ರಕ್ತ ಹಾಯಿಸುವಿಕೆ: ಸಂಭಾವ್ಯ ಅಪಾಯ; ತಡೆಗಟ್ಟುವಿಕೆ


Team Udayavani, Apr 23, 2017, 3:45 AM IST

blood-23.jpg

ಹಿಂದಿನ ವಾರದಿಂದ-  ರಕ್ತದ ಘಟಕಗಳ ವಿಂಗಡನೆ ಮತ್ತು ಉಪಯೋಗ
-ದಾನಿಯಿಂದ ಪಡೆದ ಒಂದು ಯುನಿಟ್‌ ರಕ್ತವನ್ನು ಮೂರು ವಿವಿಧ ಘಟಕಗಳಾಗಿ ವಿಂಗಡನೆ ಮಾಡಿ (ಕೆಂಪು ರಕ್ತ ಕಣ, ಪ್ಲೇಟಲೆಟ್‌, ಪ್ಲಾಸ್ಮಾ) ಅದನ್ನು ಮೂರು ಬೇರೆ ಬೇರೆ ರೋಗಿಗಳಿಗೆ ನೀಡಬಹುದು. ಇದರಿಂದ ರೋಗಿಗೆ ಅಗತ್ಯವಿರುವ ರಕ್ತದ ಘಟಕವನ್ನು ಮಾತ್ರ ನೀಡಿ, ಇತರ ಅಂಶಗಳ ಪೂರಣದಿಂದ ಆಗಬಹುದಾದ ಹಾನಿಯನ್ನು ಕಡಿಮೆ ಮಾಡಬಹುದು.

-ರಕ್ತದ ಘಟಕಗಳನ್ನು ವಿವೇಚನಾ ಶೀಲರಾಗಿ ಬಳಕೆ ಮಾಡಿದಲ್ಲಿ ಅದರ ಅನಗತ್ಯ ಪೂರಣವನ್ನು ಕಡಿಮೆ ಮಾಡಬಹುದು.

ಬಿಳಿ ರಕ್ತ ಕಣಗಳ ಬೇರ್ಪಡಿಸುವಿಕೆ:
ಲ್ಯುಕೋಫಿಲೆóàಶನ್‌ ಎಂಬ ವಿಧಾನದಲ್ಲಿ ರಕ್ತ ಘಟಕಗಳಿಂದ ಬಿಳಿ ರಕ್ತಕಣಗಳನ್ನು ತೆಗೆದು ಹಾಕಲಾಗುತ್ತದೆ. ಬಿಳಿ ರಕ್ತ ಕಣಗಳನ್ನು ತೆಗೆದು ಹಾಕುವುದರಿಂದ, ಅಲೊಇಮ್ಯುನೈಸೇಶನ್‌, ರಕ್ತ ಪೂರಣದಿಂದ ಪ್ರಸಾರವಾಗುವ ಕೆಲವೊಂದು ಸೋಂಕು ರೋಗ (ಸಿ.ಎಂ.ವಿ. ವೈರಸ್‌) ಮತ್ತು ಜ್ವರದಂತಹ ಪ್ರತಿವರ್ತನೆಗಳ ಪ್ರಮಾಣ ಕಡಿಮೆ ಮಾಡಬಹುದು. ರಕ್ತ ಪೂರಣದಿಂದ ಅಥವಾ ಅಂಥ ಸಂದರ್ಭದಲ್ಲಿ ರೋಗಿಗೆ ಆಗಾಗ ಜ್ವರ ಮರುಕಳಿಸುತ್ತಿದ್ದರೆ, ಅಂತಹ ಪ್ರತಿವರ್ತನೆಯನ್ನು ತಡೆಯಲು ಬಿಳಿ ರಕ್ತ ಕಣ ರಹಿತ ರಕ್ತ ಘಟಕ ನೀಡಿಕೆಯನ್ನು ಶಿಫಾರಸು ಮಾಡಲಾಗುತ್ತದೆ.

ದಿ ನ್ಯೂಕ್ಲಿಯರ್‌ ಆ್ಯಸಿಡ್‌ ಟೆಸ್ಟ್‌  (ಎನ್‌.ಎ.ಟಿ.)
ದಾನಿಯಿಂದ ಪಡೆದ ರಕ್ತದ ಘಟಕದಲ್ಲಿ  ಎಚ್‌.ಐ.ವಿ. ಹೆಪಟೈಟಿಸ್‌ ಬಿ., ಸಿ. ವೈರಸ್‌ಗಳು ಇವೆಯೇ ಎಂಬುದನ್ನು ಪತ್ತೆ ಮಾಡಲು ಈ ಪರೀಕ್ಷೆಯನ್ನು ಮಾಡಲಾಗುತ್ತದೆ. ಈ ಮೇಲೆ ಹೇಳಿದ ಟೆಸ್ಟ್‌ ಸೋಂಕನ್ನು ಅತಿ ಶೀಘ್ರ ಸಂಭಾವ್ಯ ಸಮಯದಲ್ಲಿ ಪತ್ತೆ ಮಾಡಬಲ್ಲುದು. ದಾನಿಯ ಶಕ್ತಿ ನೀಡುವ ಸಮಯದಲ್ಲಿ ಈ ಸೋಂಕು ರೋಗಗಳ “ವಿಂಡೊ ಪಿರೇಡ್‌’ನಲ್ಲಿ ಇದ್ದಲ್ಲಿ ಅದು ಸಾಮಾನ್ಯ ರಕ್ತ ಪರೀಕ್ಷೆಯಿಂದ ಕಂಡು ಹಿಡಿಯಲು ಸಾಧ್ಯವಾಗುವುದಿಲ್ಲ. ವ್ಯಕ್ತಿಯೊಬ್ಬ ಸೋಂಕಿಗೆ ತುತ್ತಾದ ಸಮಯ ಮತ್ತು ಆತನ ರಕ್ತದಲ್ಲಿ ಪ್ರತಿ ಜೀವಾಣುಗಳು ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಪತ್ತೆಯಾಗುವಷ್ಟು ಸಂಖ್ಯೆಯಲ್ಲಿ ಉತ್ಪಾದನೆಯಾಗುವ ಸಮಯದ ನಡುವಣ ಅವಧಿಯನ್ನು “ವಿಂಡೋ ಪಿರೇಡ್‌’ ಎನ್ನಲಾಗುತ್ತದೆ. 

ಟಾಪ್ ನ್ಯೂಸ್

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

14-

Kasaragodu: ಹಣದ ವಿವಾದ: ಪೆಟ್ರೋಲ್‌ ಸುರಿದು ಮಹಿಳೆಯ ಕೊಲೆಗೆ ಯತ್ನ

13-mulleria

Mulleria: ವ್ಯಕ್ತಿಯ ನಿಗೂಢ ಸಾವು : ತಲೆಗೆ ಗಂಭೀರ ಗಾಯ ಮರಣಕ್ಕೆ ಕಾರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

8

Measles: ದಡಾರ

4-health

Tooth Health: ನಿಮ್ಮ ದವಡೆ ಸಂಧಿಯ ಆರೋಗ್ಯವೂ ಬಹಳ ಮುಖ್ಯ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.