ಕಾಲುಗಳ ಊತ ನಿಮಗೆ ತಿಳಿಯದ ವಿಚಾರಗಳು


Team Udayavani, Jul 31, 2023, 10:06 AM IST

ಕಾಲುಗಳ ಊತ ನಿಮಗೆ ತಿಳಿಯದ ವಿಚಾರಗಳು

ಊತ ಅಥವಾ ಬಾವು ಒಂದು ಕಾಲಿನಲ್ಲಿ ಕಂಡುಬರಬಹುದು ಅಥವಾ ಎರಡೂ ಕಾಲುಗಳಲ್ಲಿ ಕಾಣಿಸಿಕೊಳ್ಳಬಹುದು. ಒಂದು ಕಾಲಿನ ಊತವು ಸಾಮಾನ್ಯವಾಗಿ ಸೆಲ್ಯುಲೈಟಿಸ್‌, ಬಾಧಿತ ಕಾಲಿನಲ್ಲಿ ರಕ್ತನಾಳದಲ್ಲಿ ಅಡಚಣೆ, ಆನೆಕಾಲು ಇತ್ಯಾದಿ ಸ್ಥಳೀಯ ಸಮಸ್ಯೆಗಳಿಂದ ಉಂಟಾಗಬಹುದು. ಎರಡೂ ಕಾಲುಗಳಲ್ಲಿ ಊತಕ್ಕೆ ಶಾರೀರಿಕ ಕ್ರಿಯೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಕಾರಣವಾಗಿರುತ್ತವೆ. ಎರಡೂ ಕಾಲುಗಳ ಊತಕ್ಕೆ ಮೂರು ಪ್ರಧಾನ ಕಾರಣಗಳಿರುತ್ತವೆ: ಪಿತ್ಥಕೋಶ ಕಾಯಿಲೆ, ಹೃದ್ರೋಗಗಳು ಮತ್ತು ಮೂತ್ರಪಿಂಡ ಕಾಯಿಲೆಗಳು.

ನೊರೆಯಿಂದ ಕೂಡಿದ ಮೂತ್ರ, ಮೂತ್ರದಲ್ಲಿ ರಕ್ತದ ಅಂಶ, 35ಕ್ಕಿಂತ ಕಡಿಮೆ ವಯಸ್ಸಿನಲ್ಲಿ ಅಧಿಕ ರಕ್ತದ ಒತ್ತಡ ಇತ್ಯಾದಿ ಸಹ ಸಮಸ್ಯೆಗಳು ಇದ್ದಲ್ಲಿ ಮೂತ್ರಪಿಂಡ ಕಾಯಿಲೆ ಉಂಟಾಗಿರುವ ಸಾಧ್ಯತೆ ಹೆಚ್ಚಾಗಿರುತ್ತದೆ. ದೇಹದಲ್ಲಿ ಉತ್ಪಾದನೆಯಾಗುವ ವಿಷಾಂಶಗಳ ವಿಸರ್ಜನೆ, ಚಯಾಪಚಯ ಕ್ರಿಯೆ ಮತ್ತು ದೇಹದಲ್ಲಿ ಆಮ್ಲ-ಪ್ರತ್ಯಾಮ್ಲ ಸಮತೋಲನ ಕಾಯ್ದುಕೊಳ್ಳುವ ಪ್ರಾಮುಖ್ಯ ಕೆಲಸಗಳನ್ನು ಮೂತ್ರಪಿಂಡಗಳು ನಿರ್ವಹಿಸುತ್ತವೆ. ಆದ್ದರಿಂದ ಮೂತ್ರಪಿಂಡಗಳಿಗೆ ಆಗುವ ಯಾವುದೇ ಅಲ್ಪಕಾಲೀನ ಅಥವಾ ದೀರ್ಘ‌ಕಾಲೀನ ಹಾನಿಗಳ ಪರಿಣಾಮವಾಗಿ ಮೇಲೆ ಹೇಳಲಾದ ಚಟುವಟಿಕೆಗಳು ಬಾಧಿತವಾಗುತ್ತವೆ. ಮೂತ್ರಪಿಂಡ ಕಾಯಿಲೆಗಳಿದ್ದರೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವುದು ಎರಡೂ ಕಾಲುಗಳ ಊತ.

ಎರಡೂ ಕಾಲುಗಳು ಹೀಗೆ ಊದಿಕೊಂಡಿದ್ದರೆ ಅನೇಕರು ಅದು ದೂರದ ಪ್ರಯಾಣ ಅಥವಾ ಹೆಚ್ಚು ಹೊತ್ತು ನಿಂತುಕೊಂಡದ್ದರ ಪರಿಣಾಮ ಎಂಬುದಾಗಿ ತಪ್ಪು ತಿಳಿದುಕೊಳ್ಳುತ್ತಾರೆ. ಮೂತ್ರಪಿಂಡದ ಕಾಯಿಲೆ ಇದ್ದಾಗ ಮೂತ್ರದ ಮೂಲಕ ಪ್ರೊಟೀನ್‌ ನಷ್ಟವಾಗುವುದು ಅಥವಾ ದೇಹದಲ್ಲಿ ಉಪ್ಪಿನಂಶ ಅಥವಾ ನೀರಿನಂಶ ಉಳಿದುಕೊಳ್ಳುವುದರಿಂದಾಗಿ ಕಾಲುಗಳ ಊತ ಕಾಣಿಸಿಕೊಳ್ಳುತ್ತದೆ. ರೋಗ ಲಕ್ಷಣ ರಹಿತ ವ್ಯಕ್ತಿಯೊಬ್ಬನಲ್ಲಿ ಕಾಲುಗಳ ಊತ ಕಾಣಿಸಿಕೊಳ್ಳುವಷ್ಟು ವೇಳೆಗೆ ಮೂತ್ರಪಿಂಡಗಳಿಗೆ ಸಾಕಷ್ಟು ಹಾನಿ ಆಗಿರುತ್ತದೆ. ಈ ಚಿಹ್ನೆಯನ್ನು ಉಪೇಕ್ಷಿಸಿದರೆ ಅದರಿಂದ ಮೂತ್ರಪಿಂಡ ಕಾಯಿಲೆಯು ಉಲ್ಬಣಗೊಳ್ಳುತ್ತದೆ ಮತ್ತು ಕೊನೆಯದಾಗಿ ರೋಗಿಯು ಉಸಿರಾಟದ ತೊಂದರೆಯಿಂದಾಗಿ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಾಲಗಬೇಕಾಗುತ್ತದೆ ಮತ್ತು ಡಯಾಲಿಸಿಸ್‌ಗೆ ಒಳಗಾಗಬೇಕಾಗುತ್ತದೆ. ಹೀಗಾಗಿ ಯಾವುದೇ ರೀತಿಯಲ್ಲಿ ಕಾಲುಗಳ ಊತ ಕಾಣಿಸಿಕೊಂಡಿದ್ದರೂ ಮೊತ್ತಮೊದಲಿಗೆ ಮೂತ್ರಪಿಂಡಗಳಿಗೆ ತೊಂದರೆ ಉಂಟಾಗಿದೆಯೇ ಎಂಬುದನ್ನು ಕಂಡುಕೊಳ್ಳಲು ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಮೂತ್ರಪಿಂಡ ಕಾಯಿಲೆಯನ್ನು ಶೀಘ್ರವಾಗಿ ಪತ್ತೆ ಹಚ್ಚಿದರೆ ಅದನ್ನು ನಿಯಂತ್ರಿಸಬಹುದು ಅಥವಾ ಗುಣಪಡಿಸಬಹುದು, ಅದು ಉಲ್ಬಣಗೊಳ್ಳುವುದನ್ನು ತಡೆಯಬಹುದು. ಮೂತ್ರದ ಜತೆಗೆ ಪ್ರೊಟೀನ್‌ ನಷ್ಟವಾಗುತ್ತಿರುವ ಸಮಸ್ಯೆ ಇದ್ದರೆ ಅದನ್ನು ಬಹುತೇಕವಾಗಿ ಗುಣಪಡಿಸಬಹುದು ಮತ್ತು ರೋಗಿಯು ಉತ್ತಮ ಗುಣಮಟ್ಟದ ಜೀವನವನ್ನು ನಡೆಸಬಹುದಾಗಿದೆ.

-ಡಾ| ಭೂಷಣ್‌ ಸಿ. ಶೆಟ್ಟಿ
ಅಸಿಸ್ಟೆಂಟ್‌ ಪ್ರೊಫೆಸರ್‌, ನೆಫ್ರಾಲಜಿ ವಿಭಾಗ
ಕಸ್ತೂರ್ಬಾ ವೈದ್ಯಕೀಯ ಕಾಲೇಜು, ಮಂಗಳೂರು

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.