250 ಗಾಯಕರ “ನಾದಮಂಜರಿ’
Team Udayavani, Jan 25, 2020, 6:02 AM IST
ಈ ಹಿಂದೆ 3 ಬಾರಿ, ಸಾವಿರಕ್ಕೂ ಅಧಿಕ ಕಲಾವಿದರಿಂದ ಹಾಡಿಸಿ ಲಿಮ್ಕಾ ದಾಖಲೆಗೆ ಸಾಕ್ಷಿಯಾಗಿದ್ದ “ರಂಗಸಂಸ್ಥಾನ’ವು ಪ್ರಸ್ತುತ “ನಾದ ಮಂಜರಿ’ ಎಂಬ ಸಮೂಹ ಗಾಯನ ಏರ್ಪಡಿಸಿದೆ. 250 ಗಾಯಕರು, ಒಟ್ಟು 8 ಗೀತೆಗಳನ್ನು ಹಾಡಲಿದ್ದಾರೆ.
ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳು, ಕವಿಗಳಾದ ದೊಡ್ಡರಂಗೇಗೌಡ, ರಮಣಶ್ರೀ ಸಮೂಹ ಸಂಸ್ಥೆಯ ಅಧ್ಯಕ್ಷ ಷಡಕ್ಷರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್. ರಂಗಪ್ಪ ಮತ್ತು ಇತರರು ಉಪಸ್ಥಿತರಿರುವರು. ಬಿ.ಕೆ. ಸುಮಿತ್ರಾ, ಚಂದ್ರಿಕಾ ಗುರುರಾಜ್, ಅರುಣಾ ಚಂದ್ರಶೇಖರ್, ಪ್ರತಿಭಾನಂದನ್, ವರ್ಣಶ್ರೀ ಸೇರಿದಂತೆ ಪ್ರಮುಖ ಗಾಯಕರು ಪಾಲ್ಗೊಳ್ಳುವರು.
ಯಾವಾಗ?: ಜ.28, ಮಂಗಳವಾರ, ಸಂ.5.30
ಎಲ್ಲಿ?: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ