ಕೋವಿಡ್‌ -19 ಮತ್ತು ಬಾಯಿಯ ಆರೋಗ್ಯ ಪರಸ್ಪರ ಸಂಬಂಧ ಇದೆಯೇ?


Team Udayavani, Aug 29, 2021, 6:00 AM IST

ಕೋವಿಡ್‌ -19 ಮತ್ತು ಬಾಯಿಯ ಆರೋಗ್ಯ ಪರಸ್ಪರ ಸಂಬಂಧ ಇದೆಯೇ?

ವಿಶ್ವವ್ಯಾಪಿಯಾಗಿ ಹರಡುತ್ತಿರುವ ಕೋವಿಡ್‌ -19 ಸಾಂಕ್ರಾಮಿಕ ಕಾಯಿಲೆ ಬಹಳಷ್ಟು ಆತಂಕವನ್ನು ಸೃಷ್ಟಿಸಿದೆ. ಕೋವಿಡ್‌ -19 ವೈರಾಣು ಹಲ್ಲುಗಳು ಮತ್ತು ಬಾಯಿಯ ಅಂಗಾಂಶದ ಮೇಲೆ ಉಂಟುಮಾಡುವ ಅನೇಕ ಪರಿಣಾಮಗಳ ಬಗ್ಗೆ ಹೊಸ ಹೊಸ ಸಂಶೋಧನೆಗಳು ಇನ್ನೂ ನಡೆಯುತ್ತಲೇ ಇವೆ. ಅಧ್ಯಯನದ ಪ್ರಕಾರ ನಾಲಗೆ, ವಸಡು ಮತ್ತು ಬಾಯಿಯ ಕುಹರದ ಜೀವಕೋಶಗಳಲ್ಲಿ ಎಸಿಇ-2 ರಿಸೆಪ್ಟರ್‌ ಕಂಡು ಬರುತ್ತದೆ. ಇದು ವೈರಸ್‌ ಪ್ರವೇಶಿಸಲು ಅನುಮತಿ ನೀಡುವ ಪ್ರೊಟೀನ್‌ ಹಾಗೂ ಇದು ಕೋವಿಡ್‌ -19 ವೈರಾಣುವಿಗೆ ಪ್ರವೇಶ ಬಿಂದುವಾಗಿ ಕೆಲಸ ನಿರ್ವಹಿಸುತ್ತದೆ. ಬಾಯಿಯ ಆರೋಗ್ಯ ಕಡಿಮೆ ಇರುವವರಲ್ಲಿ ಎಸಿಇ-2 ರಿಸೆಪ್ಟರ್‌ಉಪಸ್ಥಿತಿ ಅಧಿಕವಾಗಿ ಕಂಡುಬರುತ್ತದೆ. ಹಾಗಾಗಿ ಬಾಯಿಯ ನೈರ್ಮಲ್ಯದ ಕೊರತೆಯಿಂದ ಸೋಂಕು ಹರಡುವ ಅಪಾಯ ಹೆಚ್ಚು. ಕೋವಿಡ್‌ -19 ಸೋಂಕಿಗೆ ಒಳಗಾದ ಸಮಯದಲ್ಲಿ ಅಥವಾ ಕೋವಿಡ್‌ -19ನಿಂದ ಚೇತರಿಸಿಕೊಂಡ (ಪೋಸ್ಟ್‌ ಕೋವಿಡ್‌) ಅವಧಿಯಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ಬಾಯಿಯ ಸಮಸ್ಯೆಗಳನ್ನು ಇತ್ತೀಚೆಗಿನ ಸಂಶೋಧನೆಯ ಆಧಾರದ ಮೇರೆಗೆ ಪ್ರಸ್ತುತಪಡಿಸುವುದೇ ಈ ಲೇಖನದ ಉದ್ದೇಶ.

ಅಹಿತಕರ ರುಚಿ (Disguesia)
ಕೆಟ್ಟ ಉಸಿರು, ಬಾಯಿಯಲ್ಲಿ ರುಚಿ ಗ್ರಹಿಸಲು ಅಸಾಧ್ಯವಾಗದಿರುವುದು ಅಥವಾ ಅಹಿತಕರ ರುಚಿ ಕೊರೋನಾ ರೋಗಿಗಳಲ್ಲಿ ಕಂಡುಬರುವಂತಹ ಮೊತ್ತಮೊದಲ ಲಕ್ಷಣ.

ಒಣ ಬಾಯಿಯ ಸಮಸ್ಯೆ
(Xerostomia)
ಬಾಯಿ ಯನ್ನು ತೇವವಾಗಿ ಡಲು ಬೇಕಾದ ಲಾಲಾರಸದ ಕೊರತೆಯಿಂದ ಒಣ ಬಾಯಿಯ ಸಮಸ್ಯೆ ಉಂಟಾಗುತ್ತದೆ. ಇದು ಕೋವಿಡ್‌ -19ನ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ. ಕೋವಿಡ್‌ ವೈರಾಣು ಲಾಲಾರಸ ಸ್ರವಿಸುವ ಗ್ರಂಥಿಗಳಿಗೆ ಸೋಂಕನ್ನು ಉಂಟುಮಾಡುತ್ತದೆ ಎಂದು ಇತ್ತೀಚೆಗಿನ ಅಧ್ಯಯನ ವರದಿ ಮಾಡಿದೆ. ಇದಲ್ಲದೆ ಕೆಲವರಿಗೆ ಸತತವಾಗಿ ಮಾಸ್ಕ್ ಧರಿಸುವುದರಿಂದ ಉಸಿರಾಟದ ತೊಂದರೆಯಾಗಿ ಬಾಯಿಯ ಮೂಲಕ ಶ್ವಾಸ ತೆಗೆದುಕೊಂಡಾಗ ಬಾಯಿಯಲ್ಲಿಯ ಲಾಲಾರಸ ಒಣಗಿ ಒಣ ಬಾಯಿಯ ಸಮಸ್ಯೆ ಉಂಟಾಗುತ್ತದೆ.

ಬಾಯಿಯ ಹುಣ್ಣುಗಳು (Oral ulcers)
ಕೋವಿಡ್‌ ವೈರಾಣು ದೇಹದ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಬಾಯಿಯ ಅಂಗಾಂಶದ ಸುತ್ತ ಇರುವ ರಕ್ತ ನಾಳಗಳನ್ನು ನಾಶ ಮಾಡಿ ಜೀವಕಣಗಳಿಗೆ ಆಮ್ಲಜನಕದ ಕೊರತೆ ಉಂಟುಮಾಡುತ್ತದೆ. ಇದರಿಂದ ನಾಲಗೆ ಹಾಗೂ ವಸಡುಗಳಲ್ಲಿ ಹುಣ್ಣುಗಳು ಕಂಡುಬರುತ್ತವೆ. ಹುಣ್ಣುಗಳು ಎರಡು ವಾರಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ ಕೂಡಲೇ ತಜ್ಞ ದಂತ ವೈದ್ಯರಲ್ಲಿ ಸಮಾಲೋಚಿಸಬೇಕು.

ಬಾಯಿಯಲ್ಲಿ ಬಿಳಿ ಅಥವಾ
ಕೆಂಪು ಮಚ್ಚೆಗಳು (COVID Tongue)
ಕೋವಿಡ್‌ -19 ಸೋಂಕಿಗೆ ಒಳಗಾದವರಲ್ಲಿ ನಾಲಗೆ ಮತ್ತು ಬಾಯಿಯ ಮೇಲ್ಭಾಗದಲ್ಲಿ ಬಿಳಿ ಅಥವಾ ಕೆಂಪು ಮಚ್ಚೆಗಳು ಕಂಡುಬರಬಹುದು. ಇದರಿಂದ ವಿಪರೀತ ನೋವು, ಸೋಂಕು ಹಾಗು ಸುಡುವ ಸಂವೇದನೆ ಉಂಟಾಗಬಹುದು. ಆದ್ದರಿಂದ ಈ ಲಕ್ಷಣಗಳು ಕಂಡುಬಂದರೆ ಕೂಡಲೇ ದಂತ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು.

ಹಲ್ಲಿನ ಸಂವೇದನೆ (Hypersensitivity)
ಹಲ್ಲುಗಳನ್ನು ರಕ್ಷಿಸುವ ಗಟ್ಟಿಯಾದ ಹೊರಪದರ (ಎನಾಮಲ್‌) ದುರ್ಬಲಗೊಂಡಾಗ ಹಲ್ಲಿನ ಸಂವೇದನೆ ಉಂಟಾಗುತ್ತದೆ. ಇದರಿಂದ ತಣ್ಣನೆ ಅಥವಾ ಬಿಸಿ ಆಹಾರ ಪದಾರ್ಥಗಳ ಸೇವನೆಯಿಂದ ಸೂಕ್ಷ್ಮತೆ, ಸಿಹಿ ಮತ್ತು ಆಮ್ಲಿಯ ಆಹಾರದಿಂದ ಸಂವೇದನೆ ಕಂಡುಬರುತ್ತದೆ.

ವಸಡಿನ ಉರಿಯೂತ (Gingivitis)
ಕೋವಿಡ್‌-19ನಿಂದ ದುರ್ಬಲಗೊಂಡು ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯು ತನ್ನ ಮೌಖೀಕ ಆರೋಗ್ಯವನ್ನು ಕಾಪಾಡಿ ಕೊಳ್ಳಲು ಸಾಧ್ಯವಾಗದೆ ಇದ್ದಾಗ ಹಲ್ಲಿನ ಸುತ್ತ ಪ್ಲೇಕ್‌ ಹಾಗೂ ಕ್ಯಾಲ್ಕುಲಸ್‌ (ಸೂಕ್ಷ್ಮಾಣುಯುಕ್ತ ಗಟ್ಟಿಯಾದ ಪದರ) ಬೆಳೆಯುತ್ತದೆ. ಇದರಿಂದ ಬಾಯಿಯ ದುರ್ವಾಸನೆ, ವಸಡಿನ ಉರಿಯೂತ, ಬ್ರಷ್‌ ಮಾಡಿದಾಗ ರಕ್ತ ಬರುವುದು, ವಸಡು ಕೆಂಪಾಗಿ ಊದಿಕೊಳ್ಳುವುದು ಕಂಡುಬರುತ್ತದೆ.ಕೋವಿಡ್‌-19 ಸೋಂಕುಪೀಡಿತ ವ್ಯಕ್ತಿಗೆ ಬಾಯಿಯ ಸಮಸ್ಯೆಗಳು ಬರುವ ಸಂಭವ ಹೆಚ್ಚು. ಹಾಗಾಗಿ ಈ ಮೇಲ್ಕಂಡ ಯಾವುದೇ ಸಮಸ್ಯೆ ಇದ್ದರೆ ಕೂಡಲೇ ದಂತವೈದ್ಯರಲ್ಲಿ ಸಲಹೆ ಪಡೆಯಬೇಕು. ದಿನನಿತ್ಯದ ಚಟುವಟಿಕೆಗಳನ್ನು ಆರಂಭಿಸುವ ತರಾತುರಿಯಲ್ಲಿ ಹಲ್ಲಿನ ಆರೋಗ್ಯವನ್ನು ನಾವು ನಿರ್ಲಕ್ಷಿಸಬಾರದು. ಬಾಯಿಯ ಸೋಂಕಿನಿಂದ ಸೂಕ್ಷ್ಮಾಣು ಜೀವಿಗಳು ನಮ್ಮ ರಕ್ತಸಂಚಾರಕ್ಕಿಳಿದು ಅನೇಕ ರೋಗಗಳು ಉಂಟಾಗಬಹುದು. ಹಲ್ಲು, ವಸಡುಗಳನ್ನು ಶುಚಿಯಾಗಿ, ಆರೋಗ್ಯಪೂರ್ಣವಾಗಿ ಇರಿಸಿಕೊಳ್ಳುವುದು ದಿನನಿತ್ಯದ ಚಟುವಟಿಕೆಯಲ್ಲಿ ಅವಿಭಾಜ್ಯ ಅಂಗವಾಗಿರಬೇಕು.

-ಡಾ| ನೀತಾ ಶೆಣೈ
ಉಪನ್ಯಾಸಕಿ, ಕನ್ಸರ್ವೇಟಿವ್‌ ಡೆಂಟಿಸ್ಟ್ರಿ ಮತ್ತು ಎಂಡೊಡಾಂಟಿಕ್ಸ್‌ ವಿಭಾಗ,
ಮಣಿಪಾಲ ದಂತವೈದ್ಯಕೀಯ ಮಹಾವಿದ್ಯಾಲಯ, ಮಾಹೆ, ಮಣಿಪಾಲ

 

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.