ಮಧುಮೇಹ: ನಾವು ತಿಳಿಯಬೇಕಾದದ್ದು ಏನು?


Team Udayavani, Oct 14, 2018, 6:00 AM IST

diabetes-13.jpg

ಹಿಂದಿನ ವಾರದಿಂದ- ವ್ಯಾಯಾಮ ಮತ್ತು ಸೇವಿಸುವ ಆಹಾರಗಳ ನಡುವೆ ಉತ್ತಮ ಸಮತೋಲನ ಹೊಂದಿರುವುದು ಕೂಡ ಆವಶ್ಯಕ. ಇದು ಸ್ನಾಯುಶಕ್ತಿ ಮತ್ತು ಸೂಕ್ತ ದೇಹತೂಕವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ಪ್ರತಿದಿನ ನಡಿಗೆ, ಜಾಗಿಂಗ್‌ನಂತಹ ಮಧ್ಯಮ ತೀವ್ರತೆಯ ವ್ಯಾಯಾಮವನ್ನು 30 ನಿಮಿಷಗಳ ಕಾಲ ಮಾಡುವುದು ಯೋಗ್ಯವಾಗಿದೆ.

ಮಧುಮೇಹವನ್ನು ಆದಷ್ಟು ಬೇಗನೆ ಪತ್ತೆಹಚ್ಚಿ ಚಿಕಿತ್ಸೆ ಆರಂಭಿಸುವುದು ಕೂಡ ರೋಗ ನಿರ್ವಹಣೆಯಲ್ಲಿ ಅತ್ಯಂತ ಪ್ರಾಮುಖ್ಯವಾಗಿದೆ. ಇದರಿಂದ ಕಾಯಿಲೆಯ ಆರಂಭಿಕ ಹಂತದಿಂದಲೇ ಗ್ಲೆ„ಸೇಮಿಕ್‌ ನಿಯಂತ್ರಣವನ್ನು ಇರಿಸಿಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ಇದು “ಮೆಟಬಾಲಿಕ್‌ ಮೆಮರಿ’ ಎಂಬುದಾಗಿ ಕರೆಯಲ್ಪಡುವ ವಿದ್ಯಮಾನದ ಮೂಲಕ ಮಧುಮೇಹದ ಸಂಕೀರ್ಣ ಸಮಸ್ಯೆಗಳು ಪ್ರಗತಿ ಹೊಂದುವುದನ್ನು ತಡೆಯುತ್ತದೆ ಹಾಗೂ ಚಿಕಿತ್ಸೆಗೆ ಪ್ರತಿಸ್ಪಂದನೆಯನ್ನು ಉತ್ತಮಗೊಳಿಸುತ್ತದೆ. ಮಧುಮೇಹದ ವಿಧ ಮತ್ತು ರೋಗಿಯ ದೇಹಸ್ವಭಾವಕ್ಕೆ ಅನುಗುಣವಾಗಿ ಚಿಕಿತ್ಸೆಯನ್ನು ವ್ಯಕ್ತಿ ನಿರ್ದಿಷ್ಟಗೊಳಿಸಬೇಕಾಗುತ್ತದೆ. 

ಮಧುಮೇಹಕ್ಕೆ ಒದಗಿಸಲಾಗುವ ಔಷಧ ಚಿಕಿತ್ಸೆಯು ಮಧುಮೇಹದಲ್ಲಿ ಅಡಕವಾಗಿರುವ ವಿವಿಧ ಚಯಾಪಚಯ ಸಮಸ್ಯೆಗಳನ್ನು ಉತ್ತರಿಸುವ ಹಲವು ವಿಧದ ಔಷಧಗಳು ಮತ್ತು ಇನ್ಸುಲಿನನ್ನು ಒಳಗೊಂಡಿರುತ್ತದೆ.

ಮಧುಮೇಹದ ದೀರ್ಘ‌ಕಾಲಿಕ ಸಂಕೀರ್ಣ ಸಮಸ್ಯೆಗಳನ್ನು ತಡೆಯುವುದಕ್ಕಾಗಿ ಚಿಕಿತ್ಸೆಯ ಸಂದರ್ಭದಲ್ಲಿ ಹಾಕಿಕೊಳ್ಳಲಾಗಿರುವ ಗುರಿಗಳನ್ನು ಸಾಧಿಸಲಾಗಿದೆಯೇ ಎಂಬುದನ್ನು ಪರಿಶೀಲಿಸುವ ನಿಗದಿತ ಅವಧಿಗಳಲ್ಲಿ ತಪಾಸಣೆಯೂ ಮಧುಮೇಹದ ನಿಭಾವಣೆಯಲ್ಲಿ ಅತ್ಯಂತ ಮುಖ್ಯವಾಗಿದೆ. ಮಧುಮೇಹದ ಬಹುತೇಕ ಸಮಸ್ಯೆಗಳು ಆಂತರಿಕವಾಗಿ ಪ್ರಗತಿ ಹೊಂದುವಂಥವಾಗಿದ್ದು, ಯಾವುದೇ ಚಿಹ್ನೆಗಳನ್ನು ತೋರ್ಪಡಿಸದೆ ಇರುವುದರಿಂದ ಅವುಗಳನ್ನು ಶೀಘ್ರ ಪತ್ತೆ ಹಚ್ಚಿ ಚಿಕಿತ್ಸೆ ಒದಗಿಸುವುದಕ್ಕಾಗಿ ನಿಗದಿತ ಅವಧಿಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ಮಧುಮೇಹವು ಒಂದು ದೀರ್ಘ‌ಕಾಲಿಕ ಆರೋಗ್ಯ ಸಮಸ್ಯೆಯಾಗಿದ್ದು, ಮಧುಮೇಹದ ವಿವಿಧ ಅಂಶಗಳು ಮತ್ತು ವಿಚಾರಗಳ ಬಗ್ಗೆ ಮಧುಮೇಹ ಪೀಡಿತರಿಗೆ ಅರಿವು ಹಾಗೂ ಮಾಹಿತಿಯನ್ನು ಒದಗಿಸಬೇಕು. ಅಲ್ಲದೆ ಸ್ವಯಂ ನಿರ್ವಹಣೆಯ ನಿಟ್ಟಿನಲ್ಲಿ ಆರೋಗ್ಯ ಸೇವಾ ಪೂರೈಕೆದಾರರ ಜತೆಗೆ ಚಿಕಿತ್ಸೆಯ ಯೋಜನೆಯಲ್ಲಿ ಅವರನ್ನು ಸೇರಿಸಿಕೊಳ್ಳಬೇಕು. 

ಟೈಪ್‌ 2 ಮಧುಮೇಹವು ಅತ್ಯಂತ ಕಳವಳಕಾರಿ ವೇಗದಲ್ಲಿ ವೃದ್ಧಿಸುತ್ತಿರುವುದಕ್ಕೆ ಪ್ರಧಾನ ಕಾರಣ ಪ್ರಸ್ತುತ ಜೀವನಶೈಲಿಯೇ ಆಗಿದೆ. ಆರೋಗ್ಯಯುತ ಆಹಾರ ಶೈಲಿ, ಸಮರ್ಪಕ ವ್ಯಾಯಾಮಗಳನ್ನು ಎಳೆಯ ವಯಸ್ಸು ಮತ್ತು ಹದಿಹರೆಯದಲ್ಲಿ ರೂಢಿಸಿಕೊಳ್ಳುವುದು ಮಧುಮೇಹವೆಂಬ ಜಾಗತಿಕ ಆರೋಗ್ಯ ಸಮಸ್ಯೆಯನ್ನು ನಿಯಂತ್ರಿಸಲು ಅತ್ಯಂತ ಮುಖ್ಯವಾಗಿದೆ. ರಕ್ತದಲ್ಲಿ ಗುÉಕೋಸ್‌ ಅಂಶದ ಮೇಲೆ ಆದಷ್ಟು ಬೇಗನೆ ಪರಿಣಾಮಕಾರಿಯಾಗಿ ನಿಯಂತ್ರಣ ಸಾಧಿಸುವುದು ಮಧುಮೇಹದ ಪ್ರಗತಿ ಹಾಗೂ ಸಂಕೀರ್ಣ ಸಮಸ್ಯೆಗಳ ತೀವ್ರತೆಯನ್ನು ಹದ್ದುಬಸ್ತಿನಲ್ಲಿ ಇರಿಸಲು ಸಹಾಯ ಮಾಡುತ್ತದೆ. ಮಧುಮೇಹದ ವಿರುದ್ಧ ಈ ಕ್ಷಣದಿಂದಲೇ ಸಕ್ರಿಯರಾಗೋಣ.

ಟಾಪ್ ನ್ಯೂಸ್

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

14-

Kasaragodu: ಹಣದ ವಿವಾದ: ಪೆಟ್ರೋಲ್‌ ಸುರಿದು ಮಹಿಳೆಯ ಕೊಲೆಗೆ ಯತ್ನ

13-mulleria

Mulleria: ವ್ಯಕ್ತಿಯ ನಿಗೂಢ ಸಾವು : ತಲೆಗೆ ಗಂಭೀರ ಗಾಯ ಮರಣಕ್ಕೆ ಕಾರಣ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

9-

Chamarajanagara: ಪ್ರಮೋದ್ ಆರಾಧ್ಯಗೆ ಯುಪಿಎಸ್‌ಸಿ 671 ರ‍್ಯಾಂಕ್‌  

Election ಗೆದ್ದ ನಂತರ ಜನರಿಂದ ದೂರವಾಗದೆ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು

Election ಗೆದ್ದ ಬಳಿಕ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು; ಬಿ.ವೈ.ರಾಘವೇಂದ್ರ

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

8

Measles: ದಡಾರ

4-health

Tooth Health: ನಿಮ್ಮ ದವಡೆ ಸಂಧಿಯ ಆರೋಗ್ಯವೂ ಬಹಳ ಮುಖ್ಯ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

14-

Kasaragodu: ಹಣದ ವಿವಾದ: ಪೆಟ್ರೋಲ್‌ ಸುರಿದು ಮಹಿಳೆಯ ಕೊಲೆಗೆ ಯತ್ನ

13-mulleria

Mulleria: ವ್ಯಕ್ತಿಯ ನಿಗೂಢ ಸಾವು : ತಲೆಗೆ ಗಂಭೀರ ಗಾಯ ಮರಣಕ್ಕೆ ಕಾರಣ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

12-

Gangolli: ರಿಕ್ಷಾ-ಕಾರು ಢಿಕ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.