ನಿಯಮ ಪಾಲನೆ ಮಹತ್ವ ಸಾರಿದ ಯಮದಂಡ


Team Udayavani, Aug 30, 2019, 5:00 AM IST

f-10

ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೆ ಮರಣಾ ನಂತರ ಯಮಲೋಕದಲ್ಲೂ ಕಠಿಣ ದಂಡನೆಗೆ ಒಳಗಾಗಬೇಕಾಗುತ್ತದೆ. ಇದು ಸ್ವಾತಂತ್ರ್ಯ ದಿನಾಚರಣೆಯಂದು ಉಡುಪಿಯ ಪುರಭವನದಲ್ಲಿ, ರಸ್ತೆ ಸುರಕ್ಷತೆಯ ಅರಿವಿಗಾಗಿ ಉಡುಪಿ ಜಿಲ್ಲಾಡಳಿತ ಆಯೋಜಿಸಿದ್ದ “ಯಮದಂಡ’ ಯಕ್ಷಗಾನದ ತಿರುಳು.

ಯಮಲೋಕಕ್ಕೆ ಆಗಮಿಸಿದ ಜೀವಾತ್ಮಗಳ ಪಾಪ ಪುಣ್ಯಗಳ ಪರಿಶೀಲನೆ ನಡೆಸುತ್ತಿರುವ ಯಮ, ಮನುಷ್ಯ ಆತ್ಮವೊಂದು ಬಂದ ಸಂದರ್ಭದಲ್ಲಿ ಆತನ ಸಾವಿಗೆ ಕಾರಣ ಮತ್ತು ಆತನ ಪಾಪ ಪುಣ್ಯಗಳ ಲೆಕ್ಕ ನೀಡುವಂತೆ ಚಿತ್ರಗುಪ್ತನಲ್ಲಿ ಕೇಳುತ್ತಾನೆ. ಭೂಲೋಕದಲ್ಲಿನ ಧನಿಕನೋರ್ವನ ಏಕೈಕ ಪುತ್ರ, ಶಾಲಾ ವಿದ್ಯಾರ್ಥಿ, ಬೆಲೆ ಬಾಳುವ ದ್ವಿಚಕ್ರ ವಾಹನ ಹೊಂದಿದ್ದ ಈತ ವಾಹನ ಚಾಲನೆಯ ಪರವಾನಗಿ ಪಡೆಯದೇ ಹೆಲ್ಮೆಟ್‌ ಧರಿಸದೆ ಅತಿ ವೇಗದಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತಾ ದಾರಿಯಲ್ಲಿ ಹೋಗುತ್ತಿದ್ದ ನಿರಪರಾಧಿ ಬಾಲಕನಿಗೆ ಢಿಕ್ಕಿ ಹೊಡೆದು ಅವನ ಸಾವಿಗೆ ಕಾರಣನಾಗಿದ್ದಾನೆ. ಅಲ್ಲದೆ ಅದೇ ಅಪಘಾತದಲ್ಲಿ ಸಾವು ಬದುಕಿನ ನಡುವೆ ಹೋರಾಡಿ ಈತನೂ ಮೃತಪಟ್ಟಿದ್ದಾನೆ ಎಂದು ವಿವರಿಸುತ್ತಾನೆ.

ಕೂಡಲೇ ರೋಷಗೊಂಡ ಯಮ ಇತ್ತೀಚೆಗೆ ಯಮಲೋಕಕ್ಕೆ ಭೂಲೋಕದಿಂದ ಅಪಘಾತಗಳಿಂದ ಮೃತಪಟ್ಟ ಪ್ರೇತಾತ್ಮಗಳೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿವೆ. ಭೂ ಲೋಕದಲ್ಲಿರುವ ಜನರಿಗೆ ಸಂಚಾರಿ ನಿಯಮಗಳ ಅರಿವಿಲ್ಲವೆ , ಸರಕಾರದ ಅಧಿಕಾರಿಗಳು ನಿಯಮಗಳನ್ನು ರೂಪಿಸಿಲ್ಲವೆ, ನಿಯಮ ಉಲ್ಲಂ ಸುವವರಿಗೆ ದಂಡ ವಿಧಿಸುತ್ತಿಲ್ಲವೆ, ಏನು ನಡೆಯುತ್ತಿದೆ ಭೂ ಲೋಕದಲ್ಲಿ ಎಂದು ಪ್ರಶ್ನಿಸುತ್ತಾನೆ.

ಭೂ ಲೋಕದಲ್ಲಿ ವಾಹನ ಚಾಲನೆಯ ಪರವಾನಗಿ ಪಡೆಯದೇ ಇರುವುದಕ್ಕೆ, ಹೆಲ್ಮೆಟ್‌ ಧರಿಸದೆ ಅತಿ ವೇಗದಲ್ಲಿ ವಾಹನ ಚಾಲನೆ ಮಾಡುವುದಕ್ಕೆ, ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಾಲನೆ ಮಾಡುವುದಕ್ಕೆ, ಅಪಘಾತದಿಂದ ಮತ್ತೂಬ್ಬರ ಪ್ರಾಣ ಹಾನಿ ಮಾಡಿದ್ದಕ್ಕೆ ಇರುವ ದಂಡ ಮತ್ತು ಶಿಕ್ಷೆಗಳ ಬಗ್ಗೆ ವಿವರಿಸುತ್ತಾನೆ ಕಿಂಕರ.

ಭೂಲೋಕದ ಆಡಳಿತ ವ್ಯವಸ್ಥೆಯಲ್ಲಿ ಇಷ್ಟೆಲ್ಲಾ ಕ್ರಮ ನಿಯಮಗಳಿದ್ದರೂ, ಧನ ಬಲ ಹಾಗೂ ಅಹಂಕಾರದಿಂದ ನಿಯಮ ಪಾಲಿಸದ ಈತ ಪಾಪಿಯೇ ಸರಿ. ಅಪಘಾತ ಮಾಡಿ ಲೋಕದಲ್ಲಿ ಇನ್ನೂ ಬಾಳಿ ಬೆಳಗಬೇಕಾದ ಬಾಲಕನ ಹತ್ಯೆಗೆ ಕಾರಣನಾದ ಈತನನ್ನು ಕುಂಭಿಪಾಕ ನರಕಕ್ಕೆ ತಳ್ಳಿ ಆದೇಶಿಸುತ್ತಾನೆ ಯಮ.

ಅನಂತರ ಬಂದ ಮತ್ತೂಂದು ಆತ್ಮದ ಸಾವಿಗೆ ಕಾರಣ ಮತ್ತು ಆತನ ಪಾಪ ಪುಣ್ಯಗಳ ಲೆಕ್ಕ ಪರಿಶೀಲಿಸುವ ಯಮ, ಭೂ ಲೋಕದಲ್ಲಿ ದುರುಳನಾಗಿ ಕಾಲ ಕಳೆದು, ನಾಲ್ಕು ಚಕ್ರದ ವಾಹನ ಹೊಂದಿದ್ದ ಈತ, ವಾಹನದ ಅವಧಿ ನವೀಕರಿಸದೆ, ವಾಹನಕ್ಕೆ ವಿಮೆ ಮಾಡಿಸದೆ,ವಾಹನ ಚಾಲನೆ ಸಮಯದಲ್ಲಿ ಸೀಟ್‌ ಬೆಲ್ಟ್ ಹಾಕದೆ, ಪಾನಮತ್ತನಾಗಿ ವಾಹನ ಚಲಾಯಿಸಿ, ವಿದ್ಯುತ್‌ ಕಂಬಕ್ಕೆ ಗುದ್ದಿ ಆ ಕಂಬ ಪಕ್ಕದ ಮನೆ ಮೇಲೆ ಬಿದ್ದು, ಆ ಇಡೀ ಕುಟುಂಬದ ಸರ್ವನಾಶಕ್ಕೆ ಕಾರಣನಾಗಿ, ಅಲ್ಲಿಂದ ತಲೆ ಮರೆಸಿಕೊಂಡು ಜೀವನೋಪಾಯಕ್ಕೆ ಕಳ್ಳತನ, ದರೋಡೆ ಮಾಡುತ್ತಿದ್ದು, ಒಮ್ಮೆ ಅತಿಯಾಗಿ ಕುಡಿದು ರಸ್ತೆಯಲ್ಲಿ ನಡೆಯುವಾಗ, ಆಯ ತಪ್ಪಿ ವಾಹನದ ಕೆಳಗೆ ಬಿದ್ದು ಸಾವನಪ್ಪಿರುವುದನ್ನು ತಿಳಿದ ಯಮ ಕೆಡಕು ಎಂಬ ಎಚ್ಚರಿಕೆ ನುಡಿಯನ್ನು ಲೆಕ್ಕಿಸದೆ ಪಾನಮತ್ತನಾಗಿ ವಾಹನಘಾತದಿಂದ ಹತ್ತಾರು ಜನರನ್ನು ಬಲಿ ಪಡೆದ ಈತ ನಿಜವಾಗಿ ಪಾಪಿ ಈತನನ್ನು “ಕ್ರಿಮಿ ಭೋಜನ’ ನರಕಕ್ಕೆ ತಳ್ಳುವಂತೆ ಆದೇಶಿಸುತ್ತಾನೆ.

ಭೂ ಲೋಕದಲ್ಲಿ ಇಷ್ಟೊಂದು ರಸ್ತೆ ನಿಯಮಗಳು, ದಂಡ, ಶಿಕ್ಷೆ ಇದ್ದರೂ , ಜನರಿಗೆ ಇದರ ಬಗ್ಗೆ ಅರಿವು ಇದೆಯಾ, ಅಧಿಕಾರಿಗಳು ಅರಿವು ಮೂಡಿಸುವ ಕಾರ್ಯಕ್ರಮ ಮಾಡುತ್ತಿದ್ದಾರಾ ಎಂದು ಪ್ರಶ್ನಿಸುತ್ತಾನೆ.

ಭೂ ಲೋಕದಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಎಲ್ಲಡೆ ಸೂಚನಾ ಫ‌ಲಕಗಳನ್ನು ಅಳವಡಿಸಿದ್ದಾರೆ, ಶಾಲಾ ಮಕ್ಕಳಿಗೆ ವಿವಿಧ ಪ್ರಚಾರ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುತ್ತಿದ್ದಾರೆ, ಉಡುಪಿ ಎಂಬ ಜಿಲ್ಲೆಯಲ್ಲಿ ಎಲ್ಲಾ ಶಾಲೆಗಳ ಗೋಡೆಗಳ ಮೇಲೆ ಮಾಹಿತಿಯ ಚಿತ್ರಗಳನ್ನು ಬಿಡಿಸಲಾಗಿದೆ, ಕಲಾಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದಾರೆ, ಆರಕ್ಷಕ ಇಲಾಖೆಯವರು ಕಿರುಚಿತ್ರಗಳ ಮೂಲಕ ಅರಿವು ಮೂಡಿಸುತ್ತಿದ್ದಾರೆ. ಅಲ್ಲದೆ ಪ್ರಸ್ತುತ ಸಂಚಾರ ನಿಯಮಗಳ ಉಲ್ಲಂಘನೆಗೆ ಅತೀ ಹೆಚ್ಚಿನ ದಂಡ ಮತ್ತು ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ಬಂದಿದೆ ಚಿತ್ರಗುಪ್ತ ವಿವರಿಸುತ್ತಾನೆ.

ಹಾಗಾದರೆ ಇನ್ನು ಮುಂದಾದರೂ ರಸ್ತೆ ಅಪಘಾತಗಳಿಂದ ಮೃತಪಟ್ಟು ಯಮಲೋಕ್ಕೆ ಬರುವ ಪ್ರೇತಾತ್ಮಗಳ ಸಂಖ್ಯೆ ಕಡಿಮೆಯಾಗಲಿ ಎಂದು ಯಮ ಹಾರೈಸುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತದೆ.

ಕಲಾಪೀಠ ಕೋಟ ಇವರು ಪ್ರಸ್ತುತ ಪಡಿಸಿದ ಈ “ಯಮದಂಡ’ವನ್ನು ಕೆ.ನರಸಿಂಹ ತುಂಗ ನಿರ್ದೇಶಿಸಿದ್ದು, ಪರಿಕಲ್ಪನೆ ಹಾಗೂ ಪ್ರಸಂಗ ರಚನೆ ನಾಗೇಶ್‌ ಶಾನುಬೋಗ್‌ (ನಿವೃತ್ತ ಶಿಕ್ಷಣಾಧಿಕಾರಿ), ಮೊಗೆಬೆಟ್ಟು ಇವರದ್ದು. ಯಮನ ಪಾತ್ರಧಾರಿಯಾಗಿ ಉಡುಪಿ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕ ಅಸ್ಫಕ್‌ ಅಭಿನಯಿಸಿದ್ದು, ಯಮ ರೋಷಗೊಳ್ಳುವ ಸನ್ನಿವೇಶದಲ್ಲಿ ಅವರ ಅಭಿನಯ ಮೆಚ್ಚುಗೆ ಗಳಿಸಿತು. ಚಿತ್ರಗುಪ್ತನಾಗಿ ನರಸಿಂಹ ತುಂಗ ನವಿರಾದ ಹಾಸ್ಯದ ಮೂಲಕ ಮೆರಗು ತಂದರು.

ಟಾಪ್ ನ್ಯೂಸ್

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.