ಹದಿಹರೆಯದವರಿಗೆ ಆಹಾರ ಮತ್ತು ಪೌಷ್ಟಿಕಾಂಶಗಳು


Team Udayavani, Apr 28, 2019, 6:00 AM IST

FOOD

ಮುಂದುವರಿದುದು– ಹದಿಹರೆಯದಲ್ಲಿ ಝಿಂಕ್‌ ಕೂಡ ಅತ್ಯಂತ ಮುಖ್ಯವಾದ ಪೌಷ್ಟಿಕಾಂಶಗಳಲ್ಲಿ ಒಂದಾಗಿದೆ. ಅದು ದೈಹಿಕ ಬೆಳವಣಿಗೆ ಮತ್ತು ಲೈಂಗಿಕ ಪ್ರೌಢತೆಯಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ.

ಹದಿಹರೆಯದಲ್ಲಿ ಉಂಟಾಗುವ ಕ್ಷಿಪ್ರ ಬೆಳವಣಿಗೆ ಮತ್ತು ಹಾರ್ಮೋನ್‌ ಬದಲಾವಣೆಗಳಿಗೆ ಸ್ಪಂದಿಸುವುದರಿಂದ ಸೀರಮ್‌ ಝಿಂಕ್‌ ಪ್ರಮಾಣವು ಕಡಿಮೆಯಾಗುತ್ತದೆ. 9ರಿಂದ 13 ವರ್ಷ ವಯಸ್ಸಿನ ಬಾಲಕ ಮತ್ತು ಬಾಲಕಿಯರಿಗೆ ಶಿಫಾರಸು ಮಾಡಲಾದ ಝಿಂಕ್‌ ಸೇವನೆಯ ಪ್ರಮಾಣವು ದಿನಕ್ಕೆ 9 ಮಿ.ಗ್ರಾಂ ಆಗಿದೆ. 14ರಿಂದ 18 ವರ್ಷ ವಯೋಮಾನದ ಬಾಲಕಿಯರಿಗೆ ಶಿಫಾರಸು ಮಾಡಲಾದ ಝಿಂಕ್‌ ಸೇವನೆಯ ಪ್ರಮಾಣವು ದಿನಕ್ಕೆ 9 ಮಿ.ಗ್ರಾಂ ಆಗಿದೆ. ಕೆಂಪು ಮಾಂಸ, ಚಿಪ್ಪು ಮೀನು, ಇಡೀ ಧಾನ್ಯಗಳಲ್ಲಿ ಝಿಂಕ್‌ ಹೇರಳವಾಗಿರುತ್ತದೆ. ಅನೇಕ ಉಪಾಹಾರ ಸೀರಿಯಲ್‌ಗ‌ಳಲ್ಲಿ ಝಿಂಕ್‌ ಸೇರಿಸಿರಲಾಗುತ್ತದೆ. ಝಿಂಕ್‌ ಮತ್ತು ಕಬ್ಬಿಣಾಂಶಗಳು ದೇಹ ಹೀರಿಕೆಯ ಸಂದರ್ಭದಲ್ಲಿ ಪರಸ್ಪರ ಸ್ಪರ್ಧಿಸುತ್ತವಾದ್ದರಿಂದ ಒಂದನ್ನು ಹೆಚ್ಚು, ಇನ್ನೊಂದನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿದರೆ ಕಡಿಮೆ ಸೇವಿಸಿದ್ದರ ದೇಹ ಹೀರಿಕೆಯು ಕಡಿಮೆಯಾಗುವ ಸಾಧ್ಯತೆ ಇದೆ.

ಡಿಎನ್‌ಎ, ಆರ್‌ಎನ್‌ಎ ಮತ್ತು ಪ್ರೊಟೀನ್‌ ಸಂಯೋಜನೆಯಲ್ಲಿ ಫೊಲೇಟ್‌ ಪ್ರಧಾನ ಪಾತ್ರವನ್ನು ವಹಿಸುತ್ತದೆ. ಹೀಗಾಗಿ, ವಯಸ್ಸಿಗೆ ಬರುವ ಸಂದರ್ಭದಲ್ಲಿ ಹದಿಹರೆಯದವರಿಗೆ ಫೊಲೇಟ್‌ನ ಅಗತ್ಯ ಸಾಕಷ್ಟಿರುತ್ತದೆ. ಸೇವನೆಗೆ ಸಿದ್ಧ ಸೀರಿಯಲ್‌ಗ‌ಳು, ಕಿತ್ತಳೆ, ಬ್ರೆಡ್‌, ಹಾಲು ಮತ್ತು ಒಣ ಬೀನ್ಸ್‌ ಯಾ ಬೇಳೆಗಳಲ್ಲಿ ಫೊಲೇಟ್‌ ಸಮೃದ್ಧ ಪ್ರಮಾಣದಲ್ಲಿರುತ್ತದೆ.

ನಾನೇನು ಸೇವಿಸಬೇಕು?
ದಿನಕ್ಕೆ ಮೂರು ನಿಯಮಿತ ಊಟಗಳು ಮತ್ತು ಕೆಲವು ಉಪಾಹಾರಗಳು ನಿಮ್ಮ ಪೌಷ್ಟಿಕಾಂಶ ಅಗತ್ಯಗಳನ್ನು ಪೂರೈಸುವುದಕ್ಕೆ ಸಾಕು. ಊಟ- ಉಪಾಹಾರಗಳನ್ನು ತಪ್ಪಿಸಿಕೊಳ್ಳುವುದರಿಂದ ವಿಟಮಿನ್‌ಗಳು, ಖನಿಜಾಂಶಗಳು ಮತ್ತು ಕಾಬೊìಹೈಡ್ರೇಟ್‌ಗಳು ಕೂಡ ತಪ್ಪಿ ಹೋಗಿ ನಿಮಗೆ ಶಕ್ತಿಯ ಕೊರತೆ ಅನುಭವಕ್ಕೆ ಬರಬಹುದು ಅಥವಾ ಏಕಾಗ್ರತೆ ಸಾಧಿಸುವುದು ಕಷ್ಟವಾಗಬಹುದು.

ನಿಮ್ಮ ಮಿದುಳು ಮತ್ತು ಸ್ನಾಯು ಗಳಿಗೆ ಶಕ್ತಿ ಒದಗಿಸುವ ಆಹಾರಗಳೆಂದರೆ ಬ್ರೆಡ್‌ಗಳು, ಕಾಳುಗಳು ಮತ್ತು ದ್ವಿದಳ ಧಾನ್ಯಗಳು. ಅವು ವಿಟಮಿನ್‌ ಬಿ ಮತ್ತು ನಾರಿನಂಶಗಳ ಸಮೃದ್ಧ ಮೂಲಗಳು ಕೂಡ ಆಗಿವೆ. ಸಾಕಷ್ಟು ಪ್ರಮಾಣದಲ್ಲಿ ಕಾಬೊìಹೈಡ್ರೇಟ್‌ ಹೊಟ್ಟೆ ಸೇರದೆ ಇದ್ದರೆ ದಣಿವು ಉಂಟಾಗುತ್ತದೆ. ಪ್ರತೀ ಊಟ – ಉಪಾಹಾರದಲ್ಲಿಯೂ ಕಾಬೊìಹೈಡ್ರೇಟ್‌ ಸೇರಿಸಿಕೊಳ್ಳಲು ಮರೆಯದಿರಿ.

-ಮುಂದುವರಿಯುವುದು

ಟಾಪ್ ನ್ಯೂಸ್

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.