ವೃದ್ಧಾಪ್ಯದಲ್ಲಿ ದೇಹಪುಷ್ಠಿ
Team Udayavani, Aug 11, 2019, 5:00 AM IST
ಕಳೆದ ಸಂಚಿಕೆಯಿಂದ- ನ್ಯೂರೊಮಸ್ಕಾಲರ್ ವ್ಯವಸ್ಥೆ
– ವಯಸ್ಸಾಗುತ್ತಿದ್ದಂತೆ ನರ-ಸ್ನಾಯು ಸಮನ್ವಯವು ನಶಿಸಲಾರಂಭಿಸುತ್ತದೆ.
– ಸಂಧಿವಾತದಂತಹ ಅನಾರೋಗ್ಯಗಳು ಸಂಕಷ್ಟ ತರುತ್ತವೆ.
– ಜೀರ್ಣಾಂಗವ್ಯೂಹದ ಕೆಳಭಾಗದಲ್ಲಿರುವ ಸ್ನಾಯುಗಳು ದುರ್ಬಲವಾಗುತ್ತವೆ.
– ಕೆಲವು ಸ್ನಾಯು ಅಂಗಾಂಶಗಳು ಸಂಕುಚನಗೊಂಡರೆ ಇನ್ನು ಕೆಲವು ನಶಿಸುತ್ತವೆ, ಇನ್ನು ಕೆಲವು ಸಂಕುಚನ ಗೊಳ್ಳುವ ತಮ್ಮ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ.
– ಸ್ನಾಯು ಪರಿಮಾಣ ನಷ್ಟವು ಕಡಿಮೆ ಬಿಎಂಆರ್, ಸ್ನಾಯು ಸಾಮರ್ಥ್ಯ ಕುಸಿತ ಮತ್ತು ಶಕ್ತಿಯ ಅಗತ್ಯ ಕುಸಿಯಲು ಕಾರಣವಾಗುತ್ತದೆ.
– ಸಕ್ರಿಯ ಜೀವನ ಶೈಲಿಯನ್ನು ರೂಢಿಸಿಕೊಳ್ಳುವುದರಿಂದ ಮೇಲ್ಕಂಡ ಅಸಹಜತೆಗಳನ್ನು ಸಾಕಷ್ಟು ನಿವಾರಿಸಿಕೊಳ್ಳಬಹುದು.
ಹೃದಯದ ಆರೋಗ್ಯ
– ವಯೋವೃದ್ಧರಲ್ಲಿ ಹೃದಯವು ರಕ್ತವನ್ನು ಪಂಪ್ ಮಾಡುವ ಸಾಮರ್ಥ್ಯ ಕುಸಿಯುತ್ತದೆ, ದೈಹಿಕ ಚಟುವಟಿಕೆ ಕಡಿಮೆಯಾಗಿರುವುದು ಇದಕ್ಕೆ ಕಾರಣವಾಗಿರುತ್ತದೆ.
– ದೈಹಿಕ ಚಟುವಟಿಕೆಗಳು ಕಡಿಮೆಯಾಗುವುದರಿಂದ ಲೊ ಎಚ್ಡಿಎಲ್, ಹೈ ಎಲ್ಡಿಎಲ್ ಸ್ಥಿತಿ ಉಂಟಾಗುತ್ತದೆ; ಇದು ಹೃದ್ರೋಗಗಳನ್ನು ಉಂಟು ಮಾಡಬಹುದು.
-ಉಪ್ಪು ಸೇವಿಸುವ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು.
ಹಾರ್ಮೋನ್ ಕಾರ್ಯ
ಚಟುವಟಿಕೆಗಳಲ್ಲಿ ಬದಲಾವಣೆ
-ಉದಾಹರಣೆಗೆ, “ಗ್ರೋಥ್ ಹಾರ್ಮೋನ್’ ಸಾಂದ್ರತೆ ಕಡಿಮೆಯಾಗುವುದರಿಂದ ಲೀನ್ ಬಾಡಿ ಮಾಸ್ ಕೂಡ ಕುಸಿಯುತ್ತದೆ. ಟೆಸ್ಟೊಸ್ಟಿರೋನ್ ಸಾಂದ್ರತೆ ಕಡಿಮೆಯಾಗಿ ಸ್ನಾಯು ಸಾಮರ್ಥ್ಯ ಕುಸಿಯುತ್ತದೆ. ಪಿನಿಯಲ್ ಗ್ರಂಥಿ (ಮಿದುಳು) ಯು ಮೆಲಟೋನಿನ್ ಹಾರ್ಮೋನನ್ನು ಕಡಿಮೆ ಉತ್ಪಾದಿಸುವುದರಿಂದ ನಿದ್ದೆ ಕಡಿಮೆಯಾಗುತ್ತದೆ.
ಜ್ಞಾನ ಗ್ರಹಣ ಚಟುವಟಿಕೆಗಳು
-ಜ್ಞಾನ ಗ್ರಹಣದ ಚಟುವಟಿಕೆಗಳು ಮಾನಸಿಕ ಕ್ರಿಯೆಗಳಾಗಿದ್ದು, ನಾವು ಯಾವುದೇ ಕೆಲಸ ಕಾರ್ಯಗಳನ್ನು ನಡೆಸುವುದಕ್ಕೆ ಅನುವು ಮಾಡಿಕೊಡುತ್ತವೆ. ವಯೋವೃದ್ಧರಲ್ಲಿ ಪೌಷ್ಟಿಕಾಂಶ ಸ್ಥಿತಿಯನ್ನು ಉತ್ತಮಪಡಿಸಿದರೆ ಜ್ಞಾನಗ್ರಹಣ ಚಟುವಟಿಕೆಯನ್ನು ದಕ್ಷವಾಗಿ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಮನೋ ವ್ಯಾಯಾಮಗಳಿಂದಲೂ ಇದಕ್ಕೆ ಸಹಾಯವಾಗುತ್ತದೆ.
ಸಾಮಾಜಿಕ- ಆರ್ಥಿಕ ಅಂಶಗಳು
-ಸಾಮಾಜಿಕ – ಆರ್ಥಿಕ ಅಂಶಗಳು ಮತ್ತು ಆರೋಗ್ಯದ ನಡುವಣ ಸಂಬಂಧವನ್ನು ಅರ್ಥ ಮಾಡಿಕೊಳ್ಳುವುದು ಅತ್ಯಂತ ಆವಶ್ಯಕ. ಏಕೆಂದರೆ, ಪುನರಪಿ ಹೇರಲ್ಪಡುವ ಬಡತನದ ಸರಪಣಿ ಚಕ್ರಕ್ಕೆ ಕಾರಣವೇನು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯವಾಗಿದೆ. ಸಾಮಾಜಿಕ- ಆರ್ಥಿಕವಾಗಿ ಕೆಳ ಸ್ಥಿತಿಗತಿಗಳು ಆರೋಗ್ಯ ಕೆಡಲು ಕಾರಣವಾಗುತ್ತವೆ, ಇದರಿಂದ ಆದಾಯ ಗಳಿಕೆಯ ಸಾಮರ್ಥ್ಯ ಕಡಿಮೆಯಾಗುತ್ತದೆ.
ಮುಂದುವರಿಯುವುದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್
UV Fusion: ಭಕ್ತಿಯ ಜಾತ್ರೆ ನೋಡುವುದೇ ಚೆಂದ
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ