ಸ್ತನಗಳ ಬಗ್ಗೆ ಇರಲಿ ಅರಿವು, ಎಚ್ಚರಿಕೆ


Team Udayavani, Nov 29, 2020, 6:39 PM IST

ಸ್ತನಗಳ ಬಗ್ಗೆ  ಇರಲಿ ಅರಿವು, ಎಚ್ಚರಿಕೆ

ಪ್ರತೀ ವರ್ಷ ಅಕ್ಟೋಬರ್‌ ತಿಂಗಳನ್ನು ಜಾಗತಿಕವಾಗಿ ಸ್ತನದ ಕ್ಯಾನ್ಸರ್‌ ಅರಿವಿನ ತಿಂಗಳು ಎಂಬುದಾಗಿ ಆಚರಿಸಲಾಗುತ್ತದೆ. ಮಹಿಳೆಯರಲ್ಲಿ ಅತ್ಯಂತ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕ್ಯಾನ್ಸರ್‌ ಆಗಿರುವ ಇದು ಭಾರತ ಮತ್ತು ಇಡಿಯ ಜಗತ್ತಿನಲ್ಲಿ ಅತೀ ಹೆಚ್ಚು ಕ್ಯಾನ್ಸರ್‌ ಸಂಬಂಧಿ ಮರಣಗಳಿಗೆ ಕಾರಣ ಎನ್ನಿಸಿಕೊಂಡಿದೆ.

ಕೋವಿಡ್ ಸಾಂಕ್ರಾಮಿಕವು ಆವರಿಸಿರುವ ಕಾಲದಲ್ಲಿ ಅನೇಕ ವಿಧದ ಕಾಯಿಲೆಗೆ ಒಳಗಾದವರು ಕಾಯಿಲೆಯು ಮುಂದುವರಿದ ಹಂತ ತಲುಪಿದ ಬಳಿಕವಷ್ಟೇ ಆಸ್ಪತ್ರೆಗೆ ಭೇಟಿ ನೀಡುತ್ತಿರುವುದನ್ನು ಕಂಡಿದ್ದೇವೆ. ರೋಗಿಗಳು ಖಂಡಿತವಾಗಿ ಕೊರೊನಾ ವೈರಸ್‌ ಸೋಂಕು ತಗುಲಬಹುದು ಎಂಬ ಭಯ ಹೊಂದಿರುತ್ತಾರೆ. ಆದರೆ ಇದೇ ವೇಳೆ ಕ್ಯಾನ್ಸರ್‌ ಕಾಯಿಲೆ ಮತ್ತು ಅದರಿಂದಾಗಿ ಉಂಟಾಗುತ್ತಿರುವ ಮರಣದ ದರ ಹೆಚ್ಚುತ್ತಿರುವ ಬಗ್ಗೆಯೂ ನಾವು ತಿಳಿದುಕೊಳ್ಳುವುದು ಒಳ್ಳೆಯದು. ಯಾಕೆಂದರೆ, ಕೊರೊನಾದಿಂದ ಉಂಟಾಗುವ ಸಾವಿನ ಪ್ರಮಾಣಕ್ಕಿಂತ ಕ್ಯಾನ್ಸರ್‌ನಿಂದ ಉಂಟಾಗುವ ಸಾವಿನ ಪ್ರಮಾಣ ಹೆಚ್ಚಿದೆ. ಹಾಗಾಗಿ ಈ 2020 ವರ್ಷದಲ್ಲಿ ಕ್ಯಾನ್ಸರ್‌, ಅದರಲ್ಲೂ ಸ್ತನದ ಕ್ಯಾನ್ಸರ್‌ ಬಗ್ಗೆ ನಾವು ಹೆಚ್ಚು ತಿಳಿದುಕೊಳ್ಳಬೇಕಾಗಿದೆ.

2020ರ ಸೆಪ್ಟಂಬರ್‌ 1ರ ವರೆಗಿನ ಅಂಕಿಅಂಶಗಳ ಪ್ರಕಾರ ಕೋವಿಡ್ ಮತ್ತು ಅದರ ಸಂಕೀರ್ಣ ಸಮಸ್ಯೆಗಳಿಂದ ಸರಿಸುಮಾರು 65 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಆದರೆ ಭಾರತದಲ್ಲಿ ಪ್ರತೀ ವರ್ಷ ಕ್ಯಾನ್ಸರ್‌ ಸಂಬಂಧಿ ಸಾವುಗಳ ಸಂಖ್ಯೆ 7 ಲಕ್ಷಕ್ಕಿಂತಲೂ ಹೆಚ್ಚು. ಇದರಲ್ಲಿ ಸ್ತನ ಕ್ಯಾನ್ಸರ್‌ನಿಂದ ಉಂಟಾಗುತ್ತಿರುವ ಮೃತ್ಯುಗಳೇ 80 ಸಾವಿರಕ್ಕೂ ಅಧಿಕವಿರುತ್ತವೆ.

 

ವಿವಿಧ ಅಂಗಾಂಗಗಳಲ್ಲಿ ಉಂಟಾಗುವ ಕ್ಯಾನ್ಸರ್‌ಗಳ ಪೈಕಿ ಸ್ತನದ ಕ್ಯಾನ್ಸರ್‌ ಅತೀ ಸಾಮಾನ್ಯವಾದುದಾಗಿದೆ. ಸ್ತನದ ಕ್ಯಾನ್ಸರ್‌ ಬಗ್ಗೆ ನಾವು ಏಕೆ ಹೆಚ್ಚು ತಿಳಿದುಕೊಳ್ಳಬೇಕು ಎಂಬುದಕ್ಕೆ ಕಾರಣಗಳು ಇಲ್ಲಿವೆ:

  • ಮರಣದ ದರ ಅತೀ ಹೆಚ್ಚು ಇರುವ ಕ್ಯಾನ್ಸರ್‌ ಇದು.
  • ತಪಾಸಣೆ ಮತ್ತು ಕ್ಷಿಪ್ರ ರೋಗ ಪತ್ತೆ ಸಾಧ್ಯವಿದೆ.
  • ಸುಲಭವಾಗಿ ಚಿಕಿತ್ಸೆ ನೀಡಬಹುದಾಗಿದೆ, ಉತ್ತಮ ಚಿಕಿತ್ಸೆಗಳು ಲಭ್ಯವಿವೆ.
  • ಬೇಗನೆ ಪತ್ತೆ ಹಚ್ಚಿದರೆ ಮರಣವನ್ನು ತಡೆಯಬಹುದಾಗಿದೆ.
  • ಜಗತ್ತಿನ ಅನೇಕ ದೇಶಗಳು ಆರೋಗ್ಯ ಶಿಕ್ಷಣ ಕಾರ್ಯಕ್ರಮಗಳ ಮೂಲಕ ಸ್ತನದ ಕ್ಯಾನ್ಸರ್‌ ಬಗೆಗಿನ ತಿಳಿವಳಿಕೆಯನ್ನು ಹೆಚ್ಚಿಸುವಲ್ಲಿ ಸಫ‌ಲವಾಗಿವೆ; ಭಾರತದಲ್ಲಿಯೂ ಇದು ಈ ಹೊತ್ತಿನ ಅಗತ್ಯವಾಗಿದೆ.

ಸ್ತನದ ಕ್ಯಾನ್ಸರ್‌: ಅಪಾಯಾಂಶಗಳು :

ಸ್ತನದ ಕ್ಯಾನ್ಸರ್‌ನ ಅನೇಕ ಅಪಾಯಾಂಶಗಳು ಇನ್ನೂ ತಿಳಿದುಬಂದಿಲ್ಲ. ಸ್ತನದ ಕ್ಯಾನ್ಸರ್‌ ಉಂಟಾಗಲು ಅನೇಕ ಕಾರಣಗಳು ಇರುತ್ತವೆಯಾದ್ದರಿಂದ ಒಂದು ಕಾರಣವನ್ನು ಬೆಟ್ಟು ಮಾಡುವುದು ಸಾಧ್ಯವಿಲ್ಲ. ಇವುಗಳಲ್ಲಿ ಕೆಲವು ಕಾರಣಗಳನ್ನು ಬದಲಾಯಿಸಬಹುದು, ಕೆಲವನ್ನು ಸಾಧ್ಯವಿಲ್ಲ. ಪುರುಷರಲ್ಲಿಯೂ ಸ್ತನದ ಕ್ಯಾನ್ಸರ್‌ ಉಂಟಾಗುವುದಿದೆಯಾದರೂ ಅದು ಅಪರೂಪ. ಹಿರಿಯ ಮಹಿಳೆಯಾಗಿರುವುದು, ಸ್ತನದ ಕ್ಯಾನ್ಸರ್‌ನ ಕೌಟುಂಬಿಕ ಇತಿಹಾಸ, ವಂಶವಾಹಿ ಮ್ಯುಟೇಶನ್‌, ಹಾರ್ಮೋನ್‌ ಅಸಮತೋಲನ (ಬೇಗನೆ ಪ್ರೌಢಾವಸ್ಥೆಗೆ ಬಂದಿರುವುದು. ಋತುಚಕ್ರ ಬಂಧ ವಿಳಂಬವಾಗುವುದು, ಬಂಜೆತನ, ಹಾರ್ಮೋನ್‌ ಬದಲಾವಣೆ ಚಿಕಿತ್ಸೆಗೆ ಒಳಗಾಗಿರುವುದು), ಬೊಜ್ಜು, ಮದ್ಯಪಾನ, ಧೂಮಪಾನಗಳು ಗೊತ್ತಿರುವ ಅಪಾಯಾಂಶಗಳಾಗಿವೆ.

ಸ್ತನದ ಕ್ಯಾನ್ಸರ್‌ ಸಂಬಂಧಿ ಮರಣವನ್ನು ತಡೆಯಲು  ಬೇಗನೆ ರೋಗ ಪತ್ತೆ ಅತ್ಯಂತ ಮುಖ್ಯವಾಗಿದೆ. ಶೀಘ್ರ ರೋಗ ಪತ್ತೆಗೆ ಸಲಹೆಗಳು

  • ಸ್ತನಗಳಲ್ಲಿ ಶಂಕಾಸ್ಪದವಾದ ಗಡ್ಡೆಯಂತಹ ಬೆಳವಣಿಗೆ (ವಿಶೇಷವಾಗಿ ಹಿರಿಯ ಮಹಿಳೆಯರಲ್ಲಿ) ಕಂಡುಬಂದರೆ ಓಂಕಾಲಜಿಸ್ಟ್‌ ಅವರನ್ನು ಕಂಡು ಸಮಾಲೋಚನೆ ನಡೆಸಬೇಕು.
  • ಸ್ತನಗಳ ಸ್ವಯಂ ತಪಾಸಣೆಯನ್ನು ನಿಯಮಿತವಾಗಿ ನಡೆಸುತ್ತಿರಬೇಕು.
  • ಸ್ತನದ ಕ್ಯಾನ್ಸರ್‌ನ ಬಲವಾದ ಕೌಟುಂಬಿಕ ಇತಿಹಾಸ ಇದ್ದಲ್ಲಿ ಓಂಕಾಲಜಿಸ್ಟ್‌ ಬಳಿ ನಿಯಮಿತವಾಗಿ ಚೆಕ್‌ಅಪ್‌ ಮಾಡಿಸಿಕೊಳ್ಳುತ್ತಿರಬೇಕು.
  • 40 ವರ್ಷ ವಯಸ್ಸಿನ ಬಳಿಕ ನಿಯಮಿತವಾಗಿ ದ್ವಿಪಕ್ಷೀಯ ಮ್ಯಾಮೊಗ್ರಾಮ್‌ ಮಾಡಿಸಿಕೊಳ್ಳಬೇಕು (50 ವರ್ಷ ವಯಸ್ಸಿನ ವರೆಗೆ ವರ್ಷಕ್ಕೆ ಎರಡು ಬಾರಿ, 50 ವರ್ಷ ವಯಸ್ಸಿನ ಬಳಿಕ ವರ್ಷಕ್ಕೆ ಒಂದು ಬಾರಿ).

 

ಡಾ| ಹರೀಶ್‌ ಇ.

ಸರ್ಜಿಕಲ್‌ ಓಂಕಾಲಜಿಸ್ಟ್‌,

ಕೆಎಂಸಿ ಆಸ್ಪತ್ರೆ, ಮಂಗಳೂರು

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.