ಅನುಷ ನೂಪುರ ನಿನಾದ…
Team Udayavani, Mar 7, 2020, 6:01 AM IST
ಆಶಾ-ಸೋಮಶೇಖರ್ ದಂಪತಿಯ ಪುತ್ರಿ, ಅನುಷ ಆರನೇ ವಯಸ್ಸಿನಲ್ಲೇ ಭರತನಾಟ್ಯದತ್ತ ಆಕರ್ಷಿತರಾದರು. ವಿದುಷಿ ಅರ್ಚನಾ ಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ ನೃತ್ಯಾಭ್ಯಾಸ ಮಾಡಿರುವ ಈಕೆ, ರಂಗಪ್ರವೇಶದ ಹಂತಕ್ಕೆ ತಲುಪಿದ್ದಾಳೆ.
ನೃತ್ಯ ಅಷ್ಟೇ ಅಲ್ಲದೆ, ಚರ್ಚಾಸ್ಪರ್ಧೆ, ಆಶುಭಾಷಣ, ನಾಟಕ, ಏಕಪಾತ್ರಾಭಿನಯ…ಹೀಗೆ, ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಪಡೆದಿರುವ ಅನುಷ, ಬಹುಮುಖ ಪ್ರತಿಭೆ. “ಲಯ ಅನುಲಾಸ್ಯ’ ರಂಗಪ್ರವೇಶ ಕಾರ್ಯಕ್ರಮದಲ್ಲಿ ಸಚಿವ ಸುರೇಶ್ಕುಮಾರ್ ಎಸ್. ಗೌರವ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಮುಖ್ಯಅತಿಥಿಗಳಾಗಿ ನೃತ್ಯ ಕಲಾವಿದ ಡಾ. ಎಂ. ಸೂರ್ಯಪ್ರಸಾದ್, ಕರ್ನಾಟಕ ನೃತ್ಯಕಲಾ ಪರಿಷತ್ನ ಅಧ್ಯಕ್ಷ ಸಾಯಿ ವೆಂಕಟೇಶ್, ಮೃದಂಗ ವಾದಕ ಎ.ಎಸ್.ಎನ್. ಸ್ವಾಮಿ ಭಾಗವಹಿಸಲಿದ್ದಾರೆ. ಗುರು ಅರ್ಚನಾ ಶಾಸ್ತ್ರಿ (ನಟುವಾಂಗ), ವಿದ್ವಾನ್ ಡಿ.ಎಸ್. ಶ್ರೀವತ್ಸ (ಹಾಡುಗಾರಿಕೆ), ವಿ. ಜನಾರ್ಧನ ರಾವ್ (ಮೃದಂಗ), ವಿ. ಶಂಕರ ರಾಮನ್ (ವೀಣೆ), ವಿ. ವಿವೇಕ್ ವಿ ಕೃಷ್ಣ (ಕೊಳಲು), ವಿ. ಪ್ರಸನ್ನ ಕುಮಾರ್ (ಖಂಜರ-ರಿದಂ ಪ್ಯಾಡ್) ಹಿನ್ನೆಲೆ ಸಹಕಾರ ನೀಡಲಿದ್ದಾರೆ.
ಎಲ್ಲಿ?: ಎಡಿಎ ರಂಗಮಂದಿರ, ಜೆ.ಸಿ.ರಸ್ತೆ
ಯಾವಾಗ?: ಮಾ.7, ಶನಿವಾರ ಸಂಜೆ 6
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ