ಹಲ್ಲಿನ ಸೀಲೆಂಟ್‌ಗಳು; ದಂತಕುಳಿ ತಡೆಗಟ್ಟಲು ಸರಳವಾದ ನೋವುರಹಿತ ವಿಧಾನ


Team Udayavani, Oct 24, 2021, 5:55 AM IST

ಹಲ್ಲಿನ ಸೀಲೆಂಟ್‌ಗಳು; ದಂತಕುಳಿ ತಡೆಗಟ್ಟಲು ಸರಳವಾದ ನೋವುರಹಿತ ವಿಧಾನ

ಹಲ್ಲಿನ ಸೀಲೆಂಟ್‌ಗಳು (pit and fissure sealants) ಅತ್ಯಂತ ಪರಿಣಾಮಕಾರಿಯಾದ, ಇನ್ನೂ ಬಳಕೆಯಾಗದಿರುವ ಹಾಗೂ ವಿಶೇಷವಾಗಿ ಮಕ್ಕಳಲ್ಲಿ ದಂತಕ್ಷಯವನ್ನು ತಡೆಗಟ್ಟುವ ವಿಧಾನಗಳಲ್ಲಿ ಒಂದಾಗಿದೆ. ಹಲ್ಲಿನ ಸೀಲೆಂಟ್‌ಗಳನ್ನು ಸುಮಾರು ಐದು ದಶಕಗಳಿಂದ ಹಾಲು ಹಲ್ಲು ಮತ್ತು ಶಾಶ್ವತ ಹಲ್ಲುಗಳ ದಂತಕ್ಷಯ ತಡೆಯಲು ಉಪಯೋಗಿಸಲಾಗುತ್ತಿದೆ. ಸೀಲೆಂಟ್‌ ತೆಳುವಾದ ಲೇಪನವಾಗಿದ್ದು, ಇದು ಸೂಕ್ಷ್ಮಜೀವಿಗಳನ್ನು ಮತ್ತು ಆಹಾರ ಕಣಗಳನ್ನು ಹಲ್ಲುಗಳ ಬಿರುಕುಗಳಿಂದ ದೂರವಿಡುತ್ತವೆ. ಹೀಗೆ ಹಲ್ಲಿನ ಮೇಲ್ಮೆ„ (occlusal surfaces)ಯನ್ನು ಕೀಟಾಣುವಿನ ದಾಳಿಯಿಂದ ರಕ್ಷಿಸುತ್ತದೆ. ಈ ಪ್ರಕ್ರಿಯೆಯು ಅಗ್ಗವಾಗಿದೆ, ಕಡಿಮೆ ಸಮಯ ಬೇಕಾಗುತ್ತದೆ ಮತ್ತು ವಿಧಾನ ಸುಲಭವಾಗಿದೆ. ಅಧಿಕವಾಗಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಇವುಗಳ ಉಪಯೋಗವನ್ನು ನೋಡುತ್ತೇವೆ. ಸಂಶೋಧನೆಗಳ ಪ್ರಕಾರ ಶಾಶ್ವತ ಹಲ್ಲುಗಳ ಮೇಲಿನ ಸೀಲಂಟ್‌ಗಳು ಕುಳಿಗಳ ಅಪಾಯವನ್ನು ಶೇ. 80ರಷ್ಟು ಕಡಿಮೆ ಮಾಡುತ್ತದೆ. ಇದರ ಬಗ್ಗೆ ಅರಿಯಲು ಮೊದಲಿಗೆ ಹಲ್ಲು ಹುಳುಕು ಹೇಗಾಗುತ್ತದೆ ಎಂದು ತಿಳಿದುಕೊಳ್ಳಬೇಕು.

ದಂತಕ್ಷಯ ಹೇಗೆ ಸಂಭವಿಸುತ್ತದೆ?
ಹಲ್ಲುಗಳ ಜಗಿಯುವ ಮೇಲ್ಮೈ ಯಲ್ಲಿ ಸಣ್ಣ ಬಿರುಕುಗಳು ಇರುತ್ತವೆ. ಇವು ಆಳವಾಗಿ, ಕಿರಿದಾಗಿದ್ದಾಗ ಸಿಕ್ಕಿಹಾಕಿಕೊಂಡಿರುವ ಆಹಾರ ವನ್ನು ಸ್ವಚ್ಛ ಗೊಳಿಸುವುದು ಕಷ್ಟವಾಗುತ್ತದೆ. ಇದು ಕೀಟಾಣುಗಳಿಗೆ ಆಹಾರವಾಗಿ ದಂತಕ್ಷಯವಾಗುತ್ತದೆ.

ಹಲ್ಲಿನ ಸೀಲೆಂಟ್‌ಗಳು
ಎಂದರೇನು?
ಸೀಲೆಂಟ್‌ಗಳು ಟೂತ್‌ಬ್ರಷ್‌ ಮತ್ತು ಫ್ಲೋಸ್‌ ತಲುಪದ ಹಲ್ಲಿನ ಚಡಿಗಳಿಗೆ ರಕ್ಷಣಾತ್ಮಕ ಲೇಪನಗಳಾಗಿವೆ. ಇಂತಹ ರೆಸಿನ್‌ ಲೇಪನವನ್ನು ಹಲ್ಲುಗಳ ಮೇಲ್ಮೈ ಯಲ್ಲಿ ಅಂದರೆ, ಆಳವಾದ ಬಿರುಕುಗಳಲ್ಲಿ ತುಂಬುವುದರಿಂದ ಅವುಗಳಿಗೆ ತಡೆಗೋಡೆ ಒದಗಿಸುತ್ತದೆ ಹಾಗೂ ಕುಳಿಯಾಗದಂತೆ ತಡೆಯುತ್ತದೆ.

ಇದನ್ನೂ ಓದಿ:ಟಿ20 ವಿಶ್ವಕಪ್‌ : ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಕ್ಕೆ ರೋಚಕ ಜಯ

ಸೀಲೆಂಟ್‌ಗಳನ್ನು ಯಾವ
ಹಲ್ಲುಗಳಿಗೆ ಹಚ್ಚುತ್ತಾರೆ?
ಇವುಗಳನ್ನು ಪ್ರಿಮೋಲಾರ್‌ಗಳು ಮತ್ತು ದವಡೆ ಹಲ್ಲುಗಳ ಮೇಲೆ ಹಚ್ಚುತ್ತಾರೆ. ದಂತವೈದ್ಯರು ಹಲ್ಲುಗಳ ಬಿರುಕುಗಳನ್ನು ತಪಾಸಣೆ ಮಾಡಿ ಅವು ಆಳವಾಗಿ, ಕಿರಿದಾಗಿದ್ದರೆ ಮಾತ್ರ ಸೀಲಂಟ್‌ ಹಚ್ಚಲು ಸಲಹೆ ನೀಡುತ್ತಾರೆ. ಆಳವಿಲ್ಲದ ಬಿರುಕುಗಳಿಗೆ ಸೀಲಂಟ್‌ಗಳ ಆವಶ್ಯಕತೆ ಇಲ್ಲ.

ಸೀಲೆಂಟ್‌ಗಳು ಯಾವ ವಯಸ್ಸಿನವರಿಗೆ ಬೇಕು?
ಸೀಲೆಂಟ್‌ಗಳನ್ನು ಮುಖ್ಯವಾಗಿ ದಂತಕುಳಿ ಅಪಾಯವಿರುವ ಮಕ್ಕಳಲ್ಲಿ ಮತ್ತು ಶಾಶ್ವತ ಪ್ರಿಮೋಲಾರ್‌ ಮತ್ತು ಮೋಲಾರ್‌ ಹಲ್ಲುಗಳು ಬಂದ ತತ್‌ಕ್ಷಣ ತುಂಬಲಾಗುತ್ತದೆ. ಶಾಶ್ವತ ಬಾಚಿಹಲ್ಲುಗಳು ಸೀಲೆಂಟ್‌ಗಳಿಂದ ಹೆಚ್ಚು ಪ್ರಯೋಜನ ಪಡೆಯುತ್ತವೆ. ಮೊದಲ ಬಾಚಿಹಲ್ಲುಗಳು ಸಾಮಾನ್ಯವಾಗಿ 6 ​​ವರ್ಷಗಳಲ್ಲಿ ಹಾಗೂ ಎರಡನೇ ಬಾಚಿಹಲ್ಲುಗಳು ಸುಮಾರು 12ನೇ ವಯಸ್ಸಿನಲ್ಲಿ ಬರುತ್ತವೆ. ಆಗ ಸೀಲೆಂಟ್‌ಗಳನ್ನು ಹಚ್ಚುವುದು ಉತ್ತಮ. ಕೆಲವು ಸಂದರ್ಭಗಳಲ್ಲಿ, ಹಾಲು ಹಲ್ಲುಗಳು ಆಳವಾದ ಚಡಿಗಳನ್ನು ಹೊಂದಿದ್ದಲ್ಲಿ ಅವುಗಳಿಗೆ ಹಚ್ಚುವುದು ಉತ್ತಮ.

ತುಂಬುವ ವಿಧಾನವೇನು?
ಹಲ್ಲಿನ ಮೇಲ್ಭಾಗವನ್ನು ಸ್ವಚ್ಛಗೊಳಿಸಿ, ವಿಶೇಷ ದ್ರಾವಣದೊಂದಿಗೆ ಕಂಡೀಶನಿಂಗ್‌ ಮಾಡಲಾಗುತ್ತದೆ. ಅನಂತರ ಸೀಲೆಂಟ್‌ ಅನ್ನು ಲೇಪಿಸಿ ಕ್ಯೂರಿಂಗ್‌ ಮಾಡಲಾಗುತ್ತದೆ.

ಈ ವಿಧಾನ ನೋಯುವುದೇ?
ಇಲ್ಲ, ಇದು ಸಂಪೂರ್ಣವಾಗಿ ಗಾಯ ರಹಿತವಾಗಿದ್ದು, ನೋವು ರಹಿತವಾಗಿದೆ. ಸೀಲೆಂಟ್‌ಗಳ ಲೇಪನ ಹಲ್ಲಿನ ರಚನೆಯನ್ನು ಕೊರೆಯುವುದು ಅಥವಾ ತೆಗೆಯುವುದನ್ನು ಒಳಗೊಂಡಿರುವುದಿಲ್ಲ.

ಸೀಲೆಂಟ್‌ಗಳು ಶಾಶ್ವತವೇ?
ಹೌದು, ಆದರೆ ಹಲ್ಲುಗಳ ಕುಹರದ ಕತ್ತರಿಸುವಿಕೆ ಇಲ್ಲದೆ, ಹಲ್ಲಿನ ಮೇಲ್ಮೈ ಯಲ್ಲಿ ತುಂಬಿಸುವುದರಿಂದ ಸುಮಾರಾಗಿ 5ರಿಂದ 10 ವರ್ಷಗಳವರೆಗೆ ಬಾಳ್ವಿಕೆ ಬರುತ್ತದೆ. ಕ್ರಮೇಣ ಇವು ಸವೆದುಹೋಗಬಹುದು; ಅಂತಹ ಸಂದರ್ಭಗಳಲ್ಲಿ ದಂತವೈದ್ಯರು ಪುನಃ ತುಂಬಿಸಲು ಸಲಹೆ ನೀಡಬಹುದು.
ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಇವುಗಳಿಂದ ಹಲ್ಲುಗಳ ಮೇಲ್ಮೈ ನಲ್ಲಿರುವ ಬಿರುಕುಗಳಲ್ಲಿ ಆಗುವ ಕುಳಿಗಳನ್ನು ತಡೆಗಟ್ಟಬಹುದಾಗಿದೆ. ಹಾಗಾಗಿ ಎಲ್ಲರಿಗೂ ಕಾಡುವ ಹುಳುಕು ಹಲ್ಲಿನ ಸಮಸ್ಯೆಗೆ ಸೀಲಂಟ್‌ಗಳು ಒಂದು ಉತ್ತಮ ಪರಿಹಾರವಾಗಿದೆ.

-ಡಾ| ಪ್ರಜ್ಞಾ ನವೀನ್‌
ರೀಡರ್‌, ಸಮುದಾಯ ದಂತ ಚಿಕಿತ್ಸಾ ವಿಭಾಗ, ಮಣಿಪಾಲ ದಂತ ವೈದ್ಯಕೀಯ ಮಹಾವಿದ್ಯಾಲಯ, ಮಾಹೆ, ಮಣಿಪಾಲ

ಟಾಪ್ ನ್ಯೂಸ್

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.