ಸೂಲಗಿತ್ತಿಯರು: ಸ್ತ್ರೀಹಕ್ಕುಗಳ ರಕ್ಷಕರು


Team Udayavani, May 19, 2019, 6:00 AM IST

aaad

-ಮುಂದುವರಿದುದು ಗರ್ಭಕಂಠದ ಕ್ಯಾನ್ಸರ್‌
ಪ್ರಜನನ ವಯೋಮಾನದಲ್ಲಿರುವ ಮತ್ತು ಋತುಬಂಧಾನಂತರದ ವಯಸ್ಸಿನಲ್ಲಿಯೂ ಮಹಿಳೆಯರ ಸಾವಿಗೆ ಗರ್ಭಕಂಠದ ಕ್ಯಾನ್ಸರ್‌ ಒಂದು ಮುಖ್ಯ ಕಾರಣವಾಗಿದೆ. ಹ್ಯೂಮನ್‌ ಪಾಪಿಲೋಮಾ ವೈರಸ್‌ (ಎಚ್‌ಪಿವಿ) ಎಂಬ ವೈರಸ್‌ನಿಂದ ಈ ಕಾಯಿಲೆ ಉಂಟಾಗುತ್ತದೆ. ಶೀಘ್ರವಾಗಿ ಪತ್ತೆಹಚ್ಚಿದರೆ ಈ ಕ್ಯಾನ್ಸರನ್ನು ತಡೆಯಬಹುದು. ಪ್ಯಾಪ್‌ ಸೆರ್‌ ಟೆಸ್ಟ್‌ ಎಂಬ ತಪಾಸಣೆಯಿಂದ ಗರ್ಭಕೋಶದ ಕ್ಯಾನ್ಸರನ್ನು ಶೀಘ್ರವಾಗಿ ಪತ್ತೆ ಮಾಡಬಹುದು. 21 ವರ್ಷ ವಯಸ್ಸಿನ ಬಳಿಕ ಪ್ರತೀ ಮೂರು ವರ್ಷಗಳಿಗೆ ಒಮ್ಮೆ ಈ ತಪಾಸಣೆಯನ್ನು ನಡೆಸುವುದು ಸೂಕ್ತ.

ಪ್ಯಾಪ್‌ ಸರ್‌ ಟೆಸ್ಟ್‌
ಪ್ಯಾಪ್‌ ಸೆರ್‌/ ಪ್ಯಾಪ್‌ ಟೆಸ್ಟ್‌/ ಸರ್ವಿಕಲ್‌ ಸೆ¾àರ್‌ ಅಥವಾ ಸೆ¾àರ್‌ ಟೆಸ್ಟ್‌ ಎಂಬುದಾಗಿಯೂ ಇದನ್ನು ಕರೆಯುತ್ತಾರೆ. ಗರ್ಭಕಂಠದಲ್ಲಿ ಉಂಟಾಗಿರಬಹುದಾದ ಕ್ಯಾನ್ಸರ್‌ ಪೂರ್ವ ಸ್ಥಿತಿ ಅಥವಾ ಕ್ಯಾನ್ಸರ್‌ ಬೆಳವಣಿಗೆಯನ್ನು ಪತ್ತೆಹಚ್ಚಲು ಗರ್ಭಕಂಠದಲ್ಲಿ ನಡೆಸುವ ತಪಾಸಣೆ ಇದು. ಈ ತಪಾಸಣೆಯ ಬಳಿಕ ವೈದ್ಯರ ಶಿಫಾರಸಿನಂತೆ ಇನ್ನಿತರ ಕ್ಯಾನ್ಸರ್‌ ನಿರ್ಧಾರಕ ತಪಾಸಣೆಗಳನ್ನೂ ನಡೆಸಬಹುದಾಗಿದೆ. ಹ್ಯೂಮನ್‌ ಪ್ಯಾಪಿಲೊಮಾ ವೈರಸ್‌ ಲೈಂಗಿಕವಾಗಿ ಪ್ರಸಾರವಾಗುವ ಡಿಎನ್‌ಎ ವೈರಸ್‌ ಆಗಿದ್ದು, ಇದರ ಸೋಂಕಿನಿಂದ ಉಂಟಾಗಿರುವ ಕ್ಯಾನ್ಸರ್‌ ಪೂರ್ವ ಬದಲಾವಣೆಗಳನ್ನು ಗುರುತಿಸಲು ಗರ್ಭಕಂಠದಿಂದ ಅಂಗಾಂಶಗಳನ್ನು ಸಂಗ್ರಹಿಸುವುದು ಹೊರರೋಗಿ ವಿಭಾಗದಲ್ಲಿಯೇ ನಡೆಸಲಾಗುವ ಒಂದು ಪ್ರಕ್ರಿಯೆಯಾಗಿದೆ. ಎಂಡೊ ಸರ್ವಿಕ್ಸ್‌ ಮತ್ತು ಎಂಡೊಮೆಟ್ರಿಯಂಗಳಲ್ಲಿ ಆಗಿರುವ ಇನ್ನಿತರ ಸೋಂಕುಗಳು ಮತ್ತು ಅಸಹಜತೆಗಳನ್ನು ಕೂಡ ಈ ಪರೀಕ್ಷೆಯಿಂದ ಕಂಡು ಹಿಡಿಯಬಹುದು.

ತಡೆ
ನಮಗೆಲ್ಲರಿಗೂ ತಿಳಿದಿರುವಂತೆ “ಚಿಕಿತ್ಸೆಗಿಂತ ರೋಗ ತಡೆಯೇ ಉತ್ತಮವಾಗಿದೆ. ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಗರ್ಭಕಂಠದ ಕ್ಯಾನ್ಸರ್‌ ವಿರುದ್ಧವೂ ನಾವು ಹೋರಾಡಿ ಅದನ್ನು ತಡೆಯಬಹುದಾಗಿದೆ. ಕ್ಯಾನ್ಸರ್‌ ಅನ್ನು ಬೇಗನೆ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಅದನ್ನು ತಡೆಯಬಹುದಾಗಿದೆ ಮತ್ತು ಗುಣಪಡಿಸಬಹುದಾಗಿದೆ.

ಗರ್ಭಕಂಠದ ಕ್ಯಾನ್ಸರ್‌ ಉಂಟಾಗುವುದನ್ನು ತಡೆಯಲು ಏನು ಮಾಡಬೇಕು?
– ಧೂಮಪಾನ ಮಾಡಬಾರದು
– ಲೈಂಗಿಕ ಸಂಗಾತಿಗಳು ಸೀಮಿತವಾಗಿರಬೇಕು
– ಲೈಂಗಿಕ ಸಂಪರ್ಕ ಸಂದರ್ಭ ಕಾಂಡೋಮ್‌ ಉಪಯೋಗಿಸಬೇಕು
– ಪ್ರೌಢವಯಸ್ಸಿಗೆ ಬಂದ ಮೇಲೆಗೇ ಮೊದಲ ಲೈಂಗಿಕ ಸಂಪರ್ಕ ನಡೆಸಬೇಕು.
– ಎಚ್‌ಪಿವಿ ಲಸಿಕೆ ಹಾಕಿಸಿಕೊಳ್ಳಬೇಕು
– ಪ್ಯಾಪ್‌ ಮತ್ತು ಎಚ್‌ಪಿವಿ ತಪಾಸಣೆ ಮಾಡಿಸಿಕೊಳ್ಳಿ

ಸೂಲಗಿತ್ತಿಯರು ನಡೆಸುವ ಆದರೆ ನಿರ್ಲಕ್ಷ್ಯಕ್ಕೆ ಒಳಗಾದ ಇಂತಹ ಇನ್ನೆಷ್ಟೋ ಕಾರ್ಯಗಳಿವೆ. ಸಮಾಜದಲ್ಲಿ ಗುರುತರ ಜವಾಬ್ದಾರಿ ಇರುವ, ಸಮಾಜದ ಸ್ವಾಸ್ಥ್ಯಕ್ಕಾಗಿ ಕೆಲಸ ಮಾಡುವ ಜವಾಬ್ದಾರಿಯುತ ವ್ಯಕ್ತಿಗಳಾಗಿ ನಾವು ಸೂಲಗಿತ್ತಿಯರನ್ನು ಗುರುತಿಸಲು ಇದು ಅತ್ಯಂತ ಸೂಕ್ತ ಸಮಯವಾಗಿದೆ. ಮಹಿಳೆಯು ಶಿಶುವಿಗೆ ಜನ್ಮ ನೀಡುವ ಸಾಮರ್ಥ್ಯ ಹೊಂದಿರುವವಳಾಗಿದ್ದು, ಇದೇ ಕಾರಣದಿಂದ ಆಕೆಗೆ ಕುಟುಂಬದ ಇನ್ನಿತರ ಸದಸ್ಯರಿಗೂ ಉತ್ತಮ ಆರೋಗ್ಯಕರ ಜೀವನವನ್ನು ಒದಗಿಸಿಕೊಡುವ ಸಾಮರ್ಥ್ಯವೂ ಇದೆ. ಹೀಗಾಗಿ ತನಗೆ ಮತ್ತು ತನ್ನ ಕುಟುಂಬಕ್ಕೆ ಬೇಕಾದ ಉತ್ಕೃಷ್ಟ ಜೀವನವನ್ನು ಆರಿಸಿಕೊಳ್ಳುವ ಹಕ್ಕು ಮಹಿಳೆಗಿದೆ.

ಟಾಪ್ ನ್ಯೂಸ್

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಹಣ

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಕೋಟಿಗಟ್ಟಲೆ ಹಣ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

8

Measles: ದಡಾರ

4-health

Tooth Health: ನಿಮ್ಮ ದವಡೆ ಸಂಧಿಯ ಆರೋಗ್ಯವೂ ಬಹಳ ಮುಖ್ಯ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.