ಗದಾಯುದ್ಧದಲ್ಲಿ ಛಲದಂಕ ಮಲ್ಲನ ಸಾಕ್ಷಾತ್ಕರ


Team Udayavani, Sep 6, 2019, 5:00 AM IST

b-4

ಕುರುಕ್ಷೇತ್ರದ ರಣಧಾರಿಣಿಯಲಿ ಹದಿನೆಂಟನೇ ದಿನ ತನ್ನವರೆಲ್ಲರನ್ನೂ ಕಳೆದುಕೊಂಡ ಕೌರವ, ಭೀಮ ತನ್ನ ಅಟ್ಟಹಾಸದ ಘರ್ಜನೆಯೊಂದಿಗೆ ಬೆನ್ನತ್ತಿದಾಗ ಒಮ್ಮಿಂದೊಮ್ಮೆಗೇ ಕೌರವ ರಣಭೂಮಿಯಿಂದ ಕಣ್ಮರೆಯಾಗುತ್ತಾನೆ. ವ್ಯಾಸರ ಅನುಗ್ರಹದಿಂದ ಕುರುಕ್ಷೇತ್ರದ ಯುದ್ಧ ವಿಚಾರಗಳನ್ನು ತನ್ನ ಅಂಗೈಯಲ್ಲೇ ನೋಡುತ್ತಿದ್ದ ಸಂಜಯ ದಿನಂಪ್ರತಿ ಯುದ್ಧದ ಸಂಪೂರ್ಣ ವಿಚಾರಗಳನ್ನು ದೃತರಾಷ್ಟ್ರನಿಗೆ ಹೇಳುತ್ತಿರಬೇಕಾದರೆ , ಕೌರವ ಕುರುಕ್ಷೇತ್ರದಿಂದ ಕಣ್ಮರೆಯಾದುದನ್ನು ಕೇಳಿ ಮಮ್ಮಲ ಮರುಗಿದ ದೃತರಾಷ್ಟ್ರನ ಅಪೇಕ್ಷೆಯಂತೆ ಕೌರವನನ್ನು ಹುಡುಕಲು ರಣಧಾರಿಣಿಗೆ ಬರುತ್ತಾನೆ.ಆಗ ಸಂಜಯನ ಕೊಲ್ಲಲು ಸಾತ್ಯಕಿಯು ಬಂದರೂ ಮತ್ತೆ ವ್ಯಾಸರು ಕಾಪಾಡುತ್ತಾರೆ.

ಇತ್ತ ಹೆಣಗಳ ರಾಶಿಯ ಮಧ್ಯೆ ನಡೆದುಹೋಗುತ್ತಿದ್ದ ದುರ್ಯೋಧನನನ್ನು ಕಂಡ ಸಂಜಯ ಕುಶಲೋಪರಿ ವಿಚಾರಿಸುವನು. ತಾಯಿ ಗಾಂಧಾರಿಗೆ ಸಂದೇಶವೇನು ಕೊಡಲಿ ಎಂದು ಸಂಜಯ ಕೇಳಿದಾಗ ಜಯಲಕ್ಷ್ಮೀ ಎಂಬ ಇನ್ನೊಂದು ಸೊಸೆಯೊಂದಿಗೆ ಮನೆ ಪ್ರವೇಶ ಮಾಡುವೆನು ತಾಯಿಗೆ ಹೇಳು ಎಂದು ತನ್ನ ಆತ್ಮವಿಶ್ವಾಸದ ಮಾತನ್ನು ಹೇಳುತ್ತಾನೆ.

ಈ ದಿನದ ಸೂರ್ಯಾಸ್ತದಿಂದ ಪಾರಾಗಿ ನಾಳಿನ ಸೂರ್ಯೋದಯ ನೀ ಕಂಡರೆ ನಿರ್ಧಾರದಂತೆ ನೀನೇ ಜಯಶಾಲಿ, ಹೋಗು ಇಲ್ಲೇ ಸಮೀಪದಲ್ಲಿರುವ ದ್ವೆಪಾಯನ ಸರೋವರದಲ್ಲಿ ಕುಳಿತುಕೋ ಒಳಿತಾಗಲಿ ಎಂದು ಹೇಳಿ ಸಂಜಯ ಹೊರಡುತ್ತಾನೆ.

ಜಲಸ್ತಂಭನ ವಿದ್ಯಾಪ್ರವೀಣನಾದ ಕೌರವನ ಪರಿಸ್ಥಿತಿಯನ್ನು ಸಂಜಯನಿಂದ ತಿಳಿದ ಆಚಾರ್ಯತ್ರಯರು ಕೌರವನಿಗೆ ಸಹಾಯದ ಮಾತನ್ನಾಡಿದರೂ ನಾಲ್ವರನ್ನು ನಂಬಿ ಕೆಟ್ಟೆ, ಇನ್ನು ನಿಮ್ಮ ಸಹಾಯ ಬೇಡ, ನೀವಿಲ್ಲಿಂದ ಹೋದರೆ ಅದೇ ಸಹಾಯ ಸಾಕು ಎನ್ನುತ್ತಾನೆ.

ಬೇಹುಗಾರರಿಂದ ಕೌರವನ ಇರವನ್ನು ತಿಳಿದ ಭೀಮ ನೀರಿಗೇ ಗದಾ ಪ್ರಹಾರ ಮಾಡಿ ಕೌರವನನ್ನು ಮೇಲೆಬ್ಬಿಸುತ್ತಾನೆ.ನಮ್ಮೆ„ವರಲ್ಲಿ ಒಬ್ಬನೊಡನೆ ಹೋರಾಡಿ ನೀನು ಜಯಶಾಲಿಯಾದರೂ ನಾವು ಮತ್ತೆ ಕಾಡಾಡಿಗಳಾಗುತ್ತೇವೆ ಎನ್ನುತ್ತಾನೆ ಧರ್ಮರಾಯ.ಧರ್ಮಜ ಪಲುಗುಣಾದಿ ಶ್ರೀಕೃಷ್ಣನನ್ನೂ ಹಂಗಿಸಿ ಭೀಮನನ್ನೇ ಯುದ್ಧಕ್ಕೆ ಆಯ್ಕೆಮಾಡಿ ತನ್ನ ಛಲವನ್ನು ಭೀಮ ದ್ವೇಷವನ್ನು ಹೊರಗೆಡಹುತ್ತಾನೆ.ಭೀಮನನ್ನು ಸೋಲಿಸುತ್ತಾನೆ. ಕೃಷ್ಣ ತಂತ್ರದಿಂದ ಮತ್ತೆ ಮೇಲೆದ್ದು ಬಂದಾಗ ಬಲರಾಮನ ಪ್ರವೇಶವಾಗಿ ತನ್ನ ಪರಮ ಶಿಷ್ಯ ಕೌರವನ ದುಃಸ್ಥಿತಿ ಕಂಡು ಇದಕ್ಕೆ ನನ್ನ ತಮ್ಮ ಮತ್ತು ಪಾಂಡವರೇ ಕಾರಣ ಎನ್ನುತ್ತಾ ಪಾಂಡವರ ಮೇಲೆ ಯದ್ಧಕ್ಕೆ ಬಲರಾಮ ತಯಾರಾದಾಗ ಕೃಷ್ಣ ಅಣ್ಣನನ್ನು ಸಮಾಧಾನಿಸಿ ನಿನ್ನ ನೇತೃತ್ವದಲ್ಲಿಯೇ ಭೀಮ ಕೌರವರ ಯುದ್ಧವಾಗಲಿ. ನೀನೇ ವೀಕ್ಷಕ, ನಿಯಮಕಾರ ಎನ್ನುತ್ತಾನೆ ಕೃಷ್ಣ. ಅದಕ್ಕೊಪ್ಪಿದ ಬಲರಾಮ , ಭೀಮ- ಕೌರವರೊಳಗೆ ಯುದ್ಧ ನಡೆವಾಗ ಕೃಷ್ಣನ ಕಣನ್ನೆಯಂತೆ ಭೀಮ ಕೌರವನ ತೊಡೆ ಮುರಿಯುತ್ತಾನೆ, ಪಾಂಡವರು ಜಯಶಾಲಿಗಳಾಗುತ್ತಾರೆ.

ನಿಟ್ಟೆ ಕಾಲೇಜಿನ ವತಿಯಿಂದ ನಿಟ್ಟೆಯಲ್ಲಿ ಜರುಗಿದ ಗದಾಯುದ್ಧ ತಾಳಮದ್ಧಳೆಯಲ್ಲಿ ಶೇಣಿ ಸಾಮಗರ ಕಾಲದಂತೆ ಒಂದೇ ಪ್ರಸಂಗ ಭರ್ಜರಿ ಆರುಗಂಟೆಗಳ ಸಾಗಿದ ಆಖ್ಯಾನದಲ್ಲಿ ಪ್ರಾರಂಭದಿಂದ ಕೊನೆವರೆಗೂ ಛಲದಂಕ ಮಲ್ಲ ಕೌರವನಾಗಿ ಉಜಿರೆ ಅಶೋಕ ಭಟ್ಟರು ಏಕಾಂಗಿಯಾಗಿ ಪ್ರಸಂಗ ಯಶಗೊಳ್ಳುವಲ್ಲಿ ಪ್ರಧಾನ ಕಾರಣರಾದರು.

ಸಂಜಯನಾಗಿ ಹರೀಶ ಬಳಂತಿಮೊಗರು , ಕೌರವನ ಪಾತ್ರಚಿತ್ರಣಕ್ಕೆ ಪೂರಕವಾಗಿ ಮತ್ತು ಧೃತರಾಷ್ಟ್ರ ಗಾಂಧಾರಿಯರ ಅಂತರಂಗದ ಮನ ಬಿಂಭಿಸುವಲ್ಲಿ ಸಫ‌ಲರಾದರು. ವಿಷ್ಣುಶರ್ಮ ವಾಟೆಪಡು³ರವರು ಧರ್ಮರಕ್ಷಣಾ ಕಾರ್ಯದಲ್ಲಿ ಶ್ರೀ ಕೃಷ್ಣನ ಪಾತ್ರ ವಿವರಿಸುತ್ತಾ , ವೇದಿಕೆಯಲ್ಲಿ ತನ್ನೊಂದಿಗಿದ್ದ ಹೊಸ ಕಲಾವಿದರಿಗೆ ಉತ್ತೇಜನ ನೀಡಿದರು.

ಶೇಣಿಯವರ ಮೊಮ್ಮಗ ಶೇಣಿ ವೇಣುಗೋಪಾಲ ಭಟ್‌ ಭೀಮನಾಗಿ ರಂಜಿಸಿದರು.ಧರ್ಮರಾಯನಾಗಿ ಜನಾರ್ದನ ನಾಯಕ್‌ ಅಜೆಕಾರು ಧರ್ಮಜನ ಸ್ವಭಾವ ಬಿಂಬಿಸುವಲ್ಲಿ ಯಶಸ್ವಿಯಾದರು.

ಬೇಹುಗಾರನಾಗಿ ಹಾಸ್ಯಗಾರ ಪೂರ್ಣೇಶ ಆಚಾರ್ಯರು ಸಿಕ್ಕಿದ ಸಮಯಾವಕಾಶದಲ್ಲಿ ನಗು ಉಕ್ಕಿಸುವಲ್ಲಿ ಸಫ‌ಲರಾದರು. ಸದಾಶಿವ ನೆಲ್ಲಿಮಾರು ಬಲರಾಮನಾಗಿ ಪಾತ್ರೋಚಿತವಾಗಿ ಮಾತನಾಡಿದರು.

ಸುದೀರ್ಘ‌ ಆರು ಗಂಟೆ ಭಾಗವತಿಕೆಯಲ್ಲಿ ರಂಜಿಸಿದ ಸಿರಿಬಾಗಿಲು ರಾಮಕೃಷ್ಣ ಮಯ್ಯರ ಹಾಡು ಗಳನ್ನು ಶ್ರೋತೃಗಳು ಆಸ್ವಾದಿ ಸಿದರು. ಮದ್ದಳೆಯಲ್ಲಿ ಲವಕುಮಾರ್‌ ಐಲ, ಚೆಂಡೆಯಲ್ಲಿ ಉದಯ ಕಂಬಾರ, ಚಕ್ರತಾಳದಲ್ಲಿ ಮುರಾರಿ ವಿಟ್ಲ ಸಹಕರಿಸಿದರು.

ಸದಾಶಿವ ನೆಲ್ಲಿಮಾರ್‌

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.