ಕಾಲಾಂತರದಲ್ಲಿ ಕಳೆಗುಂದಿದ ಮುಂಬಯಿಯ ತಾಳಮದ್ದಳೆ‌ 


Team Udayavani, Nov 7, 2018, 6:25 AM IST

5.jpg

ಶಬ್ದಗಳ ಇಟ್ಟಿಗೆಗಳನ್ನು ಪೇರಿಸುತ್ತಾ, ತರ್ಕದ ಕಂಬಗಳನ್ನು ಊರುತ್ತಾ, ವಾದದ ಗೋಡೆಗಳನ್ನು ಕಟ್ಟುತ್ತ ವಿಚಾರದ ಕಿಟಿಕಿಯನ್ನು ತೆರೆಯುತ್ತಾ ಮಾತಿನ ಮನೆಯಾಗಿ ಬೆಳೆೆದು ನಿಂತ ತಾಳಮದ್ದಳೆಯೆಂಬ ಕಲಾಪ್ರಕಾರವನ್ನು ಮುಂಬಯಿಯಲ್ಲಿ ಪಸರಿಸಿದ ಶ್ರೇಯಸ್ಸು ಇಲ್ಲಿನ ತಾಳಮದ್ದಳೆಯ ಅರ್ಥದಾರಿಗಳಿಗೆ ಸಲ್ಲುತ್ತದೆ. ಮುಂಬಯಿಯ ತಾಳಮದ್ದಳೆ ರಂಗಕ್ಕೆ ಸಾಧಾರಣ ನೂರ ಇಪ್ಪತ್ತು ವರ್ಷಗಳ ಇತಿಹಾಸವಿದೆ.ವಿದ್ವಾಂಸರಾದ ಅನೇಕ ಮಂದಿ ತಾಳಮದ್ದಳೆಯ ಕಲಾವಿದರು ಮುಂಬಯಿಯಲ್ಲಿ ಕ್ರಿಯಾಶೀಲ ರಾಗಿದ್ದರು. ಅನೇಕ ಯಕ್ಷಗಾನ ಸಂಘಗಳು ಅಸ್ತಿತ್ವದಲ್ಲಿದ್ದವು.ತವರೂರಿನಿಂದ ಯಾರಾದರೂ ಅರ್ಥಧಾರಿಗಳು ಮುಂಬಯಿಗೆ ಸ್ವಕಾರ್ಯ ನಿಮಿತ್ತ ಬಂದರೆ ಅವರಿಗಾಗಿ ತಾಳಮದ್ದಳೆ ಕಾರ್ಯಕ್ರಮ ಏರ್ಪಾಡು ಆಗುತ್ತಿತ್ತು. ವಿಶೇಷವೆಂದರೆ ಯಾವ ಕಲಾವಿದರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಸಂಭಾವನೆ ಪಡೆಯುತ್ತಿರಲಿಲ್ಲ. 

ಕಳೆದ ಶತಮಾನದ ಮಧ್ಯಭಾಗದಲ್ಲಿ ಊರಿನಿಂದ ಹರಿದಾಸರು, ಯಕ್ಷಗಾನ ಬಯಲಾಟ ಕಲಾವಿದರು ಅಪರೂಪವಾಗಿ ಭಾಗವಹಿಸಿದಾಗ ಅವರಿಗೆ ಸಂಭಾವನೆ ಕೊಡಲಾಗುತ್ತಿತ್ತು .ದಿ. ಪೋಲ್ಯ ದೇಜಪ್ಪ ಶೆಟ್ಟಿ, ಸೀತಾನದಿ ಗಣಪಯ್ಯ ಶೆಟ್ಟಿ ,ದಿ. ಮಂದಾರ ಕೇಶವ ಭಟ್‌ ಇವರೆಲ್ಲ ಮುಂಬಯಿಗೆ ಬಂದವರು ಇಲ್ಲಿನ ತಾಳಮದ್ದಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಒತ್ತಾಯ ಪೂರ್ವಕ ಸಂಭಾವನೆ ಕೊಟ್ಟರೂ ಪಡೆಯುತ್ತಿರಲಿಲ್ಲ. ಹಾಗಾಗಿ ಹಬ್ಬಗಳ ದಿನಗಳಲ್ಲಿ ತಾಳಮದ್ದಳೆ ಇಡೀ ರಾತ್ರಿ ಜರಗುತ್ತಿತ್ತು. 

ದಿ. ಬೋಜರಾಜ ಶೆಟ್ಟಿ ಮುದ್ರಾಡಿ , ಅಡ್ವೆ ವಾಸು ಶೆಟ್ಟಿ ,ಮಾಣಿಯೂರು ಶಂಕರ ಶೆಟ್ಟಿ ,ಕೊಜಕೊಳಿ ಸದಾಶಿವ ಶೆಟ್ಟಿ , ಬ್ರಹ್ಮಾವರ ರಘರಾಮ ಶೆಟ್ಟಿ , ಕಾಸರಗೋಡು ಬಾಬು ನಾಯಕ್‌ ಮೊದಲಾದ ತಾಳಮದ್ದಳೆಯ ಕಲಾವಿದರು ಇದ್ದರು, ಯಾರೂ ಸಂಭಾವನೆ ಪಡೆಯುತ್ತಿರಲಿಲ್ಲ. ಚಂಡೆ ಮದ್ದಳೆ ಸಾಗಾಟ ಮತ್ತು ಅದನ್ನು ನುಡಿಸುವವರಿಗೆ ಗೌರವಧನ ಕೊಡುತ್ತಿದ್ದರು.ಆದ್ದರಿಂದ ತಾಳಮದ್ದಳೆಗೆ ವಿಶೇಷ ಖರ್ಚು ಆಗುತ್ತಿರಲಿಲ್ಲ. ಬಯಲಾಟದ ವೇಷದಾರಿಗಳಲ್ಲಿ ಯಾರೂ ತಾಳಮದ್ದಳೆಯಲ್ಲಿ ಭಾಗವಹಿಸುತ್ತಿರಲಿಲ್ಲ. ಯಾವಾಗ “ಹರಿದಾಸ’ರ ಪ್ರವೇಶ ಟೆಂಟು ಮೇಳಗಳಿಗೆ ಆಯಿತೋ ಅಂದಿನಿಂದ ಬಯಲಾಟ, ಹರಿಕಥೆ ,ತಾಳಮದ್ದಳೆ ಮೂರೂ ರಂಗಗಳಲ್ಲಿ ಹರಿದಾಸರು ವಿಜೃಂಭಿಸಲಾರಂಬಿಸಿದ್ದೇ ಬಯಲಾಟ ಕಲಾವಿದರೂ ಪ್ರಯತ್ನಪಟ್ಟು ತಾಳಮದ್ದಳೆ ರಂಗದಲ್ಲಿ ಪ್ರಾವೀಣ್ಯ, ಪ್ರಾಧಾನ್ಯ ಪಡೆಯಲಾರಂಬಿಸಿದರು. ಇದರ ಪರಿಣಾಮವೇ ತಾಳಮದ್ದಳೆ ಕಲಾರಂಗ ಗಳಿಕೆಯ ರಂಗವಾಯಿತು. ಮೇಲೆ ಹೆಸರಿಸಿದ ಕಲಾವಿದರು ವಯೋಬಾಹುಳ್ಯದಿಂದ ಕಾಲಗರ್ಭಕ್ಕೆ ಸರಿದರು. ಮುಂಬಯಿ ಯಕ್ಷರಂಗದ ತಾಳಮದ್ದಳೆ ಕ್ಷೇತ್ರದ ಮೇರು ಕಲಾವಿದ ಅಡ್ವೆ ವಾಸು ಶೆಟ್ಟಿಯವರು 15.11.2003ರಂದು ದೈವಾಧೀನರಾದ ಬಳಿಕ ಮುಂಬಯಿ ತಾಳಮದ್ದಳೆ ರಂಗ ಕ್ಷೀಣವಾಯಿತು. ಅಳಿದ ಹಿರಿಯ ಕಲಾವಿದರ ಸ್ಥಾನ ತುಂಬುವಲ್ಲಿ ಕಲಾವಿದರ ಉದಯವಾಗದೇ ಇದ್ದದ್ದು ಇದಕ್ಕೆ ಕಾರಣ.

ತಾಳಮದ್ದಳೆಯಲ್ಲಿ ಅರ್ಥ ವಿವರಿಸುವ ಅರ್ಹತೆ ಬರಬೇಕಾದರೆ ಕನ್ನಡದಲ್ಲಿ ಮಾತಾಡಲು ಬಂದರೆ ಸಾಲದು, ಸಿ.ಡಿ ಮತ್ತು ಯೂಟ್ಯೂಬ್‌ಗಳಲ್ಲಿ ಬರುತ್ತಿರುವ ತಾಳಮದ್ದಳೆ ಕೇಳಿದರೆ ಸಾಲದು. ಅರ್ಥದಾರಿಗೆ ರಾಮಾಯಣ, ಮಹಾಭಾರತ ಭಾಗವತ , ಜೈಮಿನಿ ಭಾರತ ಇತ್ಯಾದಿ ಗ್ರಂಥಗಳ ಅಧ್ಯಯನದ ಜೊತೆಗೆ ಪ್ರಸಂಗ ಸಾಹಿತ್ಯದ ಅನುಭವ ಇರಬೇಕು. ನಿರ್ವಹಿಸಲಿರುವ ಪಾತ್ರದ ಬಗ್ಗೆ ಉತ್ತಮ ಅಧ್ಯಯನಶೀಲರಾದರೆ ಮಾತ್ರ ಸಾಧ್ಯ. ಈಗ ಮೊಬೈಲ್‌ ಯುಗದಲ್ಲಿ ಅಧ್ಯಯನದ ಅಭಾವದಿಂದಾಗಿ ಬಯಲಾಟದಲ್ಲಿ ಆಲಾಪನೆ ಮತ್ತು ಚಾಲು ಕುಣಿತವೆಂಬ ಗೀಳು ಪ್ರಾರಂಭವಾದ ಕಾರಣ ಮತ್ತು ಅರ್ಥ ವಿವರಣೆ ಕೆಲವೇ ಮಂದಿ ವಿದ್ವಾಂಸರ ವಶವಾದ್ದರಿಂದ ತಾಳಮದ್ದಳೆ ಕಲಾವಿದರ ಸಂಭಾವನೆ ಒಂದು ಸಾವಿರದಿಂದ ಎರಡೂವರೆ ಸಾವಿರದವರೆಗೆ ಏರಿದೆ. 

ಮುಂಬಯಿಯಲ್ಲಿ ಸಮರ್ಥ ತಾಳಮದ್ದಳೆಯ ಕಲಾವಿದರು ಇಲ್ಲದೇ ಇರುವುದರಿಂದ ಊರಿನಿಂದ ತಾಳಮದ್ದಳೆ ತಂಡವನ್ನು ತರಿಸಿ ಮುಂಬಯಿಯಲ್ಲಿ ಉಚಿತವಾಗಿ ಪ್ರದರ್ಶನ ನೀಡುವ ಪರಿಸ್ಥಿತಿ ಬಂತು. ಪ್ರೇಕ್ಷಕರಿಗೆ ಚಹಾ, ತಿಂಡಿ ಹಾಗೂ ಕೆಲವೊಮ್ಮೆ ಊಟವನ್ನೂ ಒದಗಿಸಲಾಗುತ್ತಿದೆ. ಇದರಿಂದಾಗಿ ಮುಂಬಯಿ ತಾಳಮದ್ದಳೆ ರಂಗ ಪೂರ್ಣವಾಗಿ ಸ್ಥಗಿತವಾಗಿ ಊರಿನ ಕಲಾವಿದರ ಸಮಾವೇಶದಿಂದ ವರ್ಷಕ್ಕೆ ಸುಮಾರು ನಲ್ವತ್ತು ತಾಳಮದ್ದಳೆ ನಡೆಯುತ್ತಿದೆ. ಒಂದು ಕಾಲದಲ್ಲಿ ಏನೂ ಖರ್ಚಿಲ್ಲದೆ ಉತ್ಸಾಹದಿಂದ ಮುಂಬಯಿಯಲ್ಲಿ ಸಾದರಗೊಳ್ಳುತ್ತಿದ್ದ ತಾಳಮದ್ದಳೆ ಕಾರ್ಯಕ್ರಮಕ್ಕೆ ಈಗ ಮೂವತ್ತು-ನಲ್ವತ್ತು ಸಾವಿರ ರೂಪಾಯಿ ಖಚ್ಚಾಗುತ್ತಿದೆ ಎಂಬುದು ಆಶ್ಚರ್ಯವೆನಿಸಿದರೂ ವಾಸ್ತವವಾಗಿದೆ. 

ಯಕ್ಷಗಾನ ಕಾಲಮಿತಿಗೆ ಒಳಪಟ್ಟ ಮೇಲೆ ಮೂರುಗಂಟೆಯ ಒಳಗೆ ನಾಲ್ಕು ಮಂದಿ ಅರ್ಥಧಾರಿಗಳು ನಾಲ್ಕು ಹಾಡುಗಳಿಗೆ ಅರ್ಥ ಹೇಳಿದರೂ ಎರಡು ಸಾವಿರ ರೂಪಾಯಿ ಸಂಭಾವನೆ ದೊರೆಯುತ್ತದೆ. ಈಗಲೂ ಮುಂಬಯಿಯಲ್ಲಿ ಸಮರ್ಥ ಅರ್ಥದಾರಿಗಳು ಇದ್ದಾರೆ. ಅವರಿಗೆ “ಮುಂಬಯಿ ಕಲಾವಿದರು’ ಎಂಬ ಹಣೆಪಟ್ಟಿ ಇರುವುದರಿಂದ ಮತ್ತು ಅವರು ಹವ್ಯಾಸಿ ಕಲಾವಿದರಾಗಿರುವುದರಿಂದ ಊರಿನ ಕಲಾವಿದರಿಗೆ ಸಿಗುವ ಪ್ರೋತ್ಸಾಹ ಸಿಗುತ್ತಿಲ್ಲ. ಮುಂಬಯಿಗೆ ಬರುವ ತಾಳಮದ್ದಲೆ ತಂಡಗಳಲ್ಲಿ ಯುವ ಕಲಾವಿದರ ತಂಡ, ಪ್ರೌಢ ಕಲಾವಿದರ ತಂಡ, ಮಹಿಳಾ ಕಲಾವಿದರ ತಂಡ ಎಂಬ ವಿಭಾಗಗಳಿವೆ. ಇನ್ನು ಬಾಕಿ ಇರುವುದು ಮಕ್ಕಳ ತಂಡ , ವೃದ್ದರ ತಂಡಗಳು. ಆದರೂ ಮುಂಬಯಿಗೆ ಬರುವ ಎಲ್ಲ ವಯೋಮಾನದ ಕಲಾವಿದರಿಗೆ ಅವಕಾಶ ಕಲ್ವಿಸಿದ ಶ್ರೇಯಸ್ಸು ಇಲ್ಲಿನ ಸಂಯೋಜಕರಿಗೆ ಸಲ್ಲುತ್ತದೆ. ತಾಳಮದ್ದಳೆಗೆ ಊರಿನಲ್ಲೂ ಅಪಾರ ಅವಕಾಶವಿರುವುದರಿಂದ ಪ್ರಸಿದ್ಧ ಕಲಾವಿದರಿಗೆ ಮುಂಬಯಿಗೆ ಬರಲು ಸಮಯವೇ ಸಿಗುವುದಿಲ್ಲ. ಆಟ-ಕೂಟಗಳಲ್ಲಿ ಬಿಡುವಿಲ್ಲದೆ ದುಡಿಯುವ ಕಲಾವಿದರನ್ನು ಆಮಂತ್ರಿಸಿದರೆ ಮೊದಲು ಡೈರಿ ತೆರೆದು ನೋಡಿ ಬಳಿಕವೇ ಒಪ್ಪುತ್ತಾರೆ. ಹೋಗಿ ಬರುವ ಪ್ರಯಾಣ ವೆಚ್ಚ , ವಸತಿ , ಉತ್ತಮ ಊಟದ ಜೊತೆಯಲ್ಲಿ ಗರಿಷ್ಟ ಸಂಭಾವನೆ ಕೊಡಬೇಕು. ಕೆಲವು ಕಲಾವಿದರು ಸ್ಟಾರ್‌ವ್ಯಾಲ್ಯೂ ಪಡೆದಿದ್ದಾರೆ. ಅವರ ಪ್ರಮಾಣ ವಿಮಾನದಲ್ಲೇ ಇರುವುದರಿಂದ ಸಂಭಾವನೆ ಜೊತೆಯಲ್ಲಿ ವಿಮಾನಯಾನದ ವೆಚ್ಚವನ್ನೂ ಬರಿಸುವ ಮುಂಬಯಿ ಕಲಾಭಿಮಾನಿಗಳ ಔದಾರ್ಯ ಸದಾ ಸ್ಮರಣೀಯ.

ಕೋಲ್ಯಾರು ರಾಜು ಶೆಟ್ಟಿ 

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.