ರಂಜಿಸಿದ ಯುವ ಸಂಗೀತಾ ಸುಧಾ
Team Udayavani, Jan 12, 2018, 3:19 PM IST
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ನಾದ ಸುಧಾ ಸಂಗೀತ ವಿದ್ಯಾಲಯ (ರಿ.) ಮಂಗಳೂರು ಆಶ್ರಯದಲ್ಲಿ “ಯುವ ಸಂಗೀತ ಸುಧಾ – 2017′ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಮಂಗಳೂರಿನ ಶಿವರಾಮ ಕಾರಂತ ಸಭಾಭವನದಲ್ಲಿ ನಡೆಯಿತು.
ಕುನ್ನುಕ್ಕುಡಿ ಬಾಲಮುರಲಿಕೃಷ್ಣ ಹಾಡುಗಾರಿಕೆಯಲ್ಲಿ, ಕೆ.ಜೆ. ದಿಲೀಪ್ ವಯಲಿನ್ನಲ್ಲಿ, ಸುನಾದಕೃಷ್ಣ ಅಮೈ ಮೃದಂಗದಲ್ಲಿ ಸಹಕರಿಸಿದರು. ಕಾನಡ ರಾಗದ ನೆರನಮ್ಮಿತಿ ವರ್ಣದೊಂದಿಗೆ ಆರಂಭಗೊಂಡ ಕಛೇರಿ ಮುಂದೆ ಗಣಪತಿ ಎನ್ನ ಪಾಲಿಸೋ ನಾಟ ರಾಗದಲ್ಲಿ ಸ್ವರಪ್ರಸ್ತಾರದೊಂದಿಗೆ ಮೂಡಿ ಬಂತು. ಮುಂದೆ ಎವರೀಕೈ ಅವತಾರ – ದೇವ ಮನೋಹರಿ ರಾಗದಲ್ಲಿ ಮಿಶ್ರಛಾಪು ತಾಳದಲ್ಲಿ ಮೂಡಿ ಬಂತು. ಧರ್ಮವತಿ ರಾಗಾಲಾಪನೆಯನ್ನು ಆಯ್ದುಕೊಂಡ ಕಲಾವಿದರು ಭಜನಸೇಯರಾದಾ ರೂಪಕ ತಾಳದ ಕೃತಿಯನ್ನು ಹಾಡಿ ಸ್ವರಪ್ರಸ್ತಾರದೊಂದಿಗೆ ಮುಕ್ತಾಯಗೊಳಿಸಿದರು.
ಮುಂದೆ ತೋಡಿ ರಾಗ ಆಲಾಪನೆ ಮಾಡಿ ಶ್ರೀಕೃಷ್ಣಂ ಭಜಮಾನಸ ಕೃತಿಗೆ ನ್ಯಾಯ ಒದಗಿಸಿದರು. ಸ್ವರಪ್ರಸ್ತಾರಗಳ ಜೋಡಣೆ, ನೆರವಲ್ನ ವಿನ್ಯಾಸ ಉತ್ತಮವಾಗಿತ್ತು. ಕೆ.ಜೆ. ದಿಲೀಪ್ ವಯಲಿನ್ ನುಡಿಸಾಣಿಕೆ ರಸಿಕರ ಪ್ರಶಂಸೆಗೆ ಪಾತ್ರವಾಯಿತು. ಸುನಾದಕೃಷ್ಣ, ಅಮೈ ತನಿ ಆವರ್ತದಲ್ಲಿ ಶ್ರೋತೃಗಳ ಮನಗೆದ್ದರು.
ಸುಮಾರು ಮೂರು ತಾಸು ಹಾಡಿದ ನಂತರವೇ ಎತ್ತಿಕೊಂಡದ್ದು ಹಂಸಾನಂದಿಯ ರಾಗಾಲಾಪನೆ ಶ್ರೀ ರಾಜಗೋಪಾಲ ಬಾಲಂ ಭಜೇ ಶೃತ ಜನ ಪಾಲಂ ಸಾಹಿತ್ಯ ಜೋಡಣೆಯ ಪಲ್ಲವಿಯನ್ನು ನೀಡಿ ಕಾಂಬೋಜಿ, ನಾಗಾನಂದಿನಿ, ವರಾಳಿ, ಅಹಿರಿ, ಮಾಂಡ್ ಇವಿಷ್ಟು ರಾಗಗಳಲ್ಲಿ ಜುಂಜೂಟ ರಾಗದ ತಿಲ್ಲಾನವನ್ನೂ ಹಾಡಿ ಮುಕ್ತಾಯ ನೀಡಿದರು. ಕರಾರುವಕ್ಕಾದ ಕಣಕ್ಕುಗಳನ್ನು ನೀಡಿದ ಕುನ್ನುಕ್ಕುಡಿ ಬಾಲಮುರಲಿಕೃಷ್ಣ ಮಂಗಳೂರಿನ ರಸಿಕರ ಮನಗೆದ್ದರು.
ಪದ್ಮನಾಭ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್ ಮೆಂಟ್ ಮಾಡಿಕೊಂಡ ಜೋಡಿ
RC 17: ಮತ್ತೆ ಒಂದಾದ ರಂಗಸ್ಥಳಂ ತಂಡ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ