ರಾಮಚಂದ್ರಭಟ್ಗೆ ಯಕ್ಷಲಹರಿ ಪ್ರಶಸ್ತಿ
Team Udayavani, Aug 2, 2019, 5:00 AM IST
ಯಕ್ಷಲಹರಿ ಸಂಸ್ಥೆ 28 ವರ್ಷಗಳ ಹಿಂದೆ ಯಕ್ಷಗಾನದ ಸಮಾನ ಆಸಕ್ತರ ಕೆಲವು ಮಂದಿಗಳ ಜೊತೆಗೂಡುವಿಕೆಯಿಂದ ದಿ| ಇ. ಶ್ರೀನಿವಾಸ ಭಟ್ರವರ ಮುಂದಾಳುತ್ವದಲ್ಲಿ ಪ್ರಾರಂಭವಾಯಿತು. ಇದೀಗ 29 ನೇ ವರ್ಷದಲ್ಲಿ ಜು. 29 ರಿಂದ ಆರಂಭಗೊಂಡ ತಾಳಮದ್ದಳೆ ಆ. 4ರತನಕ ಧರ್ಮಸಂಹಿತಂ ಪರುಷ ವಾಕ್ಯಂ ಎಂಬ ಶೀರ್ಷಿಕೆಯಡಿಯಲ್ಲಿ ನಡೆಯಲಿದೆ. ಹಿರಿಯ ಯಕ್ಷಗಾನ ಕಲಾವಿದ ರಾಮಚಂದ್ರ ಭಟ್ ತೋಕೂರು ಅವರನ್ನು ಈ ಸಂದರ್ಭದಲ್ಲಿ ಯಕ್ಷಲಹರಿ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಗುವುದು.
ಹವ್ಯಾಸಿ ಅರ್ಥದಾರಿ ರಾಮಚಂದ್ರ ಭಟ್ ತೋಕೂರು ಯಕ್ಷಗಾನ ಕಂಡ ಅಪರೂಪದ ಹಿರಿಯ ತಲೆಮಾರಿನ ಕೊಂಡಿ. ಇವರು ಸಂಸ್ಕೃತ, ನ್ಯಾಯಶಾಸ್ತ್ರ, ಧರ್ಮಶಾಸ್ತ್ರ ಪಾರಂಗತರು. ಸಂಸ್ಕೃತ , ಕನ್ನಡ ಸ್ನಾತಕೋತ್ತರ ಪದವಿ ಪಡೆದು ಅಧ್ಯಾಪನ ವೃತ್ತಿಯಲ್ಲಿದ್ದರು. ಈ ಸಂದರ್ಭದಲ್ಲಿ ಯಕ್ಷಗಾನ ಹಾಗೂ ನಾಟಕದ ಬಗ್ಗೆ ಅಪಾರವಾದ ಸೆಳತದಿಂದ ಆಟ- ಕೂಟಗಳಲ್ಲಿ ಭಾಗವಹಿಸುತ್ತಿದ್ದರು. ದಿ. ಕೊರ್ಗಿ ವೆಂಕಟೇಶ ಉಪಾಧ್ಯಯರ ಗೆಳತನ , ಪ್ರಭಾಕರ ಜೋಷಿಯವರ , ಎಂ. ಎಲ್ ಸಾಮಗರ ಒಡನಾಟದಿಂದ ತಾಳಮದ್ದಲೆಯಲ್ಲಿ ಭಾಗವಹಿಸುವಿಕೆ, ಶಂಕರನಾರಾಯಣ ಸಾಮಗ, ರಾಮದಾಸ ಸಾಮಗರ ಜೊತೆಗೆ ತಾಳಮದ್ದಲೆ ಕೂಟದಲ್ಲಿ ಅರ್ಥಗಾರಿಕೆ ಮಾಡಿದ್ದಾರೆ. ವಾಸುದೇವ ಸಾಮಗರ ಸಂಯಮಂನಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಮೂಲ್ಕಿ, ಬಪ್ಪನಾಡು, ಕಾರ್ನಾಡು, ಸುರತ್ಕಲ್, ಹೊಸಬೆಟ್ಟು ವಿನಲ್ಲಿ ನಡೆಯುವ ವಾರದ ಕೂಟ, ತಿಂಗಳ ಕೂಟಗಳಲ್ಲಿ ಭಾಗವಹಿಸಿಸುತ್ತಿದ್ದಾರೆ.
ರಘುನಾಥ ಕಾಮತ್ ಕೆಂಚನಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ