ಲಕ್ವಾ: ಅಪಾಯಕರ ಅಂಶಗಳು, ಪೂರ್ವ ಸೂಚನೆಗಳು ಮತ್ತು ಚಿಕಿತ್ಸೆಯ ಸಮಯ


Team Udayavani, Nov 11, 2018, 6:00 AM IST

heart-disease-diabetes.jpg

ಹಿಂದಿನ ವಾರದಿಂದ
3. ಹೃದ್ರೋಗ
ಕೊರೊನರಿ ಆರ್ಟರಿ ಕಾಯಿಲೆ, ವಾಲ್‌Ì ವೈಕಲ್ಯಗಳು, ಅನಿಯಮಿತ ಹೃದಯ ಬಡಿತ (ಆರ್ಟೀರಿಯಲ್‌ ಫಿಬ್ರಿಲೇಶನ್‌) ಮತ್ತು ಹೃದಯದ ಭಾಗಗಳಲ್ಲಿ ಒಂದು ದೊಡ್ಡದಾಗುವುದರಿಂದ ರಕ್ತ ಹೆಪ್ಪುಗಟ್ಟಬಹುದು. ಇದು ಅಲ್ಲಿನ ಜಾರಿ ಮಿದುಳಿಗೆ ರಕ್ತ ಸರಬರಾಜು ಮಾಡುವ ರಕ್ತನಾಳಗಳಲ್ಲಿ ತಡೆ ಉಂಟು ಮಾಡಬಹುದು. ಮರುಕಳಿಸುವ ಹೃದಯ ಕಾಯಿಲೆಗಳು ಮತ್ತು ಲಕ್ವಾ ತಡೆಯಲು ವೈದ್ಯರು ಶಿಫಾರಸು ಮಾಡುವ ರಕ್ತ ತೆಳುಗೊಳಿಸುವ ಔಷಧಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

4. ಮಧುಮೇಹ
ಲಕ್ವಾಕ್ಕೆ ಸಂಬಂಧಿಸಿದ ಹೇಳುವುದಿದ್ದರೆ ಮಧುಮೇಹ ಹೊಂದಿರುವುದು 15 ವರ್ಷ ವಯಸ್ಸಾದಷ್ಟು ಪರಿಣಾಮ ಹೊಂದಿರುತ್ತದೆ. ಮಧುಮೇಹವು ಸಕ್ಕರೆ ಅಥವಾ ಗುÉಕೋಸನ್ನು ದೇಹ ಉಪಯೋಗಿಸುವ ಸಾಮರ್ಥ್ಯವನ್ನು ಮಾತ್ರ ಬಾಧಿಸುತ್ತದೆ ಎಂದು ನೀವು ಅಂದುಕೊಂಡಿದ್ದರೆ ಅದು ತಪ್ಪು. ಮಧುಮೇಹವು ಮಿದುಳು ಸಹಿತ ದೇಹಾದ್ಯಂತ ರಕ್ತನಾಳಗಳಲ್ಲಿ ಹಾನಿಕರ ಬದಲಾವಣೆಗಳನ್ನು ಉಂಟು ಮಾಡುತ್ತದೆ. ಅಲ್ಲದೆ, ಲಕ್ವಾ ಉಂಟಾದ ಸಂದರ್ಭದಲ್ಲಿ ರಕ್ತದ ಸಕ್ಕರೆಯ ಅಂಶ ಹೆಚ್ಚಿದ್ದರೆ ಮಿದುಳಿಗೆ ಉಂಟಾಗುವ ಹಾನಿಯೂ ಹೆಚ್ಚು ತೀವ್ರ ಮತ್ತು ತೀಕ್ಷ್ಣವಾಗಿರುತ್ತದೆ. ಮಧುಮೇಹಕ್ಕೆ ಚಿಕಿತ್ಸೆ ನೀಡುವುದರಿಂದ ಅದರ ಸಂಕೀರ್ಣ ಸಮಸ್ಯೆಗಳನ್ನು ವಿಳಂಬಿಸಬಹುದು, ಇದರಿಂದ ಲಕ್ವಾದ ಅಪಾಯ ಕಡಿಮೆಯಾಗುತ್ತದೆ.

5. ಕೊಲೆಸ್ಟರಾಲ್‌ ಅಸಮತೋಲನ
ಕಡಿಮೆ ಸಾಂದ್ರತೆಯ ಲಿಪೊಪ್ರೊಟೀನ್‌ (ಎಲ್‌ಡಿಎಲ್‌) ಕೊಲೆಸ್ಟರಾಲನ್ನು ರಕ್ತದ ಮೂಲಕ ಕೊಂಡೊಯ್ದು ಜೀವಕೋಶಗಳಿಗೆ ಸರಬರಾಜು ಮಾಡುತ್ತದೆ. ಎಲ್‌ಡಿಎಲ್‌ ಪ್ರಮಾಣ ಹೆಚ್ಚಿದರೆ ಅದು ರಕ್ತನಾಳಗಳಲ್ಲಿ ಕೊಲೆಸ್ಟರಾಲ್‌ ಶೇಖರವಾಗಲು ಕಾರಣವಾಗುತ್ತದೆ. ಇದರಿಂದ ಎಥೆರೊಸ್ಲೆರೋಸಿಸ್‌ ಉಂಟಾಗುತ್ತದೆ. ಎಥೆರೊಸ್ಲೆರೋಸಿಸ್‌ ರಕ್ತನಾಳಗಳು ಕಿರಿದಾಗಲು ಮುಖ್ಯ ಕಾರಣವಾಗಿದ್ದು, ಇದರಿಂದ ಹೃದಯಾಘಾತ, ಲಕ್ವಾ ಎರಡೂ ಉಂಟಾಗುತ್ತವೆ.

6. ದೈಹಿಕ ಚಟುವಟಿಕೆಗಳ ಕೊರತೆ, ಬೊಜ್ಜು ಮತ್ತು ಒತ್ತಡ
ಬೊಜ್ಜು ಮತ್ತು ದೈಹಿಕ ಚಟುವಟಿಕೆಗಳ ಕೊರತೆಗೂ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೃದ್ರೋಗಗಳಿಗೂ ಹತ್ತಿರದ ಸಂಬಂಧವಿದೆ. ಬ್ಯಾಂಕರುಗಳು, ಕಂಪ್ಯೂಟರ್‌ ಎಂಜಿನಿಯರ್‌ಗಳು, ಇತರ ಕಚೇರಿಯಲ್ಲೇ ಕುಳಿತು ಕೆಲಸ ಮಾಡುವ ಉದ್ಯೋಗಿಗಳು ದೀರ್ಘ‌ಕಾಲ ಕುಳಿತು ಕೆಲಸ ಮಾಡಬೇಕಾಗುತ್ತದೆ. ಇದರಿಂದಾಗಿ ಅವರಲ್ಲಿ ದೈಹಿಕ ಚಟುವಟಿಕೆಗಳ ಪ್ರಮಾಣ ಕುಂಠಿತವಾಗುತ್ತದೆಯಲ್ಲದೆ ಮಾನಸಿಕ ಒತ್ತಡ ಅಧಿಕವಾಗಿರುತ್ತದೆ. ಇಂತಹ ಜನರಲ್ಲಿ ಸೊಂಟ ಮತ್ತು ಪೃಷ್ಠದ ಸುತ್ತಳತೆ ಸಮಾನವಾಗಿರುವುದು ಅಥವಾ ಮಧ್ಯಮ ಕ್ರಮಾಂಕಕ್ಕಿಂತ ಹೆಚ್ಚಿರುವುದು ಇಶೆಮಿಕ್‌ ಲಕ್ವಾದ ಅಪಾಯವನ್ನು ಮೂರುಪಟ್ಟು ವೃದ್ಧಿಸುತ್ತದೆ. 

– ಮುಂದಿನ ವಾರಕ್ಕೆ

ಟಾಪ್ ನ್ಯೂಸ್

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3–child-growth

Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು

2-bamboo-brush

Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್‌ ಮೊರೆಹೋಗಿ

2-kidney-day

World Kidney Day: ಹಿಮೋಡಯಾಲಿಸಿಸ್‌: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?

3-health

Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

4-cholestral

Cholesterol: ಕೊಲೆಸ್ಟರಾಲ್‌ ತಗ್ಗಿಸುವ ಔಷಧ ಸ್ಟಾಟಿನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Lok Sabha polls: ಇಂದು ಸುಮಲತಾ ಬೆಂಬಲಿಗರ ಸಭೆ 

Lok Sabha polls: ಇಂದು ಸುಮಲತಾ ಬೆಂಬಲಿಗರ ಸಭೆ 

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.