ಹೆಪಟೈಟಿಸ್‌- ಮಕ್ಕಳ ಸಾಂಕ್ರಾಮಿಕ ಕಾಯಿಲೆ; ಗಮನಿಸಬೇಕಾದ ಲಕ್ಷಣಗಳೇನು?


Team Udayavani, Aug 14, 2022, 2:09 PM IST

9

ಹೆಪಟೈಟಿಸ್‌ ಅಥವಾ ಹಳದಿ ಕಾಮಾಲೆ ಎಂದರೆ ಪಿತ್ತಜನಕಾಂಗ ಅಥವಾ ಯಕೃತ್ತಿನ ಉರಿಯೂತ. ಇದು ಸೋಂಕು ಮತ್ತು ಸೋಂಕೇತರ ಎರಡೂ ವಿಧವಾದ ಹಲವು ಕಾರಣಗಳಿಂದ ಉಂಟಾಗುತ್ತದೆ. ಸೋಂಕೇತರ ಅಂದರೆ ಒಬ್ಬರಿಂದ ಒಬ್ಬರಿಗೆ ಪ್ರಸಾರವಾಗದ ಕಾರಣಗಳಲ್ಲಿ ಕೆಲವು ಔಷಧಗಳು, ವಿಷಾಂಶಗಳು ಸೇರಿವೆ. ಕೆಲವು ಸಂದರ್ಭಗಳಲ್ಲಿ ಪಿತ್ತಜನಕಾಂಗದ ಜೀವಕೋಶಗಳ ವಿರುದ್ಧ ದೇಹದ ರೋಗ ನಿರೋಧಕ ಕಣಗಳು ದಾಳಿ ನಡೆಸುವ ‘ಆಟೋಇಮ್ಯೂನ್‌’ ಪ್ರತಿಕ್ರಿಯೆಯಿಂದಾಗಿಯೂ ಹೆಪಟೈಟಿಸ್‌ ಉಂಟಾಗುತ್ತದೆ.

ಮಕ್ಕಳಲ್ಲಿ ಹೆಪಟೈಟಿಸ್‌ಗೆ ಸಾಮಾನ್ಯ ಕಾರಣಗಳು

ನಮ್ಮ ಪಿತ್ತಜನಕಾಂಗದ ಕಾರ್ಯನಿರ್ವಹಣೆಯಲ್ಲಿ ವ್ಯತ್ಯಯ ಉಂಟುಮಾಡಬಲ್ಲ ಹಲವಾರು ವೈರಸ್‌ ಗಳಿವೆ. ಇದೇ ಕಾರಣದಿಂದ ಇವುಗಳನ್ನು ಒಟ್ಟಾಗಿ ಹೆಪಟೈಟಿಸ್‌ ವೈರಸ್‌ಗಳು ಅಥವಾ ಹೆಪಟೋಟ್ರೋಪಿಕ್‌ ವೈರಸ್‌ಗಳು ಎಂದು ಕರೆಯಲಾಗುತ್ತದೆ. ಹೆಪಟೈಟಿಸ್‌ ವೈರಸ್‌ ಎ, ಬಿ, ಸಿ, ಡಿ ಅಥವಾ ಡೆಲ್ಟಾ ಮತ್ತು ಇ ಎಂದು ಇವುಗಳನ್ನು ಹೆಸರಿಸಲಾಗಿದೆ. ಮಕ್ಕಳಲ್ಲಿ ಹೆಪಟೈಟಿಸ್‌ ಉಂಟಾಗುವುದಕ್ಕೆ ಸಾಮಾನ್ಯ ಕಾರಣ ಹೆಪಟೈಟಿಸ್‌ ಎ ವೈರಸ್‌. ಆದರೆ ಹೆಪಟೈಟಿಸ್‌ ಎ ವೈರಸ್‌ ವಿರುದ್ಧ ಲಸಿಕೆಗಳು ವ್ಯಾಪಕವಾಗಿ ಲಭ್ಯವಿದ್ದು, ಮಕ್ಕಳಲ್ಲಿ ಹೆಪಟೈಟಿಸ್‌ ಎ ಸೋಂಕು ಕ್ರಮೇಣ ಕಡಿಮೆಯಾಗುತ್ತಿದೆ. ಹೆಪಟೈಟಿಸ್‌ಗೆ ಕಾರಣವಾಗುವ, ಅಪರೂಪದ ವೈರಸ್‌ಗಳೆಂದರೆ ಎಚ್‌ಎಸ್‌ವಿ, ಸಿಎಂವಿ, ಇಬಿವಿ ಇತ್ಯಾದಿ. ಇತ್ತೀಚೆಗಿನ ದಿನಗಳಲ್ಲಿ ಕೋವಿಡ್‌ ಗೆ ತುತ್ತಾದ ಬಳಿಕ ಹೆಪಟೈಟಿಸ್‌ ಸೋಂಕಿಗೀಡಾಗುವ ಪ್ರಕರಣಗಳು ಹೆಚ್ಚುತ್ತಿವೆ. ಕಾಮನ್‌ ಅಡೆನೊವೈರಸ್‌ ನಿಂದಾಗಿ ಹಠಾತ್‌ ಹೆಪಟೈಟಿಸ್‌ ಕಾಣಿಸಿಕೊಳ್ಳುವುದು ಜಾಗತಿಕವಾಗಿ ಅಲ್ಲಲ್ಲಿ ಒಂದು ಹಾವಳಿ ಎಂಬಂತೆ ವರದಿಯಾಗುತ್ತಿದೆ. ಮಕ್ಕಳಲ್ಲಿ ಹೆಪಟೈಟಿಸ್‌ ಉಂಟುಮಾಡುವ, ಒಬ್ಬರಿಂದ ಒಬ್ಬರಿಗೆ ಪ್ರಸಾರವಾಗದ ಕಾರಣಗಳಲ್ಲಿ ವಿಲ್ಸನ್ಸ್‌ ಕಾಯಿಲೆ, ಪಿತ್ತಜನಕಾಂಗದ ಅಟೊಇಮ್ಯೂನ್‌ ಕಾಯಿಲೆಗಳು ಸೇರಿವೆ.

ಮಕ್ಕಳಲ್ಲಿ ಹಠಾತ್‌ ಹೆಪಟೈಟಿಸ್‌ನ ಲಕ್ಷಣಗಳು

ಪ್ರಾಥಮಿಕ ಹಂತಗಳಲ್ಲಿ ಲಕ್ಷಣಗಳು ಕ್ಷುಲ್ಲಕ ಮತ್ತು ಅನಿರ್ದಿಷ್ಟವಾಗಿರುತ್ತವೆ, ಇದರಿಂದಾಗಿ ರೋಗಪತ್ತೆ ಕಷ್ಟಸಾಧ್ಯವಾಗುತ್ತದೆ. ಹೆಪಟೈಟಿಸ್‌ ಸೋಂಕಿನ ಪ್ರಾಥಮಿಕ ಲಕ್ಷಣಗಳೆಂದರೆ:

ಹಸಿವು ಕಡಿಮೆಯಾಗುವುದು, ಲಘು ಜ್ವರ, ದಣಿವು, ದೇಹಾಲಸ್ಯ, ಸ್ನಾಯು ಮತ್ತು ಹೊಟ್ಟೆಯಲ್ಲಿ ನೋವು, ಹೊಟ್ಟೆ ತೊಳೆಸುವಿಕೆ ಮತ್ತು ವಾಂತಿ ಇತ್ಯಾದಿ. ರೋಗ ಬಲಿಯುತ್ತಿದ್ದಂತೆ ಮಕ್ಕಳಲ್ಲಿ ಕಾಮಾಲೆಯ ಲಕ್ಷಣಗಳು, ಗಾಢ ವರ್ಣದ ಮೂತ್ರವಿಸರ್ಜನೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಹಠಾತ್‌ ಹೆಪಟೈಟಿಸ್‌ ಪಿತ್ತಜನಕಾಂಗದ ಹಠಾತ್‌ ವೈಫ‌ಲ್ಯವಾಗಿಯೂ ಉಲ್ಬಣಿಸಬಹುದಾಗಿದೆ.

ಚಿಕಿತ್ಸೆ ಮತ್ತು ಪ್ರತಿಬಂಧಾತ್ಮಕ ಕ್ರಮಗಳು

ಹಠಾತ್‌ ಹೆಪಟೈಟಿಸ್‌ಗೆ ಅನುಸರಿಸುವ ಚಿಕಿತ್ಸಾ ಕ್ರಮಗಳು ಪ್ರಧಾನವಾಗಿ ರೋಗ ಲಕ್ಷಣಗಳನ್ನು ಕಡಿಮೆ ಮಾಡುವುದು ಮತ್ತು ಪಿತ್ತಜನಕಾಂಗವನ್ನು ರಕ್ಷಿಸುವ ಉದ್ದೇಶದವಾಗಿರುತ್ತವೆ. ಕೆಲವೊಮ್ಮೆ ಲಭ್ಯವಿದ್ದಲ್ಲಿ ಹೆಪಟೈಟಿಸ್‌ಗೆ ಕಾರಣವನ್ನು ಚಿಕಿತ್ಸೆಗೆ ಗುರಿಪಡಿಸಲಾಗುತ್ತದೆ.

ಹಠಾತ್‌ ಹೆಪಟೈಟಿಸ್‌ ಪ್ರಸಾರವಾಗುವ ಪ್ರಧಾನ ಮಾಧ್ಯಮ ಮಲಿನ ನೀರು ಮತ್ತು ಆಹಾರ. ಹೀಗಾಗಿ ನೈರ್ಮಲ್ಯ ಕ್ರಮಗಳನ್ನು ಅನುಸರಿಸುವ ಮೂಲಕ ವೈರಸ್‌ ಪ್ರಸರಣವನ್ನು ತಡೆಯಬಹುದು. ಹೆಪಟೈಟಿಸ್‌ ಎ ಮತ್ತು ಬಿ ವೈರಸ್‌ಗಳ ವಿರುದ್ಧ ಈಗ ಲಸಿಕೆಗಳು ಲಭ್ಯವಿದ್ದು, ಇವುಗಳನ್ನು ಮಕ್ಕಳಿಗೆ ಕೊಡಿಸುವ ಮೂಲಕ ಪ್ರಸರಣವನ್ನು ತಡೆಯಬಹುದು.

ರೋಗ ಪತ್ತೆ

ಹಠಾತ್‌ ಹೆಪಟೈಟಿಸ್‌ ಕಾಯಿಲೆಯನ್ನು ರಕ್ತಪರೀಕ್ಷೆ ಮತ್ತು ಅಲ್ಟ್ರಾಸೌಂಡ್‌ ಪರೀಕ್ಷೆಗಳ ಮೂಲಕ ವೈದ್ಯಕೀಯ ಚಿತ್ರಣವನ್ನು ಪಡೆದು ಪತ್ತೆ ಮಾಡಲಾಗುತ್ತದೆ. ರಕ್ತಪರೀಕ್ಷೆಯಂತಹ ವಿಧಾನಗಳಿಂದ ರೋಗಪತ್ತೆಯಾಗದ ಸನ್ನಿವೇಶಗಳು ಮತ್ತು ಕಾಯಿಲೆ ವೇಗವಾಗಿ ಉಲ್ಬಣಿಸುವ ಅಪರೂಪದ ಸಂದರ್ಭಗಳಲ್ಲಿ ಪಿತ್ತಜನಕಾಂಗದ ಬಯಾಪ್ಸಿ ನಡೆಸಬೇಕಾಗಬಹುದು.

ಅಪಾಯ ಕಾರಣಗಳೇನು?

ವ್ಯಕ್ತಿಯೊಬ್ಬ ಅನೇಕ ಕಾರಣಗಳಿಂದ ಹೆಪಟೈಟಿಸ್‌ ಸೋಂಕಿಗೆ ತುತ್ತಾಗುವ ಅಪಾಯ ಹೊಂದಿರುತ್ತಾನೆ. ಅವುಗಳೆಂದರೆ;

„ ಮಲಿನ ಅಂದರೆ ಬಳಸಿದ ಚುಚ್ಚುಮದ್ದು ಸೂಜಿ, ಸಿರಿಂಜ್‌ಗಳನ್ನು ಹಂಚಿಕೊಳ್ಳುವುದು

„ ಅಸುರಕ್ಷಿತ ಲೈಂಗಿಕ ಸಂಪರ್ಕದಲ್ಲಿ ತೊಡಗುವುದು

„ ಅತಿಯಾದ ಮದ್ಯಪಾನ

-ಡಾ| ಅನುರಾಗ್‌ ಶೆಟ್ಟಿ, ಮೆಡಿಕಲ್‌ ಗ್ಯಾಸ್ಟ್ರೊಎಂಟರಾಲಜಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಗ್ಯಾಸ್ಟ್ರೊಎಂಟರಾಲಜಿ ವಿಭಾಗ, ಕೆಎಂಸಿ, ಮಂಗಳೂರು)

ಟಾಪ್ ನ್ಯೂಸ್

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು

Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

19-rcb

RCB: ಈ  ಸಲ ಕಪ್‌ ನಮ್ಮದು…

18

Honesty: ಪ್ರಾಮಾಣಿಕರಿಗಿದು ಕಾಲವಲ್ಲ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.