ಆಹಾರದಲ್ಲಿ ನಾರಿನಂಶ
Team Udayavani, Jul 14, 2019, 5:17 AM IST
ಕಳೆದ ಸಂಚಿಕೆಯಿಂದ-ಆದರೆ, ಕೆಲವು ಮಂದಿಯಲ್ಲಿ ಮಲಬದ್ಧತೆ, ಭೇದಿ ಅಥವಾ ಇರಿಟೆಬಲ್ ಬವೆಲ್ ಸಿಂಡ್ರೋಮ್ನಂತಹ ನಿರ್ದಿಷ್ಟ ಆರೋಗ್ಯ ಸ್ಥಿತಿಗತಿಗಳಿಂದಾಗಿ ಆಹಾರ ಬದಲಾವಣೆಗಳಿಂದಲೂ ನಿರೀಕ್ಷಿತ ಪರಿಣಾಮಗಳು ಕಂಡುಬರದೆ ಇದ್ದಲ್ಲಿ ನಾರಿನಂಶ ಪೂರಕ ಆಹಾರಗಳನ್ನು ಒದಗಿಸಬೇಕಾಗಬಹುದು. ನಾರಿನಂಶ ಪೂರಕ ಆಹಾರಗಳನ್ನು ಸೇವಿಸುವುದಕ್ಕೆ ಮುನ್ನ ನಿಮ್ಮ ವೈದ್ಯರ ಜತೆಗೆ ಸಮಾಲೋಚಿಸಿಕೊಳ್ಳಿ.
ನಾರಿನಂಶ ಪೂರೈಕೆ ಹೆಚ್ಚಿಸಿಕೊಳ್ಳಲು
ಇಡೀ ಧಾನ್ಯ, ಹಣ್ಣು ಮತ್ತು ತರಕಾರಿಗಳನ್ನು ಬಳಸಿ ಇಡೀ ಧಾನ್ಯಗಳು, ಹಣ್ಣು ಮತ್ತು ತರಕಾರಿಗಳು, ಮೊಳಕೆ ಕಾಳುಗಳು, ಬೀನ್ಸ್ ಮತ್ತು ಅಗಸೆ ಬೀಜದಂತಹ ಕೆಲವು ಬೀಜಗಳು ನಾರಿನಂಶದ ಸಮೃದ್ಧ ಮೂಲಗಳಾಗಿವೆ. ಸಜ್ಜೆ ಖೀಚಿx, ಮಿಶ್ರ ತರಕಾರಿ ಸಲಾಡ್, ಚಟ್ಪಟಿ ಸೌøಟ್ಸ್ ಫ್ರಾಂಕಿ, ಹೆಸರು ಕಾಳು ಅಥವಾ ಕಡಲೆ ಉಸ್ಲಿ ಮತ್ತು ಮಿಶ್ರ ತರಕಾರಿ ಕ್ಲಿಯರ್ ಸೂಪ್ನಂತಹ ತರಹೇವಾರಿ ಅಡುಗೆಗಳಲ್ಲಿ ಇವುಗಳನ್ನು ಉಪಯೋಗಿಸಿ ಸೇವಿಸುವ ಮೂಲಕ ನಾರಿನಂಶವನ್ನು ವೃದ್ಧಿಸಿಕೊಳ್ಳಬಹುದು. ಮಿಶ್ರ ತರಕಾರಿ ಸಬ್ಜಿ ಅಥವಾ ಪಲ್ಯಗಳು ಹೆಚ್ಚು ನಾರಿನಂಶ ಹೊಂದಿದ್ದು, ನಮ್ಮ ಹೊಟ್ಟೆ ಮತ್ತು ಕರುಳಿಗೆ ಉತ್ತಮವಾಗಿರುವುದರಿಂದ ಹೆಚ್ಚು ಉಪಯೋಗಿಸುವುದು ವಿಹಿತ.
ನಿಮ್ಮ ಮಕ್ಕಳಿಗೆ ಸಂಸ್ಕರಿತ ಆಹಾರದ ಬದಲಾಗಿ
ನಾರಿನಂಶ ಸಹಿತ ಆಹಾರ ಕೊಡಿ
ನಿಮ್ಮ ಮಕ್ಕಳಿಗೆ ನಾರಿನಂಶ ಹೆಚ್ಚಿರುವ ತಿಂಡಿ ತಿನಿಸುಗಳನ್ನು ನೀಡುವುದರ ಮೂಲಕ ಅವರು ದೀರ್ಘಕಾಲ ಆರೋಗ್ಯವಂತರಾಗಿ ಇರುವಂತೆ ನೋಡಿಕೊಳ್ಳಿ. ಮಿಶ್ರ ಹಿಟ್ಟಿನ ದೋಸೆ, ದೋಸೆ ಮಾಡಿ ಅದರ ಮೇಲೆ ಮಿಶ್ರ ತರಕಾರಿಯಿಂದ ಅಲಂಕರಿಸುವುದು ಇತ್ಯಾದಿಗಳು ಸಿದ್ಧ – ಸಂಸ್ಕರಿತ ತಿಂಡಿ ತಿನಿಸುಗಳಿಗಿಂತ ಸಾವಿರ ಪಾಲು ಆರೋಗ್ಯಕರ.
ನವಣೆಯು ಅತಿ ಹೆಚ್ಚು ನಾರಿನಂಶವನ್ನು ಮತ್ತು ಸಂಕೀರ್ಣ ಪಿಷ್ಠವನ್ನು ಹೊಂದಿರುತ್ತದೆ. ಸಿರಿಧಾನ್ಯ ಉಪ್ಪಿಟ್ಟು ಬೆಳಗಿನ ಉಪಾಹಾರವಾಗಿ ಸೇವಿಸುವುದಕ್ಕೆ ಒಂದು ಉತ್ತಮ ಸಮೃದ್ಧ ನಾರಿನಂಶವುಳ್ಳ ಆಹಾರ. ರವಾದಿಂದ ತಯಾರಿಸಿದ ಉಪ್ಪಿಟ್ಟಿಗಿಂತ ಇದು ಹೆಚ್ಚು ಆರೋಗ್ಯಕರ.
ದೈನಿಕ ಊಟ- ಉಪಾಹಾರದಲ್ಲಿ
ಹೆಚ್ಚು ಸಲಾಡ್ಗಳನ್ನು ಬಳಸಿ – ಅತಿ ಹೆಚ್ಚು ನಾರಿನಂಶ ಗಳಿಸಿ
ನಾರಿನಂಶ, ಪ್ರೊಟೀನ್, ಸಂಕೀರ್ಣ ಪಿಷ್ಠಗಳಿದ್ದು ಆ್ಯಂಟಿ ಓಕ್ಸಿಡೆಂಟ್ಗಳು, ಸೂಕ್ಷ್ಮ ಪೋಷಕಾಂಶಗಳು ಮತ್ತು ಕಿಣ್ವಗಳನ್ನು ಒದಗಿಸುವ ಸಲಾಡ್ಗಳನ್ನು ಆಯ್ದುಕೊಳ್ಳಿ.
ಒಂದು ಬೌಲ್ನಲ್ಲಿ ಮೊಳಕೆ ಬರಿಸಿದ ಇಡೀ ಹೆಸರು ಕಾಳು ಅಥವಾ ಕಡಲೆಯ ಜತೆಗೆ ಸೌತೆಕಾಯಿ, ಟೊಮ್ಯಾಟೊ, ಕ್ಯಾರೆಟ್, ಬೀಟ್ರೂಟ್, ನೀರುಳ್ಳಿ, ಕ್ಯಾಬೇಜ್ ತುರಿ, ಜೋಳ ಮತ್ತು ದಾಳಿಂಬೆಯಂತಹ ತರಕಾರಿಗಳನ್ನು ತೆಗೆದುಕೊಳ್ಳಿ. ನಿಂಬೆರಸ, ಕಾಳುಮೆಣಸಿನ ಪುಡಿ ಅಥವಾ ಚಾಟ್ಮಸಾಲಾ ಬೆರೆಸಿ ರುಚಿ ಹೆಚ್ಚಿಸಿಕೊಳ್ಳಿ. ಬೇಕಿದ್ದರೆ ಉಪ್ಪು ಹಾಕಿಕೊಳ್ಳಬಹುದು. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಸೇವಿಸಿ.
-ಮುಂದುವರಿಯುವುದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು
Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್ ಮೊರೆಹೋಗಿ
World Kidney Day: ಹಿಮೋಡಯಾಲಿಸಿಸ್: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?
Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
Cholesterol: ಕೊಲೆಸ್ಟರಾಲ್ ತಗ್ಗಿಸುವ ಔಷಧ ಸ್ಟಾಟಿನ್
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ