ಸಿಲಿಯಾಕ್‌ ಕಾಯಿಲೆ; ಗ್ಲುಟೆನ್‌ ಅಜೀರ್ಣದ ಸಮಸ್ಯೆ


Team Udayavani, Jan 9, 2022, 7:35 AM IST

ಸಿಲಿಯಾಕ್‌ ಕಾಯಿಲೆ; ಗ್ಲುಟೆನ್‌ ಅಜೀರ್ಣದ ಸಮಸ್ಯೆ

ಸಿಲಿಯಾಕ್‌ ಕಾಯಿಲೆ ಎಂಬುದು ಒಂದು ಜೀವನಪರ್ಯಂತ ಇರುವ ಆರೋಗ್ಯ ಸಮಸ್ಯೆ. ಇಲ್ಲಿ ಗ್ಲುಟೆನ್‌ ಅಜೀರ್ಣದಿಂದಾಗಿ ಕರುಳುಗಳಿಗೆ ಹಾನಿಯುಂಟಾಗುತ್ತದೆ. ಸಾಮಾನ್ಯವಾಗಿ ಇದನ್ನು ಒಂದು ಅಲರ್ಜಿ ಎಂದು ಭಾವಿಸಲಾಗುತ್ತದೆ. ಆದರೆ ನಿಜವಾಗಿಯೂ ಇದು ಒಂದು ಅಟೊಇಮ್ಯೂನ್‌ ಕಾಯಿಲೆಯಾಗಿದ್ದು, ಆಹಾರದಿಂದ ಪ್ರಚೋದನೆಗೊಳ್ಳುತ್ತದೆ.

ಗ್ಲುಟೆನ್‌ ಆಗಿಬರದೆ ಇರುವ ಇನ್ನೂ ಎರಡು ಆರೋಗ್ಯ ಸಮಸ್ಯೆಗಳಿವೆ. ಒಂದು ಐಜಿಇಯಿಂದಾಗುವ ಗೋಧಿಯ ಅಲರ್ಜಿ ಆಗಿದ್ದರೆ ಇನ್ನೊಂದು ನಾನ್‌ ಸಿಲಿಯಾಕ್‌ ಗ್ಲುಟೆನ್‌ ಸೂಕ್ಷ್ಮ ಪ್ರತಿಸ್ಪಂದನೆಯಾಗಿದೆ. ಈ ಅನಾರೋಗ್ಯ ಸ್ಥಿತಿಯಲ್ಲಿ ಸಣ್ಣ ಪ್ರಮಾಣದ ಗ್ಲುಟೆನ್‌ ರೋಗನಿರೋಧಕ ವ್ಯವಸ್ಥೆಯನ್ನು ಪ್ರಚೋದಿಸುತ್ತಿದ್ದು, ಅಲ್ಪಕಾಲಿಕ ಅಥವಾ ದೀರ್ಘ‌ಕಾಲಿಕ ಸಮಸ್ಯೆಯನ್ನು ಉಂಟು ಮಾಡುತ್ತದೆ.

ಧಾನ್ಯಗಳಲ್ಲಿರುವ ಇಮ್ಯುನೊಜೆನಿಕ್‌ ವಸ್ತುವಿನ ಸೇವನೆಯನ್ನು ವರ್ಜಿಸುವುದು ಅಂದರೆ ಗೋಧಿ, ರೈ, ಬಾರ್ಲಿ ಮತ್ತು ಓಟ್ಸ್‌ಗಳಲ್ಲಿ ಇರುವ ಗ್ಲುಟೆನ್‌ (ಧಾನ್ಯದಲ್ಲಿ ಕಂಡುಬರುವ ಪ್ರೊಟೀನ್‌) ವರ್ಜಿಸುವುದು ಈ ಅನಾರೋಗ್ಯ ಸಮಸ್ಯೆಗೆ ಚಿಕಿತ್ಸೆ ನೀಡುವಲ್ಲಿ ಆಹಾರ ಕ್ರಮಕ್ಕೆ ಸಂಬಂಧಿಸಿದ ಪ್ರಮುಖ ಕ್ರಮ. ಆಹಾರವಸ್ತುಗಳ ಲೇಬಲ್‌ಗ‌ಳನ್ನು ಸರಿಯಾಗಿ ಓದುವುದು ಮತ್ತು ಸಣ್ಣ, ಹುದುಗಿಕೊಂಡ ಸ್ಥಿತಿಯಲ್ಲಿ ಗ್ಲುಟೆನ್‌ ಇರುವ ಆಹಾರಗಳನ್ನು ಕೂಡ ದೂರವಿಡುವುದು ಈ ಅನಾರೋಗ್ಯವನ್ನು ನಿಭಾಯಿಸುವಲ್ಲಿ ಅನಿವಾರ್ಯ ಕ್ರಮ.

ಸೋಯಾಸಾಸ್‌, ಮಾಲ್ಟ್ ವಿನೆಗರ್‌, ಉಪಾಹಾರ ಸೀರಿಯಲ್‌ಗ‌ಳು, ಹಿಂಗಿನಂತಹ ಸಂಬಾರ ಪದಾರ್ಥಗಳು, ಪ್ಯಾಕೇಜ್‌ ಮಾಡಲಾದ ಸೂಪ್‌ಗ್ಳು ಮತ್ತು ಗ್ರೇವಿಗಳಲ್ಲಿ ಕೂಡ ಸಣ್ಣ ಪ್ರಮಾಣದಲ್ಲಿ ಗ್ಲುಟೆನ್‌ ಇರಬಹುದಾಗಿದ್ದು, ಎಚ್ಚರಿಕೆ ಅಗತ್ಯ.

ಸಿಲಿಯಾಕ್‌ ರೋಗಿಗೆ ರೋಗ ಪತ್ತೆಯಾಗುವ ಹಂತದಲ್ಲಿ ಫೋಲಿಕ್‌ ಆ್ಯಸಿಡ್‌, ಕ್ಯಾಲ್ಸಿಯಂ, ಕಬ್ಬಿಣಾಂಶ ಮತ್ತು ವಿಟಮಿನ್‌ ಬಿ12 ಪೂರಕ ಆಹಾರದ ಅಗತ್ಯವಿರುತ್ತದೆ. ದೀರ್ಘ‌ಕಾಲಿಕ ಪಥ್ಯಾಹಾರದ ಸಂದರ್ಭದಲ್ಲಿ ವಿಟಮಿನ್‌ ಎ, ಡಿ, ಇ ಮತ್ತು ಕೆಗಳನ್ನು ಶಿಫಾರಸು ಮಾಡಲಾಗುತ್ತದೆ. ಮಾರ್ಗದರ್ಶಿ ಸೂತ್ರಗಳ ಪ್ರಕಾರ ಪ್ರತೀ ಕೆ.ಜಿ. ಆಹಾರದಲ್ಲಿ 20 ಮಿ.ಗ್ರಾಂ ಗ್ಲುಟೆನ್‌ ಸಾಮಾನ್ಯವಾಗಿ ಸ್ವೀಕಾರಾರ್ಹವಾಗಿರುತ್ತದೆ.

ಅಕ್ಕಿ, ಸಜ್ಜೆ, ರಾಗಿ, ಜೋಳ, ಹರಿವೆ, ಹುರುಳಿ, ಮುಸುಕಿನ ಜೋಳ, ನವಣಕ್ಕಿ, ಆರಾರೂಟ್‌, ಸಿಂಘಾರ ಮತ್ತು ಸಾಬಕ್ಕಿಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಈ ಆಹಾರವಸ್ತುಗಳನ್ನು ವ್ಯಕ್ತಿ ಮಧುಮೇಹಿಯಾಗಿದ್ದರೂ ಉಪಯೋಗಿಸಲು ಸಾಧ್ಯ. ಬೇಳೆಕಾಳುಗಳು, ಮಾಂಸ, ಮೊಟ್ಟೆ, ಹಣ್ಣುಗಳು, ತರಕಾರಿಗಳು, ಬೀಜಗಳು, ಕೊಬ್ಬುಗಳು ಮತ್ತು ಎಣ್ಣೆಗಳನ್ನು ಸುರಕ್ಷಿತ ಆಹಾರವಾಗಿ ಪರಿಗಣಿಸಲಾಗಿದೆ. ಮೊಸರು, ಪನೀರ್‌, ಚೀಸ್‌ಗಳಿಗೆ ಕೂಡ ಕೆಲವು ರೋಗಿಗಳು ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ಸಕ್ಕರೆ, ಬೆಲ್ಲ, ಜೇನುತುಪ್ಪಗಳನ್ನು ಆರೋಗ್ಯಕರ ಮಿತಿಯಲ್ಲಿ ಸೇವಿಸಬಹುದು.  ಸೂಪ್‌ಗಳು ಪಾಯಸಗಳು, ಲಸ್ಸಿ, ಮಜ್ಜಿಗೆ, ಜ್ಯೂಸ್‌ಗಳು, ಸಲಾಡ್‌ಗಳು, ಅನ್ನದ ಪಲಾವ್‌, ದೋಸೆ, ಇಡ್ಲಿ, ಆಯಾ ಋತುವಿನಲ್ಲಿ ದೊರೆಯುವ ಹಣ್ಣುಗಳು ಆಹಾರ ಕ್ರಮದಲ್ಲಿ ಸೇರಿಸಬಹುದಾದ ಕೆಲವು ಆರೋಗ್ಯಕರ ಆಯ್ಕೆಗಳಾಗಿವೆ.

-ಅರುಣಾ ಮಲ್ಯ
ಹಿರಿಯ ಪಥ್ಯಾಹಾರ ತಜ್ಞೆ
ಕೆಎಂಸಿ ಆಸ್ಪತ್ರೆ, ಮಂಗಳೂರು

 

ಟಾಪ್ ನ್ಯೂಸ್

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3–child-growth

Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು

2-bamboo-brush

Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್‌ ಮೊರೆಹೋಗಿ

2-kidney-day

World Kidney Day: ಹಿಮೋಡಯಾಲಿಸಿಸ್‌: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?

3-health

Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

4-cholestral

Cholesterol: ಕೊಲೆಸ್ಟರಾಲ್‌ ತಗ್ಗಿಸುವ ಔಷಧ ಸ್ಟಾಟಿನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.