ಸುಮ್ನಿರು ಅಂತಿದೀನಿ, ಹೃದಯ ಕೇಳ್ತಿಲ್ಲ….


Team Udayavani, Nov 20, 2018, 6:00 AM IST

shutterstock123493636.jpg

ನೀನು ಪೋಸ್ಟ್  ಮಾಡಿದ ಫೋಟೊಗಳಿಗೆಲ್ಲಾ  ಚಾಚೂ ತಪ್ಪದೆ ಲೈಕ್‌, ಕಮೆಂಟ್‌ ಮಾಡುತ್ತೇನೆ. ನನ್ನ ಲೈಕ್‌, ಕಮೆಂಟ್‌ ಇರದ ಒಂದಾದರೂ ಫೋಟೊ ನಿನ್‌ ಫೇಸ್‌ಬುಕ್‌ ಗೋಡೆಯಲ್ಲಿ ಇದೆಯಾ ಅಂತ ಒಮ್ಮೆ ನೋಡು. 

ನಿನ್ನ ನೆನಪುಗಳು ಇಷ್ಟು ನೋವುಂಟು ಮಾಡುತ್ತವೆ ಎಂದು ನಾನು ಕನಸಿನಲ್ಲೂ ಎಣಿಸಿರಲಿಲ್ಲ. ನಿನ್ನೊಂದಿಗೆ ಕಳೆದ ನೆನಪುಗಳು ಬಿಟ್ಟೂ ಬಿಡದೆ ಕಾಡುತ್ತಿವೆ. ಹಳೆಯ ದಿನಗಳನ್ನು ನೆನೆದರೆ ಮನಸ್ಸು ಭಾರವಾಗುತ್ತದೆ. 

ನಮ್ಮಿಬ್ಬರ ಭೇಟಿಯಾಗಿದ್ದು ಆಕಸ್ಮಿಕ ಘಳಿಗೆಯೊಂದರಲ್ಲಿ. ಅಂದು ಕಾಲೇಜು ಅಡ್ಮಿಶನ್‌ಗೆ ಅಂತ ಬಂದಿದ್ದಾಗ ನಿನ್ನನ್ನು ಮೊದಲ ಬಾರಿಗೆ ನೋಡಿದ್ದು. ಪೆನ್ನು ಮರೆತು ಬಂದಿದ್ದ ನಾನು, ನಿನ್ನನ್ನು ಮಾತನಾಡಿಸಲು ಅದೇ ಸರಿಯಾದ ನೆಪವೆಂದು ನಿನ್ನ ಬಳಿ ಪೆನ್ನು ಕೇಳಿದ್ದೆ . ನೀನು ಅದರ ಕ್ಯಾಪ್‌ ತೆಗೆದು, ಬರೀ ಪೆನ್ನನ್ನು ಮಾತ್ರ ನನ್ನ ಕೈಗಿಟ್ಟಿದ್ದು ಈಗಲೂ ನೆನಪಿದೆ. ನಾನು ಪೆನ್ನನ್ನು ಕಿಸೆಗೆ ಹಾಕಿಕೊಂಡು ಹೋಗಿಬಿಟ್ಟರೆ ಅಂತ ನಿನಗೆ ಅನುಮಾನವಾಗಿತ್ತಾ?

ನಿನ್ನ ಮುದ್ದು ಮುಖ ನೋಡಿದ ತಕ್ಷಣವೇ ನಾನು ನಿನಗೆ ಸೋತಿದ್ದೆ . ಬಾಳಸಂಗಾತಿ ನೀನೇ ಆಗಬೇಕು ಅಂತ, ಹೃದಯವು ಜೋಗುಳ ಹಾಡಿದರೆ ತೂಗುವ ಕೈ ನಿನದಾಗಿರಲಿ ಅಂತ ಮನಸ್ಸು ಬೇಡಿತು. ನಾನೊಬ್ಬ ಹುಚ್ಚು ಹುಡುಗ, ನಿನ್ನ ಮುಖ ಕಂಡಾಗ ಆಗುವ ಖುಷಿಯನ್ನು ಅಳೆಯುವ ಯಾವ ಮಾಪನವೂ ಇದುವರೆಗೆ ಸೃಷ್ಟಿಯಾಗಿಲ್ಲ. ಅಂದಿನಿಂದ ಚಂದಕ್ಕಿಂತ ಚಂದದ ನಿನ್ನ ನಗು ಮೊಗವ ನೋಡುತ್ತಾ ಕಲಿತಿದ್ದು ಪ್ರೇಮಪಾಠವೇ ಹೊರತು ಮತ್ತೇನನ್ನೂ ಅಲ್ಲ. 

ನಿನಗಾಗಿ ಪ್ರತಿದಿನವೂ ಕಾಲೇಜು ಗೇಟಿನಲ್ಲಿ ನಿಂತು ಕಾಯುವುದು, ಕ್ಲಾಸಿನಲ್ಲಿ ಕದ್ದು ಮುಚ್ಚಿ ನಿನ್ನನ್ನು ನೋಡುವುದೇ ಪೂರ್ಣ ಕೆಲಸವಾಗಿತ್ತು ನನಗೆ. ನಿನ್ನನ್ನು ಮಾತನಾಡಿಸಲು ಮಾಡಿದ ಪ್ರಯತ್ನಗಳೆಲ್ಲವೂ ವಿಫ‌ಲವಾದವು. ನಿನ್ನ ಬಗ್ಗೆ ಅಷ್ಟಾಗಿ ಗೊತ್ತಿರದ ನನಗೆ ನಿನ್ನನ್ನು ಮತ್ತೆ ಪರಿಚಯಿಸಿದ್ದು ಫೇಸುºಕ್‌ ಎಂಬ ಮಾಯಾಜಾಲ. 

ಫೇಸ್‌ಬುಕ್‌ನಲ್ಲಿ ನಿನ್ನನ್ನು ಹುಡುಕುವುದು ಕಷ್ಟವೇನೂ ಆಗಲಿಲ್ಲ. ನೀನು ಪೋಸ್ಟ್  ಮಾಡಿದ ಫೋಟೊಗಳಿಗೆಲ್ಲಾ  ಚಾಚೂ ತಪ್ಪದೆ ಲೈಕ್‌, ಕಮೆಂಟ್‌ ಮಾಡುತ್ತೇನೆ. ನನ್ನ ಲೈಕ್‌, ಕಮೆಂಟ್‌ ಇರದ ಒಂದಾದರೂ ಫೋಟೊ ನಿನ್‌ ಫೇಸ್‌ಬುಕ್‌ ಗೋಡೆಯಲ್ಲಿ ಇದೆಯಾ ಅಂತ ಒಮ್ಮೆ ನೋಡು. ಆದರೆ, ಇವನ್ನೆಲ್ಲ ನೀನು ನಿರ್ಲಕ್ಷಿಸುತ್ತಿರುವುದು ಅತೀವ ನೋವುಂಟು ಮಾಡುತ್ತಿದೆ. ಮನಸಿನ ಭಾವನೆಗಳನ್ನೆಲ್ಲ ನಿನ್ನೆದುರಿಗೆ ಬಿಚ್ಚಿ ಹೇಳಿ, ಪ್ರೇಮ ನಿವೇದಿಸಿಕೊಂಡಾಗ ನೀನು ಅದನ್ನು ನಯವಾಗಿ ತಿರಸ್ಕರಿಸಿದೆ. ಬದುಕಿನ ಬಗ್ಗೆ ಪಾಠವನ್ನೂ ಮಾಡಿದೆ. ಪ್ರೀತಿ-ಪ್ರೇಮ ಅಂತ ಜೀವನ ಹಾಳು ಮಾಡಿಕೊಳ್ಳಬೇಡ ಅಂತ ಬುದ್ಧಿವಾದ ಹೇಳಿದೆ.

ನೀನು ಹೇಳಿದ್ದೆಲ್ಲವೂ ಸರಿ ಇದೆ. ಅದು ನನಗೂ ಅರ್ಥವಾಗುತ್ತದೆ. ಆದರೆ, ಹೃದಯ ಕೇಳಬೇಕಲ್ಲ. ದಿನವೂ ನಿನ್ನನ್ನು ಧ್ಯಾನಿಸಿ ಪರಿತಪಿಸುತ್ತಿದೆ. ನಿನ್ನ ಪುಟ್ಟ ಹೃದಯದಲ್ಲಿ ನನಗೊಂದು ಜಾಗ ಬೇಕು. ಇದುವರೆಗೂ ಒಮ್ಮೆಯೂ ಸೋತಿಲ್ಲ ನಾನು. ಈಗ ನಿನಗೆ ಸೋತಿದ್ದೇನೆ, ನಿನ್ನಿಂದ ಸೋತಿದ್ದೇನೆ. ಪ್ಲೀಸ್‌, ನನ್ನ ಪ್ರೀತಿಯನ್ನು ಗೆಲ್ಲಿಸು. 

– ಅಂಬಿ 

ಟಾಪ್ ನ್ಯೂಸ್

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.