ಭಾವ ತೀವ್ರತೆಯ ಕಥಾವಸ್ತುವಿನ ವಧು ಮಾಧವಿ


Team Udayavani, Aug 9, 2019, 5:00 AM IST

e-6

ವೆಂಕಟೇಶ ವೈದ್ಯ ಬಳಗದ ಪ್ರಸ್ತುತಿ

ವಧು ಮಾಧವಿಯ ಮಾಧವಿಯು ಹೆಣ್ಣಿನ ಘನತೆಯನ್ನು ನಿರಾಕರಿಸಿ ತಮ್ಮ ಸ್ವಾರ್ಥಕ್ಕಾಗಿ ಆಕೆಯನ್ನು ಬೇಕಾಬಿಟ್ಟಿಯಾಗಿ ಬಳಸುವ ಗಂಡಸರ ಕ್ರೌರ್ಯಕ್ಕೆ ಬಲಿಯಾದ ಮತ್ತು ಕೊನೆಯಲ್ಲಿ ತನ್ನದೇ ರೀತಿಯಲ್ಲಿ ಪ್ರತಿರೋಧ ಒಡ್ಡುವ ಹೆಣ್ಣಿನ ಅಂತರಂಗವನ್ನು ಬಹಿರಂಗಗೊಳಿಸುವ ವಿಶಿಷ್ಟ ಪಾತ್ರ.

ತೆಕ್ಕಟ್ಟೆ ಯಶಸ್ವೀ ಕಲಾವೃಂದದವರು ತಮ್ಮ ವಿಂಶತಿ ಸಂಭ್ರಮದ ಭಾಗವಾಗಿ ಜು.21ರಂದು ತೆಕ್ಕಟ್ಟೆಯಲ್ಲಿ ವಧು ಮಾಧವಿ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಿದ್ದರು. ವೆಂಕಟೇಶ ವೈದ್ಯ ಬಳಗದವರು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಪ್ರದರ್ಶಿಸಿದ “ವಧು ಮಾಧವಿ’ ಕಥಾ ವಸ್ತುವಿನ ತೀವ್ರತೆಗೆ ತಲ್ಲಣಿಸಿ ಹೋಗುವಂತೆ ಪರಿಣಾಮಕಾರಿಯಾಯಿತು.

ವಧು ಮಾಧವಿಯ ಮಾಧವಿಯು ಹೆಣ್ಣಿನ ಘನತೆಯನ್ನು ನಿರಾಕರಿಸಿ ತಮ್ಮ ಸ್ವಾರ್ಥಕ್ಕಾಗಿ ಆಕೆಯನ್ನು ಬೇಕಾಬಿಟ್ಟಿಯಾಗಿ ಬಳಸುವ ಗಂಡಸರ ಕ್ರೌರ್ಯಕ್ಕೆ ಬಲಿಯಾದ ಮತ್ತು ಕೊನೆಯಲ್ಲಿ ತನ್ನದೇ ರೀತಿಯಲ್ಲಿ ಪ್ರತಿರೋಧ ಒಡ್ಡುವ ಹೆಣ್ಣಿನ ಅಂತರಂಗವನ್ನು ಬಹಿರಂಗಗೊಳಿಸುವ ವಿಶಿಷ್ಟ ಪಾತ್ರ. ಕಂದಾವರ ರಘುರಾಮ ಶೆಟ್ಟಿಯವರು ಪುರಾಣದ ಕಥೆಯೊಂದರ ಆಧಾರದಲ್ಲಿ ಈ ಸುಂದರ ಆಖ್ಯಾನ ರಚಿಸಿದ್ದಕ್ಕೆ ಅಭಿನಂದನಾರ್ಹರು.

ಪ್ರಸಂಗ ಪ್ರಾರಂಭವಾಗಿದ್ದು ವಿಶ್ವಾಮಿತ್ರ ಮತ್ತು ಶಿಷ್ಯ ಗಾಲವರ ಸಂಭಾಷಣೆಯ ದೃಶ್ಯದೊಂದಿಗೆ. ಗಾಲವ ಗುರುದಕ್ಷಿಣೆ ಕೊಡುವ ತನ್ನ ಬಯಕೆಯನ್ನು ಮುಂದಿಡುತ್ತಾನೆ. ಆದರೆ ವಿಶ್ವಾಮಿತ್ರರಿಗೆ ಇದು ಶಿಷ್ಯನ ಅಹಂಕಾರವಾಗಿ ಕಂಡು ಕೊಡಲು ಅಸಾಧ್ಯವಾಗಬಹುದಾದ ಬೇಡಿಕೆಯನ್ನಿಡುತ್ತಾರೆ. ಒಂದು ಕರ್ಣ ಕಪ್ಪಗಿರುವ, ಮೈ ಪೂರ್ತಿ ಬಿಳಿಯಾಗಿರುವ ಎಂಟುನೂರು ಹಯಗಳನ್ನು ಗುರುದಕ್ಷಿಣೆಯಾಗಿ ಕೊಡಬೇಕೆಂದು ಆಗ್ರಹಿಸುತ್ತಾರೆ.

ಕೇವಲ ಎರಡೇ ದೃಶ್ಯಗಳಲ್ಲಿ ಕಂಡು ಬಂದರೂ ತಮ್ಮ ಲಘು ಹಾಸ್ಯ ಮಿಶ್ರಿತ ಮಾತಿನ ಚಟಾಕಿಯಿಂದ ವಿಶ್ವಾಮಿತ್ರ ಪಾತ್ರಧಾರಿ ತುಂಬ್ರಿ ಭಾಸ್ಕರ ಅವರು ಗಮನಸೆಳೆದರು. ಪ್ರಸಂಗದುದ್ದಕ್ಕೂ ಒಂದು ರೀತಿಯ ಸೂತ್ರಧಾರನಂತಿದ್ದ ಗಾಲವ ಪಾತ್ರಧಾರಿ ಎಚ್‌. ಸುಜಯೀಂದ್ರ ಹಂದೆಯವರು ಹಿತಮಿತವಾದ ಮಾತು, ಸುಪ್ರದಾಯಬದ್ಧ ಕುಣಿತ, ಪದ ಎತ್ತುಗಡೆಯಿಂದ ಪ್ರೇಕ್ಷಕರನ್ನು ಹಿಡಿದಿಟ್ಟಿದ್ದರು. ಸಾಧಾರಣವಾಗಿ ಶಿಖೆ, ಕಾಷಾಯ ವಸ್ತ್ರಧಾರಿಯಾಗಿ ಬರುವ ಮುನಿ ಗಾಲವನಿಗೆ ಯಕ್ಷಗಾನೀಯವಾದ ವೇಷಭೂಷಣವನ್ನು ಸಿದ್ಧಪಡಿಸಿದ್ದು ಈ ಪ್ರಯೋಗಕ್ಕೆ ಒಂದು ಹೊಸ ನೋಟವನ್ನು ದಕ್ಕಿಸಿತು.

ಪ್ರಪಂಚವಿಡೀ ಸುತ್ತಿದರೂ ಅಂತಹ ಹಯಗಳು ಕಾಣದಾದಾಗ ಗಾಲವ ಗರುಡನ ಸಹಕಾರದೊಂದಿಗೆ ಯಯಾತಿ ಮಹಾರಾಜನ ಮುಂದೆ ನಿಂತು ತನ್ನ ಗುರುದಕ್ಷಿಣಿಯ ವೃತ್ತಾಂತವನ್ನು ವಿವರಿಸಿ ಅದಕ್ಕಾಗಿ ಅವನ ಸಹಕಾರ ಕೇಳುತ್ತಾನೆ. ಕುದುರೆಯಲ್ಲದಿದ್ದರೂ ಅದನ್ನು ಸಂಪಾದಿಸಲು ಸಂಪತ್ತನ್ನಾದರೂ ನೀಡಬೇಕೆಂಬುದು ಗಾಲವನ ಬೇಡಿಕೆ. ಆ ಹೊತ್ತಿಗಾಗಲೇ ಭಂಡಾರ ಬರಿದು ಮಾಡಿಕೊಂಡ ಯಯಾತಿಯ ಬಳಿ ಅಂತಹ ಕುದುರೆಗಳೂ ಇರಲಿಲ್ಲ. ಹಾಗಾಗಿ ಪತ್ನಿ ದೇವಯಾನಿಯ ಸೂಚನೆಯಂತೆ ತಾನು ಅಪ್ಸರೆಯೊಬ್ಬಳಿಂದ ಪಡೆದ ಮಗಳು ಮಾಧವಿ ಎಂಬ ಕನ್ಯಾರತ್ನವನ್ನೇ ಗಾಲವನಿಗೆ ಕೊಟ್ಟು ಅವಳನ್ನು ಬಳಸಿಕೊಂಡು ಹಯಗಳನ್ನು ಸಂಪಾದಿಸಿಕೊಳ್ಳುವಂತೆ ಕೇಳಿಕೊಳ್ಳುತ್ತಾನೆ. ಕೌಟುಂಬಿಕ ಹಾಗೂ ರಾಜಕೀಯ ಕಾರಣಕ್ಕೆ ಮಗಳನ್ನು ಬಲಿಕೊಡಬೇಕಾದ ಸಂದರ್ಭದ ಯಯಾತಿ ಪಾತ್ರಧಾರಿ ಆನಂದ ಕೆಕ್ಕಾರು ಚೆನ್ನಾಗಿ ಅಭಿನಯಿಸಿದರು.

ಈ ಹಂತದಲ್ಲಿಯೇ ಆಖ್ಯಾನದ ಮುಖ್ಯ ಪಾತ್ರ ಮಾಧವಿಯ ಪ್ರವೇಶ. ಬದುಕಿನಲ್ಲಿ ಆಸೆ, ಆಕಾಂಕ್ಷೆ, ಕನಸುಗಳನ್ನು ಕಟ್ಟಿಕೊಂಡಿದ್ದ ಅನುಪಮ ಸುಂದರಿಯಾದ ಈ ಹುಡುಗಿ ಗಾಲವನ ಹಿಂದೆ ತಾನು ಹೋಗಬೇಕೆಂಬ ತಂದೆಯ ಅಪ್ಪಣೆಯನ್ನು ಕೇಳಿ ಅಘಾತಕ್ಕೊಳಗಾಗುತ್ತಾಳೆ. ಮಾಧವಿಯ ಒಳಹೊಕ್ಕು ಅವಳ ಒಳಗನ್ನು ಹೊರ ತೆಗೆದಿಟ್ಟ ಸಂಜೀವ ಹೆನ್ನಾಬೈಲು ಇವರು ತಮ್ಮ ಸಂಯಮದ ನಡೆನುಡಿಯಿಂದ ಪ್ರಸಂಗದುದ್ದಕ್ಕೂ ನೋಡುಗರ ಒಡಲಲ್ಲಿ ಒಂದು ಸಂಕಟದ ಅಲೆಯನ್ನು ಎಬ್ಬಿಸಿಬಿಟ್ಟರು.

ಪ್ರಸಂಗದ ಕೊನೆಯ ದೃಶ್ಯ ಮಾಧವಿಯ ಸ್ವಯಂವರ. ನಾಲ್ಕು ಮಕ್ಕಳ ತಾಯಿ ಮಾಧವಿ ಮತ್ತೆ ವಧುವಾಗಿ ಅನೇಕ ರಾಜಕುಮಾರರ ಮುಂದೆ ನಿಲ್ಲಬೇಕಾದ ಪರಿಸ್ಥಿತಿ. ರಾಜಕುಮಾರರಾಗಿ ಸಾತ್ಯಕಿ, ಪ್ರತೀಕ್‌ ಸಮರ್ಥವಾಗಿ ನಿರ್ವಹಿಸಿದರು. ಇಲ್ಲಿ ಮದುವೆ ಸಂಸಾರ, ಮಕ್ಕಳು ಎಂಬೆಲ್ಲ ಮಮಕಾರವನ್ನು ಮೀರಿದ ಮಾಧವಿಯು ಮದುವೆಯನ್ನೇ ಧಿಕ್ಕರಿಸಿ ತಾನು ಜ್ಞಾನ ಸಂಪಾದನೆಯ ಮಾರ್ಗ ತುಳಿದು ಯೋಗಿನಿಯಾಗುತ್ತಾಳೆ.

ಭಾವಪೂರ್ಣ ಭಾಗವತಿಕೆಗೆ ಪ್ರಸಿದ್ಧರಾದ ಕೆ.ಪಿ. ಹೆಗಡೆಯವರು ಪ್ರಧಾನ ಭಾಗವತರಾಗಿ ತಮ್ಮ ವೃತ್ತಿಪರತೆಯನ್ನು ಮೆರೆದರು. ಅವರಿಗೆ ಜೊತೆಯಾಗಿ ಪ್ರಸಂಗವನ್ನು ಮುಂದುವರಿಸಿಕೊಂಡು ಹೋದವರು ಲಂಬೋದರ ಹೆಗಡೆ, ಕೂಡ್ಲಿ ದೇವದಾಸ್‌. ಮದ್ದಳೆ ವಾದಕರಾಗಿ ಕೋಟ ಶಿವಾನಂದ್‌, ಚಂಡೆ ವಾದಕರಾಗಿ ರಂಗದ ಕಳೆ ಏರಿಸಿದರು. ಸೀಮಿತ ಅವಧಿಯ ಪ್ರಸಂಗವನ್ನು ನೋಡುವಾಗ ಒಂದೆರಡು ಪ್ರಶ್ನೆಗಳು ಕಾಡಿದವು. ಅತ್ಯಂತ ಪ್ರಸ್ತುತವಾದ ಸಮಸ್ಯೆಯೊಂದನ್ನು ಕೈಗೆತ್ತಿಕೊಂಡು ಪ್ರದರ್ಶನವಾಗಿ ಇದು ಪ್ರೇಕ್ಷಕರನ್ನು ಮುಟ್ಟಿದ್ದು ಸತ್ಯವಾದರೂ, ಯಕ್ಷಗಾನ ಪ್ರಸಂಗವಾಗಿ ಕೆಲವೊಂದು ಆಯಾಮಗಳು ಇದಕ್ಕೆ ದಕ್ಕಲಿಲ್ಲವೇನೋ ಅನ್ನಿಸಿತು. ಇಲ್ಲಿಯ ಕಥೆ ಕಥನವಾಗಿ ಏಕಮುಖದಲ್ಲಿ ಸಂಚರಿಸದೇ ಅಲ್ಲಿ ಮೌಲ್ಯಗಳ ನಡುವೆ, ಪಾತ್ರಗಳ ನಡುವೆ ತಾತ್ವಿಕ ಸಂಘರ್ಷವೇರ್ಪಟ್ಟು ಒಂದು ಬಗೆಯ ಜಿಜ್ಞಾಸೆ ನೋಡುಗರನ್ನು ಕಾಡಬೇಕು. ತತ್ವಗಳನ್ನೂ ಮೌಲ್ಯಗಳನ್ನೂ ಸರಳವಾಗಿ ಜನಸಾಮಾನ್ಯರಿಗೆ ಮುಟ್ಟಿಸುವುದಕ್ಕಾಗಿಯೇ ಸೃಷ್ಟಿಯಾದ ಪುರಾಣ ಪುಣ್ಯ ಕಥೆ ಇಲ್ಲಿಯದ್ದಾದ್ದರಿಂದ ಮಾಧವಿಗಾದ ಅನ್ಯಾಯವನ್ನು ಗ್ರಹಿಸುವ ಮಟ್ಟಿಗಾದರೂ ಅಲ್ಲಿಯ ಪಾತ್ರಗಳಿಗೆ ಬೆಳೆಯುವ ಅವಕಾಶ ಇರಬೇಕಿತ್ತು ಅಥವಾ ಅಂತಹ ದರ್ಶನ ಕೊಡಿಸುವ ಒಂದು ಪಾತ್ರದ ಅಗತ್ಯವಿತ್ತು.

ಅಭಿಲಾಷ ಎಸ್‌. ಸಾಲಿಕೇರಿ

ಟಾಪ್ ನ್ಯೂಸ್

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.