ಪ್ರಸವಾನಂತರದ ಮಾನಸಿಕ ಖನ್ನತೆ

ಕಾಯಿಲೆಯ ಬಗೆಗಿನ ಅಪನಂಬಿಕೆಗಳು ಮತ್ತು ಪರಿಹಾರಗಳು

Team Udayavani, Dec 22, 2019, 4:59 AM IST

cd-14

ಮೊನ್ನೆ ಕ್ಲಿನಿಕ್‌ಗೆ ಬಂದ ರೋಗಿಯ ಪೋಷಕರೋರ್ವರು ತನ್ನ ಮಗಳ ಸಮಸ್ಯೆಯ ಬಗ್ಗೆ ಹೇಳುತ್ತಿದ್ದರು. “ಡಾಕ್ಟರೇ ಹೋದ ವಾರದ ತನಕ ಚೆನ್ನಾಗಿದ್ದ ನನ್ನ ಮಗಳು ಪ್ರಸವದ ಅನಂತರ ಒಂಥರಾ ಮಾಡುತ್ತಿದ್ದಾಳೆ. ಅದೇನೋ ಒಬ್ಬಳೇ ಅಳ್ತಾಳೆ, ಯಾವುದೂ ಬೇಡ ಅಂತಾಳೆ, ಮಗುವನ್ನು ಕಣ್ಣೆತ್ತಿ ಕೂಡ ನೋಡ್ತಾ ಇಲ್ಲ. ಸರಿಯಾಗಿ ನಿದ್ದೆ ಆಗಲಿ ಅಥವಾ ಊಟ ಆಗಲಿ ಮಾಡ್ತಾ ಇಲ್ಲ. ಒಂಚೂರೂ ನೋಡಿ ಡಾಕ್ಟ್ರೇ’

ಪ್ರಸವಾನಂತರದ ಮಾನಸಿಕ ಖನ್ನತೆಯು ಮಗುವನ್ನು ಹೆತ್ತ ಬಳಿಕ ಮಹಿಳೆಯರನ್ನು ಕಾಡಬಲ್ಲ ಒಂದು ಭಾವನಾತ್ಮಕ ಸಮಸ್ಯೆ. ಭಾರತದಲ್ಲಿ ಶೇ.22ರಷ್ಟು ಚೊಚ್ಚಲ ತಾಯಂದಿರು ಈ ಸಮಸ್ಯೆಯಿಂದ ಬಳಲುತ್ತಾರೆ. ಮಗುವನ್ನು ಹೆತ್ತ ಬಳಿಕ ಶೇ.60ರಿಂದ 80ರಷ್ಟು ಮಹಿಳೆಯರು ಚಿಂತೆ, ಅಸಂತೋಷ, ದಣಿವು ಇತ್ಯಾದಿಗಳನ್ನು ಅನುಭವಿಸುತ್ತಾರೆ; ಇದು ಒಂದೆರಡು ವಾರಗಳ ಕಾಲ ಇದ್ದು ಆ ಬಳಿಕ ತಂತಾನೆ ಮಾಯವಾಗುತ್ತದೆ. ಆದರೆ ಪ್ರಸವಾನಂತರದ ಖನ್ನತೆಯಿಂದ ಬಳಲುವ ತಾಯಂದಿರು ತೀವ್ರ ದುಃಖ, ಆತಂಕ, ಉದ್ವಿಗ್ನತೆ ಮತ್ತು ಕಂಗಾಲುತನದಂತಹ ಸಮಸ್ಯೆಗಳಿಂದ ಬಳಲುತ್ತಿದ್ದು, ತನ್ನ ಅಥವಾ ಇತರರಿಗಾಗಿನ ದೈನಿಕ ಚಟುವಟಿಕೆಗಳನ್ನು ನಡೆಸುವಲ್ಲಿ ತೊಂದರೆ ಎದುರಿಸುತ್ತಾರೆ. ಇದು ಹಲವು ಅಂಶಗಳಿಂದಾಗಿ ಉಂಟಾಗುವ ಸಂಕೀರ್ಣ ಸಮಸ್ಯೆ. ಪ್ರಸವಾನಂತರದ ಖನ್ನತೆಯು ಏಕ ಕಾರಣದಿಂದ ಉಂಟಾಗುವ ತೊಂದರೆಯಲ್ಲ; ದೈಹಿಕ ಮತ್ತು ಮಾನಸಿಕವಾದ ಹಲವು ಅಂಶಗಳ ಒಟ್ಟಾರೆ ಫ‌ಲವಾಗಿರುವ ಸಾಧ್ಯತೆಯೇ ಅಧಿಕ.

ಪ್ರಸವಾನಂತರದ ಮಾನಸಿಕ ಖನ್ನತೆ: ಕಾರಣಗಳೇನು?
ಮಗುವನ್ನು ಹೆತ್ತ ಬಳಿಕ ಮಹಿಳೆಯ ದೇಹದಲ್ಲಿ ಈಸ್ಟ್ರೋಜೆನ್‌ ಮತ್ತು ಪ್ರೊಜೆಸ್ಟರಾನ್‌ ಹಾರ್ಮೋನ್‌ಗಳ ಪ್ರಮಾಣವು ಹಠಾತ್ತಾಗಿ ಕುಸಿತ ಕಾಣುತ್ತದೆ. ಇದರಿಂದಾಗಿ ಆಕೆಯ ಮಿದುಳಿನಲ್ಲಿ ರಾಸಾಯನಿಕ ಪ್ರತಿಸ್ಪಂದನಗಳು ಉಂಟಾಗುತ್ತವೆ ಮತ್ತು ಇದರ ಪರಿಣಾಮವಾಗಿ ಭಾವನಾತ್ಮಕ ಏರುಪೇರುಗಳು ಕಾಣಿಸಿಕೊಳ್ಳುತ್ತವೆ. ಇದಲ್ಲದೆ, ಅನೇಕ ಮಹಿಳೆಯರಿಗೆ ಪ್ರಸವದ ಬಳಿಕ ಚೇತರಿಸಿಕೊಳ್ಳುವುದಕ್ಕೆ ಅತ್ಯಗತ್ಯವಾಗಿರುವ ಸಂಪೂರ್ಣ ವಿಶ್ರಾಂತಿ ಲಭ್ಯವಾಗುವುದಿಲ್ಲ. ಮಗುವಿನ ಆರೈಕೆಯ ಕಾರಣ ಅಥವಾ ಇನ್ನಾéವುದೋ ಕಾರಣಗಳಿಂದ ಸತತ ನಿದ್ರಾಭಂಗ ಉಂಟಾಗುವುದರಿಂದ ದೈಹಿಕ ದಣಿವು ಮತ್ತು ಕಂಗಾಲುತನ ಆಕೆಯನ್ನು ಕಾಡುತ್ತವೆ. ಇವುಗಳು ಕೂಡ ಪ್ರಸವಾನಂತರದ ಮಾನಸಿಕ ಖನ್ನತೆಯುಂಟಾಗುವುದಕ್ಕೆ ಕೊಡುಗೆ ನೀಡುತ್ತವೆ.

ಭಾವನಾತ್ಮಕ/ ಒತ್ತಡಯುಕ್ತ ಘಟನೆಗಳಿಂದ ಅಥವಾ ದೈಹಿಕವಾಗಿ ಉಂಟಾಗುವ ಬದಲಾವಣೆಯಿಂದ ಮಿದುಳಿನ ರಾಸಾಯನಿಕ ಪ್ರಕ್ರಿಯೆಗಳಲ್ಲಿ ಕಾಣಿಸಿಕೊಳ್ಳುವ ಅಸಮತೋಲನ ಯಾ ಇವೆರಡರಿಂದಲೂ ಖನ್ನತೆಯು ಉಂಟಾಗಬಹುದು.

ಪ್ರಸವಾನಂತರದ ಮಾನಸಿಕ ಖನ್ನತೆ:
ಮಹಿಳೆ ಅನುಭವಿಸುವ ಸಾಮಾನ್ಯವಾದ ಲಕ್ಷಣಗಳಾವುವು?
 ದುಃಖ, ಹತಾಶೆ, ಶೂನ್ಯ ಅಥವಾ ಸಂತೋಷದ ಅನುಭವ
 ಸಾಮಾನ್ಯವಾದ್ದಕ್ಕಿಂತ ಹೆಚ್ಚು ಅಥವಾ ಯಾವುದೇ ನಿರ್ದಿಷ್ಟ ಕಾರಣ ಇಲ್ಲದೆ ಅಳುವುದು
 ವಿನಾಕಾರಣ ದುಗುಡ ಅಥವಾ ಅತಿಯಾದ ಉದ್ವಿಗ್ನತೆ
 ಭಾವನಾತ್ಮಕ ಏರುಪೇರು, ಕಿರಿಕಿರಿಯಾಗುವುದು, ಚಡಪಡಿಕೆ
 ಅತಿಯಾದ ನಿದ್ದೆ ಅಥವಾ ಮಗು ನಿದ್ರಿಸಿದ್ದಾಗಲೂ ನಿದ್ದೆ ಮಾಡುವುದಕ್ಕೆ ಆಗದೆ ಇರುವುದು
 ಏಕಾಗ್ರತೆಯ ಕೊರತೆ, ವಿವರಗಳನ್ನು ನೆನಪಿರಿಸಿಕೊಳ್ಳುವುದಕ್ಕೆ, ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಕಷ್ಟವಾಗುವುದು
 ಸಾಮಾನ್ಯವಾಗಿ ಸಂತೋಷ ತರುವ ಚಟುವಟಿಕೆಗಳನ್ನು ನಡೆಸುವ ಆಸಕ್ತಿಯನ್ನು ಕಳೆದುಕೊಳ್ಳುವುದು
 ಆಗಾಗ ತಲೆನೋವು, ಹೊಟ್ಟೆಯ ಸಮಸ್ಯೆಗಳು ಮತ್ತು ಸ್ನಾಯು ನೋವು ಸಹಿತ ದೈಹಿಕವಾದ ನೋವು, ಬೇನೆಗಳನ್ನು ಅನುಭವಿಸುವುದು
 ಅತಿಯಾಗಿ ತಿನ್ನುವುದು ಅಥವಾ ಏನೂ ತಿನ್ನದೆ ಇರುವುದು
 ಕುಟುಂಬ ಮತ್ತು ಗೆಳೆಯ ಗೆಳತಿಯರಿಂದ ದೂರ ಇರುವುದು
 ಮಗುವಿನ ಜತೆಗೆ ಆಪ್ತತೆ, ಬಂಧವನ್ನು ಬೆಸೆದುಕೊಳ್ಳುವಲ್ಲಿ ಹಿಂದೆ ಬೀಳುವುದು
 ಮಗುವನ್ನು ನೋಡಿಕೊಳ್ಳುವುದಕ್ಕೆ, ಲಾಲನೆ ಪಾಲನೆ ಮಾಡುವುದಕ್ಕೆ ತನ್ನಿಂದ ಸಾಧ್ಯವೇ ಎಂಬ ಅನುಮಾನ
 ತನಗೆ ಅಥವಾ ಮಗುವಿಗೆ ಹಾನಿ ಉಂಟು ಮಾಡುವ ಆಲೋಚನೆಗಳು

ಡಾ| ಸೋನಿಯಾ ಶೆಣೈ,
ಅಸಿಸ್ಟೆಂಟ್‌ ಪ್ರೊಫೆಸರ್‌, ಸೈಕಿಯಾಟ್ರಿ ವಿಭಾಗ, ಕೆಎಂಸಿ, ಮಣಿಪಾಲ

ಟಾಪ್ ನ್ಯೂಸ್

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು

Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

19-rcb

RCB: ಈ  ಸಲ ಕಪ್‌ ನಮ್ಮದು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.