ವೃದ್ಧಾಪ್ಯದಲ್ಲಿ ದೇಹಪುಷ್ಠಿ


Team Udayavani, Aug 25, 2019, 5:27 AM IST

sa

ಕಳೆದ ಸಂಚಿಕೆಯಿಂದ
ಏಕಾಕಿಯಾಗಿ ಬದುಕುವುದು/
ಕುಟುಂಬ ಸದಸ್ಯರಿಂದ ಗಮನದ ಕೊರತೆ
ಈ ಮನೋವೈಜ್ಞಾನಿಕ ಅಂಶವು ವಯೋವೃದ್ಧರಲ್ಲಿ ಸಾಮಾನ್ಯವಾದ ಅದೇವೇಳೆಗೆ ಅಪೌಷ್ಟಿಕತೆಗೆ ಪ್ರಧಾನವಾದ ಕಾರಣವಾಗಿರುತ್ತದೆ.

ವಯೋ ಸಂಬಂಧಿ
ಮನೋವೈಜ್ಞಾನಿಕ ಬದಲಾವಣೆಗಳು
(ನಮಗೆ ವಯಸ್ಸಾಗುತ್ತಿದ್ದಂತೆ ಮನೋವೈಜ್ಞಾನಿಕ ಬದಲಾವಣೆಗಳು ನಿಧಾನವಾಗಿ ಬೆಳಕಿಗೆ ಬರುತ್ತವೆ)

ಆರೋಗ್ಯ ಸಮಸ್ಯೆಗಳು/ ವಯೋವೃದ್ಧರ ತೊಂದರೆಗಳು
– ಪೌಷ್ಟಿಕಾಂಶಗಳ ಕೊರತೆ: ಆಹಾರದಲ್ಲಿ ಸಾಮಾನ್ಯವಾಗಿ ಕಬ್ಬಿಣಾಂಶ, ಪ್ರೊಟೀನ್‌, ಕ್ಯಾಲ್ಸಿಯಂ, ವಿಟಮಿನ್‌ ಎ ಮತ್ತು ಸಿಗಳ ಕೊರತೆ ಇರುತ್ತದೆ. ಇದರಿಂದ ರಕ್ತ ಹೀನತೆ, ಸೋಂಕುಗಳು ಹೆಚ್ಚುತ್ತವೆ.
– ಮದ್ಯಪಾನ: ಮದ್ಯಪಾನವು ಯುವಕರಿಗಿಂತ ವಯೋವೃದ್ಧರಲ್ಲಿ ಬೇರೆಯದೇ ಪರಿಣಾಮವನ್ನು ಉಂಟು ಮಾಡಬಹುದು. ಕೆಲವರಲ್ಲಿ ವಯಸ್ಸಾಗುತ್ತಿದ್ದಂತೆ ಹಿಂದೆ ಸೇವಿಸುತ್ತಿದ್ದಷ್ಟು ಮದ್ಯವೇ ಹೆಚ್ಚು ಅಮಲನ್ನು ಉಂಟು ಮಾಡಬಹುದು. ಈ ಅಮಲಿನ ಹೆಚ್ಚಳ ಬೀಳುವುದು, ಮೂಳೆ ಮುರಿತ, ಕಾರು ಅವಘಡಗಳಂತಹ ಅಪಘಾತಗಳಿಗೆ ಕಾರಣವಾಗಬಹುದು. ಅಲ್ಲದೆ ವಯೋವೃದ್ಧ ಪುರುಷರಿಗಿಂತ ವಯೋವೃದ್ಧ ಮಹಿಳೆಯರು ಮದ್ಯದ ಪ್ರಭಾವಕ್ಕೆ ಹೆಚ್ಚು ಒಳಗಾಗುತ್ತಾರೆ.
– ಬೊಜ್ಜು: ದೈಹಿಕ ಚಟುವಟಿಕೆ ಕಡಿಮೆಯಾಗುವುದರಿಂದ ಮತ್ತು ಕ್ಯಾಲೊರಿ ಅಗತ್ಯ ಕಡಿಮೆಯಾಗುವುದರಿಂದ ಬೊಜ್ಜು ಉಂಟಾಗುತ್ತದೆ. ದೇಹತೂಕ ಹೆಚ್ಚುವುದರಿಂದ ಚಲನೆ ಕಡಿಮೆಯಾಗುತ್ತದೆ. ಬೊಜ್ಜು ಹಾಲಿ ಇರುವಂತಹ ಯಾವುದೇ ಅನಾರೋಗ್ಯವನ್ನು ಉಲ್ಬಣಗೊಳಿಸಬಹುದು ಮತ್ತು ಇತರ ಅಪಾಯಗಳಿಗೂ ಕಾರಣವಾಗಬಲ್ಲುದು.
ಆಸ್ಟಿಯೊಪೊರೋಸಿಸ್‌: ಇದು ವಯೋವೃದ್ಧರಲ್ಲಿ ಒಂದು ಪ್ರಧಾನ ಅನಾರೋಗ್ಯವಾಗಿದೆ.
– ಮಹಿಳೆಯರಲ್ಲಿ ಋತುಚಕ್ರ ಬಂಧದ ಬಳಿಕ ಮತ್ತು ಪುರುಷರಲ್ಲಿ ಮಧ್ಯ ವಯಸ್ಸಿನಲ್ಲಿ ಕಾಣಿಸಿಕೊಳ್ಳುತ್ತದೆ.
– ಹೆಚ್ಚುವರಿ ಕ್ಯಾಲ್ಸಿಯಂ ಮತ್ತು ವಿಟಮಿನ್‌ ಡಿ ಸೇವನೆ ಇದನ್ನು ಕಡಿಮೆ ಮಾಡುತ್ತದೆ. ಜತೆಗೆ ದೈಹಿಕ ಚಟುವಟಿಕೆಯೂ ಬೇಕು. ಎಲುಬು ಸಾಂದ್ರತೆಯನ್ನು ವೃದ್ಧಿಸಲು ಫ್ಲೋರೈಡ್‌ ಸಹಾಯ ಮಾಡುತ್ತದೆ.
– ಮಧುಮೇಹ: ಮಧ್ಯವಯಸ್ಸು ಮತ್ತು ಆ ಬಳಿಕದ ವಯೋಮಾನದಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಆರೋಗ್ಯ ಸಮಸ್ಯೆ. ಇದಕ್ಕೆ ಕಾರಣವಾಗಬಹುದಾದ ಪ್ರಧಾನ ಅಪಾಯಾಂಶ ಬೊಜ್ಜು. ಪಥ್ಯಾಹಾರ ಮತ್ತು ತೂಕ ನಿಯಂತ್ರಣದ ಮೂಲಕ ನಿಭಾಯಿಸಬಹುದು.
– ಮಲಬದ್ಧತೆ ಮತ್ತು ಡೈವರ್ಟಿಕ್ಯುಲೋಸಿಸ್‌: ಕರುಳಿನ ಒಳಭಿತ್ತಿ ದುರ್ಬಲವಾಗುವುದು ಮತ್ತು ಕಡಿಮೆ ನಾರಿನಂಶ ಆಹಾರ ಸೇವನೆಯಿಂದ ಇದು ಉಂಟಾಗುತ್ತದೆ.
– ಅಧಿಕ ರಕ್ತದೊತ್ತಡ: ಇದು ಕೂಡ ವಯಸ್ಸು ಹೆಚ್ಚುತ್ತಿದ್ದಂತೆ ಹೆಚ್ಚಳವಾಗುತ್ತದೆ. ಉಪ್ಪು ಸೇವನೆಗಿಂತಲೂ ಅಧಿಕ ದೇಹತೂಕ ಇದರ ಅಪಾಯಾಂಶವಾಗಿದೆ.
– ಎಥೆರೊಸ್ಲೆರೋಸಿಸ್‌: ಹೆಚ್ಚು ಸ್ಯಾಚುರೇಟೆಡ್‌ ಕೊಬ್ಬು ಇರುವ ಆಹಾರ ಇದರ ಅಪಾಯಾಂಶವಾಗಿದೆ. ಹೃದಯಾಘಾತ/ ಆ್ಯಂಜಿನಾಕ್ಕೆ ಕಾರಣವಾಗಬಹುದು.
– ಕ್ಯಾನ್ಸರ್‌: ಮಾಲಿನ್ಯಕಾರಕಗಳು, ಆಹಾರದಲ್ಲಿ ರಾಸಾಯನಿಕಗಳು, ಧೂಮಪಾನ ಮತ್ತು ಆಹಾರಾಭ್ಯಾಸಗಳಿಗೂ ಕ್ಯಾನ್ಸರ್‌ಗೂ ಇರುವ ಸಂಬಂಧದ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿವೆ. ವೈದ್ಯ ವಿಜ್ಞಾನಕ್ಕೆ ಇನ್ನೂ ಚೆನ್ನಾಗಿ ಅರ್ಥವಾಗದ ವಿವಿಧ ಕಾರಣಗಳಿಂದಾಗಿ ವಯಸ್ಸಾಗುತ್ತಿದ್ದಂತೆ ಕ್ಯಾನ್ಸರ್‌ನ ಅಪಾಯ ಹೆಚ್ಚುತ್ತ ಹೋಗುತ್ತದೆ.

ಸೇವಿಸಬಹುದಾದ ಆಹಾರ
– ದಾಲ್‌
– ಖೀಚಡಿ
– ಉಪ್ಪಿಟ್ಟು
– ಖೀರು
– ಅವಲಕ್ಕಿ
– ತರಕಾರಿ ಸೂಪ್‌
– ಹಣ್ಣಿನ ರಸ
– ಚೆನ್ನಾಗಿ ಬೇಯಿಸಿದ ಮೊಟ್ಟೆ, ಮೀನು, ಕೋಳಿ

ಮುಂದುವರಿಯುವುದು

ಟಾಪ್ ನ್ಯೂಸ್

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3–child-growth

Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು

2-bamboo-brush

Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್‌ ಮೊರೆಹೋಗಿ

2-kidney-day

World Kidney Day: ಹಿಮೋಡಯಾಲಿಸಿಸ್‌: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?

3-health

Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

4-cholestral

Cholesterol: ಕೊಲೆಸ್ಟರಾಲ್‌ ತಗ್ಗಿಸುವ ಔಷಧ ಸ್ಟಾಟಿನ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.