು ಖರಾಸುರನಾಗಿ ಭೀತಿ ಹುಟ್ಟಿಸುವ ಪಾತ್ರದಿಂದ ಅರ್ಥಗಾರಿಕೆಯ ಪ್ರಭುದ್ಧತೆ ಮೆರೆದ ಎಸ್‌. ರಾಮ ಭಟ್ಟ ಕಾರ್ಕಳ ಪ್ರಶಂಸೆಗೆ ಪಾತ್ರರಾದರು.

ಒಟ್ಟಾರೆಯಾಗಿ ಕೊನೆಯವರೆಗೂ ಪ್ರೇಕ್ಷಕರನ್ನು ಎಲ್ಲ ಪಾತ್ರಧಾರಿಗಳೂ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಕೂಟದ ಯಶಸ್ಸಿಗೆ ಕಾರಣವಾಯಿತು.

ಇದೇ ವೇದಿಕೆಯಲ್ಲಿ ಹಿಂದೊಮ್ಮೆ ಶೂರ್ಪನಖಾ ಮಾನಭಂಗದ ಆಖ್ಯಾನದಲ್ಲಿ ಶೂರ್ಪನಖಾ ಭಂಡಾರಿಯೆಂದೇ ಖ್ಯಾತರಾಗಿದ್ದ ದಿವಂಗತ ಮಾರೂರು ಮಂಜುನಾಥ ಭಂಡಾರಿಯವರ ಶೂರ್ಪನಖಾ ಪಾತ್ರವನ್ನು ಆವಾಗ ಆನಂದಿಸಿ ಅನುಭವಿಸಿದ್ದ ಹಲವರು ಈ ಬಾರಿ ಮತ್ತೆ ಮತ್ತೇ ಅವರನ್ನು ನೆನಪಿಸಿಕೊಂಡದ್ದು ಕೂಟದ ಸಾರ್ಥಕತೆಯನ್ನು ಸಾರಿತು.

ಹಿಮ್ಮೇಳದಲ್ಲಿ ಸುಬ್ರಹ್ಮಣ್ಯ ಧಾರೇಶ್ವರರು ಸುಮಧುರವಾಗಿ ಭಾಗವತಿಕೆ ನಡೆಸಿದರು.ಚೆಂಡೆಯಲ್ಲಿ ಕೃಷ್ಣಾನಂದ ಶೆಣೈ ಬ್ರಹ್ಮಾವರ,ಮದ್ದಳೆಯಲ್ಲಿ ನಾರಾಯಣ ಜಿ ಹೆಗ್ಡೆ ಉತ್ತಮ ನಿರ್ವಹಣೆ ತೋರಿದರು.

-ಎಂ.ರಾಘವೇಂದ್ರ ಭಂಡಾರ್‌ಕರ್‌

ಟಾಪ್ ನ್ಯೂಸ್

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.