ರೀನಲ್‌ ಸೆಲ್‌ ಕಾರ್ಸಿನೋಮಾ ಮೂತ್ರಪಿಂಡದ ಕ್ಯಾನ್ಸರ್‌


Team Udayavani, Feb 27, 2022, 7:30 AM IST

ರೀನಲ್‌ ಸೆಲ್‌ ಕಾರ್ಸಿನೋಮಾ ಮೂತ್ರಪಿಂಡದ ಕ್ಯಾನ್ಸರ್‌

ರೀನಲ್‌ ಸೆಲ್‌ ಕಾರ್ಸಿನೋಮಾ (ಆರ್‌ಸಿಸಿ)ವು ಮೂತ್ರಶಾಸ್ತ್ರೀಯ ಅನಾರೋಗ್ಯಗಳಲ್ಲಿ ಅತ್ಯಂತ ಮಾರಕವಾದುದಾಗಿದ್ದು, ಪುರುಷರಲ್ಲಿ ಉಂಟಾಗುವ ಕ್ಯಾನ್ಸರ್‌ ಸಂಬಂಧಿ ಮರಣ ಪ್ರಕರಣಗಳಲ್ಲಿ ಶೇ. 3ರಷ್ಟು ಇದರಿಂದ ಆಗುತ್ತವೆ. ಇದು ಅನಿಯಮಿತವಾಗಿ ಮತ್ತು ಕೌಟುಂಬಿಕ ಚರಿತ್ರೆಯ ಸ್ವರೂಪದಲ್ಲಿ ಕಂಡುಬರುತ್ತದೆ. ಕುಟುಂಬ ಸ್ವರೂಪದಲ್ಲಿ ಉಂಟಾಗುವ ಆರ್‌ಸಿಸಿ ಯುವ ಜನರಲ್ಲಿ ಹೆಚ್ಚು ಕಂಡುಬರುತ್ತಿದ್ದು, ಸಾಮಾನ್ಯವಾಗಿ ಬೈಲ್ಯಾಟರಲ್‌ ಮತ್ತು ಮಲ್ಟಿಫೋಕಲ್‌ ಆಗಿರುತ್ತದೆ. ಅನಿಯಮಿತ ಸ್ವರೂಪದ ಆರ್‌ಸಿಸಿ ಸಾಮಾನ್ಯವಾಗಿ ಬದುಕಿನ ಆರು ಮತ್ತು ಏಳನೆಯ ದಶಕದಲ್ಲಿ ಉಂಟಾಗುತ್ತದೆ. ಇದು ಸಾಮಾನ್ಯವಾಗಿ ಯೂನಿಲ್ಯಾಟರಲ್‌ ಆಗಿದ್ದು, ನಿರೀಕ್ಷಿತವಾಗಿರುತ್ತದೆ. ಆದರೆ ಅದರ ವೈದ್ಯಕೀಯ ಲಕ್ಷಣಗಳು ವಯಸ್ಸನ್ನು ಆಧರಿಸಿ ಬದಲಾಗುತ್ತವೆ. ದೇಹದಲ್ಲಿ ಆಂತರಿಕವಾಗಿ ಪ್ರಾರಂಭಗೊಳ್ಳುವುದು ಮತ್ತು ವಿಳಂಬವಾಗಿ ಲಕ್ಷಣಗಳನ್ನು ಪ್ರದರ್ಶಿಸುವುದನ್ನು ಹಿರಿಯ ವಯಸ್ಕರಲ್ಲಿ ಗುರುತಿಸಲಾಗಿದೆ. ರೀನಲ್‌ ಸೆಲ್‌ ಕಾರ್ಸಿನೊಮಾ ಪ್ರಕರಣಗಳಲ್ಲಿ ಬಹುತೇಕ ಬದುಕಿನ ಆರನೇ ದಶಕ (60-70 ವಯಸ್ಸು)ದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಯುವ ವಯಸ್ಸಿನ (40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) ವರಲ್ಲಿ ರೀನಲ್‌ ಸೆಲ್‌ ಕಾರ್ಸಿನೊಮಾ ಆರಂಭವಾಗುವುದು ಕಡಿಮೆ, ಒಟ್ಟು ಪ್ರಕರಣಗಳಲ್ಲಿ ಶೇ. 4ರಿಂದ 7ರಷ್ಟು ಮಾತ್ರ.

ಬಹುತೇಕ ಕ್ಯಾನ್ಸರ್‌ ಪ್ರಕರಣಗಳು ಅನಿಯಮಿತ ಸ್ವರೂಪದ್ದಾಗಿರುತ್ತವೆ (ನಿಖರ ಕಾರಣಗಳು ತಿಳಿದುಬರುವುದಿಲ್ಲ). ರೀನಲ್‌ ಸೆಲ್‌ ಕಾರ್ಸಿನೊಮಾ ಉಂಟಾಗುವುದಕ್ಕೆ ಇತರ ಗೊತ್ತಿರುವ ಕಾರಣಗಳೆಂದರೆ ಧೂಮಪಾನ, ಬೊಜ್ಜು, ಮಧುಮೇಹ, ದೀರ್ಘ‌ಕಾಲಿಕ ಮೂತ್ರಪಿಂಡ ಸಂಬಂಧಿ ಕಾಯಿಲೆಗಳು, ಪಾಲಿಸಿಸ್ಟಿಕ್‌ ಕಿಡ್ನಿ ಕಾಯಿಲೆ ಮತ್ತು ವಂಶವಾಹಿ ಅಂಶಗಳಾಗಿವೆ. ಕೌಟುಂಬಿಕವಾದ ಕೆಲವು ಸಿಂಡ್ರೋಮ್‌ಗಳು ಕೂಡ ರೀನಲ್‌ ಸೆಲ್‌ ಕಾರ್ಸಿನೋಮಾ ಜತೆಗೆ ಸಂಬಂಧ ಹೊಂದಿರುವುದು ಕಂಡುಬಂದಿದೆ. ಮೂತ್ರಪಿಂಡದ ವಂಶವಾಹಿ ಸಂಬಂಧಿ ಕ್ಯಾನ್ಸರ್‌ಗಳು ಬಹುಕೇಂದ್ರಿತ, ಬಹುಪಕ್ಷೀಯ ಮತ್ತು ಕುಟುಂಬದಲ್ಲಿ ಇರುವ ಇತರ ಅನಾರೋಗ್ಯಗಳ ಜತೆಗೆ ಸಾಮಾನ್ಯವಾಗಿ ಸಂಬಂಧ ಹೊಂದಿರುತ್ತವೆ.

ಬಹುತೇಕ ಕ್ಯಾನ್ಸರ್‌ ಪ್ರಕರಣಗಳು ಅಚಾನಕ್‌ ಪತ್ತೆಯಾಗುತ್ತವೆ (ಸಾಮಾನ್ಯವಾಗಿ ರೋಗಿಯು ಇತರ ಯಾವುದಾದರೂ ಕಾರಣಗಳಿಗಾಗಿ ಅಲ್ಟ್ರಾಸೌಂಡ್‌ ಅಥವಾ ಇತರ ಯಾವುದೇ ಸ್ಕ್ಯಾನಿಂಗ್‌ಗೆ ಒಳಪಟ್ಟಾಗ). ಇದು ಮಹಿಳೆಯರಿಗಿಂತ ಪುರುಷರಲ್ಲಿ ಎರಡು ಪಟ್ಟು ಹೆಚ್ಚು ಕಂಡುಬರುತ್ತದೆ. ಈ ರೋಗಿಗಳಲ್ಲಿ ಕಂಡುಬರುವ ಸಾಮಾನ್ಯ ರೋಗಲಕ್ಷಣಗಳೆಂದರೆ, ಹೊಟ್ಟೆಯಲ್ಲಿ ಬೆಳವಣಿಗೆ, ಹೆಮಟೂರಿಯಾ (ಮೂತ್ರದಲ್ಲಿ ರಕ್ತದಂಶ), ಹೊಟ್ಟೆಯ ಭಾಗದಲ್ಲಿ ನೋವು, ತೂಕ ನಷ್ಟ, ಬೆನ್ನು ನೋವು ಮತ್ತು ಹಸಿವು ಇಲ್ಲದಿರುವಿಕೆ. ಇತರ ಕ್ಯಾನ್ಸರ್‌ ಗಳಂತಲ್ಲದೆ ರೀನಲ್‌ ಸೆಲ್‌ ಕಾರ್ಸಿನೊಮಾವು ಯುವ ವಯಸ್ಸಿನಲ್ಲಿ ಮತ್ತು ಬೇಗನೆ ಪತ್ತೆ ಹಚ್ಚಿದಾಗ ಚಿಕಿತ್ಸೆಗೆ ಹೆಚ್ಚು ಪ್ರತಿಸ್ಪಂದಿಯಾಗಿರುತ್ತದೆ.

ಬಹುತೇಕ ರೋಗಿಗಳಿಗೆ ಚಿಕಿತ್ಸೆಯಾಗಿ ಶಸ್ತ್ರಕ್ರಿಯೆಯ ಅಗತ್ಯವಿರುತ್ತದೆ. ಮೆಟಾಸ್ಟಾಟಿಕ್‌ ಕ್ಯಾನ್ಸರ್‌ (ನಾಲ್ಕನೇ ಹಂತ) ಹೊಂದಿರುವ ರೋಗಿಗಳಿಗೆ ಗುರಿ ನಿರ್ದೇಶಿತ ಚಿಕಿತ್ಸೆ ಅಥವಾ ಕಿಮೊಥೆರಪಿಯ ಅಗತ್ಯವಿರುತ್ತದೆ.

ಕೌಟುಂಬಿಕ ಇತಿಹಾಸವುಳ್ಳ ಕ್ಯಾನ್ಸರ್‌ ರೋಗಿಗಳಿಗೆ ವಂಶವಾಹಿ ಪರೀಕ್ಷೆ ಮತ್ತು ಆಪ್ತಸಮಾಲೋಚನೆಯ ಅಗತ್ಯವಿರುತ್ತದೆ. ಈ ರೋಗಿಗಳು ಸರ್ಕೋಮಾಸ್‌, ಫಿಕ್ರೊಮೊಸೈಟೊಮಾ, ಮೇದೋಜೀರಕ ಗ್ರಂಥಿಯಲ್ಲಿ ಗಡ್ಡೆಗಳು, ಕೊಲೆಂಜಿಯೊಕಾರ್ಸಿನೊಮಾಸ್‌ನಂತಹ ಇತರ ಕ್ಯಾನ್ಸರ್‌ಗಳನ್ನು ಕೂಡ ಹೊಂದಿರಬಹುದಾದ ಸಾಧ್ಯತೆಗಳೇ ಇದಕ್ಕೆ ಕಾರಣ.

ಕುಟುಂಬ ಸದಸ್ಯರನ್ನು ಕೂಡ ಪರೀಕ್ಷೆಗೆ (ವಿಎಚ್‌ಎಲ್‌ ಜೀನ್‌ ಮ್ಯುಟೇಶನ್‌, ಎಫ್ಎಚ್‌ ಮ್ಯುಟೇಶನ್‌, ಎಫ್ಎಲ್‌ಸಿಎನ್‌ ಮ್ಯುಟೇಶನ್‌) ಒಳಪಡಿಸಬೇಕಾಗುತ್ತದೆ. ಅವರಿಗೆ ಮೇಲೆ ಹೇಳಲಾದ ಕ್ಯಾನ್ಸರ್‌ಗಳ ಪತ್ತೆಗಾಗಿ ನಿಯಮಿತವಾಗಿ ತಪಾಸಣೆ ಮಾಡಿಸಬೇಕಾಗುತ್ತದೆ.

-ಡಾ| ಹರೀಶ್‌ ಇ.
ಸರ್ಜಿಕಲ್‌ ಓಂಕಾಲಜಿ ವಿಭಾಗ,
ಕೆಎಂಸಿ ಆಸ್ಪತ್ರೆ, ಮಂಗಳೂರು

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.