ಮಗುವಿನ ಭಾಷಿಕ ಬೆಳವಣಿಗೆ : ನಿಖರ ಸಮಯ ಎಂಬುದಿದೆಯೇ?


Team Udayavani, Nov 22, 2020, 7:34 PM IST

020252

ಸಾಂದರ್ಭಿಕ ಚಿತ್ರ

ಪ್ರತೀ ವರ್ಷ ಡಿಸೆಂಬರ್‌ ತಿಂಗಳ ಮೊದಲ ವಾರವನ್ನು ರಾಷ್ಟ್ರೀಯವಾಗಿ “ಮಾತು ಮತ್ತು ಶ್ರವಣ ಅರಿವಿನ ಸಪ್ತಾಹ’ವಾಗಿ ಆಚರಿಸುತ್ತೇವೆ. ಈ ವಾರವು ಭಾಷೆ, ಮಾತು ಮತ್ತು ಶ್ರವಣ ಶಕ್ತಿಯ ಕಲ್ಯಾಣ ಮತ್ತು ಇವುಗಳ ಸಮಸ್ಯೆಗಳ ಕುರಿತಾಗಿ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದಕ್ಕಾಗಿ ಮೀಸಲಾಗಿದೆ. ಪುಟ್ಟ ಮಕ್ಕಳಲ್ಲಿ ಉತ್ತಮ ಮಾತು ಮತ್ತು ಭಾಷೆಯ ಬೆಳವಣಿಗೆಯನ್ನು ಹೇಗೆ ಪೋಷಿಸಬೇಕು ಎಂಬ ಬಗ್ಗೆ ಹೆತ್ತವರಿಗೆ ಕೆಲವಾರು ಸಲಹೆಗಳು ಇಲ್ಲಿವೆ.

ಸಾಮಾನ್ಯ ಮನುಷ್ಯನೊಬ್ಬ ಒಂದು ದಿನದಲ್ಲಿ ಶೇ.50ರಿಂದ ಶೇ.70 ಭಾಗವನ್ನು ಇತರರೊಂದಿಗೆ ಸಂಭಾಷಣೆಯಲ್ಲಿ ಕಳೆಯುತ್ತಾನೆ ಎಂಬುದಾಗಿ ಅಧ್ಯಯನಗಳು ಹೇಳುತ್ತವೆ. ಈಗ ನಾವು ಸಂವಹನ ನಡೆಸಲು ಅಶಕ್ತರಾದರೆ ಎಷ್ಟು ಏಕಾಂಗಿತನ ಮತ್ತು ಪ್ರತಿಕೂಲ ಪರಿಣಾಮವನ್ನು ಅನುಭವಿಸಬೇಕಾದೀತು ಎಂಬುದನ್ನು ಕಲ್ಪಿಸಿಕೊಳ್ಳಿ. ಮನುಷ್ಯನಿಗೆ ಸಾಮಾಜಿಕವಾಗಿ ಜೀವಿಸುವುದಕ್ಕೆ ಮಾತು ಮತ್ತು ಭಾಷಿಕ ಕೌಶಲಗಳು ಅತ್ಯಂತ ಮೂಲಭೂತ ಅಗತ್ಯಗಳಾಗಿವೆ. ಮನುಷ್ಯನ ಭಾಷೆ ಮತ್ತು ಮಾತುಕತೆಯ ಕೌಶಲಗಳಲ್ಲಿ ಪ್ರಮುಖ ಭಾಗವು ಜೀವಿತದ ಆರಂಭಿಕ ಕಾಲಘಟ್ಟದಲ್ಲಿ, ಅಂದರೆ ಜನನದಿಂದ 5 ವರ್ಷಗಳ ವರೆಗಿನ ಅವಧಿಯಲ್ಲಿ ಬೆಳವಣಿಗೆ ಕಾಣುತ್ತವೆ. ಹೀಗಾಗಿ ಈ ಐದು ವರ್ಷಗಳನ್ನು “ನಿರ್ಣಾಯಕ ಕಾಲಘಟ್ಟ’ ಎಂಬುದಾಗಿ ಕರೆಯುತ್ತಾರೆ. ಈ ನಿರ್ಣಾಯಕ ಕಾಲಘಟ್ಟದಲ್ಲಿ ಮೆದುಳು ಅತ್ಯದ್ಭುತ ಗ್ರಹಣ ಸಾಮರ್ಥ್ಯ ಮತ್ತು ನಮನೀಯತೆಯನ್ನು ಹೊಂದಿರುವುದರಿಂದ ಮಕ್ಕಳು ಈ ಅವಧಿಯಲ್ಲಿ ಭಾರೀ ಪ್ರಮಾಣದಲ್ಲಿ ಭಾಷಿಕ ಪ್ರಗತಿಯನ್ನು ಅನುಭವಿಸುತ್ತಾರೆ. ಇದೊಂದು ಪುಟ್ಟ ಕಿಟಕಿಯಂತಹ ಕಾಲಾವಧಿಯಾಗಿದ್ದು, ಈ ಅವಧಿಯಲ್ಲಿ ಮಕ್ಕಳ ಮಾತು ಮತ್ತು ಭಾಷಿಕ ಬೆಳವಣಿಗೆ ಚೆನ್ನಾಗಿ ನಡೆಯುವುದಕ್ಕಾಗಿ ಶ್ರವಣ, ದೃಶ್ಯ ಮತ್ತು ಅನುಭವ (ಸ್ಪರ್ಶ) ವಿಚಾರದಲ್ಲಿ ಸಮೃದ್ಧ ವಾತಾವರಣವನ್ನು ಅವರಿಗೆ ನಾವು ಕಲ್ಪಿಸಿಕೊಡಬೇಕಾಗಿದೆ. ಐದು ವರ್ಷಗಳ ಬಳಿಕ ಏನಾಗುತ್ತದೆ‌? ಮಕ್ಕಳು ಕಲಿಯುವುದನ್ನು ನಿಲ್ಲಿಸುತ್ತಾರೆಯೇ? ಖಂಡಿತ ಇಲ್ಲ. ಆದರೆ ಮಕ್ಕಳು ಭಾಷೆ ಮತ್ತು ಮಾತನ್ನು ಗ್ರಹಿಸುವ ಸಾಮರ್ಥ್ಯ ಐದು ವರ್ಷಗಳ ಬಳಿಕ ಕ್ರಮೇಣ ಕಡಿಮೆಯಾಗುತ್ತ ಹೋಗುತ್ತದೆ.

ಮಗುವಿನ ಆರಂಭಿಕ ನಿರ್ಣಾಯಕ ವರ್ಷಗಳಲ್ಲಿ ಅದರ ಹೆತ್ತವರಿಂದ ಮಾತು ಮತ್ತು ಭಾಷಿಕ ಬೆಳವಣಿಗೆಯ ತಳಪಾಯ ಎಷ್ಟು ದೃಢವಾಗಿ, ಗುಣಮಟ್ಟದ್ದಾಗಿ ಅಳವಡಿಕೆಯಾಗಿದೆ ಎಂಬುದನ್ನು ಆಧರಿಸಿ ಮಗುವಿನ ಭಾಷೆ ಮತ್ತು ಮಾತಿನ ಕೌಶಲಗಳ ಬೆಳವಣಿಗೆ ಆಗುತ್ತದೆ. ಶ್ರವಣ ಶಕ್ತಿ ನಷ್ಟ, ಮಾತಿನ ಸಮಸ್ಯೆ, ಆಟಿಸಮ್‌, ಅಪ್ರಾಕ್ಸಿಯಾ, ಭಾಷೆಯ ನಿರ್ದಿಷ್ಟ ವೈಕಲ್ಯ, ತೊದಲು, ಬುದ್ಧಿಮತ್ತೆಯ ಸಮಸ್ಯೆಯಂತಹ ಅನೇಕ  ಅಭಿವೃದ್ಧಿಗೆ ಸಂಬಂಧಿಸಿದ ತೊಂದರೆಗಳು ನಿರ್ಣಾಯಕ ಕಾಲಘಟ್ಟದಲ್ಲಿ ಮಾತು ಮತ್ತು ಭಾಷೆಯ ಸಹಜ ಅಭಿವೃದ್ಧಿಗೆ ತೊಡಕು ಉಂಟುಮಾಡಬಹುದು. ಇವುಗಳನ್ನು ಆದಷ್ಟು ಬೇಗನೆ ಪತ್ತೆ ಹಚ್ಚಿ ಸೂಕ್ತ ಸಮಯದಲ್ಲಿ ಚಿಕಿತ್ಸೆಯನ್ನು ಒದಗಿಸಿದರೆ ಸಮಸ್ಯೆಯಿಂದಾಗುವ ಪ್ರತಿಕೂಲ ಪರಿಣಾಮವು ಅತೀ ಕನಿಷ್ಠ ಮಟ್ಟದಲ್ಲಿ ಇರುವಂತೆ ನೋಡಿಕೊಳ್ಳಬಹುದು ಹಾಗೂ ನಿರ್ಣಾಯಕ ಕಾಲಘಟ್ಟವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಬಹುದು.

ಸಹಜವಾದ ಶ್ರವಣ, ಮಾತು ಮತ್ತು ಭಾಷಿಕ ಬೆಳವಣಿಗೆಯ ಮೈಲಿಗಲ್ಲುಗಳ ಬಗ್ಗೆ ಸ್ಪೀಚ್‌ ಲ್ಯಾಂಗ್ವೇಜ್‌ ಪೆಥಾಲಜಿಸ್ಟ್‌ ಅವರ ಜತೆಗೆ ಸಮಾಲೋಚನೆ ನಡೆಸಿ ನಿಮ್ಮ ಅರಿವನ್ನು ಹೆಚ್ಚಿಸಿಕೊಳ್ಳಿ. ಮಗುವಿನ ಬೆಳವಣಿಗೆಯ ಮೇಲೆ ನಿಗಾ ಇರಿಸುವುದಕ್ಕಾಗಿ ನಿಯಮಿತ ಪರೀಕ್ಷೆಯನ್ನೂ ಮಾಡಿಸಿಕೊಳ್ಳಬಹುದು. ಮಗುವಿನ ನಿರ್ಣಾಯಕ ಅವಧಿಯಲ್ಲಿ ಭಾಷೆ ಮತ್ತು ಮಾತಿನ ಕೌಶಲಗಳು ಚೆನ್ನಾಗಿ ಅಭಿವೃದ್ಧಿ ಹೊಂದುವಂತೆ ಮಾಡುವುದು ಹೇಗೆ ಎಂಬ ವಿಚಾರವಾಗಿ ಸ್ಪೀಚ್‌ ಲ್ಯಾಂಗ್ವೇಜ್‌ ಪೆಥಾಲಜಿಸ್ಟ್‌ ನಿಮಗೆ ಮಾರ್ಗದರ್ಶನ ನೀಡಬಲ್ಲರು.

ಪ್ರತೀ ಮಗುವಿನ ಜತೆಗೆ ಅತ್ಯಂತ ನಿಕಟ ಸಂಪರ್ಕ ಮತ್ತು ಸಂಬಂಧವನ್ನು ಹೊಂದುವುದು ಅದರ ತಂದೆ ಮತ್ತು ತಾಯಿ. ಹೀಗಾಗಿ ಮಗುವಿನ ಭಾಷೆ ಮತ್ತು ಮಾತಿನ ಸಾಮರ್ಥ್ಯಗಳನ್ನು ರೂಪಿಸುವ ಹೊಣೆಗಾರಿಕೆಯೂ ಅವರ ಮೇಲಿರುತ್ತದೆ. ಹೆತ್ತವರು ಅತ್ಯದ್ಭುತ ಗುರುಗಳಾಗಿರುತ್ತಾರೆ. ಈ ನಡುವೆಯೇ ಅವರು ಅರಿವಿಲ್ಲದೆಯೇ ಮಕ್ಕಳ ಭಾಷೆ ಮತ್ತು ಮಾತಿನ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುವ ಕೆಲವು ತಪ್ಪುಗಳನ್ನು ಮಾಡುವ ಸಾಧ್ಯತೆಗಳಿರುತ್ತವೆ. ಈ ಪ್ರಮಾದಗಳಿಂದಾಗಿ ಮಕ್ಕಳ ದೈಹಿಕ, ಭಾವನಾತ್ಮಕ ಮತ್ತು ಗ್ರಹಣ ಸಾಮರ್ಥ್ಯದ ಮೇಲೆಯೂ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆಗಳಿರುತ್ತವೆ. ಹೆತ್ತವರು ಮಾಡುವ ತಪ್ಪುಗಳೇನು ಮತ್ತು ಅದಕ್ಕೆ ಪರ್ಯಾಯವಾಗಿ ಏನು ಮಾಡಬಹುದು ಎಂಬುದನ್ನು ನೋಡೋಣ.

ನೀವು ಮಾಡಬಹುದಾದದ್ದು :

 

  • ನಿಮ್ಮ ಮಗುವಿನ ಶ್ರವಣ, ಭಾಷೆ ಮತ್ತು ಮಾತಿನ ಬೆಳವಣಿಗೆಯ ಮೇಲೆ ನಿಗಾ ಇರಿಸದೆ ಇರುವುದು.
  • “ನಿಮ್ಮ ಮಗು ಐದು ವರ್ಷಗಳಲ್ಲಿ ತಾನಾಗಿ ಮಾತನಾಡಲು ಆರಂಭಿಸುತ್ತದೆ’ ಎಂಬ ಯಾರದೋ ಉಪದೇಶವನ್ನು ನಂಬಿ ಮಗು ಇಂದಲ್ಲ ನಾಳೆ ಮಾತನಾಡಬಹುದು ಎಂದು ಕಾಯುತ್ತಿರುವುದು.
  • ಮನೆಗೆಲಸ/ ಉದ್ಯೋಗಕ್ಕೆ ಅತಿಯಾಗಿ ಸಮಯ ವ್ಯಯಿಸಿ ಮಗುವಿನ ಕಡೆಗೆ ಗುಣಾತ್ಮಕ ಸಮಯವನ್ನು ವಿನಿಯೋಗಿಸದೆ ಇರುವುದು.
  • ನೈಜ ವ್ಯಕ್ತಿಗಳ ಜತೆಗೆ ಮಾತುಕತೆ ಮತ್ತು ನೈಜ ವಸ್ತುಗಳನ್ನು ಭೌತಿಕವಾಗಿ ಅನುಭವಿಸುವ ಬದಲು ಡಿಜಿಟಲ್‌ ಗ್ಯಾಜೆಟ್‌ (ಟಿವಿ/ ಮೊಬೈಲ್‌) ನೋಡುತ್ತ ವ್ಯರ್ಥವಾಗಿ ಕಾಲ ಕಳೆಯುವುದಕ್ಕೆ ಅನುಮತಿ ನೀಡುವುದು.
  • ಹೊಸ ವಿಚಾರಗಳನ್ನು, ಸಂಗತಿಗಳನ್ನು ಅನುಭವಿಸುವುದರಿಂದ ಮಗುವನ್ನು ಅತಿಯಾಗಿ ರಕ್ಷಿಸುವುದು, ನಿರ್ಬಂಧಿಸುವುದು.
  • ನಿಮ್ಮ ಮಗುವಿಗೆ ಸಂವಹನ ನಡೆಸಲು ಅವಕಾಶ ನೀಡದೆ ನೀವಾಗಿಯೇ ಎಲ್ಲವನ್ನೂ ಒದಗಿಸಿಕೊಡುವುದು.
  • ಮಗುವಿನ ಜತೆಗೆ ಹಿರಿಯರಂತೆ ಮಾತನಾಡುವುದು ಅಥವಾ ಬೆಳೆದ ಮಗುವಿನ ಜತೆಗೆ ಮಕ್ಕಳಂತೆ ಮಾತನಾಡುವುದು.
  • ಮಾತನಾಡಲು ಮಗುವಿಗೆ ಸಾಕಷ್ಟು ಅವಕಾಶಗಳನ್ನು ಒದಗಿಸದೆ ಇರುವುದು.
  • ಅತಿಯಾಗಿ ಪ್ರತಿಕ್ರಿಯಿಸುವುದು ಮತ್ತು ನಿಮ್ಮ ಮಗುವನ್ನು ಇತರರ ಮಕ್ಕಳ ಜತೆಗೆ ಹೋಲಿಸುವುದು.

ಪರ್ಯಾಯವಾಗಿ ಮಾಡಬೇಕಾದ್ದು :

 

  • ಮಗುವಿನ ಭಾಷೆ, ಶ್ರವಣ, ಮಾತಿನ ಬೆಳವಣಿಗೆಯ ಜತೆಗೆ ಚಲನೆಯ ಮೈಲಿಗಲ್ಲುಗಳ ಬಗ್ಗೆಯೂ ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ.
  • ಭಾಷಿಕ ಮತ್ತು ಮಾತಿನ ಮೈಲಿಗಲ್ಲುಗಳ ಅನುಸಾರವಾಗಿ ನಿಮ್ಮ ಮಗು ಕೌಶಲಗಳನ್ನು ಸಾಧಿಸದೆ ಇದ್ದರೆ ತಡಮಾಡದೆ ಅದರ ಸಾಮರ್ಥ್ಯಗಳನ್ನು ವಿಶ್ಲೇಷಣೆಗೆ ಒಳಪಡಿಸಿ, ಈ ನಿರ್ಣಾಯಕ ಅವಧಿ ಕೈತಪ್ಪದಂತೆ ಎಚ್ಚರಿಕೆ ವಹಿಸಿ.
  • ಮಗುವಿನ ಜತೆಗೆ ಕುಟುಂಬವಿಡೀ ಆಟವಾಡುವ ಸಮಯವನ್ನು ನಿಗದಿಪಡಿಸಿ, ಅರ್ಥವತ್ತಾದ ಆಟಗಳನ್ನು ಆಡುವುದು.
  • ಅತಿ ರಕ್ಷಣೆ, ನಿರ್ಬಂಧಗಳ ಬದಲಿಗೆ ಮಗುವಿಗೆ ಕಾರಣ ಮತ್ತು ಪರಿಣಾಮಗಳ ಬಗ್ಗೆ ತಿಳಿಸಿಕೊಡಿ.
  • ಡಿಜಿಟಲ್‌ ಗ್ಯಾಜೆಟ್‌ಗಳಲ್ಲಿ ಕಳೆಯುವ ಸಮಯಕ್ಕೆ ಮಿತಿ ಹಾಕಿ ಮತ್ತು ಅದನ್ನು ಕಟ್ಟುನಿಟ್ಟಾಗಿ ಪಾಲಿಸಿ. ಇದು ಮಗು ಮತ್ತು ಹೆತ್ತವರಿಗೆ ಸಮಾನವಾಗಿ ಅನ್ವಯಿಸಲಿ.
  • ಮಗು ತನಗೇನು ಬೇಕು ಎಂಬುದನ್ನು ವ್ಯಕ್ತಪಡಿಸಲು ಅವಕಾಶ ಮಾಡಿಕೊಡುವುದನ್ನು ರೂಢಿಸಿಕೊಳ್ಳಿ. ಮಗುವಿಗೆ ಅದು ಸಾಧ್ಯವಾಗದೆ ಇದ್ದರೆ ಆಯ್ಕೆಗಳನ್ನು ಒದಗಿಸಿ.
  • ನಿಮ್ಮ ಮಗು ಪರಿಣಾಮಕಾರಿಯಾಗಿ ಮಾತನಾಡಲು ಸಮರ್ಥವಾಗುವಂತೆ ಮಾಡುವ ಗುರಿಯನ್ನು ಗಮನದಲ್ಲಿ ಇರಿಸಿಕೊಂಡು ಮಗುವಿನ ಜತೆಗೆ ಸಂಭಾಷಿಸಿ.
  • ಮಗು ಅರ್ಥವಿಲ್ಲದ ಮಾತುಗಳನ್ನು ಆಡಿದರೂ ಅದು ಹೇಳಲು ಬಯಸುತ್ತಿರುವುದು ಏನನ್ನು ಎಂಬುದಕ್ಕೆ ಗಮನ ನೀಡಿ.
  • ಮಗು ತನ್ನ ಇನ್ನಷ್ಟು ಬೆಳವಣಿಗೆಯ ಅಗತ್ಯವನ್ನು ಮನದಟ್ಟು ಮಾಡಿಕೊಳ್ಳುವುದಕ್ಕಾಗಿ ಮತ್ತು ಆ ನಿಟ್ಟಿನಲ್ಲಿ ಮಗುವಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಅದು ಪ್ರದರ್ಶಿಸುವ ಪ್ರತೀ ಉತ್ತಮ ನಡತೆಯನ್ನೂ ಪುರಸ್ಕರಿಸಿ.

 

ಡಾಸ್ಮಿನ್‌ ಎಫ್. ಡಿ’ಸೋಜಾ

ಆಡಿಯಾಲಜಿ ಮತ್ತು ಸ್ಪೀಚ್‌ ಲ್ಯಾಂಗ್ವೇಜ್‌ ಪೆಥಾಲಜಿ ವಿಭಾಗ,

ಕೆಎಂಸಿ ಕಾಲೇಜು ಆಸ್ಪತ್ರೆ, ಮಂಗಳೂರು

 

ಟಾಪ್ ನ್ಯೂಸ್

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3–child-growth

Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು

2-bamboo-brush

Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್‌ ಮೊರೆಹೋಗಿ

2-kidney-day

World Kidney Day: ಹಿಮೋಡಯಾಲಿಸಿಸ್‌: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?

3-health

Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

4-cholestral

Cholesterol: ಕೊಲೆಸ್ಟರಾಲ್‌ ತಗ್ಗಿಸುವ ಔಷಧ ಸ್ಟಾಟಿನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

1-aaa

Ex-IPS officer ಸಂಜೀವ್ ಭಟ್‌ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.